Latest Updates
-
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯನ್ನು ತೋರಿಸುವ ಹೊಸ ಟ್ರೆಂಡ್: 'ಸಾಫ್ಟ್ ಲಾಂಚ್' ಮೂಲಕ ನಿಮ್ಮ ಸಂಬಂಧವನ್ನು ಭದ್ರಪಡಿಸಿಕೊಳ್ಳಿ! -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಲ್ಲೂ ನಿಮ್ಮ ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಉಳಿಸಲು ಈ ಟಿಪ್ಸ್ ಸಾಕು! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮಗಳನ್ನು ಮರೆಯದೆ ಪಾಲಿಸಿ! -
ಮುಟ್ಟಿನ ನೈರ್ಮಲ್ಯ ದಿನ: ಕೇವಲ 200 ರೂಪಾಯಿಗೂ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ ಈ ಅಗತ್ಯ ಉತ್ಪನ್ನಗಳು, ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್!
ಇಲ್ಲಿ ಪುರುಷರು ಸೀರೆಯುಟ್ಟು, ಕೈಗೆ ಬಳೆ ಹಾಕಿ ದೇವಿಗೆ ಪೂಜೆ ಮಾಡುತ್ತಾರೆ!
ಮನಸೂರೆಗೊಳಿಸುವ ಪ್ರಕೃತಿಸಿರಿ, ಇದರ ನಡುವೆ ಪವಿತ್ರ ಪುಣ್ಯ ಕ್ಷೇತ್ರಗಳು, ಒಂದೊಂದು ದೇಗುಲದಲ್ಲೂ ವಿಭಿನ್ನ ಬಗೆಯ ಇತಿಹಾಸ, ಆಚರಣೆ ಹಾಗೂ ಸಂಪ್ರದಾಯ. ಇವುಗಳ ಅರ್ಥ ಆಚರಣೆಗಳನ್ನು ತಿಳಿದಾಗ ಅದೇನೋ ಒಂದು ಬಗೆಯ ನಿರಾಳ ಭಾವ ಮೂಡುವುದು. ಇಂತಹ ಅದ್ಭುತ ಕ್ಷೇತ್ರಗಳು ಇರುವುದು ನಮ್ಮ ದೇಶದಲ್ಲಿ ಎನ್ನುವುದು ನಮಗೊಂದು ಹೆಮ್ಮೆಯ ವಿಚಾರವೆ. ಆಶ್ಚರ್ಯ ಮೂಡಿಸುವಂತಹ ಆಚರಣೆಯಲ್ಲಿ ಕೊಟ್ಟನ್ ಕೊಟ್ಟನ್ ಕುಲ್ಲಂಗರಾ ದೇಗುಲದ ಆಚರಣೆಯೂ ಒಂದು.
ಅದೇನೆಂದರೆ ಪುರುಷರು ಮಹಿಳೆಯರ ವೇಶದಲ್ಲಿ ದೇಗುಲಕ್ಕೆ ಬರುವುದು ಹಾಗೂ ಪೂಜೆ ಸಲ್ಲಿಸುವುದು. ಕೇರಳದ ಅರಬ್ಬೀ ಸಮುದ್ರ ತೀರದಲ್ಲಿ ಇರುವ ದೇವಿಯ ದೇಗುಲ ಅದು. ಅಲ್ಲಿಗೆ ಬರುವ ಪುರುಷರೆಲ್ಲರೂ ಮಹಿಳೆಯರಂತೆ ವೇಷಧರಿಸುತ್ತಾರೆ. ಅಲ್ಲಿ ಪುರುಷರು ಮಹಿಳೆಯರು ಎನ್ನುವ ತಾರತಮ್ಯವಿಲ್ಲ. ಎಲ್ಲರೂ ಒಂದೇ. ಇಲ್ಲಿ ದೇವರ ಜ್ಯೋತಿಯೊಂದಿಗೆ ಭಕ್ತರ ಸಮಾನತೆಯ ದೀಪವೂ ಬೆಳಗುತ್ತದೆ. ಹೌದಾ? ಹಾಗಾದರೆ ಅದ್ಯಾವ ದೇಗುಲ ಎನ್ನುವ ವಿಚಾರ ತಿಳಿಯಲು ಈ ಕೆಳಗಿನ ವಿವರಣೆ ನೋಡಿ....

ಯಾವ ದೇಗುಲ?
ಕೇರಳದ ಕೊಲ್ಲಂ ಜಿಲ್ಲೆಯ ಚವರ ಬಳಿ ಇರುವ ಕೊಟ್ಟನ್ ಕುಲ್ಲಂಗರ್ ದೇವಿಯ ದೇಗುಲ. ಇಲ್ಲಿ ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ, ಆದರೆ ಇಲ್ಲಿಯ ವಿಶೇಷತೆ ಏನೆಂದರೆ ಈ ದೇವಿ ದೇವಾಲಯದಲ್ಲಿ ಪುರುಷರು ಮಹಿಳೆಯರಂತೆ ಸೀರೆ ಹಾಗೂ ಆಭರಣವನ್ನು ಧರಿಸಿಕೊಂಡು ಪೂಜೆ ಸಲ್ಲಿಸುತ್ತಾರೆ!....

