Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ನರಕ ಚರ್ತುದಶಿ 2020: ಅಭ್ಯಂಗ ಸ್ನಾನಕ್ಕೆ ಮುಹೂರ್ತ ಹಾಗೂ ಮಹತ್ವ
ದೀಪಾವಳಿ ಹಬ್ಬ ಎಂದರೆ 5 ದಿನ ಸಂಭ್ರಮವೋ ಸಂಭ್ರಮ, ದೀಪಾವಳಿಯ ಸಂಭ್ರಮ ಇಂದಿನಿಂದ ಶುರುವಾಗುತ್ತದೆ. ಇಂದು ದಂತೆರೇಸ್. ಈ ದಿನ ಚಿನ್ನ, ಬೆಳ್ಳಿ ಮುಂತಾದ ವಸ್ತುವನ್ನು ಕೊಳ್ಳುವುದು ಶುಭವೆಂದು ಹೇಳಲಾಗುತ್ತದೆ, ಇದಾದ ಬಳಿಕ ನಾಳೆ ನರಕ ಚರ್ತುದಶಿ.
ಕರ್ನಾಟಕದಲ್ಲಿ ನರಕ ಚರ್ತುದಶಿ ಹಾಗೂ ಲಕ್ಷ್ಮಿ ಪೂಜೆಯನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ. ದೀಪಾವಳಿಯಲ್ಲಿ ಎಣ್ಣೆ ಸ್ನಾನ ತುಂಬನೇ ಪ್ರಾಮುಖ್ಯತೆಯನ್ನು ಪಡೆದಿದೆ. ಇದನ್ನು ಚರ್ತುದಶಿಯಂದು ಮಾಡಲಾಗುವುದು.

ಎಣ್ಣೆ ಸ್ನಾನದ ಹಿಂದಿರುವ ಸಾಂಪ್ರದಾಯಿಕ ಹಿನ್ನೆಲೆ
ಇದರ ಪೌರಾಣಿಕ ಹಿನ್ನೆಲೆ ಬಗ್ಗೆ ಹೇಳುವುದಾದರೆ ಕೃಷ್ಣ ಹಾಗೂ ಸತ್ಯಭಾಮೆ ನರಕಾಸುರನನ್ನು ಸಂಹಾರ ಮಾಡಿ ಯುದ್ಧಭೂಮಿಯಿ೦ದ ಮರಳಿ ಬ೦ದಾಗ, ಅವರ ಶರೀರಗಳೆಲ್ಲವೂ ರಕ್ತ ಹಾಗೂ ಧೂಳಿನಿ೦ದ ಹೊಲಸಾಗಿದ್ದು, ಅವುಗಳನ್ನು ಶ್ರೀಗ೦ಧದ ಮಾರ್ಜಕ ಹಾಗೂ ಪರಿಮಳಯುಕ್ತವಾದ ಎಣ್ಣೆಯನ್ನು ಬಳಸಿಕೊ೦ಡು ಸ್ವಚ್ಛಗೊಳಿಸಿಕೊಳ್ಳುವುದು ಅವಶ್ಯವಾಗಿತ್ತು.
ಮನಸ್ಸು ಮತ್ತು ದೇಹವನ್ನು ಉಲ್ಲಾಸಗೊಳಿಸಲು ಚರ್ತುದಶಿಯಂದು ಎಣ್ಣೆ ಸ್ನಾನ ಮಾಡಲಾಗುವುದು.

ಎಣ್ಣೆ ಸ್ನಾನದ ಹಿಂದಿರುವ ವೈಜ್ಞಾನಿಕ ಕಾರಣ
ದೀಪಾವಳಿ ನಂತರ ಕೊರೆಯುವ ಚಳಿ ಶುರುವಾಗುವುದು. ಈ ಚಳಿ ಎದುರಿಸಲು ದೇಹ ಹಾಗೂ ಚರ್ಮವನ್ನು ಚಳಿಯಿಂದ ಕಾಪಾಡಲು ಈ ಎಣ್ಣೆ ಸ್ನಾನ ಸಹಾಯ ಮಾಡುತ್ತೆ. ಅಲ್ಲದೆ ಈ ಸಮಯದಲ್ಲಿ ಭತ್ತದ ಕೊಯ್ಲು ಮುಗಿದಿರುತ್ತದೆ. ಇದರ ದಣಿವಾರಲು ಹಾಹೂ ದೇಹಕ್ಕೆ ಚೈತನ್ಯ ತುಂಬಲು ಇದು ಅನುಕೂಲಕರವಾಗಿದೆ.

ಅಭ್ಯಂಗ ಸ್ನಾನಕ್ಕೆ ಸಮಯ
ಅಭ್ಯಂಗ ಸ್ನಾನವನ್ನು ಮುಂಜಾನೆ ಮಾಡಬೇಕು.
ನರಕ ಚರ್ತುದಶಿ ಶನಿವಾರ ನವೆಂಬರ್ 14
ಅಭ್ಯಂಗ ಸ್ನಾನಕ್ಕೆ ಸಮಯ:ಬೆಳಗ್ಗೆ 05:22:59 ಪ್ರಾರಂಭವಾಗಿ 06:43:18
ಕಾಲಾವಧಿ: 1 ಗಂಟೆ 20 ನಿಮಿಷ

ಅಭ್ಯಂಗ ಸ್ನಾನಕ್ಕೆ ಪಾಲಿಸುವ ಕ್ರಮಗಳು
ತ್ರಯೋದಶಿ ಅಂದರೆ ಇಂದು ಬಚ್ಚಲು ಮನೆಯ ನೀರಿನ ಹಂಡೆಗೆ ರಂಗೋಲಿ ಬಿಡಿಸಿ ಹೂವಿನ ಹಾರ ಹಾಕಿ, ನೀರು ತುಂಬಿ ಜಾಗಟೆ ಬಡಿದು ಪೂಜೆ ಮಾಡಬೇಕು. ಚಿಕ್ಕ ಮಕ್ಕಳನ್ನು ಸಂಜೆಯೇ ಮಾಡಿಸುತ್ತಾರೆ. ಬೆಳಗ್ಗೆ ಮೈಗೆ ಎಣ್ಣೆ ಹಚ್ಚಿ ಬಿಸಿ- ಬಿಸಿ ನೀರು ಹಾಕಿ ಹೊಸ ಬಟ್ಟೆ ತೊಡುವ ಸಂಪ್ರದಾಯವಿದೆ.



Click it and Unblock the Notifications
