Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಮೇ 22 ಶನಿ ಜಯಂತಿ: ಕಷ್ಟದಿಂದ ಮುಕ್ತಿಗೆ ಏನು ಮಾಡಬೇಕು?
ಮೇ 22, 2020 ವೈಶಾಖ ಮಾಸದ ಅಮಾವಾಸ್ಯೆಯ ದಿನ, ಶನಿ ದೇವನ ಜನ್ಮ ದಿನವಾಗಿದ್ದು, ಈ ದಿನವನ್ನು ಶನಿ ಜಯಂತಿಯೆಂದು ಆಚರಿಸಲಾಗುವುದು. ಈ ದಿನ ಶನೇಶ್ವರನಿಗೆ ಪೂಜೆ ಮಾಡುವುದರಿಂದ ಶನಿದೋಷದಿಂದ ಮುಕ್ತಿ ಹೊಂದಬಹುದು.

ಜೀವನದಲ್ಲಿ ಕಷ್ಟ ಬಂದಾಗ ಇದು ಶನಿಯ ಪ್ರಭಾವ ಎಂದೇ ಹೇಳುವುದನ್ನು ನೀವು ಕೇಳಿರಬಹುದು. ಶನಿ ಕಾಟ ಜೀವನದಲ್ಲಿ ಒಮ್ಮೆಯಾದರೂ ಇರುತ್ತದೆ ಎಂದು ಹೇಳಲಾಗುತ್ತದೆ. ಧರ್ಮರಾಯ, ಸತ್ಯ ಹರಿಶ್ಚಂದ್ರ, ಕೃಷ್ಣಪರಮಾತ್ಮನಿಗೂ ಕೂಡ ಶನಿ ಹೇಗೆ ಕಾಟ ಕೊಟ್ಟಿದ್ದ ಎಂಬ ಕತೆಗಳನ್ನು ಕೇಳಿರಬಹುದು. ಶನಿಯ ದೋಷದಿಂದ ಪಾರಾಗಿ ಅವನ ಕೃಪೆ ದೊರೆಯಬೇಕಾದರೆ ಶನಿ ದೇವನ ವಿಗ್ರಹವನ್ನು ಗಂಗಾಜಲದ\, ಪಂಚಾಮೃತ, ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನಂತರ ಪೂಜೆ ಸಲ್ಲಿಸಲಾಗುವುದು.

ಶನಿ ದೇವನಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವುದರ ಹಿಂದಿರುವ ಪೌರಾಣಿಕ ಕತೆ
ಸೀತಾಮಾತೆಯನ್ನು ಹುಡುಕಿಕೊಂಡು ಹನುಮಂತ ಲಂಕೆಗೆ ಹೋದಾಗ ಶನಿದೇವನು ಅಗ್ನಿಯಿಂದ ಸುಟ್ಟು ಬೆಂದು ಹೋಗಿರುವ ಸ್ಥಿತಿಯಲ್ಲಿ ಶನಿ ದೇವನನ್ನು ಕಂಡ ಹನುಮಂತ ಬೆಂಕಿ ಗಾಯದ ಉರಿಯಿಂದ ಶನಿಯನ್ನು ರಕ್ಷಿಸಲು ಎಳ್ಳೆಣ್ಣೆ ಲೇಪನ ಮಾಡುತ್ತಾನೆ. ಇದರಿಂದ ಶನಿಗೆ ಆಗುತ್ತಿದ್ದ ಉರಿ ಮತ್ತು ನೋವು ಕಡಿಮೆಯಾಗುತ್ತದೆ. ಆಗ ಶನಿ ನನಗೆ ಯಾರು ಎಳ್ಳೆಣ್ಣೆ ಅರ್ಪಿಸುತ್ತಾರೋ ಅವರಿಗೆ ಕಾಡುವುದಿಲ್ಲ ಎಂಬುವುದಾಗಿ ಹೇಳುತ್ತಾನೆ. ಹಾಗಾಗಿ ಶನಿ ದೇವನ ಕೃಪೆಗಾಗಿ ಎಳ್ಳೆಣ್ಣೆ ಅರ್ಪಿಸುತ್ತಾರೆ.

