Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಪಿತೃದೋಷದ ಸೂಚನೆಗಳು ಮತ್ತು ಅದಕ್ಕೆ ಪರಿಹಾರಗಳು
"ಪಿತೃ" ಎಂಬುದು ಒಂದು ಸಂಸ್ಕೃತ ಪದವಾಗಿದ್ದು ಇದು ತಮ್ಮ ತಲೆಮಾರಿನ ಹಿರಿಯರನ್ನು ಪ್ರತಿಬಿಂಬಿಸುತ್ತದೆ. ಮನುಷ್ಯರು ಸಾವಿನ ನಂತರ ಪಿತೃಲೋಕಕ್ಕೆ ತೆರಳುತ್ತಾರೆ ಎಂಬ ನಂಬಿಕೆಗಳಿವೆ.ಅಲ್ಲಿಂದಲೇ ಅವರು ಕಾಲಾನಂತರವೂ ತಮ್ಮ ವಂಶದ ಮುಂದಿನ ಪೀಳಿಗೆಯನ್ನು ಆಶೀರ್ವದಿಸುತ್ತಾ ಬೆಂಬಲಿಸುತ್ತಾ ಇರುತ್ತಾರೆ.
ಪಿತೃಲೋಕದಿಂದಲ್ಲಿ ಇರುವ ಹಿರಿಯರಿಗೆ ವರ್ಷದಲ್ಲಿನ ಕೆಲವು ದಿನಗಳು ಅವರ ವಂಶಸ್ಥರು ಅಡುಗೆ ಮಾಡಿ ನೀಡಬೇಕು ಎಂಬ ಪ್ರತೀತಿ ಇದೆ.ಪಿತೃಲೋಕದಲ್ಲಿರುವ ಅವರಿಗೆ ತಾವೇ ಸ್ವತಃ ಅಡುಗೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಭೂಮಿ ಮೇಲೆ ಇರುವ ಅವರ ಮಕ್ಕಳು ಕೆಲವು ದಿನಗಳು ಅವರಿಗೆ ಅಡುಗೆಯನ್ನು ಮಾಡಿ ನೀಡಬೇಕು ಎಂದು ಹೇಳುತ್ತಾರೆ.

ಹಿರಿಯರಿಗೆ ನಾವು ಮೇಲೆ ಹೇಳಿದ ರೀತಿ ಆಹಾರವನ್ನು ನೀಡದೆ ಇದ್ದಾರೆ ಅವರು ಶಪಿಸುತ್ತಾರೆ ಮತ್ತು ಇದರಿಂದ ಅವರ ಇಡೀ ವಂಶದ ಮೇಲೆ ಪರಿಣಾಮವುಂಟಾಗುತ್ತದೆ ಹಾಗು ಅವರ ವಂಶ ಸಂಕಷ್ಟಕ್ಕೆ ಒಳಗಾಗುತ್ತದೆ ಎಂದು ಹೇಳಲಾಗುತ್ತದೆ .ಈ ಶಾಪವನ್ನೇ ಪಿತೃ ದೋಷವೆಂದು ಕರೆಯುತ್ತಾರೆ. ಈಗ ನಮ್ಮಲ್ಲಿ ಮೂಡುವ ಪ್ರಶ್ನೆಯೇನೆಂದರೆ ಒಂದು ಕುಟುಂಬ ಅಥವಾ ವಂಶಕ್ಕೆ ಪಿತೃ ದೋಷವಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದು?

ಪಿತೃದೋಷದ ಸೂಚನೆಗಳು
ಒಂದು ಕುಟುಂಬದಲ್ಲಿ ಪಿತೃದೋಷವಿದ್ದರೆ ಅಲ್ಲಿ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಇರುತ್ತವೆ.ಅಂತಹವರ ಮನೆಯಲ್ಲಿ ಹಲವಾರು ಬಾರಿ ಗರ್ಭಪಾತಗಳಾಗುತ್ತವೆ.ಮನೆಯಲ್ಲಿರುವ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ.ಈ ಸಮಸ್ಯೆ ಹೆಚ್ಚಾಗಿ ಮನೆಯಲ್ಲಿರುವ ಗಂಡು ಮಕ್ಕಳಿಗೆ ಉಂಟಾಗುತ್ತದೆ.ಅವರ ಸಂಸಾರ ಬಡತನದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಕೆಲವೊಮ್ಮೆ ಸಾಮಾನ್ಯವಾದ ಜೀವನವನ್ನು ನಡೆಸಲೂ ಅವರಿಗೆ ಕಷ್ಟವಾಗಬಹುದು.ಇದರೊಂದಿಗೆ ಮನೆಯಲ್ಲಿ ಪದೇ ಪದೇ ಜಗಳಗಳೂ ನಡೆಯಬಹುದು. ಪಿತೃದೋಷದಿಂದ ಹೊರಗೆ ಬರಲು ಕೆಲವು ಪರಿಹಾರಗಳಿವೆ. ಅವೇನೆಂದು ತಿಳಿಯೋಣ

