Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ಶಿವ ಮತ್ತು ಶಕ್ತಿಯೊಂದಿಗೆ ಆಶೀರ್ವಾದ ಪಡೆಯಲು ಶ್ರಾವಣ ನವಮಿ ಆಚರಣೆ
ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸವು ಪವಿತ್ರವಾದ ತಿಂಗಳು ಎಂದು ಪರಿಗಣಿಸಲಾಗಿದೆ. ಗ್ರಹಣದ ನಂತರ ನಿರೀಕ್ಷಿತ ತಿಂಗಳು ಹಾಗೂ ಬದಲಾವಣೆಯನ್ನು ಶ್ರಾವಣ ಮಾಸ ತಂದಿದೆ. ಶಿವ ಹಾಗೂ ಶಕ್ತಿಗೆ ಮೀಸಲಾದ ಈ ಮಾಸದಲ್ಲಿ ಋಣಾತ್ಮಕ ಶಕ್ತಿಯು ಹೆಚ್ಚಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಕೈಗೊಳ್ಳುವ ಪೂಜೆ-ಪುನಸ್ಕಾರಗಳು ದೇವರ ಮೆಚ್ಚುಗೆಗೆ ಪಾತ್ರವಾಗುವುದು. ಜೊತೆಗೆ ಉತ್ತಮ ಅದೃಷ್ಟವನ್ನು ಪಡೆದು ಕೊಳ್ಳಬಹುದು ಎಂದು ಹೇಳಲಾಗುವುದು.
ಶ್ರಾವಣ ನವಮಿಯು ವಿಶೇಷವಾದ ದಿನ. ಇದು ಕಾಲಾಸ್ಟಮಿಯ ಮರುದಿನ ಬರುತ್ತದೆ. ಇದನ್ನು ಶ್ರಾವಣ ಮಾಸ ಶುಕ್ಲ ಪಕ್ಷದಂದು ಆಚರಿಸಲಾಗುತ್ತದೆ. ಈ ಮಂಗಳಕರವಾದ ದಿನವನ್ನು ಪ್ರಾಥಮಿಕವಾಗಿ ದೇವತೆ ಶಕ್ತಿಯ ಪೂಜೆಗೆ ಸಮರ್ಪಿಸಲಾಗಿದೆ. ದುರ್ಗಾ ದೇವಿ, ಪಾರ್ವತಿ ದೇವಿ ಸೇರಿದಂತೆ ಶಕ್ತಿ ದೇವತೆಗಳ ಆರಾಧನೆ ಮಾಡಲಾಗುವುದು.
ಶ್ರಾವಣ ನವಮಿಯ ಆಚರಣೆ ಏಕೆ?
ಶಿವನನ್ನು ಪೂಜಿಸುವುದರಿಂದ ಭಕ್ತರ ಜೀವನದಲ್ಲಿ ಅದೃಷ್ಟವು ಒಲಿಯುವುದು ಎಂದು ಧರ್ಮಶಾಸ್ತ್ರಗಳು ವಿವರಿಸುತ್ತವೆ. ಸಂಪ್ರದಾಯದ ಪ್ರಕಾರ ಈ ದಿನದಂದು ಶಿವ ಮತ್ತು ಶಕ್ತಿ ದೇವತೆಯನ್ನು ಒಟ್ಟಾಗಿ ಪೂಜಿಸಲಾಗುವುದು. ಇದರಿಂದ ಜನರ ಬಯಕೆಯನ್ನು ಈಡೇರಿಸುವುದು ಎಂದು ಹೇಳಲಾಗುತ್ತದೆ. ಶಿವ ಮತ್ತು ಶಕ್ತಿ ದೇವತೆಯ ಪೂಜೆಯ ನಂತರ ಹುಡುಗಿಯರು ಹಳದಿ ಬಟ್ಟೆಯನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಬಯಸಿದಂತಹ ವರ ಸಿಗುತ್ತಾನೆ ಎಂದು ಹೇಳಲಾಗುವುದು.

