For Quick Alerts
ALLOW NOTIFICATIONS  
For Daily Alerts

ಶನಿ ಜಯಂತಿ: ಶುಭ ಕಾರ್ಯಕ್ಕೆ ಏನು ಮಾಡಬೇಕು? ಈ ಲೇಖನ ಓದಿ...

ಶನಿಯ ಅನುಗ್ರಹ ಪೂರ್ವಕ ದೃಷ್ಟಿ ಅಥವಾ ಶುಭದೃಷ್ಟಿ ಯಾವಾಗ ಓರ್ವ ವ್ಯಕ್ತಿಯ ಮೇಲೆ ಬಿತ್ತೋ, ಆ ವ್ಯಕ್ತಿಗ ಅದೃಷ್ಟ ಖುಲಾಯಿಸಿತೆಂದೇ ಹೇಳಬಹುದು. ದಿವಾಳಿಯಾಗಿದ್ದ ವ್ಯಕ್ತಿ ರಾಜಕುಮಾರನಾಗಬಹುದು.

By Arshad
|

ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಂಡು ಅವರ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಶನಿ ಜಯಂತಿಯನ್ನು ಭಾರತದ ಹಲವೆಡೆಗಳಲ್ಲಿ 25 ನೇ ಮೇ 2017 ರಂದು ದೇಶದ ಇತರೆಡೆಗಳಲ್ಲಿ ವೈಶಾಖ ಮಾಸದ ಅಮವಾಸ್ಯೆ ತಿಥಿಯಂದು ಶನಿ ಜಯಂತಿಯನ್ನು ಆಚರಿಸುವವರಿದ್ದು, ತಾವು ಅನುಸರಿಸುವ ಬೇರೆ ಬೇರೆ ಕ್ಯಾಲೆಂಡರ್‌ಗಳನ್ನು ಆಧರಿಸಿ ಈ ಜಯಂತಿಯನ್ನು ಅವರು ಆಚರಿಸುತ್ತಾರೆ.

ಜ್ಯೋತಿಷ್ಯಾಸ್ತ್ರದ ಪ್ರಕಾರ ವೃತ್ತಿಜೀವನಕ್ಕೆ ಸೂರ್ಯ ಸದಾ ಆಶೀರ್ವಾದ ನೀಡುತ್ತಿರುತ್ತಾನೆ. ಆದರೆ ಶನಿಯ ಅನುಗ್ರಹ ಪೂರ್ವಕ ದೃಷ್ಟಿ ಅಥವಾ ಶುಭದೃಷ್ಟಿ ಯಾವಾಗ ಓರ್ವ ವ್ಯಕ್ತಿಯ ಮೇಲೆ ಬಿತ್ತೋ, ಆ ವ್ಯಕ್ತಿಗ ಅದೃಷ್ಟ ಖುಲಾಯಿಸಿತೆಂದೇ ಹೇಳಬಹುದು. ದಿವಾಳಿಯಾಗಿದ್ದ ವ್ಯಕ್ತಿ ರಾಜಕುಮಾರನಾಗಬಹುದು.

ಶನಿ ಪೂಜಾ ವಿಧಿ - ಕೇಳಿ ಗೊತ್ತು, ಆಚರಿಸುವುದು ಹೇಗೆ?

ಆದ್ದರಿಂದ ಈ ಶುಭದಿನದಂದು ಕೈಗೊಳ್ಳುವ ಪರಿಹಾರ ಕಾರ್ಯಗಳು ನಿಮ್ಮ ವೃತ್ತಿಜೀವನಕ್ಕೆ ಬಹಳಷ್ಟು ಪೂರಕವಾಗಿರಬಹುದು. ಈ ದಿನದಂದು ಏನು ಮಾಡಬೇಕೆಂಬುದನ್ನು ಇಂದಿನ ದಿನದಲ್ಲಿ ವಿವರಿಸಲಾಗಿದ್ದು ಈ ಸುಲಭ ಸಲಹೆಗಳನ್ನು ಪಾಲಿಸುವ ಮೂಲಕ ಶನಿದೇವನ ಅನುಗ್ರಹಕ್ಕೆ ಪಾತ್ರರಾಗಬಹುದು.....

