Latest Updates
-
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ!
ಶ್ರಾವಣ ಮಾಸ 2021: ಈ ತಿಂಗಳಿನಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು
ಹಿಂದೂ ಕನ್ನಡ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸ 5ನೇ ತಿಂಗಳು ಬರುವುದು. 2021ರಲ್ಲಿ ಕರ್ನಾಟಕದಲ್ಲಿ ಶ್ರಾವಣ ಮಾಸ ಆಗಸ್ಟ್ 9ರಿಂದ ಸೆಪ್ಟೆಂಬರ್ 7ರವರೆಗೆ ಇದೆ.
ಶ್ರಾವಣ ಬಂತೆಂದರೆ ಹಬ್ಬಗಳ ಸಡಗರ ಶುರುವೆಂದೇ ಅರ್ಥ. ಇನ್ನು ಸಾಲು-ಸಾಲು ಹಬ್ಬಗಳು ಶುರುವಾಗುವುದು. ಶ್ರಾವಣವನ್ನು ಅತ್ಯಂತ ಪವಿತ್ರವಾದ ತಿಂಗಳು ಎಂದು ಪರಿಗಣಿಸಲಾಗಿದೆ. ಈ ತಿಂಗಳಿನಲ್ಲಿ ಬರುವ ಸೋಮವಾರಗಳು ತುಂಬಾ ಮಹತ್ವವನ್ನು ಹೊಂದಿದ್ದು ಇದನ್ನು ಶ್ರಾವಣ ಸೋಮವಾರ ಎಂದು ಆಚರಿಸಲಾಗುವುದು. ಈ ದಿನಂದು ಶಿವನನ್ನು ಆರಾಧಿಸಲಾಗುವುದು.

ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮಿ ವ್ರತ, ಶ್ರೀ ಕೃಷ್ಣ ಜಯಂತಿ ಹೀಗೆ ಅನೇಕ ಪ್ರಮುಖ ಹಬ್ಬಗಳಿವೆ. ಈ ತಿಂಗಳಿನಲ್ಲಿ ಬರುವ ಪ್ರಮುಖ ಹಬ್ಬಗಳಾವುವು ಎಂದು ನೋಡೋಣ ಬನ್ನಿ:

ಶ್ರಾವಣ ಸೋಮವಾರ
ಆಗಸ್ಟ್ 9 , 2021
ಆಗಸ್ಟ್ 16, 2021
ಆಗಸ್ಟ್ 23, 2021
ಆಗಸ್ಟ್ 30, 2021
ಸೆಪ್ಟೆಂಬರ್ 6, 2021

ಮಂಗಳ ಗೌರಿ ವ್ರತ
ಮಂಗಳ ಗೌರಿ ವ್ರತವನ್ನು ಶ್ರಾವಣ ಮಾಸದ ಪ್ರತೀ ಮಂಗಳವಾರದಂದು ಆಚರಿಸಲಾಗುವುದು. ಗೌರಿ ದೇವಿಯು ಮನೆಯವರಿಗೆ ಉತ್ತಮ ಆರೋಗ್ಯ, ಮನೆಗೆ ಐಶ್ವರ್ಯ ಹಾಗೂ ಉತ್ತಮ ವೈವಾಹಿಕ ಜೀವನ ನೀಡುವಂತೆ ಕೋರಿ ಮಂಗಳ ಗೌರಿ ವ್ರತ ಆಚರಿಸಲಾಗುವುದು. ಈ ವ್ರತವನ್ನು ವಿವಾಹಿತೆ ಮಹಿಳೆಯರು ಮೊದಲ 5 ವರ್ಷ ಆಚರಿಸುವ ಪದ್ಧತಿ ಇದೆ.
ಮಂಗಳ ಗೌರಿ ವ್ರತ ಆಚರಣೆ
ಆಗಸ್ಟ್ 10, 2021: ಮಂಗಳವಾರ
ಆಗಸ್ಟ್ 17, 2021: ಮಂಗಳವಾರ
ಆಗಸ್ಟ್ 24, 2021: ಮಂಗಳವಾರ
ಆಗಸ್ಟ್ 31, 2021: ಮಂಗಳವಾರ
ಸೆಪ್ಟೆಂಬರ್ 7, 2021: ಮಂಗಳವಾರ

