Just In
- 4 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 4 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 5 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 6 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇ 22 ಶನಿ ಜಯಂತಿ: ಕಷ್ಟದಿಂದ ಮುಕ್ತಿಗೆ ಏನು ಮಾಡಬೇಕು?
ಮೇ 22, 2020 ವೈಶಾಖ ಮಾಸದ ಅಮಾವಾಸ್ಯೆಯ ದಿನ, ಶನಿ ದೇವನ ಜನ್ಮ ದಿನವಾಗಿದ್ದು, ಈ ದಿನವನ್ನು ಶನಿ ಜಯಂತಿಯೆಂದು ಆಚರಿಸಲಾಗುವುದು. ಈ ದಿನ ಶನೇಶ್ವರನಿಗೆ ಪೂಜೆ ಮಾಡುವುದರಿಂದ ಶನಿದೋಷದಿಂದ ಮುಕ್ತಿ ಹೊಂದಬಹುದು.
ಜೀವನದಲ್ಲಿ ಕಷ್ಟ ಬಂದಾಗ ಇದು ಶನಿಯ ಪ್ರಭಾವ ಎಂದೇ ಹೇಳುವುದನ್ನು ನೀವು ಕೇಳಿರಬಹುದು. ಶನಿ ಕಾಟ ಜೀವನದಲ್ಲಿ ಒಮ್ಮೆಯಾದರೂ ಇರುತ್ತದೆ ಎಂದು ಹೇಳಲಾಗುತ್ತದೆ. ಧರ್ಮರಾಯ, ಸತ್ಯ ಹರಿಶ್ಚಂದ್ರ, ಕೃಷ್ಣಪರಮಾತ್ಮನಿಗೂ ಕೂಡ ಶನಿ ಹೇಗೆ ಕಾಟ ಕೊಟ್ಟಿದ್ದ ಎಂಬ ಕತೆಗಳನ್ನು ಕೇಳಿರಬಹುದು. ಶನಿಯ ದೋಷದಿಂದ ಪಾರಾಗಿ ಅವನ ಕೃಪೆ ದೊರೆಯಬೇಕಾದರೆ ಶನಿ ದೇವನ ವಿಗ್ರಹವನ್ನು ಗಂಗಾಜಲದ\, ಪಂಚಾಮೃತ, ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನಂತರ ಪೂಜೆ ಸಲ್ಲಿಸಲಾಗುವುದು.
ಶನಿ ದೇವನಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವುದರ ಹಿಂದಿರುವ ಪೌರಾಣಿಕ ಕತೆ
ಸೀತಾಮಾತೆಯನ್ನು ಹುಡುಕಿಕೊಂಡು ಹನುಮಂತ ಲಂಕೆಗೆ ಹೋದಾಗ ಶನಿದೇವನು ಅಗ್ನಿಯಿಂದ ಸುಟ್ಟು ಬೆಂದು ಹೋಗಿರುವ ಸ್ಥಿತಿಯಲ್ಲಿ ಶನಿ ದೇವನನ್ನು ಕಂಡ ಹನುಮಂತ ಬೆಂಕಿ ಗಾಯದ ಉರಿಯಿಂದ ಶನಿಯನ್ನು ರಕ್ಷಿಸಲು ಎಳ್ಳೆಣ್ಣೆ ಲೇಪನ ಮಾಡುತ್ತಾನೆ. ಇದರಿಂದ ಶನಿಗೆ ಆಗುತ್ತಿದ್ದ ಉರಿ ಮತ್ತು ನೋವು ಕಡಿಮೆಯಾಗುತ್ತದೆ. ಆಗ ಶನಿ ನನಗೆ ಯಾರು ಎಳ್ಳೆಣ್ಣೆ ಅರ್ಪಿಸುತ್ತಾರೋ ಅವರಿಗೆ ಕಾಡುವುದಿಲ್ಲ ಎಂಬುವುದಾಗಿ ಹೇಳುತ್ತಾನೆ. ಹಾಗಾಗಿ ಶನಿ ದೇವನ ಕೃಪೆಗಾಗಿ ಎಳ್ಳೆಣ್ಣೆ ಅರ್ಪಿಸುತ್ತಾರೆ.
