Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಭಗವಾನ್ ಗಣೇಶನು ನರಕ/ಪಾತಾಳ ಲೋಕದ ರಾಜನಾದ ಕಥೆ
ಪ್ರಥಮ ಪೂಜಿತ, ಗಣಗಳ ಒಡೆಯ ಎಂದು ಕರೆಸಿಕೊಳ್ಳುವ ಶ್ರೀಗಣೇಶನ ಬಗ್ಗೆ ಅನೇಕ ಉಪಕಥೆಗಳಿವೆ. ಎಲ್ಲವೂ ಪೂಜ್ಯನೀಯವಾದ ಭಕ್ತಿ ಪೂರಕವಾದದ್ದು. ಅವುಗಳಲ್ಲಿ ಒಂದು "ಗಣೇಶ ಆಕಸ್ಮಿಕವಾಗಿ ಪಾತಾಳ ಲೋಕದ/ನರಕ ಲೋಕದ ರಾಜನಾಗಿದ್ದು''. ಈ ಕಥೆಯು ಗಣೇಶ ಪುರಾಣದಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು...

ದಂಥ ಕಥೆಯ ಪ್ರಕಾರ
ದಂಥ ಕಥೆಯ ಪ್ರಕಾರ, ಪರಶಾರ್ ಋಷಿಮುನಿಯ ಆಶ್ರಮದಲ್ಲಿರುವ ಮುನಿಗಳ ಮಕ್ಕಳೊಂದಿಗೆ ಗಣೇಶನು ಆಟ ಆಡುತ್ತಿದ್ದನು. ಆ ಸಮಯದಲ್ಲಿ ಹಾವು ರಾಣಿಯೊಂದು ಮಹಿಳೆಯ ರೂಪದಲ್ಲಿ ಪ್ರತ್ಯಕ್ಷಳಾದಳು. ಜೊತೆಗೆ ತನ್ನೊಡನೆ ಗಣೇಶನು ನರಕ/ಪಾತಾಳ ಲೋಕಕ್ಕೆ ಬರಬೇಕೆಂದು ಒತ್ತಾಯಿಸಿದಳು.
ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು

ಗಣೇಶನಿಗೆ ಆದರದ ಸ್ವಾಗತ...
ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಗಣೇಶ ಅವಳೊಡನೆ ತೆರಳಿದನು. ಅಲ್ಲಿ ಗಣೇಶನಿಗೆ ಗೌರವದಿಂದಲೇ ಸ್ವಾಗತಿಸಿ, ಹಲವು ಬಗೆಯ ರುಚಿಕರ ತಿನಿಸನ್ನು ಸವಿಯಲು ನೀಡಿದರು.

ಹಾಸ್ಯ ಮಾಡಿದ ವಾಸುಕಿ...
ಹಾವುಗಳ ರಾಜ ವಾಸುಕಿಯು ಗಣೇಶನಿಗೆ ಸತ್ಕಾರ ಹಾಗೂ ಗೌರವ ನೀಡುವುದನ್ನು ಸಹಿಸಲಿಲ್ಲ. ಬದಲಿಗೆ ಗಣೇಶನ ಮುಖ, ಕಿವಿ, ಆನೆಯ ಸೊಂಡಿಲುಗಳನ್ನು ನೋಡಿ ಹಾಸ್ಯ ಮಾಡುತ್ತಾ ನಗಲು ಪ್ರಾರಂಭಿಸಿದನು.

ಕೋಪೋದ್ರಿಕ್ತನಾದ ಗಣೇಶ...
ಇದನ್ನು ಕಂಡ ಗಣೇಶನು ಕೋಪೋದ್ರಿಕ್ತನಾಗಿ ವಾಸುಕಿಯ ತಲೆಯ ಮೇಲೆ ಹತ್ತಿದನು. ಜೊತೆಗೆ ಅವನ ಕಿರೀಟವನ್ನು ಕಿತ್ತುಕೊಂಡು ತನ್ನ ತಲೆಯಮೇಲೆ ಇಟ್ಟುಕೊಂಡನು. (ಸಮುದ್ರ ಮಂಥನದ ಸಮಯದಲ್ಲಿ ಹಗ್ಗದ ರೂಪದಲ್ಲಿ ಬಳಸಿಕೊಂಡ ಹಾವು ವಾಸುಕಿ)
ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

ಪಾತಾಳ ಲೋಕದ ಹೊಸ ರಾಜನಾದ...
ವಾಸುಕಿಗೆ ಪಾಠಕಲಿಸಿದ ವಿಚಾರವನ್ನು ತಿಳಿದ, ಅವನ ಹಿರಿಯ ಸಹೋದರ ಶೇಷನಾಗ್ ಅಲ್ಲಿಗೆ ಬಂದನು. ಸ್ಥಳಕ್ಕೆ ಬರುತ್ತಿದ್ದಂತೆ ಗಣೇಶನನ್ನು ನೋಡಿ ವಂದಿಸಿದನು. ಜೊತೆಗೆ ಪಾತಾಳ ಲೋಕದ ಹೊಸ ರಾಜ ಎಂದು ಘೋಷಿಸಿದನು.



Click it and Unblock the Notifications