ಶನಿದೇವನಿಗೆ ಪೂಜೆಗೆ ಸೂಕ್ತ ಸಮಯ
ಶನಿ ಪೂಜೆಗೆ ಸಮಯ ಮೇ 21, ಗುರುವಾರ9.35
ಶನಿ ತಿಥಿ ಮೇ 22, ಶುಕ್ರವಾರ ರಾತ್ರಿ 11.08

ಶನಿ ಜಯಂತಿಯಂದು ಏನು ಮಾಡಬೇಕು?
- ಈ ದಿನ ಇರುವೆಗಳುಗೆ ಗೋಧಿ, ಬೆಲ್ಲವನ್ನು ಹಾಕಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
- ಶನಿಯನ್ನು ಪೂಜಿಸುವಾಗ ''ಓಂ ಶಂ ಶನೈಶ್ಚರಾಯ ನಮಃ'' ಎಂದು ಮಂತ್ರ ಹೇಳುವುದರಿಂದ ಶನಿಯನ್ನು ಬೇಗನೆ ಒಲಿಸಿಕೊಳ್ಳಬಹುದು.
- ಶನಿ ಜಯಂತಿಯಂದು ಕಪ್ಪು ಬಟ್ಟೆ, ಕಪ್ಪು ಬೇಳೆ ಮೊದಲಾವುಗಳನ್ನು ದಾನ ಮಾಡುವುದು ಒಳ್ಳೆಯದು.
- ಈ ದಿನ ಕಪ್ಪು ನಾಯಿಗೆ ಎಳ್ಳೆಣ್ಣೆ ಹಾಕಿ ಗೋಧಿ ಚಪಾತಿ ಮಾಡಿ ನೀಡುವುದರಿಂದ ಒಳಿತಾಗುವುದು.
- ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು. ಆದರೆ ಈ ವರ್ಷ ಲಾಕ್ಡೌನ್ನಿಂದಾಗಿ ಅದು ಸಾಧ್ಯವಾಗುವುದಿಲ್ಲ, ಆದರೆ ನವಗ್ರಹಗಳನ್ನು ಮನಸ್ಸಿನಲ್ಲಿ ಸ್ಮರಿಸಿ ಪೂಜಿಸಿದರೆ ಅವರ ಪ್ರಭಾವದಿಂದ ಕಷ್ಟದಿಂದ ಮುಕ್ತಿ ಸಿಗುವುದು.
- ಶನಿ ದೋಷದಿಂದಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದರೆ ಶನಿಗೆ ನವರತ್ನ ಹಾರ ಅರ್ಪಿಸಿದರೆ ಒಳಿತಾಗುವುದು.
- ಈ ದಿನ ಹನುಂತನ ದೇವಾಲಯಕ್ಕೆ ಹೋಗಿ ಆಂಜನೇಯವನ್ನು ಸ್ಮರಿಸುವುದರಿಂದ ಹನುಮಂತನ ಭಕ್ತರನ್ನು ಶನಿ ಕಾಡುವುದಿಲ್ಲ.
- ಗ್ರಹದೋಷದಿಂದಾಗಿ ಸಾಕಷ್ಟು ಕಷ್ಟಗಳು ಎದುರಾಗಿದ್ದರೆ ಅದು ನಿವಾರನೆಯಾಗುವುದು
- ಅದೃಷ್ಟ ಲಕ್ಷ್ಮಿ ಒಲಿಯುವುದು
- ಬದುಕಿನಲ್ಲಿ ಒಳ್ಳೆಯ ಘಟನೆಗಳು ನಡೆಯುವುದು
- ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ ಹೊಂದುವಿರಿ.

ಶನಿಕೃಪೆಗಾಗಿ ಪೂಜಾ ವಿಧಾನ




Click it and Unblock the Notifications