Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ಜನ್ಮಾಷ್ಟಮಿ ವಿಶೇಷ: ತುಳಸಿ ಕಟ್ಟೆಯ ಎದುರು ತುಪ್ಪದ ದೀಪ ಬೆಳಗಿಸಿ

ನಿಮ್ಮ ಮನೆಯಲ್ಲಿ ಆದಾಯ ಸತತವಾಗಿರಬೇಕು ಹಾಗೂ ಸಮೃದ್ಧಿ ಹೆಚ್ಚುತ್ತಿರಬೇಕು ಎಂಬ ಬಯಕೆ ನಿಮಗಿದ್ದರೆ ಈ ಕೃಷ್ಣ ಜನ್ಮಾಷ್ಟಮಿಯಂದು ಹೀಗೆ ಮಾಡಿ. ಈ ಜನ್ಮಾಷ್ಟಮಿಯಂದು (ಇದಕ್ಕೆ ಮೋಹರಾತ್ರಿ ಎಂಬ ಹೆಸರೂ ಇದೆ) ಕೃಷ್ಣನನ್ನು ಪೂಜಿಸಿ ಜೀವನದ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಳ್ಳಿ. ಅಗತ್ಯವಿರುವವರಿಗೆ ಆಹಾರ ದಾನ ಮಾಡಿ ಹಾಗೂ ತುಳಸಿಕಟ್ಟೆಯಲ್ಲಿ ಅಥವಾ ಕೆಳಗೆ ವಿವರಿಸುವ ಸ್ಥಳದಲ್ಲಿ ದೀಪವನ್ನು ಬೆಳಗಿಸಿ. ಬನ್ನಿ, ಹೆಚ್ಚಿನ ಮಾಹಿತಿಯನ್ನು ಪಡೆಯಲು ಮುಂದೆ ಓದಿ...

ಪೂಜಾತಟ್ಟೆಯ ನಾಣ್ಯಗಳು
ಕೃಷ್ಣನನ್ನು ಪೂಜಿಸುವ ಸಮಯದಲ್ಲಿ ಪೂಜಾತಟ್ಟೆಯಲ್ಲಿ ಕೆಲವು ನಾಣ್ಯಗಳನ್ನಿಡಿ. ಪೂಜೆಯ ಬಳಿಕ ಇವನ್ನು ನಿಮ್ಮ ಹಣದ ಪರ್ಸಿನಲ್ಲಿಡಿ. ಆದರೆ ಇವನ್ನು ಖರ್ಚು ಮಾಡಬೇಡಿ. ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ಗಮನಿಸಿ.

ಪೂಜೆಯ ಬಳಿಕ ಶಂಖ...
ಒಂದು ವೇಳೆ ನಿಮ್ಮ ಪರ್ಸಿಗೆ ಆಗಮನವಾಗುವ ಹಣ ಹಾಗೇ ನಿರ್ಗಮಿಸುತ್ತಲೂ ಇದ್ದರೆ ಹೀಗೆ ಮಾಡಿ: ಈ ಜನ್ಮಾಷ್ಟಮಿಯಂದು ನಡುರಾತ್ರಿ ಹನ್ನೆರಡು ಗಂಟೆಗೆ ಕೃಷ್ಣನನ್ನು ಪೂಜಿಸಿ ಹಾಗೂ ಪೂಜಾಗೃಹದಲ್ಲಿ ಹನ್ನೊಂದು ಲಕ್ಷ್ಮಿಶಂಖಗಳನ್ನಿರಿಸಿ. ಪೂಜೆಯ ಬಳಿಕ ಈ ಶಂಖಗಳನ್ನು ನಿಮ್ಮ ಮನೆಯ ತಿಜೋರಿಗಳಲ್ಲಿಡಿ.

ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ
ಈ ಜನ್ಮಾಷ್ಟಮಿಯ ಸಂಜೆ ತುಪ್ಪದ ದೀಪವೊಂದನ್ನು ನಿಮ್ಮ ಮನೆಯ ತುಳಸಿ ಕಟ್ಟೆಯ ಮೇಲೆ ಬೆಳಗಿಸಿ ಕೃಷ್ಣನ ಅನುಗ್ರಹವನ್ನು ಪಡೆಯಿರಿ. ಇದರೊಂದಿಗೆ ತುಳಸಿ ಗಿಡದ ಮೇಲೆ ದಾವಣಿಯೊಂದನ್ನು ಆವರಿಸಿ ಎರಡು ಸುತ್ತು ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ.

ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ
ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ ಹಾಗೂ ಜೊತೆಗೇ ಧನ ಹಾಗೂ ರಕ್ಷಣೆಯನ್ನು ಬಯಸಿ ಲಕ್ಷ್ಮಿದೇವತೆಯನ್ನೂ ಆರಾಧಿಸಿ.

ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ
ಈ ಜನ್ಮಷ್ಟಮಿಯ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ಆಹಾರವಸ್ತುಗಳು, ವಿಶೇಷವಾಗಿ ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ.



Click it and Unblock the Notifications