ಪ್ರದೋಷ ಉಪವಾಸ
ಆಗಸ್ಟ್ 20: ಶುಕ್ರವಾರ
ಸೆಪ್ಟೆಂಬರ್ 4: ಶನಿವಾರ

ಶ್ರಾವಣದಲ್ಲಿ ಏಕಾದಶಿ ವ್ರತ
ಪುತ್ರದ ಏಕಾದಶಿ: ಆಗಸ್ಟ್ 18
ಅಜಾ ಏಕಾದಶಿ: ಸೆಪ್ಟೆಂಬರ್ 3

ಸಂಕಷ್ಟಿ ಚತುರ್ಥಿ
ಶ್ರಾವಣ ಮಾಸದಲ್ಲಿ ತಿಂಗಳ ಸಂಕಷ್ಟಿ ಆಗಸ್ಟ್ 25ಕ್ಕೆ
ಚಂದ್ರೋದಯ: ರಾತ್ರಿ 8:55ಕ್ಕೆ

ಶ್ರಾವಣ ಮಾಸದಲ್ಲಿ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ
ಶುಕ್ಲ ಪಕ್ಷ: ಆಗಸ್ಟ್ 9 ರಿಂದ ಆಗಸ್ಟ್ 22
ಕೃಷ್ಣ ಪಕ್ಷ: ಆಗಸ್ಟ್ 23 ರಿಂದ ಸೆಪ್ಟೆಂಬರ್ 7

ಶ್ರಾವಣ ಮಾಸದಲ್ಲಿ ಹುಣ್ಣಿಮೆ ಹಾಗೂ ರಕ್ಷಾ ಬಂಧನ
ಹುಣ್ಣಿಮೆ: ಆಗಸ್ಟ್ 22, 2021
ರಕ್ಷಾ ಬಂಧನ ಆಗಸ್ಟ್ 22
ರಿಕ್ ಶ್ರಾವಣಿ ಕೂಡ ಇದೇ ದಿನ ಇದೆ.

ಶ್ರಾವಣದಲ್ಲಿ ಅಮವಾಸ್ಯೆ
ಶ್ರಾವಣ ಅಮವಾಸ್ಯೆ ಸೆಪ್ಟೆಂಬರ್ 7
ಪಿಥೋರಿ ಅಮವಾಸ್ಯೆ ಸೆಪ್ಟೆಂರ್ 6
ಪೋಲಾ ಸೆಪ್ಟೆಂಬರ್ 6

ಹಬ್ಬಗಳು ಹಾಗೂ ಶುಭ ದಿನಗಳು
ಮಧುಶ್ರಾವಣಿ ತ್ರಿಥಿಯಾ: ಆಗಸ್ಟ್ 11
ಧ್ರುವ ಗಣಪತಿ ವ್ರತ: ಆಗಸ್ಟ್ 12
ನಾಗರ ಪಂಚಮಿ: ಆಗಸ್ಟ್ 13
ಕಲ್ಕಿ ಜಯಂತಿ: ಆಗಸ್ಟ್ 13
ವರಮಹಾಲಕ್ಷ್ಮಿ ವ್ರತ :ಆಗಸ್ಟ್ 13
ಧ್ರುವ ಅಷ್ಟಮಿ: ಆಗಸ್ಟ್ 16
ರಿಗ್ ಶ್ರಾವಣಿ: ಆಗಸ್ಟ್ 22
ನಾರಳಿ ಪೂರ್ಣಿಮಾ ಮತ್ತು ರಕ್ಷಾಬಂಧನ: ಆಗಸ್ಟ್ 22
ಶ್ರೀ ಕೃಷ್ಣ ಜಯಂತಿ: ಆಗಸ್ಟ್ 30
ಸೂಚನೆ: ಶ್ರಾವಣ ಮಾಸ ಉತ್ತರ ಭಾರದತ ಕಡೆ ಜುಲೈ 24ಕ್ಕೆ ಪ್ರಾರಂಭವಾಗಿ ಆಗಸ್ಟ್ 22ಕ್ಕೆ ಮುಕ್ತಾಯವಾಗುವುದು
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಲ್ಲಿ ಶ್ರಾವಣ ಮಾಸ ಆಗಸ್ಟ್ 9-ಸೆಪ್ಟೆಂಬರ್ 7ರವರೆಗೆ
ಶ್ರಾವಣ ನಂತರ ಬರುವುದು ಭಾದ್ರಪದ ಮಾಸ.



Click it and Unblock the Notifications











