Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಭಗವಾನ್ ಗಣೇಶನು ನರಕ/ಪಾತಾಳ ಲೋಕದ ರಾಜನಾದ ಕಥೆ
ಪ್ರಥಮ ಪೂಜಿತ, ಗಣಗಳ ಒಡೆಯ ಎಂದು ಕರೆಸಿಕೊಳ್ಳುವ ಶ್ರೀಗಣೇಶನ ಬಗ್ಗೆ ಅನೇಕ ಉಪಕಥೆಗಳಿವೆ. ಎಲ್ಲವೂ ಪೂಜ್ಯನೀಯವಾದ ಭಕ್ತಿ ಪೂರಕವಾದದ್ದು. ಅವುಗಳಲ್ಲಿ ಒಂದು "ಗಣೇಶ ಆಕಸ್ಮಿಕವಾಗಿ ಪಾತಾಳ ಲೋಕದ/ನರಕ ಲೋಕದ ರಾಜನಾಗಿದ್ದು''. ಈ ಕಥೆಯು ಗಣೇಶ ಪುರಾಣದಲ್ಲಿ ಉಲ್ಲೇಖವಾಗಿರುವುದನ್ನು ಕಾಣಬಹುದು...

ದಂಥ ಕಥೆಯ ಪ್ರಕಾರ
ದಂಥ ಕಥೆಯ ಪ್ರಕಾರ, ಪರಶಾರ್ ಋಷಿಮುನಿಯ ಆಶ್ರಮದಲ್ಲಿರುವ ಮುನಿಗಳ ಮಕ್ಕಳೊಂದಿಗೆ ಗಣೇಶನು ಆಟ ಆಡುತ್ತಿದ್ದನು. ಆ ಸಮಯದಲ್ಲಿ ಹಾವು ರಾಣಿಯೊಂದು ಮಹಿಳೆಯ ರೂಪದಲ್ಲಿ ಪ್ರತ್ಯಕ್ಷಳಾದಳು. ಜೊತೆಗೆ ತನ್ನೊಡನೆ ಗಣೇಶನು ನರಕ/ಪಾತಾಳ ಲೋಕಕ್ಕೆ ಬರಬೇಕೆಂದು ಒತ್ತಾಯಿಸಿದಳು.
ಗಣೇಶನಿಗೆ ತುಂಬಾ ಪ್ರಿಯವಾದ ಎಲೆ,ಪುಷ್ಪಗಳು

ಗಣೇಶನಿಗೆ ಆದರದ ಸ್ವಾಗತ...
ಇದಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಗಣೇಶ ಅವಳೊಡನೆ ತೆರಳಿದನು. ಅಲ್ಲಿ ಗಣೇಶನಿಗೆ ಗೌರವದಿಂದಲೇ ಸ್ವಾಗತಿಸಿ, ಹಲವು ಬಗೆಯ ರುಚಿಕರ ತಿನಿಸನ್ನು ಸವಿಯಲು ನೀಡಿದರು.

ಹಾಸ್ಯ ಮಾಡಿದ ವಾಸುಕಿ...
ಹಾವುಗಳ ರಾಜ ವಾಸುಕಿಯು ಗಣೇಶನಿಗೆ ಸತ್ಕಾರ ಹಾಗೂ ಗೌರವ ನೀಡುವುದನ್ನು ಸಹಿಸಲಿಲ್ಲ. ಬದಲಿಗೆ ಗಣೇಶನ ಮುಖ, ಕಿವಿ, ಆನೆಯ ಸೊಂಡಿಲುಗಳನ್ನು ನೋಡಿ ಹಾಸ್ಯ ಮಾಡುತ್ತಾ ನಗಲು ಪ್ರಾರಂಭಿಸಿದನು.

ಕೋಪೋದ್ರಿಕ್ತನಾದ ಗಣೇಶ...
ಇದನ್ನು ಕಂಡ ಗಣೇಶನು ಕೋಪೋದ್ರಿಕ್ತನಾಗಿ ವಾಸುಕಿಯ ತಲೆಯ ಮೇಲೆ ಹತ್ತಿದನು. ಜೊತೆಗೆ ಅವನ ಕಿರೀಟವನ್ನು ಕಿತ್ತುಕೊಂಡು ತನ್ನ ತಲೆಯಮೇಲೆ ಇಟ್ಟುಕೊಂಡನು. (ಸಮುದ್ರ ಮಂಥನದ ಸಮಯದಲ್ಲಿ ಹಗ್ಗದ ರೂಪದಲ್ಲಿ ಬಳಸಿಕೊಂಡ ಹಾವು ವಾಸುಕಿ)
ಸಂಕಷ್ಟಿ ಚತುರ್ಥಿ ಹಬ್ಬದ ಮಹತ್ವ ತಿಳಿದಿದೆಯೇ?

ಪಾತಾಳ ಲೋಕದ ಹೊಸ ರಾಜನಾದ...
ವಾಸುಕಿಗೆ ಪಾಠಕಲಿಸಿದ ವಿಚಾರವನ್ನು ತಿಳಿದ, ಅವನ ಹಿರಿಯ ಸಹೋದರ ಶೇಷನಾಗ್ ಅಲ್ಲಿಗೆ ಬಂದನು. ಸ್ಥಳಕ್ಕೆ ಬರುತ್ತಿದ್ದಂತೆ ಗಣೇಶನನ್ನು ನೋಡಿ ವಂದಿಸಿದನು. ಜೊತೆಗೆ ಪಾತಾಳ ಲೋಕದ ಹೊಸ ರಾಜ ಎಂದು ಘೋಷಿಸಿದನು.



Click it and Unblock the Notifications