ಮನೆಯ ಹೊಸ್ತಿಲಿನಲ್ಲಿ

ಮನೆಯ ಹೊಸ್ತಿಲಿನಲ್ಲಿ

ನಿಮ್ಮ ಮನೆಯ ಹೊಸ್ತಿನ ಎರಡೂ ಬದಿಗಳಲ್ಲಿ ಎರಡು ಮಣ್ಣಿನ ದೀವಟಿಗೆಗಳನ್ನು ಹಚ್ಚಿಡಿ. ಇದರಿಂದ ನಿಮ್ಮ ಮನೆಯೊಳಗೆ ಋಣಾತ್ಮಕ ಶಕ್ತಿ ಪ್ರವೇಶ ಪಡೆಯಲು ಸಾಧ್ಯವಾಗದು.

ದೀವಟಿಗೆಯ ಮಹತ್ವ

ದೀವಟಿಗೆಯ ಮಹತ್ವ

ನಿಮ್ಮ ದೀವಟಿಗೆಯಲ್ಲಿರುವ ಎಣ್ಣೆ ಕೊಳೆ ಅಥವಾ ಕುಂದುಗಳನ್ನು ಪ್ರತಿನಿಧಿಸುತ್ತದೆ. ಅತಿಯಾಸೆ, ಮತ್ಸರ, ದ್ವೇಶ, ಲಾಲಸೆ ಮೊದಲಾದವುಗಳನ್ನು ಮಾನವರು ತಮ್ಮ ಉಪಪ್ರಜ್ಞೆಯಲ್ಲಿ ಬೆಳೆಸಿಕೊಂಡು ಬಂದಿದ್ದು ಎಣ್ಣೆಯನ್ನು ಉರಿಸುವ ಮೂಲಕ ಈ ಗುಣಗಳನ್ನು ಸುಡುವುದು ಸಾಂಕೇತಿಕವಾಗಿದೆ. ಹತ್ತಿಯ ಬತ್ತಿ ಆತ್ಮದ ಪ್ರತೀಕವಾಗಿದ್ದು ಇದರ ಮೂಲಕ ಎಣ್ಣೆಯನ್ನು ಉರಿಸಿ ಜ್ಞಾನ ಹಾಗೂ ತಿಳಿವಳಿಕೆಯನ್ನು ಪಡೆಯುವುದಾಗಿದೆ.

ಪೂಜಾಗೃಹದಲ್ಲಿ

ಪೂಜಾಗೃಹದಲ್ಲಿ

ನಿಮ್ಮ ಪೂಜಾಗೃಹದಲ್ಲಿಯೂ ದೀಪವೊಂದನ್ನು ಹಚ್ಚಿ. ಈ ಪವಿತ್ರ ದೀಪವನ್ನು ಹಚ್ಚುವುದರಿಂದ ಕುಟುಂಬದಲ್ಲಿ ಸಮೃದ್ಧಿಯುಂಟಾಗುವುದು ಎಂದು ಹೇಳಲಾಗುತ್ತದೆ.

ತುಳಸಿ ಕಟ್ಟೆ

ತುಳಸಿ ಕಟ್ಟೆ

ನಿಮ್ಮ ಮನೆಯ ತುಳಸಿ ಕಟ್ಟೆಯ ಸಮೀಪದಲ್ಲಿಯೂ ಒಂದು ದೀಪವನ್ನು ಸಂಜೆಯ ಹೊತ್ತು ಅಂದರೆ ಸೂರ್ಯಾಸ್ತವಾದ ತಕ್ಷಣ ಹಚ್ಚಿ. ಅಮಾವಾಸ್ಯೆ ಇರುವ ರಾತ್ರಿಯಂದು ಈ ದೀಪ ಇಡಿಯ ರಾತ್ರಿ ಬೆಳಗುತ್ತಿರುವಂತೆ ಮಾಡುವುದರಿಂದ ಶುಭಕರವಾಗುತ್ತದೆ. ತುಳಸಿಕಟ್ಟೆಯ ಬಳಿ ಇರುವ ಈ ಪವಿತ್ರ ಬೆಳಕು ದೇವತೆಗಳನ್ನು ಆಕರ್ಷಿಸುತ್ತದೆ ಎನ್ನಲಾಗುತ್ತದೆ.

