Latest Updates
-
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ!
ಕಾರ್ತಿಕ ಸೋಮವಾರದಲ್ಲಿ ಏಕದಶ ರುದ್ರಾಭಿಷೇಕಂ ಹಾಗೂ ದೀಪ ದಾನದ ಮಹತ್ವವೇನು, ಗೊತ್ತೇ?
ಸೋಮವಾರ ಶಿವನಿಗೆ ಮೀಸಲಾದ ದಿನ, ಅದರಲ್ಲೂ ಕಾರ್ತಿಕ ಸೋಮವಾರವೆಂದರೆ ಇನ್ನೂ ವಿಶೇಷ. ಈ ದಿನ ಶಿವನಿಗೆ ಆರಾಧನೆ ಮಾಡಿದರೆ ವಿಶೇಷ ಫಲ ಸಿಗಲಿದೆ ಎಂಬುವುದು ಶಿವನ ಭಕ್ತರ ಬಲವಾದ ನಂಬಿಕೆ, ಈ ದಿನದಂದು ರುದ್ರ ನಮಕಂ ಹಾಗೂ ರುದ್ರ ಚಮಕಂ ಹೇಳುತ್ತಾ ರುದ್ರಾಭಿಷೇಕ ಮಾಡಿದರೆ ತುಂಬಾನೇ ಒಳ್ಳೆಯದು.
ಹಿಂದೂ ಕ್ಯಾಲೆಂಡರ್ನ ಎಂಟನೇ ತಿಂಗಳಾದ ಕಾರ್ತಿಕ ಮಾಸ ವಿಷ್ಣು ಹಾಗೂ ಶಿವ ಇಬ್ಬರಿಗೂ ಅತ್ಯಂತ ಪ್ರಿಯವಾದ ತಿಂಗಳಾಗಿದೆ. ಈ ತಿಂಗಳಿನಲ್ಲಿ ಶಿವ ಹಾಗೂ ವಿಷ್ಣುವಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಅದರಲ್ಲೂ ಸೋಮವಾರದಂದು ಶಿವನಿಗೆ ವಿಶೇಷವಾದ ಪೂಜೆಯನ್ನು ಮಾಡಲಾಗುವುದು.
ಪದ್ಮ ಪುರಾಣ ಹಾಗೂ ಸ್ಕಂದ ಪುರಾಣದ ಪ್ರಕಾರ ಕಾರ್ತಿಕ ಮಾಸದಲ್ಲಿ ಪೂಜೆ ಮಾಡುವುದರಿಂದ ಧಾರ್ಮಿಕ, ಆರ್ಥಿಕ, ನೆಮ್ಮದಿಯ ಸಂಸಾರ, ಜ್ಞಾನ ನೀಡುತ್ತಾನೆ.

ಹಾಗಾಗಿ ಕಾರ್ತಿಕ ಸೋಮವಾರದಂದು ಭಕ್ತರು ಈ ರೀತಿ ಮಾಡುತ್ತಾರೆ:

ವ್ರತ ಪಾಲಿಸುವುದು
* ಮುಂಜಾನೆ ಎದ್ದು ಸ್ನಾನ ಮಾಡಿ ಶಿವನ ಧ್ಯಾನ ಮಾಡಬೇಕು.
* ರುದ್ರಾಭಿಷೇಕ ಮಾಡಿ, ಬಿಲ್ವೆ ಪತ್ರಗಳನ್ನು ಶಿವನಿಗೆ ಅರ್ಪಿಸಬೇಕು.
* ನಂತರ ಹಿರಿಯರ ಆಶೀರ್ವಾದ ಪಡೆಯಬೇಕು
* ಬಳಿಕ ಸಂಜೆ ಶಿವನ ದೇವಾಲಯಕ್ಕೆ ಹೋಗಿ ದೀಪ ಹಚ್ಚಬೇಕು.
* ಈ ದಿನ ಬ್ರಾಹ್ಮಣರಿಗೆ ದೀಪಗಳನ್ನು ದಾನ ಮಾಡುವುದು ಒಳ್ಳೆಯದು

ಈ ದಿನ ಏಕದಶ ರುದ್ರ ಅಭಿಷೇಕಂ ಮಾಡಿಸಬೇಕು
ಕಾರ್ತಿಕ ಸೋಮವಾರದಂದು ಶಿವನ ದೇವಾಲಯಕ್ಕೆ ಹೋಗಿ ಏಕದಶ ರುದ್ರ ಅಭಿಷೇಕಂ ಮಾಡಿಸಿದರೆ ತುಂಬಾನೇ ಒಳ್ಳೆಯದು. ಇದರಿಂದ ಜೀವನದಲ್ಲಿರುವ ಕಷ್ಟಗಳ ನೀಗುವುದು.

ಕಾರ್ತಿಕ ಸೋಮವಾರ ದೀಪ ದಾನ
ಕಾರ್ತಿಕ ಸೋಮವರದಂದು ದೀಪಗಳನ್ನು ಹಚ್ಚಿದರೆ ಅದರಿಂದ ಶಿವನ ಕೃಪೆಗೆ ಪಾತ್ರರಾಗುವಿರಿ. ಈ ದಿನ ದೇವಾಲಯಕ್ಕೆ ಹೋಗಿ ದೀಪ ಹಚ್ಚುವುದರಿಂದ ಮಾಡಿರುವ ಪಾಪಗಳೆಲ್ಲಾ ದೂರಾಗಿ ಮೋಕ್ಷ ಸಿಗುತ್ತದೆ. ಶಿವನಿಗೆ ದೀಪ ಹಚ್ಚುವುದಕ್ಕೆ ಸಮನಾದ ಉಡುಗೊರೆ ಮತ್ತೊಂದಿಲ್ಲ. ಯಾರು ಕಾರ್ತಿಕ ಮಾಸದಲ್ಲಿ ಎಳ್ಳೆಣ್ಣೆಯಲ್ಲಿ ಶ್ರೀಹರಿಗೆ ದೀಪ ಹಚ್ಚುತ್ತಾರೋ ಅವರಿಗೆ ಶಿವ ಆರೋಗ್ಯ, ಐಶ್ವರ್ಯ ಕೊಟ್ಟು ಹರಿಸುತ್ತಾನೆ.

2022ರಲ್ಲಿ ಬರುವ ಕಾರ್ತಿಕ ಸೋಮವಾರಗಳು
ಅಕ್ಟೋಬರ್ 31
ನವೆಂಬರ್ 7
ನವೆಂಬರ್ 14
ನವೆಂಬರ್ 21



Click it and Unblock the Notifications