Latest Updates
-
ಸ್ಮ್ಯಾಶ್ ಪ್ಯಾಟ್ರಿಯಾರ್ಕಿ: ದಂಪತಿಗಳ ನಡುವಿನ ಜಗಳಕ್ಕೆ 20 ನಿಮಿಷದ 'ಹೋಮ್ ರಿಸೆಟ್' ಪ್ಲಾನ್! -
ಮಳೆಗಾಲದಲ್ಲಿ ನಿಮ್ಮ ಮನೆ ಮತ್ತು ಬಲ್ಕನಿ ಸುರಕ್ಷಿತವಾಗಿಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್: ಕೇರಳದಲ್ಲಿ ಯೆಲ್ಲೋ ಅಲರ್ಟ್! -
ರಕ್ಷಾಬಂಧನಕ್ಕೆ ಪನ್ನೀರ್ ಖರೀದಿಸುವ ಮುನ್ನ ಎಚ್ಚರ: ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ರಾಖಿ ಹಬ್ಬ 2026: ಆಗಸ್ಟ್ 28ರಂದು ರಕ್ಷಾಬಂಧನ ಆಚರಣೆ; ಶುಭ ಮುಹೂರ್ತ ಮತ್ತು ಭದ್ರಾ ಕಾಲದ ಸಂಪೂರ್ಣ ಮಾಹಿತಿ ಇಲ್ಲಿದೆ -
ಬೆಂಗಳೂರು ಮಳೆ: ಮನೆಯಲ್ಲೇ ಮಾಡಿ 15 ನಿಮಿಷದ ನೋ-ಜಂಪ್ ವರ್ಕೌಟ್, ಫಿಟ್ ಆಗಿರಿ! -
ಮಳೆಗಾಲದ ಪ್ರಯಾಣ: ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಲು 7 ನಿಮಿಷದ ಸರಳ ವ್ಯಾಯಾಮಗಳು -
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು
ಇಂದು ಸಂಕಷ್ಟಿ ಚತುರ್ಥಿ: ಮುಟ್ಟಾದಾಗ ಉಪವಾಸ ವ್ರತ ಮಾಡಬಹುದೇ?
ಇಂದು ಮೇ 19 ಗುರುವಾರ. ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿ ಈ ದಿನ ಏಕದಂತ ಸಂಕಷ್ಟ ಚತುರ್ಥಿ ಉಪವಾಸ ಮಾಡಲಾಗುವುದು. ಈ ದಿನ ಉಪವಾಸವಿದ್ದು ಗಣೇಶನ ಆರಾಧನೆ ಮಾಡಿದರೆ ಸಂಕಟ, ಯಾವುದಾದರೂ ಒಳ್ಳೆಯ ಕಾರ್ಯಕ್ಕಿರುವ ವಿಘ್ನ, ತೊಂದರೆ ಎಲ್ಲವೂ ನಿವಾರಣೆಯಾಗುವುದು.
ಈ ದಿನದಂದು ಗಣೇಶನಿಗೆ ಪೂಜೆಯನ್ನು ಸಲ್ಲಿಸಿ ಏಕದಂತ ಸಂಕಷ್ಟ ಚತುರ್ಥಿ ಉಪವಾಸದ ಕಥೆಯನ್ನು ಹೇಳುವುದರಿಂದಒಳಿತಾಗುವುದು ಎಂಬ ನಂಬಿಕೆ. ಗಣೇಶನ ಬಲವಾಗಿ ನಂಬಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬುವುದು ಅವನ ಭಕ್ತರ ಅಚಲ ನಂಬಿಕೆ.

ಸಂಕಷ್ಟಿ ಚತುರ್ಥಿಯಂದು ರಾತ್ರಿ ಚಂದ್ರನ ಆರಾಧನೆ
ಸಂಕಷ್ಟಿ ಚತುರ್ಥಿ ಉಪವಾಸ ವ್ರತಕ್ಕೂ ರಾತ್ರಿ ಚಂದ್ರೋದಯಕ್ಕೂ ಸಂಬಂಧವಿದೆ. ಚಂದ್ರನನ್ನು ನೋಡಿದ ಬಳಿಕ ಗಣೇಶನಿಗೆ ಸಲ್ಲಿಸಿದ ಬಳಿಕವಷ್ಟೇ ಸಂಕಷ್ಟಿ ಉಪವಾಸವನ್ನು ಮುರಿಯಬಹುದು. ಸಂಕಷ್ಟಿ ಚತುರ್ಥಿ ವ್ರತದಲ್ಲಿ ರಾತ್ರಿ ಚಂದ್ರನ ಆರಾಧನೆ ಕಡ್ಡಾಯ. ಇದು ಇಲ್ಲದೆ ಸಂಕಷ್ಟ ಚತುರ್ಥಿ ಉಪವಾಸವು ಪೂರ್ಣಗೊಳ್ಳುವುದಿಲ್ಲ. ಆದರೆ, ವಿನಾಯಕ ಚತುರ್ಥಿ ಉಪವಾಸದ ಸಮಯದಲ್ಲಿ ಚಂದ್ರನನ್ನು ನೋಡುವುದನ್ನು ಸಹ ನಿಷೇಧಿಸಲಾಗಿದೆ, ಏಕೆಂದರೆ ಸುಳ್ಳು ಕಳಂಕದ ಅಪವಾದ ನಮ್ಮ ಮೇಲೆ ಉಂಟಾಗುತ್ತದೆ ಎಂದು ಹೇಳಲಾಗುವುದು. ಈ ದಿನ ಗಣೇಶ ಮಂತ್ರಗಳನ್ನು ಹೇಳುತ್ತಾ ಪೂಜೆಯನ್ನು ಸಲ್ಲಿಸಲಾಗುವುದು.
ಅಲ್ಲದೆ ಈ ದಿನ ಗುರುವಾರವಾಗಿರುವುದರಿಂದ ಗಣಪತಿಗೆ ಪೂಜೆ ಸಲ್ಲಿಸಿದ ಬಳಿಕ ವಿಷ್ಣು ಹಾಗೂ ಗುರುದೇವ ಬೃಹಸ್ಪತಿಯನ್ನು ಪೂಜಿಸಿದರೆ ಇನ್ನಷ್ಟು ಒಳ್ಳೆಯದು,. ಇದರಿಂದ ಮನೆಯಲ್ಲಿ ಶುಭ ಕಾರ್ಯಗಳು ನೆರವೇರುವುದು.

