Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ಜ.25ಕ್ಕೆ ಕಾಲಾಷ್ಟಮಿ, ಈ ದಿನ ಮಹತ್ವವೇನು? ಪೂಜಾ ವಿಧಿಗಳೇನು?
ಜನವರಿ 25ಕ್ಕೆ ಕಾಲಾಷ್ಟಮಿ. ಪ್ರತೀ ತಿಂಗಳು ಕೃಷ್ಣ ಪಕ್ಷದ ಅಷ್ಟಮಿಯಂದು ಕಾಲಾಷ್ಟಮಿ ವ್ರತವನ್ನು ಆಚರಿಸಲಾಗುವುದು. ಈ ದಿನ ಕಾಲ ಭೈರವನನ್ನು ಅಂದ್ರೆ ಶಿವನನ್ನು ಪೂಜಿಸಲಾಗುವುದು. ಈ ದಿನ ಉಪವಾಸವಿದ್ದು ಅವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದೆ ಶಿವನ ಸಂತುಷ್ಟನಾಗಿ ನಮ್ಮ ಸಂಕಲ್ಪವನ್ನು ನೆರವೇರಿಸುತ್ತಾನೆ. ಅದರಲ್ಲೂ ಮಾರ್ಗಶಿರ ಮಾಸದಲ್ಲಿ ಬರುವ ಕಾಲಾಷ್ಟಮಿ ತುಂಬಾನೇ ಮಹತ್ವವನ್ನು ಪಡೆದಿದೆ.
ಕಾಲ ಭೈರವನನ್ನು ಬಟುಕ ಭೈರವ ಎಂದು ಕೂಡ ಹೇಳಲಾಗುವುದು. ಬಟುಕ ಬೈರವ ನಾಯಿಯ ಮೇಲೆ ಸವಾರಿ ಮಾಡುತ್ತಾನೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನದಂದು ನಾಯಿಗೆ ಆಹಾರ ನೀಡಿದರೆ ಕಾಲ ಭೈರವನಿಗೆ ಸಂತೋಷವಾಗುವುದು.
ಕಾಲಾಷ್ಟಮಿ ಮಹತ್ವ, ಅಷ್ಟಮಿ ತಿಥಿ ಸಮಯ, ಪೂಜಾ ವಿಧಾನ ತಿಳಿಯಲು ಮುಂದೆ ಓದಿ:

ಅಷ್ಟಮಿ ತಿಥಿ ಸಮಯ
ದಿನಾಂಕ: ಜನವರಿ 25
ತಿಥಿ ಪ್ರಾರಂಭ: ಜನವರಿ 25 ಬೆಳಗ್ಗೆ 7:49ಕ್ಕೆ
ತಿಥಿ ಮುಕ್ತಾಯ: ಜನವರಿ 26 ಬೆಳಗ್ಗೆ 6:25ಕ್ಕೆ

ಕಾಲಾಷ್ಟಮಿ ಮಹತ್ವ:
ಈ ದಿನ ಭಕ್ತರು ಕಾಲ ಭೈರವನ ಜೊತೆಗೆ ಶಿವ ಹಾಗೂ ಪಾರ್ವತಿಯನ್ನು ಪೂಜಿಸಲಾಗುವುದು. ಕಾಲಾಷ್ಟಮಿ ವ್ರತ ಮಾಡುವುದರಿಂದ ಒಳ್ಳೆಯ ಆರೋಗ್ಯ, ಸಂಪತ್ತು, ಸಂತೋಷ, ಯಶಸ್ಸು ಪ್ರಾಪ್ತಿಯಾಗುವುದು. ಈ ದಿನ ಕಾಲ ಭೈರವನನ್ನು ಪೂಜಿಸುವುದರಿಂದ ರಾಹು ಮತ್ತು ಶನಿ ದೋಷ ಇದ್ದರೆ ಅದು ಕೂಡ ನಿವಾರಣೆಯಾಗುವುದು.

ಕಾಲಾಷ್ಟಮಿಯ ಪೂಜೆಯ ಮಹತ್ವ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಶುದ್ಧವಾದ ಬಟ್ಟೆ ತೊಟ್ಟು ಸ್ಪೆಷಲ್ ಪೂಜೆ ಮಾಡಬೇಕು. ಈ ದಿನ ಪಿತೃಗಳಿಗೂ ಪೂಜೆ ಮಾಡಬೇಕು.
* ರಾತ್ರ ಜಾಗರಣೆ ಮಾಡಬೇಕು, ರಾತ್ರಿ ಶಿವನ ಮಂತ್ರಗಳನ್ನು ಹೇಳುತ್ತಾ, ಕಾಲಭೈರವನ ಕತೆಗಳನ್ನು ಓದುತ್ತಾ ಕಾಲ ಕಳೆಯಬೇಕು.
* ಮಧ್ಯರಾತ್ರಿ ಶಂಖ ಊದುವುದು, ಗಂಟೆ ಬಾರಿಸುತ್ತಾ ಮಂತ್ರಗಳನ್ನು ಹೇಳುವುದು ಒಳ್ಳೆಯದು.
* ಕೆಲವರು ಈ ದಿನ ಪೂರ್ತಿ ಉಪವಾಸ ಇರುತ್ತಾರೆ.
* ಈ ದಿನ ನಾಯಿಗೆ ಹಾಲು, ಆಹಾರವನ್ನು ನೀಡಲಾಗುವುದು.

ಕಾಲಾಷ್ಟಮಿ ವ್ರತ ಮಂತ್ರ
"ಓಂ ಭಯಹರಣಂ ಚ ಭೈರವಃ|
ಓಂ ಕಾಲಭೈರವಾಯ ನಮಃ|
ಓಂ ಹ್ರೀಂ ಬಂ ಬಟುಕಾಯ ಆಪದುದ್ಧಾರಣಾಯ ಕುರೂಕುರೂ ಬಟುಕಾಯ ಹ್ರೀಂ|
ಓಂ ಭ್ರಂ ಕಾಲಭೈರವಾಯ ಫಟ್|"



Click it and Unblock the Notifications