ಶಿವ ಪುರಾಣದ ವಿದ್ಯೇಶ್ವರ ಸನ್ನಿತದಲ್ಲಿ ಹೇಳಿರುವ ಪ್ರಕಾರ ಶ್ರಾವಣ ಮಾಸದ ಮೃಗಶೀರ ನಕ್ಷತ್ರದಲ್ಲಿ ದೇವಿ ಅಂಬಿಕೆಯನ್ನು ಪೂಜಿಸಲಾಗುತ್ತದೆ. ಈ ಪೂಜೆಯನ್ನು ಮಾಡುವುದರಿಂದ ಮನಸಿನ ಬಯಕೆಗಳೆಲ್ಲವೂ ಈಡೇರುವುದು ಎಂದು ಹೇಳಲಾಗುತ್ತದೆ. ಜೀವನದ ಎಲ್ಲಾ ಬಯಕೆಗಳನ್ನು ಈಡೇರಿಸಿಕೊಳ್ಳಲು ದೇವಿ ಅಂಬಿಕೆಯನ್ನು ಪೂಜಿಸಲಾಗುತ್ತದೆ. ಈ ದಿನದಂದು ಪೂಜೆ ಮಾಡುವುದರಿಂದ ವ್ಯಕ್ತಿ ಈವರೆಗೆ ಮಾಡಿದ ಪಾಪಗಳೆಲ್ಲವೂ ತೊಳೆದು ಪುಣ್ಯ ಪ್ರಾಪ್ತಿಯಾಗುವುದು. ಈ ದಿನದ ಪೂಜೆಯಿಂದ ದೇವಿಯ ಕೃಪೆಗೆ ಒಳಗಾಗಬಹುದು. ಸಾಡೇ ಸಾತ್ ಶನಿ, ಶನಿ ದೆಸೆಯಿಂದ ಉಂಟಾಗುವ ಸಮಸ್ಯೆಗಳನ್ನು ಈ ಪೂಜೆ ಪರಿಹರಿಸುವುದು.
ಶ್ರಾವಣ ನವಮಿಯಲ್ಲಿ ಪೂಜೆ ಮಾಡುವುದು ಹೇಗೆ?
ಮುಂಜಾನೆ ಬೇಗ ಎದ್ದು, ಬ್ರಹ್ಮ ಮುಹೂರ್ತದ ಸಮಯದಲ್ಲಿ ಸ್ನಾನ ಮಾಡಬೇಕು. ಸ್ನಾನದ ನಂತರ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡಬೇಕು. ನಂತರ ಹೂವುಗಳನ್ನು ಅರ್ಪಿಸಿ, ದೂಪದ ಆರತಿ ಬೆಳಗಬೇಕು. ಇದಾದ ಬಳಿಕ ಐದು, ಏಳು, ಒಂಭತ್ತು ಸಂಖ್ಯೆಯ ಬಿಲ್ವ ಪತ್ರೆಯನ್ನು ಅರ್ಪಿಸಬೇಕು. ನಂತರ ನೀವು ಹಣ್ಣು, ಪುಷ್ಪ ಸೇರಿದಂತೆ ಇನ್ನಿತರ ವಸ್ತುಗಳನ್ನು ನೀಡಬಹುದು. ಪೂಜೆಯ ತಟ್ಟೆಯನ್ನು ಇಟ್ಟುಕೊಂಡು "ಗಂಗಾ ಸಿಂಧೂಶ್ಚಾ ಕಾವೇರಿ ಯಮುನಾ ಚಾ ಸರಸ್ವತಿ ರೆವಾ ಮಹಾನದಿ ಗೋದಾಸ್ಮಿನ್ ಜಲೇ ಸಿಂಧೂ ಕುರು" ಎನ್ನುವ ಮಂತ್ರವನ್ನು ಜಪಿಸಿ. ಆರತಿ ಬೆಳಗಿ ಪೂಜೆ ಮಾಡಿ. ನಂತರ ಭಕ್ತರಿಗೆ ಸಿಹಿ ಪ್ರಸಾದವನ್ನು ವಿತರಿಸಿ.



Click it and Unblock the Notifications