Latest Updates
-
ತೀವ್ರ ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಆರೋಗ್ಯವಾಗಿರಲು ಈ ಸುರಕ್ಷತಾ ಕ್ರಮಗಳನ್ನು ಮಿಸ್ ಮಾಡ್ಬೇಡಿ! -
ಲಿವ್-ಇನ್ ಸಂಬಂಧದಲ್ಲಿರುವ ಯುವ ಜೋಡಿಗಳಿಗೆ ಶಾಕ್: ಹೈಕೋರ್ಟ್ನಿಂದ ಹೊಸ ಆದೇಶ, ಇನ್ನು ರಕ್ಷಣೆ ಸಿಗಲ್ಲ! -
ಬಿಸಿಲಿಗೆ ಬಾಲ್ಕನಿ ಗಿಡಗಳು ಬಾಡುತ್ತಿವೆಯೇ? ಈ 5 ಸರಳ ಟ್ರಿಕ್ಸ್ ಬಳಸಿ ಗಿಡಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಿ! -
ಹಾಲಿನ ಬೆಲೆ ಏರಿಕೆ: ಅಡುಗೆಮನೆಯ ಬಜೆಟ್ ಹಾಳಾಗದಂತೆ ಆರೋಗ್ಯ ಕಾಪಾಡಿಕೊಳ್ಳಲು ಈ ಪರ್ಯಾಯ ಆಹಾರಗಳೇ ದಾರಿ! -
ರೆಡ್ ಕಾರ್ಪೆಟ್ ಮೇಲೆ ಸದ್ದು ಮಾಡುತ್ತಿರುವ 'ಸೀರೆ-ಗೌನ್' ಮ್ಯಾಜಿಕ್: 2026ರ ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿಯ ಅಬ್ಬರ: ಆರೋಗ್ಯ ಹಾಳಾಗದಂತೆ ವರ್ಕೌಟ್ ಮಾಡಲು ಈ ಬದಲಾವಣೆಗಳನ್ನು ಮಾಡಿಕೊಳ್ಳುವುದು ಅತ್ಯಗತ್ಯ, ಇಲ್ಲದಿದ್ದರೆ ಅಪಾಯ! -
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಇಂದು ಸಂಕಷ್ಟಿ ಚತುರ್ಥಿ: ಮುಟ್ಟಾದಾಗ ಉಪವಾಸ ವ್ರತ ಮಾಡಬಹುದೇ?
ಇಂದು ಮೇ 19 ಗುರುವಾರ. ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ ಈ ದಿನ ಏಕದಂತ ಸಂಕಷ್ಟ ಚತುರ್ಥಿ ಉಪವಾಸ ಮಾಡಲಾಗುವುದು. ಈ ದಿನ ಉಪವಾಸವಿದ್ದು ಗಣೇಶನ ಆರಾಧನೆ ಮಾಡಿದರೆ ಸಂಕಟ, ಯಾವುದಾದರೂ ಒಳ್ಳೆಯ ಕಾರ್ಯಕ್ಕಿರುವ ವಿಘ್ನ, ತೊಂದರೆ ಎಲ್ಲವೂ ನಿವಾರಣೆಯಾಗುವುದು.
ಈ ದಿನದಂದು ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ಏಕದಂತ ಸಂಕಷ್ಟ ಚತುರ್ಥಿ ಉಪವಾಸದ ಕಥೆಯನ್ನು ಹೇಳುವುದರಿಂದಒಳಿತಾಗುವುದು ಎಂಬ ನಂಬಿಕೆ. ಗಣೇಶನ ಬಲವಾಗಿ ನಂಬಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುವುದು ಅವನ ಭಕ್ತರ ಅಚಲ ನಂಬಿಕೆ.

