Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಮೇ 22 ಶನಿ ಜಯಂತಿ: ಕಷ್ಟದಿಂದ ಮುಕ್ತಿಗೆ ಏನು ಮಾಡಬೇಕು?
ಮೇ 22, 2020 ವೈಶಾಖ ಮಾಸದ ಅಮಾವಾಸ್ಯೆಯ ದಿನ, ಶನಿ ದೇವನ ಜನ್ಮ ದಿನವಾಗಿದ್ದು, ಈ ದಿನವನ್ನು ಶನಿ ಜಯಂತಿಯೆಂದು ಆಚರಿಸಲಾಗುವುದು. ಈ ದಿನ ಶನೇಶ್ವರನಿಗೆ ಪೂಜೆ ಮಾಡುವುದರಿಂದ ಶನಿದೋಷದಿಂದ ಮುಕ್ತಿ ಹೊಂದಬಹುದು.

ಜೀವನದಲ್ಲಿ ಕಷ್ಟ ಬಂದಾಗ ಇದು ಶನಿಯ ಪ್ರಭಾವ ಎಂದೇ ಹೇಳುವುದನ್ನು ನೀವು ಕೇಳಿರಬಹುದು. ಶನಿ ಕಾಟ ಜೀವನದಲ್ಲಿ ಒಮ್ಮೆಯಾದರೂ ಇರುತ್ತದೆ ಎಂದು ಹೇಳಲಾಗುತ್ತದೆ. ಧರ್ಮರಾಯ, ಸತ್ಯ ಹರಿಶ್ಚಂದ್ರ, ಕೃಷ್ಣಪರಮಾತ್ಮನಿಗೂ ಕೂಡ ಶನಿ ಹೇಗೆ ಕಾಟ ಕೊಟ್ಟಿದ್ದ ಎಂಬ ಕತೆಗಳನ್ನು ಕೇಳಿರಬಹುದು. ಶನಿಯ ದೋಷದಿಂದ ಪಾರಾಗಿ ಅವನ ಕೃಪೆ ದೊರೆಯಬೇಕಾದರೆ ಶನಿ ದೇವನ ವಿಗ್ರಹವನ್ನು ಗಂಗಾಜಲದ\, ಪಂಚಾಮೃತ, ಎಳ್ಳೆಣ್ಣೆಯಿಂದ ಅಭಿಷೇಕ ಮಾಡಿ, ನಂತರ ಪೂಜೆ ಸಲ್ಲಿಸಲಾಗುವುದು.

ಶನಿ ದೇವನಿಗೆ ಎಳ್ಳೆಣ್ಣೆ ಅಭಿಷೇಕ ಮಾಡುವುದರ ಹಿಂದಿರುವ ಪೌರಾಣಿಕ ಕತೆ
ಸೀತಾಮಾತೆಯನ್ನು ಹುಡುಕಿಕೊಂಡು ಹನುಮಂತ ಲಂಕೆಗೆ ಹೋದಾಗ ಶನಿದೇವನು ಅಗ್ನಿಯಿಂದ ಸುಟ್ಟು ಬೆಂದು ಹೋಗಿರುವ ಸ್ಥಿತಿಯಲ್ಲಿ ಶನಿ ದೇವನನ್ನು ಕಂಡ ಹನುಮಂತ ಬೆಂಕಿ ಗಾಯದ ಉರಿಯಿಂದ ಶನಿಯನ್ನು ರಕ್ಷಿಸಲು ಎಳ್ಳೆಣ್ಣೆ ಲೇಪನ ಮಾಡುತ್ತಾನೆ. ಇದರಿಂದ ಶನಿಗೆ ಆಗುತ್ತಿದ್ದ ಉರಿ ಮತ್ತು ನೋವು ಕಡಿಮೆಯಾಗುತ್ತದೆ. ಆಗ ಶನಿ ನನಗೆ ಯಾರು ಎಳ್ಳೆಣ್ಣೆ ಅರ್ಪಿಸುತ್ತಾರೋ ಅವರಿಗೆ ಕಾಡುವುದಿಲ್ಲ ಎಂಬುವುದಾಗಿ ಹೇಳುತ್ತಾನೆ. ಹಾಗಾಗಿ ಶನಿ ದೇವನ ಕೃಪೆಗಾಗಿ ಎಳ್ಳೆಣ್ಣೆ ಅರ್ಪಿಸುತ್ತಾರೆ.

