Just In
- 1 hr ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 2 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 5 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 7 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- News ‘ಕಾಂಗ್ರೆಸ್ ಡೇಂಜರ್’ ಪೋಸ್ಟರ್ ಬಿಡುಗಡೆ ಮಾಡಿದ ಬಿಜೆಪಿ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಂದು ಸಂಕಷ್ಟಿ ಚತುರ್ಥಿ: ಮುಟ್ಟಾದಾಗ ಉಪವಾಸ ವ್ರತ ಮಾಡಬಹುದೇ?
ಇಂದು ಮೇ 19 ಗುರುವಾರ. ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ ಈ ದಿನ ಏಕದಂತ ಸಂಕಷ್ಟ ಚತುರ್ಥಿ ಉಪವಾಸ ಮಾಡಲಾಗುವುದು. ಈ ದಿನ ಉಪವಾಸವಿದ್ದು ಗಣೇಶನ ಆರಾಧನೆ ಮಾಡಿದರೆ ಸಂಕಟ, ಯಾವುದಾದರೂ ಒಳ್ಳೆಯ ಕಾರ್ಯಕ್ಕಿರುವ ವಿಘ್ನ, ತೊಂದರೆ ಎಲ್ಲವೂ ನಿವಾರಣೆಯಾಗುವುದು.
ಈ ದಿನದಂದು ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ಏಕದಂತ ಸಂಕಷ್ಟ ಚತುರ್ಥಿ ಉಪವಾಸದ ಕಥೆಯನ್ನು ಹೇಳುವುದರಿಂದಒಳಿತಾಗುವುದು ಎಂಬ ನಂಬಿಕೆ. ಗಣೇಶನ ಬಲವಾಗಿ ನಂಬಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುವುದು ಅವನ ಭಕ್ತರ ಅಚಲ ನಂಬಿಕೆ.
ಸಂಕಷ್ಟಿ ಚತುರ್ಥಿಯಂದು ರಾತ್ರಿ ಚಂದ್ರನ ಆರಾಧನೆ
ಸಂಕಷ್ಟಿ ಚತುರ್ಥಿ ಉಪವಾಸ ವ್ರತಕ್ಕೂ ರಾತ್ರಿ ಚಂದ್ರೋದಯಕ್ಕೂ ಸಂಬಂಧವಿದೆ. ಚಂದ್ರನನ್ನು ನೋಡಿದ ಬಳಿಕ ಗಣೇಶನಿಗೆ ಸಲ್ಲಿಸಿದ ಬಳಿಕವಷ್ಟೇ ಸಂಕಷ್ಟಿ ಉಪವಾಸವನ್ನು ಮುರಿಯಬಹುದು. ಸಂಕಷ್ಟಿ ಚತುರ್ಥಿ ವ್ರತದಲ್ಲಿ ರಾತ್ರಿ ಚಂದ್ರನ ಆರಾಧನೆ ಕಡ್ಡಾಯ. ಇದು ಇಲ್ಲದೆ ಸಂಕಷ್ಟ ಚತುರ್ಥಿ ಉಪವಾಸವು ಪೂರ್ಣಗೊಳ್ಳುವುದಿಲ್ಲ. ಆದರೆ, ವಿನಾಯಕ ಚತುರ್ಥಿ ಉಪವಾಸದ ಸಮಯದಲ್ಲಿ ಚಂದ್ರನನ್ನು ನೋಡುವುದನ್ನು ಸಹ ನಿಷೇಧಿಸಲಾಗಿದೆ, ಏಕೆಂದರೆ ಸುಳ್ಳು ಕಳಂಕದ ಅಪವಾದ ನಮ್ಮ ಮೇಲೆ ಉಂಟಾಗುತ್ತದೆ ಎಂದು ಹೇಳಲಾಗುವುದು. ಈ ದಿನ ಗಣೇಶ ಮಂತ್ರಗಳನ್ನು ಹೇಳುತ್ತಾ ಪೂಜೆಯನ್ನು ಸಲ್ಲಿಸಲಾಗುವುದು.
