Just In
- 53 min ago
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- 3 hrs ago
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- 6 hrs ago
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- 17 hrs ago
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
Don't Miss
- Movies
ಕರ್ನಾಟಕದಲ್ಲಿ ಪಠಾಣ್ ಹಾಗೂ ಕ್ರಾಂತಿ 4 ದಿನಗಳಲ್ಲಿ ಗಳಿಸಿದ್ದಿಷ್ಟು; ಎರಡಕ್ಕೂ ಸ್ವಲ್ಪವೇ ವ್ಯತ್ಯಾಸ!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Shattila Ekadashi 2023 : ಜ.18ಕ್ಕೆ ಷಟ್ತಿಲಾ ಏಕಾದಶಿ: ನಿಮ್ಮ ಇಷ್ಟಾರ್ಥ ನೆರವೇರಲು ಎಳ್ಳು, ಅನ್ನದಾನ ಮಾಡಿ
ವರ್ಷದಲ್ಲಿ 24 ಏಕಾದಶಿ ಆಚರಿಸಲಾಗುವುದು, ಒಂದೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಇಂದು ಜನವರಿ 18ಕ್ಕೆ ಷಟ್ತಿಲಾ ಏಕಾದಶಿ ಆಚರಿಸಲಾಗುವುದು. ಮಾಘ ಮಾಸದ ಏಕಾದಶಿಯಂದು ಈ ಷಟ್ತಿಲಾ ಏಕಾದಶಿ ಆಚರಿಸಲಾಗುವುದು.
ಈಗಷ್ಟೇ ಸಂಕ್ರಾಂತಿ ಹಬ್ಬ ಮುಗಿದಿದೆ, ಸಂಕ್ರಾಂತಿಯನ್ನು ಎಳ್ಳು ಬೆಲ್ಲ ಹಂಚಿ ಖುಷಿಪಟ್ಟಿದ್ದೆವು, ಅದಾದ ಮೇಲೆ ಬಂದಿರುವ ಈ ಷಟ್ತಿಲಾ ಎಕಾದಶಿಯಲ್ಲೂ ಎಳ್ಳಿಗೆ ತುಂಬಾನೇ ಮಹತ್ವವಿದೆ. ಈ ದಿನ ಎಳ್ಳು ದಾನ ಮಾಡಬೇಕೆಂದು ಹೇಳಲಾಗುವುದು.
ಷಟ್ತಿಲಾ ಆಚರಣೆಯ ಪ್ರಯೋಜನಗಳೇನು? ಈ ದಿನ ಎಳ್ಳು ಏಕೆ ದಾನ ಮಾಡಬೇಕು, ಈ ಏಕಾದಶಿಯಂದು ಏನು ಮಾಡಬೇಕು, ಏನು ಮಾಡಬಾರದು, ಪೌರಾಣಿಕ ಹಿನ್ನೆಲೆ ತಿಳಿಯೋಣ ಬನ್ನಿ:

ಏಕಾದಶಿ
ಏಕಾದಶಿ ತಿಥಿ ಪ್ರಾರಂಭ: ಜನವರಿ 17 ಸಂಜೆ 06:05ಕ್ಕೆ
ಏಕಾದಶಿ ತಿಥಿ ಮುಕ್ತಾಯ: 18, ಜನವರಿ ಸಂಜೆ 04:03ಕ್ಕೆ
ಜನವರಿ 18ಕ್ಕೆ ಉಪವಾಸವಿದ್ದು ಏಕಾದಶಿ ಆಚರಿಸಲಾಗುವುದು.

ಷಟ್ತಿಲಾ ಏಕಾದಶಿಯಂದು ಏನು ಮಾಡಬೇಕು?
ಷಟ್ತಿಲಾ ಏಕಾದಶಿ ಕತೆ ಕೇಳಿ
ಯಾರು ಈ ಉಪವಾಸ ಆಚರಿಸುತ್ತಾರೋ ಅವರಿಗೆ ಕಷ್ಟಗಳು ನಿವಾರಣೆಯಾಗಿ ಅವರ ಇಷ್ಟಾರ್ಥಗಳು ನೆರವೇರುವುದು. ಮನೆಯಲ್ಲಿ ಸುಳ-ನೆಮ್ಮದಿ-ಐಶ್ವರ್ಯ ಇರುತ್ತದೆ. ಈ ದಿನ ಉಪವಾಸ ಇರಲು ಸಾಧ್ಯವಾಗದಿದ್ದರೆ ಏಕಾದಶಿ ಕತೆಯನ್ನು ಕೇಳಿದರೂ ಪುಣ್ಯ ಲಭಿಸಲಿದೆ.
