Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಜನ್ಮಾಷ್ಟಮಿ ವಿಶೇಷ: ತುಳಸಿ ಕಟ್ಟೆಯ ಎದುರು ತುಪ್ಪದ ದೀಪ ಬೆಳಗಿಸಿ

ನಿಮ್ಮ ಮನೆಯಲ್ಲಿ ಆದಾಯ ಸತತವಾಗಿರಬೇಕು ಹಾಗೂ ಸಮೃದ್ಧಿ ಹೆಚ್ಚುತ್ತಿರಬೇಕು ಎಂಬ ಬಯಕೆ ನಿಮಗಿದ್ದರೆ ಈ ಕೃಷ್ಣ ಜನ್ಮಾಷ್ಟಮಿಯಂದು ಹೀಗೆ ಮಾಡಿ. ಈ ಜನ್ಮಾಷ್ಟಮಿಯಂದು (ಇದಕ್ಕೆ ಮೋಹರಾತ್ರಿ ಎಂಬ ಹೆಸರೂ ಇದೆ) ಕೃಷ್ಣನನ್ನು ಪೂಜಿಸಿ ಜೀವನದ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಳ್ಳಿ. ಅಗತ್ಯವಿರುವವರಿಗೆ ಆಹಾರ ದಾನ ಮಾಡಿ ಹಾಗೂ ತುಳಸಿಕಟ್ಟೆಯಲ್ಲಿ ಅಥವಾ ಕೆಳಗೆ ವಿವರಿಸುವ ಸ್ಥಳದಲ್ಲಿ ದೀಪವನ್ನು ಬೆಳಗಿಸಿ. ಬನ್ನಿ, ಹೆಚ್ಚಿನ ಮಾಹಿತಿಯನ್ನು ಪಡೆಯಲು ಮುಂದೆ ಓದಿ...

ಪೂಜಾತಟ್ಟೆಯ ನಾಣ್ಯಗಳು
ಕೃಷ್ಣನನ್ನು ಪೂಜಿಸುವ ಸಮಯದಲ್ಲಿ ಪೂಜಾತಟ್ಟೆಯಲ್ಲಿ ಕೆಲವು ನಾಣ್ಯಗಳನ್ನಿಡಿ. ಪೂಜೆಯ ಬಳಿಕ ಇವನ್ನು ನಿಮ್ಮ ಹಣದ ಪರ್ಸಿನಲ್ಲಿಡಿ. ಆದರೆ ಇವನ್ನು ಖರ್ಚು ಮಾಡಬೇಡಿ. ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ಗಮನಿಸಿ.

ಪೂಜೆಯ ಬಳಿಕ ಶಂಖ...
ಒಂದು ವೇಳೆ ನಿಮ್ಮ ಪರ್ಸಿಗೆ ಆಗಮನವಾಗುವ ಹಣ ಹಾಗೇ ನಿರ್ಗಮಿಸುತ್ತಲೂ ಇದ್ದರೆ ಹೀಗೆ ಮಾಡಿ: ಈ ಜನ್ಮಾಷ್ಟಮಿಯಂದು ನಡುರಾತ್ರಿ ಹನ್ನೆರಡು ಗಂಟೆಗೆ ಕೃಷ್ಣನನ್ನು ಪೂಜಿಸಿ ಹಾಗೂ ಪೂಜಾಗೃಹದಲ್ಲಿ ಹನ್ನೊಂದು ಲಕ್ಷ್ಮಿಶಂಖಗಳನ್ನಿರಿಸಿ. ಪೂಜೆಯ ಬಳಿಕ ಈ ಶಂಖಗಳನ್ನು ನಿಮ್ಮ ಮನೆಯ ತಿಜೋರಿಗಳಲ್ಲಿಡಿ.

ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ
ಈ ಜನ್ಮಾಷ್ಟಮಿಯ ಸಂಜೆ ತುಪ್ಪದ ದೀಪವೊಂದನ್ನು ನಿಮ್ಮ ಮನೆಯ ತುಳಸಿ ಕಟ್ಟೆಯ ಮೇಲೆ ಬೆಳಗಿಸಿ ಕೃಷ್ಣನ ಅನುಗ್ರಹವನ್ನು ಪಡೆಯಿರಿ. ಇದರೊಂದಿಗೆ ತುಳಸಿ ಗಿಡದ ಮೇಲೆ ದಾವಣಿಯೊಂದನ್ನು ಆವರಿಸಿ ಎರಡು ಸುತ್ತು ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ.

ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ
ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ ಹಾಗೂ ಜೊತೆಗೇ ಧನ ಹಾಗೂ ರಕ್ಷಣೆಯನ್ನು ಬಯಸಿ ಲಕ್ಷ್ಮಿದೇವತೆಯನ್ನೂ ಆರಾಧಿಸಿ.

ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ
ಈ ಜನ್ಮಷ್ಟಮಿಯ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ಆಹಾರವಸ್ತುಗಳು, ವಿಶೇಷವಾಗಿ ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ.



Click it and Unblock the Notifications