ಅಲ್ಲದೆ ಈ ದಿನ ಗುರುವಾರವಾಗಿರುವುದರಿಂದ ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ವಿಷ್ಣು ಹಾಗೂ ಗುರುದೇವ ಬೃಹಸ್ಪತಿಯನ್ನು ಪೂಜಿಸಿದರೆ ಇನ್ನಷ್ಟು ಒಳ್ಳೆಯದು,. ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ನೆರವೇರುವುದು.
ಮದುವೆ ವಿಳಂಬವಾಗುತ್ತಿದ್ದರೆ ಗುರುವಾರದ ಪೂಜೆಯಿಂದ ಬೇಗನೆ ಫಲ ಸಿಗುವುದು
ಕೆಲವರಿಗೆ ಮದುವೆ ತುಂಬಾ ವಿಳಂವವಾಗಿರುತ್ತದೆ ಅಂಥವರಿಗೆ ಮೊದಲಿಗೆ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ವಿಷ್ಣು-ಲಕ್ಷ್ಮಿಯನ್ನು ಪೂಜಿಸುವುದರಿಂದ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ.
ಸಂಕಷ್ಟಿ ಚತುರ್ಥಿ
ಜ್ಯೇಷ್ಠ - ಕೃಷ್ಣ ಪಕ್ಷ - ಚತುರ್ಥಿ ತಿಥಿ - ಗುರುವಾರ
ನಕ್ಷತ್ರಪುಂಜ - ಮೂಲ
ಪ್ರಮುಖ ಯೋಗ - ಸಾಧ್ಯ ಯೋಗ
ಧನು ರಾಶಿಗೆ ಚಂದ್ರನ ಸಂಚಾರ
ಇಂದಿನ ಶುಭ ಮುಹೂರ್ತ - ಬೆಳಗ್ಗೆ 11.52 ರಿಂದ 12.35 ರವರೆಗೆ
ರಾಹುಕಾಲ - 01.34 ಗಂಟೆಯಿಂದ 02.55 ಗಂಟೆಯವರೆಗೆ
ಸಂಕಷ್ಟಿ ಚತುರ್ಥಿ ತಿಥಿ ಮುಕ್ತಾಯ: ಮೇ 19 ರಾತ್ರಿ 08:23ಕ್ಕೆ
ಮುಟ್ಟಿನ ಸಮಯದಲ್ಲಿ ಸಂಕಷ್ಟಿ ಮಾಡಬಹುದೇ?
ನಿರ್ಣಯ ಸಿಂಧೂರಕದಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವೇಳೆ ಸೂತಕವಶದರೆ ಶಾರೀರಿಕ ಧರ್ಮ ಪಾಲಿಸುವ ಮೂಲಕ ವ್ರತವನ್ನು ಮಾಡಬಹುದು. ಮುಟ್ಟಿನ ಸಮಯದಲ್ಲಿ ಮಾನಸಿಕ ಪೂಜೆ ಸಲ್ಲಿಸಲು ಯಾವುದೇ ಅಡ್ಡಿಯಿಲ್ಲ. ಪೂಜೆಯನ್ನು ನಿಮ್ಮ ಪರವಾಗಿ ಮನೆಯಲ್ಲಿ ಬೇರೆ ಯಾರಾದರೂ ಮಾಡಬಹುದು, ನಿಮ್ಮ ಪರವಾಗಿ ಅವರು ಸಂಕಲ್ಪ ಮಾಡಬಹುದು. ನೀವು ಏನಾದರೂ ದಾನ ಮಾಡುವುದಾದರೆ ಶುದ್ಧವಾದ ಬಳಿಕ ಮಾಡಬಹುದು.
ಉಪವಾಸವನ್ನು ಯಾವಾಗ ಮುರಿಯಬಹುದು?
ಚಂದ್ರೋದಯದ ಬಳಿಕ ಚಂದ್ರನಿಗೆ ಆರ್ಘ್ಯವನ್ನು ಸಲ್ಲಿಸಿ ನಂತರ ಉಪವಾಸವನ್ನು ಮುರಿಯಬೇಕು.