ಎಲ್ಲರೂ ಮಹಿಳೆಯರ ವೇಷ
ಈ ದೇವಾಲಯದಲ್ಲಿ ಯುವಕರು, ವೃದ್ಧರು ಎನ್ನುವ ಭೇದವಿಲ್ಲದೆ ಎಲ್ಲರೂ ಮಹಿಳೆಯರ ವೇಷ ಧರಿಸಿ, ಶೃಂಗಾರ ಮಾಡಿಕೊಳ್ಳುತ್ತಾರೆ. ಈ ರೂಪದಲ್ಲಿಯೇ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಪುರುಷರು ತಮ್ಮ ಉಡುಗೆ ಬದಲಾಯಿಸಿಕೊಳ್ಳಲು ವಿಶೇಷವಾಗಿಯೇ ಒಂದು ಕೊಠಡಿಯಿದೆ.

ಕೋರಿಕೆಗಳು ಈಡೇರುವುದು
ಭಕ್ತರು ಕೇಳುವ ವಿದ್ಯೆ, ಆರೋಗ್ಯ, ಸಂಪತ್ತು, ಉದ್ಯೋಗ, ವಿವಾಹ ಸೇರಿದಂತೆ ಎಲ್ಲಾ ಬಗೆಯ ಕೋರಿಕೆಯನ್ನು ತಾಯಿ ಈಡೇರಿಸುತ್ತಾಳೆ.

ದೇಗುಲದ ಹುಟ್ಟು
ಒಮ್ಮೆ ದನ ಕಾಯುವ ಹುಡುಗರು ಮಹಿಳೆಯರ ಉಡುಗೆಯನ್ನು ತೊಟ್ಟು, ಒಂದು ಕಲ್ಲಿನ ಪೂಜೆ ನಡೆಸಿದರು. ಪೂಜೆಯ ನಂತರ ಕಲ್ಲಿನ ಸುತ್ತಲು ಅಗೋಚರವಾದ ಶಕ್ತಿಸುತ್ತುತ್ತಿರುವುದನ್ನು ಸ್ಥಳೀಯರು ಗಮನಿಸಿದರು. ನಂತರ ಅಪೂರ್ವವಾದ ಈ ಕಲ್ಲಿಗೆ ದೇಗುಲವನ್ನು ನಿರ್ಮಿಸಲಾಯಿತು ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಪುರುಷರು ಮಹಿಳೆಯರಂತೆ ಶೃಂಗರಿಸಿಕೊಂಡು ಪೂಜೆ ಸಲ್ಲಿಸುತ್ತಾರೆ.

ಇನ್ನೊಂದು ಕಥೆ
ಒಮ್ಮೆ ತೆಂಗಿನಕಾಯಿಯನ್ನು ಒಂದು ಕಲ್ಲಿಗೆ ಬಡಿದಾಗ ತೆಂಗಿನ ಕಾಯಿಯಿಂದ ರಕ್ತ ಸುರಿಯಲು ಆರಂಭವಾಯಿತಂತೆ. ಅಂದಿನಿಂದ ಆ ಕಲ್ಲಿಗೆ ಅತೀವವಾದ ಶಕ್ತಿಯಿದೆ ಎಂದು ಪೂಜಿಸಲಾಯಿತು. ನಂತರ ಆ ಕಲ್ಲಿಗೆ ದೇಗುಲ ನಿರ್ಮಿಸಲಾಯಿತು ಎನ್ನುತ್ತಾರೆ.

ವಿಗ್ರಹ ಬೆಳೆಯುತ್ತದೆ
ಆ ಕಾಲದಲ್ಲಿ ಅಪಾರವಾದ ಶಕ್ತಿಯನ್ನು ಹೊಂದಿರುವ ಈ ಕಲ್ಲಿಗೆ ಪೂಜಿಸುತ್ತಾ ಬಂದಿದ್ದಾರೆ. ವರ್ಷಗಳು ಉರುಳಿದಂತೆ ಕಲ್ಲಿನ ಬೆಳವಣಿಗೆಯೂ ಆಗುತ್ತಿದೆ ಎಂದು ಹೇಳುತ್ತಾರೆ.

ಜಾತ್ರೆ ನಡೆಯುವುದು
ಪ್ರತಿ ವರ್ಷವೂ ಇಲ್ಲಿ ಕೊಟ್ಟಂಕುಳಂಗರ ಉತ್ಸವ ನಡೆಯುತ್ತದೆ. ಅದ್ಧೂರಿಯಿಂದ ಆಚರಿಸುವ ಈ ಉತ್ಸವದಲ್ಲಿ ಪುರುಷರು ಮಹಿಳೆಯರಂತೆ ಶೃಂಗರಿಸಿಕೊಂಡು ಭಾಗಿಯಾಗುತ್ತಾರೆ. ಈ ಉತ್ಸವದಲ್ಲಿ ರಾತ್ರಿ ದೀಪಗಳ ಅಲಂಕಾರ ಮತ್ತು ದೀಪದ ಮೆರವಣಿಗೆ ಮಾಡಲಾಗುತ್ತದೆ.

ದರ್ಶನದ ಸಮಯ
ಭಕ್ತರಿಗಾಗಿ ಈ ದೇವಾಲಯ ಬೆಳಗ್ಗೆ 5 ರಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ. ಭಕ್ತರು ತಮ್ಮ ಮನಸ್ಸಿಗೆ ಬಂದಾಗ ದೇವಿಯ ದರ್ಶನ ಪಡೆಯಬಹುದು.



Click it and Unblock the Notifications