ಪಿತೃಪಕ್ಷ ಅಥವಾ ಶ್ರಾದ್ಧವನ್ನು ಆಚರಿಸುವುದು
ಪಿತೃಪಕ್ಷ ಎನ್ನುವುದು ೧೦ ದಿನಗಳ ಅವಧಿಯಲ್ಲಿ ಆಚರಿಸುವ ಒಂದು ಪದ್ಧತಿ.ಈ ಸಮಯವು ಬಹಳ ಮಂಗಳಕರವಾಗಿದ್ದು ನಮ್ಮ ಪೂರ್ವಿಕರಿಗೆ ಸಲ್ಲಿಸಬೇಕಾದ ಎಲ್ಲ ಕಾರ್ಯಗಳನ್ನು ಮಾಡುವುದು ಬಹಳ ಪ್ರಶಸ್ತ.ಈ ದಿನಗಳಲ್ಲಿ ನಾವು ನಮ್ಮ ಕರ್ತವ್ಯಗಳನ್ನು ಪಾಲಿಸಿ ನಮ್ಮ ಹಿರಿಯರ ಕಾರ್ಯಗಳನ್ನು ಮಾಡಬೇಕು.ಈ ಆಚರಣೆಗಳಲ್ಲಿ ಮುಖ್ಯವಾಗಿ ನಾವು ತೀರಿ ಹೋಗಿರುವ ನಮ್ಮ ಹಿರಿಯರಿಗೆ ವಸ್ತ್ರಗಳನ್ನು ಹಾಗೂ ಆಹಾರವನ್ನು ನೀಡಬೇಕು.ಈ ೧೫ ದಿನಗಳ ಸಮಯದಲ್ಲಿ ಹಿರಿಯರ ಆತ್ಮಗಳು ಮನೆಗೆ ಭೇಟಿ ನೀಡಿ ಹೋಗುತ್ತವೆ ಎಂಬ ನಂಬಿಕೆಗಳಿವೆ.

ಅರಳಿ ಮರಕ್ಕೆ ನೀರೆರೆಯುವುದು
ಅರಳಿ ಮರಕ್ಕೆ ಆಗಾಗ್ಗೆ ನೀರನ್ನು ಹಾಕುವುದರಿಂದ ಪಿತೃ ದೋಷದಿಂದ ಪರಿಹಾರವನ್ನು ಕಂಡುಕೊಳ್ಳಬಹುದು.ಪ್ರತಿ ದಿನವೂ ಅರಳಿ ಮರದ ಬೇರುಗಳಿಗೆ ನೀರೆರೆಯುವುದು ಬಹಳ ಒಳ್ಳೆಯದು.ಅರಳಿ ಮರವು ಬ್ರಹ್ಮ ದೇವರು ಹಾಗು ನಮ್ಮ ಪೂರ್ವಿಕರೊಂದಿಗೆ ಬಾಂಧವ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.ಹಿಂದೂ ಧರ್ಮದಲ್ಲಿ ಪಿತೃ ಗಳನ್ನು ಪೂಜಿಸಲಾಗುತ್ತದೆ, ಹಾಗಾಗಿ ಪ್ರತಿ ದೇವಸ್ಥಾನದಲ್ಲೂ ಅರಳಿ ಮರಗಳು ಇರುತ್ತವೆ.ಇದರೊಂದಿಗೆ ವ್ಯಕ್ತಿಗಳು ಸತ್ತಾಗ ಅವರ ಎಲ್ಲಾ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಬೇಕು.

ಅಮಾವಾಸ್ಯೆ ಪೂಜೆ
ಅಮಾವಾಸ್ಯೆಯೂ ಕೂಡ ನಮ್ಮ ಹಿರಿಯರಿಗೆ ಮೀಸಲಾಗಿದೆ.ಶ್ರಾದ್ಧದ ದಿನಗಳಂದು ನಡೆಯುವ ಆಚರಣೆಗಳನ್ನು ಅಮಾವಾಸ್ಯೆಯ ಸಂದರ್ಭದಲ್ಲೂ ಮಾಡಬಹುದು.ಮಹಿಳೆಯರು ಕೆಲವು ವಸ್ತುಗಳನ್ನು (ಅವರ ಕುಟುಂಬದ ಸಂಪ್ರದಾಯದಿಂದ ಬಂದಿರುವ) ನೀಡಿ ಹಿರಿಯರನ್ನು ಬೇಡಿಕೊಳ್ಳುತ್ತಾರೆ. ಬಹಳಷ್ಟು ಜನರು ಪಿತೃ ಪೂಜೆಯನ್ನು ಕೂಡ ಅಮಾವಾಸ್ಯೆಯಂದು ಮಾಡುತ್ತಾರೆ.



Click it and Unblock the Notifications