ಸಂಕಷ್ಟಿ ಚತುರ್ಥಿಯಂದು ರಾತ್ರಿ ಚಂದ್ರನ ಆರಾಧನೆ
ಸಂಕಷ್ಟಿ ಚತುರ್ಥಿ ಉಪವಾಸ ವ್ರತಕ್ಕೂ ರಾತ್ರಿ ಚಂದ್ರೋದಯಕ್ಕೂ ಸಂಬಂಧವಿದೆ. ಚಂದ್ರನನ್ನು ನೋಡಿದ ಬಳಿಕ ಗಣೇಶನಿಗೆ ಸಲ್ಲಿಸಿದ ಬಳಿಕವಷ್ಟೇ ಸಂಕಷ್ಟಿ ಉಪವಾಸವನ್ನು ಮುರಿಯಬಹುದು. ಸಂಕಷ್ಟಿ ಚತುರ್ಥಿ ವ್ರತದಲ್ಲಿ ರಾತ್ರಿ ಚಂದ್ರನ ಆರಾಧನೆ ಕಡ್ಡಾಯ. ಇದು ಇಲ್ಲದೆ ಸಂಕಷ್ಟ ಚತುರ್ಥಿ ಉಪವಾಸವು ಪೂರ್ಣಗೊಳ್ಳುವುದಿಲ್ಲ. ಆದರೆ, ವಿನಾಯಕ ಚತುರ್ಥಿ ಉಪವಾಸದ ಸಮಯದಲ್ಲಿ ಚಂದ್ರನನ್ನು ನೋಡುವುದನ್ನು ಸಹ ನಿಷೇಧಿಸಲಾಗಿದೆ, ಏಕೆಂದರೆ ಸುಳ್ಳು ಕಳಂಕದ ಅಪವಾದ ನಮ್ಮ ಮೇಲೆ ಉಂಟಾಗುತ್ತದೆ ಎಂದು ಹೇಳಲಾಗುವುದು. ಈ ದಿನ ಗಣೇಶ ಮಂತ್ರಗಳನ್ನು ಹೇಳುತ್ತಾ ಪೂಜೆಯನ್ನು ಸಲ್ಲಿಸಲಾಗುವುದು.
ಅಲ್ಲದೆ ಈ ದಿನ ಗುರುವಾರವಾಗಿರುವುದರಿಂದ ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ವಿಷ್ಣು ಹಾಗೂ ಗುರುದೇವ ಬೃಹಸ್ಪತಿಯನ್ನು ಪೂಜಿಸಿದರೆ ಇನ್ನಷ್ಟು ಒಳ್ಳೆಯದು,. ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ನೆರವೇರುವುದು.

ಮದುವೆ ವಿಳಂಬವಾಗುತ್ತಿದ್ದರೆ ಗುರುವಾರದ ಪೂಜೆಯಿಂದ ಬೇಗನೆ ಫಲ ಸಿಗುವುದು
ಕೆಲವರಿಗೆ ಮದುವೆ ತುಂಬಾ ವಿಳಂವವಾಗಿರುತ್ತದೆ ಅಂಥವರಿಗೆ ಮೊದಲಿಗೆ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ವಿಷ್ಣು-ಲಕ್ಷ್ಮಿಯನ್ನು ಪೂಜಿಸುವುದರಿಂದ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಸಂಕಷ್ಟಿ ಚತುರ್ಥಿ
ಜ್ಯೇಷ್ಠ - ಕೃಷ್ಣ ಪಕ್ಷ - ಚತುರ್ಥಿ ತಿಥಿ - ಗುರುವಾರ
ನಕ್ಷತ್ರಪುಂಜ - ಮೂಲ
ಪ್ರಮುಖ ಯೋಗ - ಸಾಧ್ಯ ಯೋಗ
ಧನು ರಾಶಿಗೆ ಚಂದ್ರನ ಸಂಚಾರ
ಇಂದಿನ ಶುಭ ಮುಹೂರ್ತ - ಬೆಳಗ್ಗೆ 11.52 ರಿಂದ 12.35 ರವರೆಗೆ
ರಾಹುಕಾಲ - 01.34 ಗಂಟೆಯಿಂದ 02.55 ಗಂಟೆಯವರೆಗೆ
ಸಂಕಷ್ಟಿ ಚತುರ್ಥಿ ತಿಥಿ ಮುಕ್ತಾಯ: ಮೇ 19 ರಾತ್ರಿ 08:23ಕ್ಕೆ

ಮುಟ್ಟಿನ ಸಮಯದಲ್ಲಿ ಸಂಕಷ್ಟಿ ಮಾಡಬಹುದೇ?
ನಿರ್ಣಯ ಸಿಂಧೂರಕದಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವೇಳೆ ಸೂತಕವಶದರೆ ಶಾರೀರಿಕ ಧರ್ಮ ಪಾಲಿಸುವ ಮೂಲಕ ವ್ರತವನ್ನು ಮಾಡಬಹುದು. ಮುಟ್ಟಿನ ಸಮಯದಲ್ಲಿ ಮಾನಸಿಕ ಪೂಜೆ ಸಲ್ಲಿಸಲು ಯಾವುದೇ ಅಡ್ಡಿಯಿಲ್ಲ. ಪೂಜೆಯನ್ನು ನಿಮ್ಮ ಪರವಾಗಿ ಮನೆಯಲ್ಲಿ ಬೇರೆ ಯಾರಾದರೂ ಮಾಡಬಹುದು, ನಿಮ್ಮ ಪರವಾಗಿ ಅವರು ಸಂಕಲ್ಪ ಮಾಡಬಹುದು. ನೀವು ಏನಾದರೂ ದಾನ ಮಾಡುವುದಾದರೆ ಶುದ್ಧವಾದ ಬಳಿಕ ಮಾಡಬಹುದು.
ಉಪವಾಸವನ್ನು ಯಾವಾಗ ಮುರಿಯಬಹುದು?
ಚಂದ್ರೋದಯದ ಬಳಿಕ ಚಂದ್ರನಿಗೆ ಆರ್ಘ್ಯವನ್ನು ಸಲ್ಲಿಸಿ ನಂತರ ಉಪವಾಸವನ್ನು ಮುರಿಯಬೇಕು.



Click it and Unblock the Notifications