ಷಟ್ತಿಲಾ ಏಕಾದಶಿಯಂದು ಏನು ಮಾಡಬೇಕು?
*ಷಟ್ತಿಲಾ ಏಕಾದಶಿಯ ದಿನ ಹಸುವಿನ ಸಗಣಿ, ಹತ್ತಿ, ಎಳ್ಳು ಬೆರೆಸಿ ಹಸುವಿನ ರೊಟ್ಟಿಗಳನ್ನು ಮಾಡಿ ಹವನ ಮಾಡಬೇಕು.
* ಏಕಾದಶಿಯ ದಿನದಂದು ದೇವರನ್ನು ಪೂಜಿಸಿ ರಾತ್ರಿ ಜಾಗರಣೆ ಮಾಡಿ ಧ್ಯಾನ ಮಾಡಿ.
* ಏಕಾದಶಿಯ ದಿನದಂದು ಸಿಹಿತಿಂಡಿ, ತೆಂಗಿನಕಾಯಿ ಮತ್ತು ಸುಪಾರಿಯೊಂದಿಗೆ ಅರ್ಘ್ಯವನ್ನು ಅರ್ಪಿಸಿ ವಿಷ್ಣುವನ್ನು ಸ್ತುತಿಸಿ.
* ಮರುದಿನ, ವಿಷ್ಣು ದೇವರನ್ನು ಧೂಪ, ದೀಪದಿಂದ ಪೂಜಿಸಿ ಮತ್ತು ನೈವೇದ್ಯ ಅರ್ಪಿಸಿ.
* ಈ ದಿನ ತಪ್ಪದೆ ಅನ್ನದಾನ ಮಾಡಿ

ಷಟ್ತಿಲಾ ಏಕಾದಶಿ ವ್ರತ ಕಥೆ: ಅನ್ನದಾನದ ಮಹತ್ವ
ಪದ್ಮ ಪುರಾಣದ ಪ್ರಕಾರ, ಪ್ರಾಚೀನ ಕಾಲದಲ್ಲಿ ಒಬ್ಬ ಮಹಿಳೆಯಿದ್ದಳು,ಅ ವಳು ವಿಷ್ಣುವನ್ನು ತುಂಬಾ ರಾಧಿಸುತ್ತಿದ್ದಳು. ವಿಷ್ಣುವಿನ ಯಾವುದೇ ಪಪೂಜೆ, ಉಪವಾಸ ತಪ್ಪಿಸುತ್ತಿರಲಿಲ್ಲ. ಉಪವಾಸವನ್ನು ಮಾಡಿದ್ದರಿಂದ ಆಕೆಯ ದೇಹ ಶುದ್ಧವಾಯಿತು. ಶ್ರೀ ವಿಷ್ಣುವಿನ ಭಕ್ತೆಯಾದ ನನಗೆ ಮೋಕ್ಷ ಸಿಗುವುದೆಂದೇ ನಂಬಿದ್ದಳು. ಆದರೆ ಅವರು ತಮ್ಮ ಜೀವಿತಾವಧಿಯಲ್ಲಿ ಆಹಾರವನ್ನು ದಾನ ಮಾಡಿರಲಿಲ್ಲ. ಆ ಮಹಿಳೆ ತನ್ನ ಮರಣದ ನಂತರ ವೈಕುಂಠ ತಲುಪಿದಾಗ ಅಲ್ಲಿ ಅವಳಿ ಆಶ್ಚಯ ಎದುರಾಗಿತ್ತು, ವಿಷ್ಣುವಿನ ಪ್ರತಿಯೊಂದು ಪೂಜೆ, ಪುರಸ್ಕಾರ ಮಾಡಿದರೂ ವೈಕುಂಠದಲ್ಲಿ ಅವಳಿಗಾಗಿ ಖಾಲಿ ಗುಡಿಸಲು ನೀಡಲಾಗಿತ್ತು.