ಅಮಾವಾಸ್ಯೆಯ ರಾತ್ರಿಯ ಸಮಯದಲ್ಲಿ

ಅಮಾವಾಸ್ಯೆಯ ರಾತ್ರಿಯ ಸಮಯದಲ್ಲಿ

ನಿಮ್ಮ ಮನೆಯ ಛಾವಣಿಯನ್ನೂ ಮರೆಯಕೂಡದು. ಅಮಾವಾಸ್ಯೆಯ ರಾತ್ರಿಯ ಸಮಯದಲ್ಲಿ ನಿಮ್ಮ ಮನೆಯ ಛಾವಣಿಯ ಮೇಲೂ ಕೆಲವು ಚಿಕ್ಕ ದೀಪಗಳನ್ನು ಹಚ್ಚಿಡಿ. ಒಂದು ವೇಳೆ ಛಾವಣೆಯ ಮೇಲೆ ವಿದ್ಯುತ್ ದೀಪವಿದ್ದರೆ ಇದನ್ನು ಬೆಳಗಿಸಿ. ಈ ಬೆಳಕು ಇಡಿಯ ರಾತ್ರಿ ಬೆಳಗುವಂತೆ ಮಾಡಿ. ಇದರಿಂದ ಋಣಾತ್ಮಾ ಶಕ್ತಿ ನಿಮ್ಮ ಮನೆಯ ಪ್ರದೇಶವನ್ನು ಆವರಿಸುವುದರಿಂದ ತಡೆದಂತಾಗುತ್ತದೆ.

ಅರಳಿ ಮರ

ಅರಳಿ ಮರ

ನಿಮ್ಮ ಮನೆಯ ಹತ್ತಿರ ಅರಳಿ ಮರವಿದ್ದರೆ ಅದರ ಬುಡದಲ್ಲಿಯೂ ಒಂದು ದೀಪವನ್ನು ಬೆಳಗಿಸಿ. ಇದರಿಂದ ನಿಮ್ಮ ಜೀವನದಲ್ಲಿ ಶನಿಗೆ ಸಂಬಂಧಿಸಿದ ತೊಂದರೆಗಳು ದೂರಾಗುತ್ತವೆ.

ದೀಪದ ಬೆಳಕು ಜ್ಞಾನವನ್ನು ಪ್ರತಿನಿಧಿಸುತ್ತದೆ

ದೀಪದ ಬೆಳಕು ಜ್ಞಾನವನ್ನು ಪ್ರತಿನಿಧಿಸುತ್ತದೆ

ಹೌದು, ದೀಪದ ಬೆಳಕು ಜ್ಞಾನವನ್ನು ಪ್ರತಿನಿಧಿಸುತ್ತದೆ. ದೀಪವನ್ನು ಬೆಳಗಿಸುವುದೆಂದರೆ ಮುಗ್ಧ ಮನಸ್ಸಿನ ವ್ಯಕ್ತಿ ಅಂಧಕಾರದಿಂದ ಜ್ಞಾನದ ಬೆಳಕನ್ನು ಪಡೆಯುವುದೇ ಆಗಿದೆ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಮನಸ್ಸಿನಲ್ಲಿರುವ ಅಜ್ಞಾನವನ್ನು ತೊಡೆದು ಜ್ಞಾನವನ್ನು ಪಡೆಯುವುದಾಗಿದೆ. ಈ ಜ್ಞಾನವನ್ನು ಒಳ್ಳೆಯ ಮತ್ತು ಸಮಾಜದ ಏಳ್ಗೆಗಾಗಿ, ಸದುದ್ದೇಶಗಳಿಗಾಗಿ ಉಪಯೋಗಿಸುವುದು ಈ ಜ್ಞಾನವನ್ನು ಪಡೆಯುವ ಮುಖ್ಯ ಉದ್ದೇಶವಾಗಿರುವುದು ಸಹಾ ಅಗತ್ಯವಾಗಿದೆ.

English summary

Shani Jayanti: Here's what you can do on this day for good luck

In astrology, Sun blesses with a good career, while Shani''s benevolent look (shubh drishti) can turn any pauper to prince. Hence, remedies done on this day will greatly benefit your career prospects. Here's what you can do on this day for good luck. These tips are simple and can be performed very easily.
Story first published: Wednesday, May 24, 2017, 20:34 [IST]
X
Desktop Bottom Promotion