Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಗಣೇಶ ಚತುರ್ಥಿ 2022: ಗಣಪನಿಗೆ ಪ್ರಿಯವಾದ ಎಲೆ, ಪುಷ್ಪಗಳು ಇದೇ ನೋಡಿ
ಹಿಂದೂ ಧರ್ಮದಲ್ಲಿ ನಾವು ರಾಮಾ, ಕೃಷ್ಣ, ಶಿವ, ಗಣಪ, ಲಕ್ಷ್ಮಿ ಹೀಗೆ ಅನೇಕ ದೇವರನ್ನು ಪೂಜಿಸುತ್ತೇವೆ. ಪ್ರತಿಯೊಂದು ದೇವರಿಗೆ ಪೂಜಾ ವಿಧಾನಗಳು, ಇಷ್ಟದ ಆಹಾರಗಳು, ಹೂಗಳು, ವಾಹನಗಳು ಬೇರೆ-ಬೇರೆಯಾಗಿರುತ್ತದೆ. ಅನೇಕ ಬಗೆಯ ಪೂಜೆಗಳಿರುತ್ತದೆ. ಆದರೆ ಯಾವುದೇ ಪೂಜೆ ಮಾಡುವ ಮುಂಚೆ ಗಣಪನಿಗೆ ಪೂಜೆ ಮಾಡಿ, 'ವಿಘ್ನಗಳನ್ನು ನಿವಾರಿಸು ತಂದೇ' ಎಂದು ಬೇಡಿಕೊಳ್ಳುತ್ತೇವೆ.
ಈ ವರ್ಷದ ಅಂದರೆ 2022ನೇ ಸಾಲಿನಲ್ಲಿ ಆಗಸ್ಟ್ನಲ್ಲಿ 31ರಂದು ಗಣೇಶ ಎಲ್ಲರ ಮನೆಗಳಿಗೆ ಬರಲಿದ್ದಾನೆ. ಆ ದಿನದಂದು ಗಣೇಶನಿಗೆ ಪುಷ್ಪಾರ್ಚನೆ ಮಾಡುವಾಗ ಅವನಿಗೆ ಇಷ್ಟವಾದ ಹೂಗಳಿಂದ ಮಾಡಿದರೆ ಗಣೇಶ ತುಂಬಾ ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದ ಗಣಪನ ಪೂಜೆಗೆ ಈ ಕೆಳಗಿನ ಹೂಗಳನ್ನು ಬಳಸಿ, ಗಣೇಶ ಕೃಪೆಗೆ ಪಾತ್ರರಾಗಿ.

ಕೆಂಪು ದಾಸವಾಳದ ಹೂ
ಗಣೇಶನಿಗೆ ಕೆಂಪು ಬಣ್ಣದ ಹೂಗಳೆಂದರೆ ಇಷ್ಟ, ಅದರಲ್ಲೂ ಕೆಂಪು ದಾಸವಾಳವೆಂದರೆ ತುಂಬಾ ಇಷ್ಟವಂತೆ. ಇದನ್ನು ಸಾಮಾನ್ಯ ಈ ಹೂವು ಮಾರಾಟಕ್ಕೆ ಸಿಗುವುದು ಅಪರೂಪ ಆದರೂ, ಮನೆಗಳಲ್ಲೇ ಸುಲಭವಾಗಿ ಬೆಳೆಯಬಹುದು.

ಗರಿಕೆ ಹುಲ್ಲು
ಗಣಪನ ಪೂಜೆಗೆ ಗರಿಕೆ ಹುಲ್ಲು ಇರಲೇಬೇಕು. ಗರಿಕೆ ಹುಲ್ಲು ಬಳಸದಿದ್ದರೆ ಗಣಪನ ಪೂಜೆ ಪೂರ್ಣವಾಗುವುದಿಲ್ಲ. ಗರಿಕೆ ಇಲ್ಲದೆ ಗಣೇಶ ಸಂತೃಪ್ತನಾಗುವುದಿಲ್ಲ. ಆದ್ದರಿಂದ ಗಣೇಶನ ಪೂಜೆಗೆ ತಪ್ಪದೇ ಗರಿಕೆ ಇಡಿ.

