Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಇಲ್ಲಿ ಪುರುಷರು ಸೀರೆಯುಟ್ಟು, ಕೈಗೆ ಬಳೆ ಹಾಕಿ ದೇವಿಗೆ ಪೂಜೆ ಮಾಡುತ್ತಾರೆ!
ಮನಸೂರೆಗೊಳಿಸುವ ಪ್ರಕೃತಿಸಿರಿ, ಇದರ ನಡುವೆ ಪವಿತ್ರ ಪುಣ್ಯ ಕ್ಷೇತ್ರಗಳು, ಒಂದೊಂದು ದೇಗುಲದಲ್ಲೂ ವಿಭಿನ್ನ ಬಗೆಯ ಇತಿಹಾಸ, ಆಚರಣೆ ಹಾಗೂ ಸಂಪ್ರದಾಯ. ಇವುಗಳ ಅರ್ಥ ಆಚರಣೆಗಳನ್ನು ತಿಳಿದಾಗ ಅದೇನೋ ಒಂದು ಬಗೆಯ ನಿರಾಳ ಭಾವ ಮೂಡುವುದು. ಇಂತಹ ಅದ್ಭುತ ಕ್ಷೇತ್ರಗಳು ಇರುವುದು ನಮ್ಮ ದೇಶದಲ್ಲಿ ಎನ್ನುವುದು ನಮಗೊಂದು ಹೆಮ್ಮೆಯ ವಿಚಾರವೆ. ಆಶ್ಚರ್ಯ ಮೂಡಿಸುವಂತಹ ಆಚರಣೆಯಲ್ಲಿ ಕೊಟ್ಟನ್ ಕೊಟ್ಟನ್ ಕುಲ್ಲಂಗರಾ ದೇಗುಲದ ಆಚರಣೆಯೂ ಒಂದು.
ಅದೇನೆಂದರೆ ಪುರುಷರು ಮಹಿಳೆಯರ ವೇಶದಲ್ಲಿ ದೇಗುಲಕ್ಕೆ ಬರುವುದು ಹಾಗೂ ಪೂಜೆ ಸಲ್ಲಿಸುವುದು. ಕೇರಳದ ಅರಬ್ಬೀ ಸಮುದ್ರ ತೀರದಲ್ಲಿ ಇರುವ ದೇವಿಯ ದೇಗುಲ ಅದು. ಅಲ್ಲಿಗೆ ಬರುವ ಪುರುಷರೆಲ್ಲರೂ ಮಹಿಳೆಯರಂತೆ ವೇಷಧರಿಸುತ್ತಾರೆ. ಅಲ್ಲಿ ಪುರುಷರು ಮಹಿಳೆಯರು ಎನ್ನುವ ತಾರತಮ್ಯವಿಲ್ಲ. ಎಲ್ಲರೂ ಒಂದೇ. ಇಲ್ಲಿ ದೇವರ ಜ್ಯೋತಿಯೊಂದಿಗೆ ಭಕ್ತರ ಸಮಾನತೆಯ ದೀಪವೂ ಬೆಳಗುತ್ತದೆ. ಹೌದಾ? ಹಾಗಾದರೆ ಅದ್ಯಾವ ದೇಗುಲ ಎನ್ನುವ ವಿಚಾರ ತಿಳಿಯಲು ಈ ಕೆಳಗಿನ ವಿವರಣೆ ನೋಡಿ....

ಯಾವ ದೇಗುಲ?
ಕೇರಳದ ಕೊಲ್ಲಂ ಜಿಲ್ಲೆಯ ಚವರ ಬಳಿ ಇರುವ ಕೊಟ್ಟನ್ ಕುಲ್ಲಂಗರ್ ದೇವಿಯ ದೇಗುಲ. ಇಲ್ಲಿ ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ, ಆದರೆ ಇಲ್ಲಿಯ ವಿಶೇಷತೆ ಏನೆಂದರೆ ಈ ದೇವಿ ದೇವಾಲಯದಲ್ಲಿ ಪುರುಷರು ಮಹಿಳೆಯರಂತೆ ಸೀರೆ ಹಾಗೂ ಆಭರಣವನ್ನು ಧರಿಸಿಕೊಂಡು ಪೂಜೆ ಸಲ್ಲಿಸುತ್ತಾರೆ!....

ಎಲ್ಲರೂ ಮಹಿಳೆಯರ ವೇಷ
ಈ ದೇವಾಲಯದಲ್ಲಿ ಯುವಕರು, ವೃದ್ಧರು ಎನ್ನುವ ಭೇದವಿಲ್ಲದೆ ಎಲ್ಲರೂ ಮಹಿಳೆಯರ ವೇಷ ಧರಿಸಿ, ಶೃಂಗಾರ ಮಾಡಿಕೊಳ್ಳುತ್ತಾರೆ. ಈ ರೂಪದಲ್ಲಿಯೇ ದೇವಿಗೆ ಪೂಜೆ ಸಲ್ಲಿಸುತ್ತಾರೆ. ಪುರುಷರು ತಮ್ಮ ಉಡುಗೆ ಬದಲಾಯಿಸಿಕೊಳ್ಳಲು ವಿಶೇಷವಾಗಿಯೇ ಒಂದು ಕೊಠಡಿಯಿದೆ.