ಮಹಿಳೆಗೆ ತುಂಬಾ ದುಃಖವಾಯಿತು, ಶ್ರೀವಿಷ್ಣುವಿನ ಬಳಿ ಹೋಗಿ ನಾನು ನಿನ್ನ ಭಕ್ತೆ, ಪ್ರತಿಯೊಂದು ಉಪವಾಸ ಮಾಡುತ್ತಿದ್ದೆ, ಪೂಜೆ ನಿಯಮಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದೆ ನನಗೇಕೆ ಖಾಲಿ ಗುಡಿಸಲು ಸಿಕ್ಕಿದೆ..? ಆಗ ದೇವರು ನೀನು ಪೂಜೆ , ಪುರಸ್ಕಾರ ಎಲ್ಲಾ ಮಾಡಿದ್ದೀಯ, ನಿನ್ನ ಪೂಜೆಯ ಫಲದಿಂದ ವೈಕುಂಠಕ್ಕೆ ಬಂದಿದ್ದೀಯ, ಆದರೆ ನಿನ್ನ ಜೀವನದಲ್ಲಿ ನೀನು ಯಾವತ್ತೂ ಏನನ್ನೂ ದಾನ ಮಾಡಿಲ್ಲ ಆದ್ದರಿಂದ ನಿನಗೆ ಈ ಫಲ ಸಿಕ್ಕಿದೆ ಎಂದು ಹೇಳುತ್ತಾನೆ. ನಂತರ ವಿಷ್ಣು ಒಮ್ಮೆ ನಾನು ನಿನ್ನ ಉದ್ಧಾರಕ್ಕಾಗಿ ಭಿಕ್ಷೆ ಕೇಳಲು ಬಂದಿದ್ದೆ, ಆದರೆ ನೀನು ಆಹಾರ ನೀಡುವ ಬದಲಿಗೆ ನನಗೆ ಮಣ್ಣಿನ ಮುದ್ದೆ ನೀಡಿದೆ. ಹಾಗಾಗಿ ವೈಕುಂಠದಲ್ಲಿ ತೃಪ್ತಿ ಸಿಗಲ್ಲ ಎಂದು ಹೇಳುತ್ತಾನೆ.
ಭಗವಾನ್ ವಿಷ್ಣುವಿನ ಮಾತುಗಳನ್ನು ಕೇಳಿದ ಮಹಿಳೆಗೆ ತುಂಬಾ ಪಶ್ಚಾತ್ತಾಪವಾಗುತ್ತೆ, ಆಕೆ ನಾನು ಮಾಡಿದ ತಪ್ಪನ್ನು ಸರಿಪಡಿಸುವ ಮಾರ್ಗವನ್ನು ಭಗವಂತನಲ್ಲಿ ಕೇಳಿದಳು. ಆಗ ಶ್ರೀ ಹರಿಯು ದೇವ ಕನ್ಯೆಯರು ನಿನ್ನನ್ನು ಭೇಟಿಯಾಗಲು ಬರುತ್ತಾರೆ, ಅವರನ್ನು ನಿನ್ನಗುಡಿಸಲಿಗೆ ಆಹ್ವಾನಿಸಬೇಕು, ನಂತರ ಅವರು ಷಟ್ತಿಲಾ ಏಕಾದಶಿಯ ಉಪವಾಸದ ಕತೆ ಬಗ್ಗೆ ಹೇಳುವವರೆಗೆ ಗುಡಿಸಲ ಬಾಗಿಲು ತೆರೆಯಬೇಡ ಎಂದನು. ಅದರಂತೆ ದೇವಕನ್ಯೆಯರು ಬಂದಾಗ ಮಹಿಳೆ ಅವರನ್ನು ತನ್ನ ಗುಡಿಸಿಲಿಗೆ ಆಹ್ವಾನಿಸಿ ಅವರ ಬಳಿ ಷಟ್ತಿಲಾ ಏಕಾದಶಿ ಬಗ್ಗೆ ಕತೆ ಹೇಳಲು ಬೇಡಿಕೊಳ್ಳುತ್ತಾಳೆ. ಅವರು ಷಟ್ತಿಲಾ ಏಕಾದಶಿಯ ಮಹತ್ವವನ್ನು ಹೇಳುತ್ತಾರೆ. ಅದರ ನಂತರ ಮಹಿಳೆಯು ವಿಧಿ - ವಿಧಾನಗಳ ಪ್ರಕಾರ ಷಟ್ತಿಲಾ ಏಕಾದಶಿ ವ್ರತವನ್ನು ಪೂರ್ಣಗೊಳಿಸುತ್ತಾಳೆ. ಇದರಿಂದ ಆಕೆಯ ಪಾಪಗಳು ಕಳೆದು ಗುಡಿಸಲಿನಲ್ಲಿ ಅವಳು ಬಯಸಿದಂತೆ ಆಹಾರ ಮತ್ತು ಐಶ್ವರ್ಯ ಸಿಗುವುದು, ವೈಕುಂಠದಲ್ಲಿ ಸಂತೋಷದಿಂದ ಇರುತ್ತಾಳೆ.