ಶನಿದೇವನಿಗೆ ಪೂಜೆಗೆ ಸೂಕ್ತ ಸಮಯ
ಶನಿ ಪೂಜೆಗೆ ಸಮಯ ಮೇ 21, ಗುರುವಾರ9.35
ಶನಿ ತಿಥಿ ಮೇ 22, ಶುಕ್ರವಾರ ರಾತ್ರಿ 11.08

ಶನಿ ಜಯಂತಿಯಂದು ಏನು ಮಾಡಬೇಕು?
- ಈ ದಿನ ಇರುವೆಗಳುಗೆ ಗೋಧಿ, ಬೆಲ್ಲವನ್ನು ಹಾಕಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.
- ಶನಿಯನ್ನು ಪೂಜಿಸುವಾಗ ''ಓಂ ಶಂ ಶನೈಶ್ಚರಾಯ ನಮಃ'' ಎಂದು ಮಂತ್ರ ಹೇಳುವುದರಿಂದ ಶನಿಯನ್ನು ಬೇಗನೆ ಒಲಿಸಿಕೊಳ್ಳಬಹುದು.
- ಶನಿ ಜಯಂತಿಯಂದು ಕಪ್ಪು ಬಟ್ಟೆ, ಕಪ್ಪು ಬೇಳೆ ಮೊದಲಾವುಗಳನ್ನು ದಾನ ಮಾಡುವುದು ಒಳ್ಳೆಯದು.
- ಈ ದಿನ ಕಪ್ಪು ನಾಯಿಗೆ ಎಳ್ಳೆಣ್ಣೆ ಹಾಕಿ ಗೋಧಿ ಚಪಾತಿ ಮಾಡಿ ನೀಡುವುದರಿಂದ ಒಳಿತಾಗುವುದು.
- ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡುವುದು ಒಳ್ಳೆಯದು. ಆದರೆ ಈ ವರ್ಷ ಲಾಕ್ಡೌನ್ನಿಂದಾಗಿ ಅದು ಸಾಧ್ಯವಾಗುವುದಿಲ್ಲ, ಆದರೆ ನವಗ್ರಹಗಳನ್ನು ಮನಸ್ಸಿನಲ್ಲಿ ಸ್ಮರಿಸಿ ಪೂಜಿಸಿದರೆ ಅವರ ಪ್ರಭಾವದಿಂದ ಕಷ್ಟದಿಂದ ಮುಕ್ತಿ ಸಿಗುವುದು.
- ಶನಿ ದೋಷದಿಂದಾಗಿ ತುಂಬಾ ಕಷ್ಟ ಅನುಭವಿಸುತ್ತಿದ್ದರೆ ಶನಿಗೆ ನವರತ್ನ ಹಾರ ಅರ್ಪಿಸಿದರೆ ಒಳಿತಾಗುವುದು.
- ಈ ದಿನ ಹನುಂತನ ದೇವಾಲಯಕ್ಕೆ ಹೋಗಿ ಆಂಜನೇಯವನ್ನು ಸ್ಮರಿಸುವುದರಿಂದ ಹನುಮಂತನ ಭಕ್ತರನ್ನು ಶನಿ ಕಾಡುವುದಿಲ್ಲ.
- ಗ್ರಹದೋಷದಿಂದಾಗಿ ಸಾಕಷ್ಟು ಕಷ್ಟಗಳು ಎದುರಾಗಿದ್ದರೆ ಅದು ನಿವಾರನೆಯಾಗುವುದು
- ಅದೃಷ್ಟ ಲಕ್ಷ್ಮಿ ಒಲಿಯುವುದು
- ಬದುಕಿನಲ್ಲಿ ಒಳ್ಳೆಯ ಘಟನೆಗಳು ನಡೆಯುವುದು
- ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ ಹೊಂದುವಿರಿ.

ಶನಿಕೃಪೆಗಾಗಿ ಪೂಜಾ ವಿಧಾನ




Click it and Unblock the Notifications