ಮದುವೆ ವಿಳಂಬವಾಗುತ್ತಿದ್ದರೆ ಗುರುವಾರದ ಪೂಜೆಯಿಂದ ಬೇಗನೆ ಫಲ ಸಿಗುವುದು
ಕೆಲವರಿಗೆ ಮದುವೆ ತುಂಬಾ ವಿಳಂವವಾಗಿರುತ್ತದೆ ಅಂಥವರಿಗೆ ಮೊದಲಿಗೆ ಶ್ರೀ ಗಣೇಶನಿಗೆ ಪೂಜೆ ಸಲ್ಲಿಸಿ ನಂತರ ವಿಷ್ಣು-ಲಕ್ಷ್ಮಿಯನ್ನು ಪೂಜಿಸುವುದರಿಂದ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಸಂಕಷ್ಟಿ ಚತುರ್ಥಿ
ಜ್ಯೇಷ್ಠ - ಕೃಷ್ಣ ಪಕ್ಷ - ಚತುರ್ಥಿ ತಿಥಿ - ಗುರುವಾರ
ನಕ್ಷತ್ರಪುಂಜ - ಮೂಲ
ಪ್ರಮುಖ ಯೋಗ - ಸಾಧ್ಯ ಯೋಗ
ಧನು ರಾಶಿಗೆ ಚಂದ್ರನ ಸಂಚಾರ
ಇಂದಿನ ಶುಭ ಮುಹೂರ್ತ - ಬೆಳಗ್ಗೆ 11.52 ರಿಂದ 12.35 ರವರೆಗೆ
ರಾಹುಕಾಲ - 01.34 ಗಂಟೆಯಿಂದ 02.55 ಗಂಟೆಯವರೆಗೆ
ಸಂಕಷ್ಟಿ ಚತುರ್ಥಿ ತಿಥಿ ಮುಕ್ತಾಯ: ಮೇ 19 ರಾತ್ರಿ 08:23ಕ್ಕೆ

ಮುಟ್ಟಿನ ಸಮಯದಲ್ಲಿ ಸಂಕಷ್ಟಿ ಮಾಡಬಹುದೇ?
ನಿರ್ಣಯ ಸಿಂಧೂರಕದಲ್ಲಿ ಈ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವೇಳೆ ಸೂತಕವಶದರೆ ಶಾರೀರಿಕ ಧರ್ಮ ಪಾಲಿಸುವ ಮೂಲಕ ವ್ರತವನ್ನು ಮಾಡಬಹುದು. ಮುಟ್ಟಿನ ಸಮಯದಲ್ಲಿ ಮಾನಸಿಕ ಪೂಜೆ ಸಲ್ಲಿಸಲು ಯಾವುದೇ ಅಡ್ಡಿಯಿಲ್ಲ. ಪೂಜೆಯನ್ನು ನಿಮ್ಮ ಪರವಾಗಿ ಮನೆಯಲ್ಲಿ ಬೇರೆ ಯಾರಾದರೂ ಮಾಡಬಹುದು, ನಿಮ್ಮ ಪರವಾಗಿ ಅವರು ಸಂಕಲ್ಪ ಮಾಡಬಹುದು. ನೀವು ಏನಾದರೂ ದಾನ ಮಾಡುವುದಾದರೆ ಶುದ್ಧವಾದ ಬಳಿಕ ಮಾಡಬಹುದು.
ಉಪವಾಸವನ್ನು ಯಾವಾಗ ಮುರಿಯಬಹುದು?
ಚಂದ್ರೋದಯದ ಬಳಿಕ ಚಂದ್ರನಿಗೆ ಆರ್ಘ್ಯವನ್ನು ಸಲ್ಲಿಸಿ ನಂತರ ಉಪವಾಸವನ್ನು ಮುರಿಯಬೇಕು.



Click it and Unblock the Notifications