ಶನಿದೇವನಿಗೆ ಪೂಜೆಗೆ ಸೂಕ್ತ ಸಮಯ
ಶನಿ ಪೂಜೆಗೆ ಸಮಯ ಮೇ 21, ಗುರುವಾರ9.35
ಶನಿ ತಿಥಿ ಮೇ 22, ಶುಕ್ರವಾರ ರಾತ್ರಿ 11.08
ಶನಿ ಜಯಂತಿಯಂದು ಏನು ಮಾಡಬೇಕು?
- ಈ ದಿನ ಇರುವೆಗಳುಗೆ ಗೋಧಿ, ಬೆಲ್ಲವನ್ನು ಹಾಕಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
- ಶನಿಯನ್ನು ಪೂಜಿಸುವಾಗ ''ಓಂ ಶಂ ಶನೈಶ್ಚರಾಯ ನಮಃ'' ಎಂದು ಮಂತ್ರ ಹೇಳುವುದರಿಂದ ಶನಿಯನ್ನು ಬೇಗನೆ ಒಲಿಸಿಕೊಳ್ಳಬಹುದು.
- ಶನಿ ಜಯಂತಿಯಂದು ಕಪ್ಪು ಬಟ್ಟೆ, ಕಪ್ಪು ಬೇಳೆ ಮೊದಲಾವುಗಳನ್ನು ದಾನ ಮಾಡುವುದು ಒಳ್ಳೆಯದು.
- ಈ ದಿನ ಕಪ್ಪು ನಾಯಿಗೆ ಎಳ್ಳೆಣ್ಣೆ ಹಾಕಿ ಗೋಧಿ ಚಪಾತಿ ಮಾಡಿ ನೀಡುವುದರಿಂದ ಒಳಿತಾಗುವುದು.
- ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು. ಆದರೆ ಈ ವರ್ಷ ಲಾಕ್ಡೌನ್ನಿಂದಾಗಿ ಅದು ಸಾಧ್ಯವಾಗುವುದಿಲ್ಲ, ಆದರೆ ನವಗ್ರಹಗಳನ್ನು ಮನಸ್ಸಿನಲ್ಲಿ ಸ್ಮರಿಸಿ ಪೂಜಿಸಿದರೆ ಅವರ ಪ್ರಭಾವದಿಂದ ಕಷ್ಟದಿಂದ ಮುಕ್ತಿ ಸಿಗುವುದು.
- ಶನಿ ದೋಷದಿಂದಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದರೆ ಶನಿಗೆ ನವರತ್ನ ಹಾರ ಅರ್ಪಿಸಿದರೆ ಒಳಿತಾಗುವುದು.
- ಈ ದಿನ ಹನುಂತನ ದೇವಾಲಯಕ್ಕೆ ಹೋಗಿ ಆಂಜನೇಯವನ್ನು ಸ್ಮರಿಸುವುದರಿಂದ ಹನುಮಂತನ ಭಕ್ತರನ್ನು ಶನಿ ಕಾಡುವುದಿಲ್ಲ.
- ಗ್ರಹದೋಷದಿಂದಾಗಿ ಸಾಕಷ್ಟು ಕಷ್ಟಗಳು ಎದುರಾಗಿದ್ದರೆ ಅದು ನಿವಾರನೆಯಾಗುವುದು
- ಅದೃಷ್ಟ ಲಕ್ಷ್ಮಿ ಒಲಿಯುವುದು
- ಬದುಕಿನಲ್ಲಿ ಒಳ್ಳೆಯ ಘಟನೆಗಳು ನಡೆಯುವುದು
- ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ ಹೊಂದುವಿರಿ.