ಕೋರಿಕೆಗಳು ಈಡೇರುವುದು
ಭಕ್ತರು ಕೇಳುವ ವಿದ್ಯೆ, ಆರೋಗ್ಯ, ಸಂಪತ್ತು, ಉದ್ಯೋಗ, ವಿವಾಹ ಸೇರಿದಂತೆ ಎಲ್ಲಾ ಬಗೆಯ ಕೋರಿಕೆಯನ್ನು ತಾಯಿ ಈಡೇರಿಸುತ್ತಾಳೆ.

ದೇಗುಲದ ಹುಟ್ಟು
ಒಮ್ಮೆ ದನ ಕಾಯುವ ಹುಡುಗರು ಮಹಿಳೆಯರ ಉಡುಗೆಯನ್ನು ತೊಟ್ಟು, ಒಂದು ಕಲ್ಲಿನ ಪೂಜೆ ನಡೆಸಿದರು. ಪೂಜೆಯ ನಂತರ ಕಲ್ಲಿನ ಸುತ್ತಲು ಅಗೋಚರವಾದ ಶಕ್ತಿಸುತ್ತುತ್ತಿರುವುದನ್ನು ಸ್ಥಳೀಯರು ಗಮನಿಸಿದರು. ನಂತರ ಅಪೂರ್ವವಾದ ಈ ಕಲ್ಲಿಗೆ ದೇಗುಲವನ್ನು ನಿರ್ಮಿಸಲಾಯಿತು ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಪುರುಷರು ಮಹಿಳೆಯರಂತೆ ಶೃಂಗರಿಸಿಕೊಂಡು ಪೂಜೆ ಸಲ್ಲಿಸುತ್ತಾರೆ.

ಇನ್ನೊಂದು ಕಥೆ
ಒಮ್ಮೆ ತೆಂಗಿನಕಾಯಿಯನ್ನು ಒಂದು ಕಲ್ಲಿಗೆ ಬಡಿದಾಗ ತೆಂಗಿನ ಕಾಯಿಯಿಂದ ರಕ್ತ ಸುರಿಯಲು ಆರಂಭವಾಯಿತಂತೆ. ಅಂದಿನಿಂದ ಆ ಕಲ್ಲಿಗೆ ಅತೀವವಾದ ಶಕ್ತಿಯಿದೆ ಎಂದು ಪೂಜಿಸಲಾಯಿತು. ನಂತರ ಆ ಕಲ್ಲಿಗೆ ದೇಗುಲ ನಿರ್ಮಿಸಲಾಯಿತು ಎನ್ನುತ್ತಾರೆ.

ವಿಗ್ರಹ ಬೆಳೆಯುತ್ತದೆ
ಆ ಕಾಲದಲ್ಲಿ ಅಪಾರವಾದ ಶಕ್ತಿಯನ್ನು ಹೊಂದಿರುವ ಈ ಕಲ್ಲಿಗೆ ಪೂಜಿಸುತ್ತಾ ಬಂದಿದ್ದಾರೆ. ವರ್ಷಗಳು ಉರುಳಿದಂತೆ ಕಲ್ಲಿನ ಬೆಳವಣಿಗೆಯೂ ಆಗುತ್ತಿದೆ ಎಂದು ಹೇಳುತ್ತಾರೆ.

ಜಾತ್ರೆ ನಡೆಯುವುದು
ಪ್ರತಿ ವರ್ಷವೂ ಇಲ್ಲಿ ಕೊಟ್ಟಂಕುಳಂಗರ ಉತ್ಸವ ನಡೆಯುತ್ತದೆ. ಅದ್ಧೂರಿಯಿಂದ ಆಚರಿಸುವ ಈ ಉತ್ಸವದಲ್ಲಿ ಪುರುಷರು ಮಹಿಳೆಯರಂತೆ ಶೃಂಗರಿಸಿಕೊಂಡು ಭಾಗಿಯಾಗುತ್ತಾರೆ. ಈ ಉತ್ಸವದಲ್ಲಿ ರಾತ್ರಿ ದೀಪಗಳ ಅಲಂಕಾರ ಮತ್ತು ದೀಪದ ಮೆರವಣಿಗೆ ಮಾಡಲಾಗುತ್ತದೆ.

ದರ್ಶನದ ಸಮಯ
ಭಕ್ತರಿಗಾಗಿ ಈ ದೇವಾಲಯ ಬೆಳಗ್ಗೆ 5 ರಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ. ಭಕ್ತರು ತಮ್ಮ ಮನಸ್ಸಿಗೆ ಬಂದಾಗ ದೇವಿಯ ದರ್ಶನ ಪಡೆಯಬಹುದು.



Click it and Unblock the Notifications
