Just In
- 16 min ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 44 min ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 3 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 12 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
Don't Miss
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ಕಾರಣಗಳಿಗೇ ವರ್ಷದ ಎಲ್ಲಾ ತಿಂಗಳಿಗಿಂತ ಕಾರ್ತಿಕ ಮಾಸ ಅತ್ಯಂತ ಮಂಗಳಕರವೆನ್ನುವುದು
ಕಾರ್ತಿಕ ಮಾಸವು ಹಿಂದೂಗಳಲ್ಲಿ ಅತ್ಯಂತ ಮಂಗಳಕರವಾದ ತಿಂಗಳು. ಕಾರ್ತಿಕ ಮಾಸದಲ್ಲಿ ಹಲವಾರು ಪ್ರಮುಖ ಹಬ್ಬಗಳು ಬರಲಿವೆ. ಶಿವ ಹಾಗೂ ವಿಷ್ಣುವಿನ ಆರಾಧನೆಗಾಗಿ ಉತ್ತಮವಾದ ಈ ತಿಂಗಳನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ ಏಕೆಂದರೆ ಈ ಪವಿತ್ರ ಮಾಸದಲ್ಲಿ ಶಿವ ಮತ್ತುವಿಷ್ಣು ಜೊತೆಯಾಗಿ ಇರುತ್ತಾರೆ ಎಂದು ನಂಬಲಾಗಿದೆ.
ಈ ಮಾಸದಲ್ಲಿ ದೀಪಾರಾಧನೆ, ಉಪವಾಸ, ರುದ್ರಾಭಿಷೇಕ, ಬಿಲ್ವಪೂಜೆ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಹೆಚ್ಚಿನ ಪ್ರಯೋಜನಗಳು ಪ್ರಾಪ್ತವಾಗುತ್ತದೆ, ನಮ್ಮನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತದೆ ಎಂಬ ನಂಬಿಕೆಯಿದೆ. ಇಂತಹ ಪವಿತ್ರ ತಿಂಗಳಿನ ಕುರಿತ ಇನ್ನಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ.
ಕಾರ್ತಿಕ ಮಾಸವನ್ನು ಮಂಗಳಕರ ಎಂದು ಏಕೆ ಕರೆಯುತ್ತಾರೆ ಎಂಬುದರ ಕುರಿತ ಸಂಪೂರ್ಣ ಚಿತ್ರಣ ಈ ಕೆಳಗಿದೆ:
ದೀಪೋತ್ಸವ:
ಹೆಚ್ಚಿನ ದೇವಾಲಯಗಳ ದೀಪೋತ್ಸವವು ಈ ಸಮಯದಲ್ಲೇ ನಡೆಯುವುದು ಗಮನಿಸಿರಬಹುದು. ಜೊತೆಗೆ ದೀಪಾವಳಿಯೂ ಇದೇ ಸಮಯದಲ್ಲಿ ಬರುವುದು ಇದೇ ಕಾರಣಕ್ಕೆ. ಕಾರ್ತಿಕ ದೀಪೋತ್ಸವವು ದೀಪಗಳ ಬೆಳಕನ್ನು ಸೂಚಿಸುತ್ತದೆ. ದೀಪ ನಮ್ಮ ದೇಹವನ್ನು ಸಂಕೇತಿಸಿದರೆ, ಬೆಳಕು ನಮ್ಮ ಆತ್ಮವನ್ನು ಸಂಕೇತಿಸುತ್ತದೆ. ನಾವು ದೀಪವನ್ನು ಹಚ್ಚಿದಾಗ, ನಮ್ಮ ಮನಸ್ಸು ಶುದ್ಧವಾಗಿ, ಕತ್ತಲೆ, ಅಜ್ಞಾನ, ಕೋಪ, ದುರಾಸೆ, ಅಸೂಯೆ, ದ್ವೇಷ, ಕಹಿ ಮತ್ತು ಅಸಮಾಧಾನದ ರೂಪದಲ್ಲಿ ಸಂಗ್ರಹವಾದ ಎಲ್ಲಾ ನಕಾರಾತ್ಮಕತೆಯಿಂದ ಮುಕ್ತಗೊಳ್ಳುತ್ತೇವೆ ಎಂಬ ನಂಬಿಕೆಯಿದೆ. ಇದು ಆಂತರಿಕ ಆಧ್ಯಾತ್ಮಿಕ ಬೆಳವಣಿಗೆಗೆ ಮತ್ತು ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಇದು ಮುಂದೆ ನೋಡಲು ಉತ್ತಮ ಅವಕಾಶವನ್ನು ನೀಡುತ್ತದೆ. ನಿಜವಾದ ಸಂತೋಷವನ್ನು ಅನುಭವಿಸಲು ಮನಸ್ಸು, ದೇಹ ಮತ್ತು ಆತ್ಮದ ಶುದ್ಧತೆಯನ್ನು ಅಭ್ಯಾಸ ಮಾಡುವುದು ಮತ್ತು ನಮ್ಮ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸುವುದು ಅತ್ಯಂತ ಮುಖ್ಯವಾಗಿದೆ.