ದಾಳಿಂಬೆ ಹೂ
ಗಣಪನಿಗೆ ದಾಳಿಂಬೆ ಹೂವೆಂದರೆ ತುಂಬಾ ಇಷ್ಟ.ಗಣಪನ ಪೂಜೆಯಲ್ಲಿ ಸಾಮಾನ್ಯವಾಗಿ ದಾಳಿಂಬೆ ಹೂ ಇದ್ದೇ ಇರುತ್ತದೆ. ಈ ಹೂವು ಸಿಗುವುದು ಅಪರೂಪವಾದರೂ, ಪೂಜೆಗೆ ಇಟ್ಟರೆ ಶುಭ ಎನ್ನಲಾಗುತ್ತದೆ.

ತುಳಸಿ
ತುಳಸಿಯನ್ನು ಸಾಮಾನ್ಯವಾಗಿ ಎಲ್ಲಾ ಪೂಜೆಗೂ ಬಳಸುತ್ತೇವೆ. ತುಳಸಿಯನ್ನು ಮಾಲೆ ಮಾಡಿ ಗಣಪನಿಗೆ ಹಾಕಿದರೆ ಒಳ್ಳೆಯದು, ಬೇಡಿದ್ದು ನೆರವೇರುತ್ತದೆ ಎಂಬ ನಂಬಿಕೆ ಇದೆ.

ಶಂಖ ಪುಷ್ಪ
ಈ ಹೂ ಸಾಮಾನ್ಯವಾಗಿ ಬಿಳಿ ಮತ್ತು ನೀಲಿ ಬಣ್ಣದಲ್ಲಿರುತ್ತದೆ. ಇದು ಶಂಖದ ಆಕೃತಿಯಲ್ಲಿರುವುದರಿಂದ ಇದನ್ನು ಶಂಖ ಪುಷ್ಪವೆಂದು ಕರೆಯುತ್ತಾರೆ. ಇದನ್ನು ಸಹ ಮನೆಯಲ್ಲೇ ಸುಲಭವಾಗಿ ಬೆಳೆಯಬಹುದು, ಇದು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿಗುವುದಿಲ್ಲ. ನೋಡಲು ಬಹಳ ಆಕರ್ಷಕವಾಗಿ ಇರುವ ಈ ಹೂವು ಗಣಪನಿಗೆ ಅಚ್ಚುಮೆಚ್ಚಂತೆ.

ಕೇದಗೆ
ಕೇದಗೆ ಹೂ ಕೂಡ ಗಣಪನಿಗೆ ತುಂಬಾ ಪ್ರಿಯವಾದ ಹೂವಾಗಿದೆ.ಉದ್ದದ ಎಲೆಯ ಮಧ್ಯೆ ಹಳದಿ ಬಣ್ಣದ ಪತ್ರಗಳ ಆಕಾರದ ಹೂವಿನ ಸೌಂದರ್ಯ ಕಣ್ಮನ ಸೆಳೆಯುವಂತದ್ದು. ಅತ್ಯಂತ ವಿರಳ ಮತ್ತು ಸುವಾಸನೆಯುಕ್ತ ಹೂ. ಈ ಹೂವು ಗಣಪನಿಗೆ ಬಹಳ ಇಷ್ಟವಂತೆ.

ಕಣಗಲೆ ಹೂ (ಗೆನ್ನೇರು ಹೂ)
ಈ ಹೂವನ್ನು ಸಾಮಾನ್ಯವಾಗಿ ಎಲ್ಲಾ ದೇವರ ಅರ್ಚನೆಗೆ ಬಳಸುತ್ತಾರೆ.ಕಣಗಲೆ ಹೂವಿನಿಂದ ಪೂಜೆ ಮಾಡಿದರೆ ನಮ್ಮಲ್ಲಿ ಕಾಣಿಸುವ ಭಯ ಭೀತಿಗಳು ನಿವಾರಣೆಯಾಗುತ್ತದೆ. ವಿಘ್ನ ನಿವಾರಕನಿಗೆ ಈ ಹೂವನ್ನು ಅರ್ಪಿಸಿದರೆ ನಮ್ಮಲ್ಲಿರುವ ಭಯವನ್ಉ ತೊಲಗಿಸುತ್ತಾನೆ ಎಂಬ ನಂಬಿಕೆ ಇದೆ.



Click it and Unblock the Notifications