Just In
- 37 min ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 1 hr ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 2 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 4 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
Don't Miss
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Movies Srirasthu shubhamasthu: ನಿಧಿ ಹುಡುಕಲು ಹೋದ ಸೊಸೆ ಮಾವನಿಗೆ ಸಿಕ್ಕಿದ್ದು ಬರೀ ಬೂದಿನಾ?
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜ.25ಕ್ಕೆ ಕಾಲಾಷ್ಟಮಿ, ಈ ದಿನ ಮಹತ್ವವೇನು? ಪೂಜಾ ವಿಧಿಗಳೇನು?
ಜನವರಿ 25ಕ್ಕೆ ಕಾಲಾಷ್ಟಮಿ. ಪ್ರತೀ ತಿಂಗಳು ಕೃಷ್ಣ ಪಕ್ಷದ ಅಷ್ಟಮಿಯಂದು ಕಾಲಾಷ್ಟಮಿ ವ್ರತವನ್ನು ಆಚರಿಸಲಾಗುವುದು. ಈ ದಿನ ಕಾಲ ಭೈರವನನ್ನು ಅಂದ್ರೆ ಶಿವನನ್ನು ಪೂಜಿಸಲಾಗುವುದು. ಈ ದಿನ ಉಪವಾಸವಿದ್ದು ಅವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದೆ ಶಿವನ ಸಂತುಷ್ಟನಾಗಿ ನಮ್ಮ ಸಂಕಲ್ಪವನ್ನು ನೆರವೇರಿಸುತ್ತಾನೆ. ಅದರಲ್ಲೂ ಮಾರ್ಗಶಿರ ಮಾಸದಲ್ಲಿ ಬರುವ ಕಾಲಾಷ್ಟಮಿ ತುಂಬಾನೇ ಮಹತ್ವವನ್ನು ಪಡೆದಿದೆ.
ಕಾಲ ಭೈರವನನ್ನು ಬಟುಕ ಭೈರವ ಎಂದು ಕೂಡ ಹೇಳಲಾಗುವುದು. ಬಟುಕ ಬೈರವ ನಾಯಿಯ ಮೇಲೆ ಸವಾರಿ ಮಾಡುತ್ತಾನೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನದಂದು ನಾಯಿಗೆ ಆಹಾರ ನೀಡಿದರೆ ಕಾಲ ಭೈರವನಿಗೆ ಸಂತೋಷವಾಗುವುದು.
ಕಾಲಾಷ್ಟಮಿ ಮಹತ್ವ, ಅಷ್ಟಮಿ ತಿಥಿ ಸಮಯ, ಪೂಜಾ ವಿಧಾನ ತಿಳಿಯಲು ಮುಂದೆ ಓದಿ:
ಅಷ್ಟಮಿ ತಿಥಿ ಸಮಯ
ದಿನಾಂಕ: ಜನವರಿ 25
ತಿಥಿ ಪ್ರಾರಂಭ: ಜನವರಿ 25 ಬೆಳಗ್ಗೆ 7:49ಕ್ಕೆ
ತಿಥಿ ಮುಕ್ತಾಯ: ಜನವರಿ 26 ಬೆಳಗ್ಗೆ 6:25ಕ್ಕೆ
ಕಾಲಾಷ್ಟಮಿ ಮಹತ್ವ:
ಈ ದಿನ ಭಕ್ತರು ಕಾಲ ಭೈರವನ ಜೊತೆಗೆ ಶಿವ ಹಾಗೂ ಪಾರ್ವತಿಯನ್ನು ಪೂಜಿಸಲಾಗುವುದು. ಕಾಲಾಷ್ಟಮಿ ವ್ರತ ಮಾಡುವುದರಿಂದ ಒಳ್ಳೆಯ ಆರೋಗ್ಯ, ಸಂಪತ್ತು, ಸಂತೋಷ, ಯಶಸ್ಸು ಪ್ರಾಪ್ತಿಯಾಗುವುದು. ಈ ದಿನ ಕಾಲ ಭೈರವನನ್ನು ಪೂಜಿಸುವುದರಿಂದ ರಾಹು ಮತ್ತು ಶನಿ ದೋಷ ಇದ್ದರೆ ಅದು ಕೂಡ ನಿವಾರಣೆಯಾಗುವುದು.
ಕಾಲಾಷ್ಟಮಿಯ ಪೂಜೆಯ ಮಹತ್ವ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಶುದ್ಧವಾದ ಬಟ್ಟೆ ತೊಟ್ಟು ಸ್ಪೆಷಲ್ ಪೂಜೆ ಮಾಡಬೇಕು. ಈ ದಿನ ಪಿತೃಗಳಿಗೂ ಪೂಜೆ ಮಾಡಬೇಕು.
* ರಾತ್ರ ಜಾಗರಣೆ ಮಾಡಬೇಕು, ರಾತ್ರಿ ಶಿವನ ಮಂತ್ರಗಳನ್ನು ಹೇಳುತ್ತಾ, ಕಾಲಭೈರವನ ಕತೆಗಳನ್ನು ಓದುತ್ತಾ ಕಾಲ ಕಳೆಯಬೇಕು.
* ಮಧ್ಯರಾತ್ರಿ ಶಂಖ ಊದುವುದು, ಗಂಟೆ ಬಾರಿಸುತ್ತಾ ಮಂತ್ರಗಳನ್ನು ಹೇಳುವುದು ಒಳ್ಳೆಯದು.
* ಕೆಲವರು ಈ ದಿನ ಪೂರ್ತಿ ಉಪವಾಸ ಇರುತ್ತಾರೆ.
* ಈ ದಿನ ನಾಯಿಗೆ ಹಾಲು, ಆಹಾರವನ್ನು ನೀಡಲಾಗುವುದು.
ಕಾಲಾಷ್ಟಮಿ ವ್ರತ ಮಂತ್ರ
"ಓಂ ಭಯಹರಣಂ ಚ ಭೈರವಃ|
ಓಂ ಕಾಲಭೈರವಾಯ ನಮಃ|
ಓಂ ಹ್ರೀಂ ಬಂ ಬಟುಕಾಯ ಆಪದುದ್ಧಾರಣಾಯ ಕುರೂಕುರೂ ಬಟುಕಾಯ ಹ್ರೀಂ|
ಓಂ ಭ್ರಂ ಕಾಲಭೈರವಾಯ ಫಟ್|"