ನೆಲ್ಲಿಕಾಯಿ ಮರವನ್ನು ಪೂಜಿಸುವುದು:
ನೆಲ್ಲಿಕಾಯಿ ಮರವನ್ನು ಪವಿತ್ರ ಕಾರ್ತಿಕ ಮಾಸದಲ್ಲಿ ಪೂಜಿಸಲಾಗುತ್ತದೆ. ಕಲ್ಪವೃಕ್ಷ ಮತ್ತು ಅಮೃತಫಲ ಎಂದೂ ಕರೆಯಲ್ಪಡುವ ಈ ಮರವು ಶಿವ ಪುರಾಣದಲ್ಲಿ ಉಲ್ಲೇಖವನ್ನು ಹೊಂದಿದೆ.
ಕಾರ್ತಿಕ ಪೌರ್ಣಮಿ:
ಕಾರ್ತಿಕ ಪೌರ್ಣಿಮೆಯಂದು ಶಿವ ಭೂಮಿಗೆ ಇಳಿದು ಇಡೀ ವಿಶ್ವದೊಂದಿಗೆ ಒಂದಾಗುತ್ತಾನೆ ಎಂದು ನಂಬಲಾಗಿದೆ. ಈ ದಿನ 365 ಬತ್ತಿಯೊಂದಿಗೆ ತುಪ್ಪದ ದೀಪಗಳನ್ನು ಹಚ್ಚುವುದು ವರ್ಷದ ಪ್ರತಿ ದಿನ ದೀಪ ಹಚ್ಚುವುದಕ್ಕೆ ಸಮಾನವಾಗಿರುತ್ತದೆ. ಕಾರ್ತಿಕ ಪೌರ್ಣಮಿಯಂದು ಉಪವಾಸ ಮತ್ತು ಸಾತ್ವಿಕ ಆಹಾರವನ್ನು ಸೇವಿಸುವುದು ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ. ಈ ದಿನ ಬ್ರಾಹ್ಮಣರಿಗೆ ನೈವೇದ್ಯವನ್ನು ಅಕ್ಕಿ, ಬೆಲ್ಲ, ಹಣ್ಣುಗಳು ಮತ್ತು ಹಾಲಿನ ರೂಪದಲ್ಲಿ ನೀಡಬೇಕು.
ಶಿವಮಂತ್ರ ಪಠಣೆ:
ಓಂ ನಮಃ ಶಿವಾಯಃ ಮಂತ್ರ ಪಠಣವು ನಮ್ಮ ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ದೇವಾಲಯ ಅಥವಾ ಮನೆಯಲ್ಲಿಯೇ ಕೂತು ಈ ಮಂತ್ರವನ್ನು ಪಠಿಸಿ.
ಹಬ್ಬಗಳ ಪರ್ವ:
ಈ ಶುಭಮಾಸದಲ್ಲಿ ದೀಪಾವಳಿ, ಏಕಾದಶಿ, ಗೋಪೂಜೆ ಸೇರಿದಂತೆ ನಾನಾ ಹಬ್ಬಗಳು ಬರಲಿವೆ. ಇವುಗಳನ್ನು ಭಕ್ತಿಯಿಂದ ಆಚರಿಸಿದರೆ, ಶಿವನ ಆಶೀರ್ವಾದ ದೊರೆಯಲಿದೆ.
ಸಾಮಾಜಿಕ ಮಹತ್ವ:
ಕಾರ್ತಿಕ ಮಾಸದ ಆಚರಣೆಗಳನ್ನು ಅನುಸರಿಸುವ ಮೂಲಕ ವೈಯಕ್ತಿಕ ಶಿಸ್ತು, ಸಮಾಜದ ಮೌಲ್ಯಗಳನ್ನು ಪಡೆಯಬಹುದು. ನದಿಗಳು ಅಥವಾ ಸರೋವರಗಳ ಬಳಿ ಸೂರ್ಯೋದಯಕ್ಕೆ ಮುಂಚೆ ಸ್ನಾನ ಮಾಡುವುದರಿಂದ ನಾವು ಬೆಳಿಗ್ಗೆ ಬೇಗನೆ ಎದ್ದೇಳಲು ಕಲಿಯುತ್ತೇವೆ. ತಣ್ಣೀರು ಸ್ನಾನದ ಮೂಲಕ ನಾವು ಚಳಿಗಾಲವನ್ನು ಎದುರಿಸಬಹುದು. ನಾವು ನೀರಿನ ಮಾಲಿನ್ಯ ಮತ್ತು ಆರೋಗ್ಯದ ಬಗ್ಗೆ ತಿಳಿದುಕೊಳ್ಳಬಹುದು