Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಜನ್ಮಾಷ್ಟಮಿ ವಿಶೇಷ: ತುಳಸಿ ಕಟ್ಟೆಯ ಎದುರು ತುಪ್ಪದ ದೀಪ ಬೆಳಗಿಸಿ

ನಿಮ್ಮ ಮನೆಯಲ್ಲಿ ಆದಾಯ ಸತತವಾಗಿರಬೇಕು ಹಾಗೂ ಸಮೃದ್ಧಿ ಹೆಚ್ಚುತ್ತಿರಬೇಕು ಎಂಬ ಬಯಕೆ ನಿಮಗಿದ್ದರೆ ಈ ಕೃಷ್ಣ ಜನ್ಮಾಷ್ಟಮಿಯಂದು ಹೀಗೆ ಮಾಡಿ. ಈ ಜನ್ಮಾಷ್ಟಮಿಯಂದು (ಇದಕ್ಕೆ ಮೋಹರಾತ್ರಿ ಎಂಬ ಹೆಸರೂ ಇದೆ) ಕೃಷ್ಣನನ್ನು ಪೂಜಿಸಿ ಜೀವನದ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಳ್ಳಿ. ಅಗತ್ಯವಿರುವವರಿಗೆ ಆಹಾರ ದಾನ ಮಾಡಿ ಹಾಗೂ ತುಳಸಿಕಟ್ಟೆಯಲ್ಲಿ ಅಥವಾ ಕೆಳಗೆ ವಿವರಿಸುವ ಸ್ಥಳದಲ್ಲಿ ದೀಪವನ್ನು ಬೆಳಗಿಸಿ. ಬನ್ನಿ, ಹೆಚ್ಚಿನ ಮಾಹಿತಿಯನ್ನು ಪಡೆಯಲು ಮುಂದೆ ಓದಿ...

ಪೂಜಾತಟ್ಟೆಯ ನಾಣ್ಯಗಳು
ಕೃಷ್ಣನನ್ನು ಪೂಜಿಸುವ ಸಮಯದಲ್ಲಿ ಪೂಜಾತಟ್ಟೆಯಲ್ಲಿ ಕೆಲವು ನಾಣ್ಯಗಳನ್ನಿಡಿ. ಪೂಜೆಯ ಬಳಿಕ ಇವನ್ನು ನಿಮ್ಮ ಹಣದ ಪರ್ಸಿನಲ್ಲಿಡಿ. ಆದರೆ ಇವನ್ನು ಖರ್ಚು ಮಾಡಬೇಡಿ. ಮುಂದಿನ ದಿನಗಳಲ್ಲಿ ಬದಲಾವಣೆಯನ್ನು ಗಮನಿಸಿ.

ಪೂಜೆಯ ಬಳಿಕ ಶಂಖ...
ಒಂದು ವೇಳೆ ನಿಮ್ಮ ಪರ್ಸಿಗೆ ಆಗಮನವಾಗುವ ಹಣ ಹಾಗೇ ನಿರ್ಗಮಿಸುತ್ತಲೂ ಇದ್ದರೆ ಹೀಗೆ ಮಾಡಿ: ಈ ಜನ್ಮಾಷ್ಟಮಿಯಂದು ನಡುರಾತ್ರಿ ಹನ್ನೆರಡು ಗಂಟೆಗೆ ಕೃಷ್ಣನನ್ನು ಪೂಜಿಸಿ ಹಾಗೂ ಪೂಜಾಗೃಹದಲ್ಲಿ ಹನ್ನೊಂದು ಲಕ್ಷ್ಮಿಶಂಖಗಳನ್ನಿರಿಸಿ. ಪೂಜೆಯ ಬಳಿಕ ಈ ಶಂಖಗಳನ್ನು ನಿಮ್ಮ ಮನೆಯ ತಿಜೋರಿಗಳಲ್ಲಿಡಿ.

ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ
ಈ ಜನ್ಮಾಷ್ಟಮಿಯ ಸಂಜೆ ತುಪ್ಪದ ದೀಪವೊಂದನ್ನು ನಿಮ್ಮ ಮನೆಯ ತುಳಸಿ ಕಟ್ಟೆಯ ಮೇಲೆ ಬೆಳಗಿಸಿ ಕೃಷ್ಣನ ಅನುಗ್ರಹವನ್ನು ಪಡೆಯಿರಿ. ಇದರೊಂದಿಗೆ ತುಳಸಿ ಗಿಡದ ಮೇಲೆ ದಾವಣಿಯೊಂದನ್ನು ಆವರಿಸಿ ಎರಡು ಸುತ್ತು ಓ ವಾಸುದೇವಾಯೇ ನಮಃ ಮಂತ್ರವನ್ನು ಪಠಿಸಿ.

ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ
ಶಂಖವನ್ನು ಊದಿ ಕೃಷ್ಣನನ್ನು ಪ್ರಾರ್ಥಿಸಿ ಹಾಗೂ ಜೊತೆಗೇ ಧನ ಹಾಗೂ ರಕ್ಷಣೆಯನ್ನು ಬಯಸಿ ಲಕ್ಷ್ಮಿದೇವತೆಯನ್ನೂ ಆರಾಧಿಸಿ.

ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ
ಈ ಜನ್ಮಷ್ಟಮಿಯ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ಆಹಾರವಸ್ತುಗಳು, ವಿಶೇಷವಾಗಿ ಹಣ್ಣುಗಳು ಮತ್ತು ಧಾನ್ಯವನ್ನು ದಾನ ಮಾಡಿ.



Click it and Unblock the Notifications
