Latest Updates
-
ಜುಲೈ 17: ದಂಪತಿಗಳ ನಡುವಿನ ಮನಸ್ತಾಪ ದೂರವಾಗಿಸಲು ಈ ಸರಳ ಟಿಪ್ಸ್ ಪಾಲಿಸಿ! -
ದೆಹಲಿಯ ಸೆಖೆ ಮತ್ತು ಆರ್ದ್ರತೆ: ಕರೆಂಟ್ ಬಿಲ್ ಉಳಿಸಿ, ಮನೆಯನ್ನು ತಂಪಾಗಿರಿಸುವ ಸ್ಮಾರ್ಟ್ ಟಿಪ್ಸ್! -
ಬೆಲೆ ಏರಿಕೆಯ ಬಿಸಿ: ಟೊಮೆಟೊ, ಈರುಳ್ಳಿ ಇಲ್ಲದೆ ರುಚಿಕರ ಮತ್ತು ಪೌಷ್ಟಿಕ ಅಡುಗೆ ಮಾಡುವುದು ಹೇಗೆ? -
IND vs ENG ODI: ಇಂದಿನ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರ ಮತ್ತು ಕನ್ನಡ ಕಾಮೆಂಟರಿ ಮಿಸ್ ಮಾಡ್ಬೇಡಿ! -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಈ 7 ನಿಮಿಷದ ರೂಟೀನ್ ನಿಮ್ಮನ್ನು ರಕ್ಷಿಸುತ್ತದೆ! -
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ!
ಕಾರ್ತಿಕ ಸೋಮವಾರದಲ್ಲಿ ಏಕದಶ ರುದ್ರಾಭಿಷೇಕಂ ಹಾಗೂ ದೀಪ ದಾನದ ಮಹತ್ವವೇನು, ಗೊತ್ತೇ?
ಸೋಮವಾರ ಶಿವನಿಗೆ ಮೀಸಲಾದ ದಿನ, ಅದರಲ್ಲೂ ಕಾರ್ತಿಕ ಸೋಮವಾರವೆಂದರೆ ಇನ್ನೂ ವಿಶೇಷ. ಈ ದಿನ ಶಿವನಿಗೆ ಆರಾಧನೆ ಮಾಡಿದರೆ ವಿಶೇಷ ಫಲ ಸಿಗಲಿದೆ ಎಂಬುವುದು ಶಿವನ ಭಕ್ತರ ಬಲವಾದ ನಂಬಿಕೆ, ಈ ದಿನದಂದು ರುದ್ರ ನಮಕಂ ಹಾಗೂ ರುದ್ರ ಚಮಕಂ ಹೇಳುತ್ತಾ ರುದ್ರಾಭಿಷೇಕ ಮಾಡಿದರೆ ತುಂಬಾನೇ ಒಳ್ಳೆಯದು.
ಹಿಂದೂ ಕ್ಯಾಲೆಂಡರ್ನ ಎಂಟನೇ ತಿಂಗಳಾದ ಕಾರ್ತಿಕ ಮಾಸ ವಿಷ್ಣು ಹಾಗೂ ಶಿವ ಇಬ್ಬರಿಗೂ ಅತ್ಯಂತ ಪ್ರಿಯವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಶಿವ ಹಾಗೂ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಅದರಲ್ಲೂ ಸೋಮವಾರದಂದು ಶಿವನಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುವುದು.
ಪದ್ಮ ಪುರಾಣ ಹಾಗೂ ಸ್ಕಂದ ಪುರಾಣದ ಪ್ರಕಾರ ಕಾರ್ತಿಕ ಮಾಸದಲ್ಲಿ ಪೂಜೆ ಮಾಡುವುದರಿಂದ ಧಾರ್ಮಿಕ, ಆರ್ಥಿಕ, ನೆಮ್ಮದಿಯ ಸಂಸಾರ, ಜ್ಞಾನ ನೀಡುತ್ತಾನೆ.

ಹಾಗಾಗಿ ಕಾರ್ತಿಕ ಸೋಮವಾರದಂದು ಭಕ್ತರು ಈ ರೀತಿ ಮಾಡುತ್ತಾರೆ:

ವ್ರತ ಪಾಲಿಸುವುದು
* ಮುಂಜಾನೆ ಎದ್ದು ಸ್ನಾನ ಮಾಡಿ ಶಿವನ ಧ್ಯಾನ ಮಾಡಬೇಕು.
* ರುದ್ರಾಭಿಷೇಕ ಮಾಡಿ, ಬಿಲ್ವೆ ಪತ್ರಗಳನ್ನು ಶಿವನಿಗೆ ಅರ್ಪಿಸಬೇಕು.
* ನಂತರ ಹಿರಿಯರ ಆಶೀರ್ವಾದ ಪಡೆಯಬೇಕು
* ಬಳಿಕ ಸಂಜೆ ಶಿವನ ದೇವಾಲಯಕ್ಕೆ ಹೋಗಿ ದೀಪ ಹಚ್ಚಬೇಕು.
* ಈ ದಿನ ಬ್ರಾಹ್ಮಣರಿಗೆ ದೀಪಗಳನ್ನು ದಾನ ಮಾಡುವುದು ಒಳ್ಳೆಯದು

ಈ ದಿನ ಏಕದಶ ರುದ್ರ ಅಭಿಷೇಕಂ ಮಾಡಿಸಬೇಕು
ಕಾರ್ತಿಕ ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ಏಕದಶ ರುದ್ರ ಅಭಿಷೇಕಂ ಮಾಡಿಸಿದರೆ ತುಂಬಾನೇ ಒಳ್ಳೆಯದು. ಇದರಿಂದ ಜೀವನದಲ್ಲಿರುವ ಕಷ್ಟಗಳ ನೀಗುವುದು.

ಕಾರ್ತಿಕ ಸೋಮವಾರ ದೀಪ ದಾನ
ಕಾರ್ತಿಕ ಸೋಮವರದಂದು ದೀಪಗಳನ್ನು ಹಚ್ಚಿದರೆ ಅದರಿಂದ ಶಿವನ ಕೃಪೆಗೆ ಪಾತ್ರರಾಗುವಿರಿ. ಈ ದಿನ ದೇವಾಲಯಕ್ಕೆ ಹೋಗಿ ದೀಪ ಹಚ್ಚುವುದರಿಂದ ಮಾಡಿರುವ ಪಾಪಗಳೆಲ್ಲಾ ದೂರಾಗಿ ಮೋಕ್ಷ ಸಿಗುತ್ತದೆ. ಶಿವನಿಗೆ ದೀಪ ಹಚ್ಚುವುದಕ್ಕೆ ಸಮನಾದ ಉಡುಗೊರೆ ಮತ್ತೊಂದಿಲ್ಲ. ಯಾರು ಕಾರ್ತಿಕ ಮಾಸದಲ್ಲಿ ಎಳ್ಳೆಣ್ಣೆಯಲ್ಲಿ ಶ್ರೀಹರಿಗೆ ದೀಪ ಹಚ್ಚುತ್ತಾರೋ ಅವರಿಗೆ ಶಿವ ಆರೋಗ್ಯ, ಐಶ್ವರ್ಯ ಕೊಟ್ಟು ಹರಿಸುತ್ತಾನೆ.

2022ರಲ್ಲಿ ಬರುವ ಕಾರ್ತಿಕ ಸೋಮವಾರಗಳು
ಅಕ್ಟೋಬರ್ 31
ನವೆಂಬರ್ 7
ನವೆಂಬರ್ 14
ನವೆಂಬರ್ 21



Click it and Unblock the Notifications