Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ವಿಶ್ವ ಐವಿಎಫ್ ದಿನ: ಪೋಷಕರಾಗುವ ಕನಸಿಗೆ ದಂಪತಿಗಳು ಮಾಡಬೇಕಾದ ಸಿದ್ಧತೆಗಳೇನು? -
ಮುಂಬೈ-ಥಾಣೆ ಮಳೆ ಅಲರ್ಟ್: ನಿಮ್ಮ ಮನೆಗೆ ನೀರು ನುಗ್ಗದಂತೆ ತಡೆಯಲು ಈ 20 ನಿಮಿಷದ ಟಿಪ್ಸ್ ಫಾಲೋ ಮಾಡಿ -
ಮಕ್ಕಳ ಟಿಫಿನ್ ಬಾಕ್ಸ್ನಲ್ಲಿ ಅಡಗಿದೆ ಅಪಾಯ? ಪೋಷಕರು ಮರೆಯದೆ ಪಾಲಿಸಬೇಕಾದ ಸುರಕ್ಷತಾ ಸೂತ್ರಗಳು -
ರಾಮಾಯಣದಲ್ಲಿ ರಾವಣನಾಗಿ ಯಶ್: ಸ್ಯಾನ್ ಡಿಯಾಗೋ ಕಾಮಿಕ್-ಕಾನ್ನಲ್ಲಿ ಅಬ್ಬರಿಸಲು ಸಜ್ಜಾದ ರಾಕಿಂಗ್ ಸ್ಟಾರ್! -
ಅಂತರಾಷ್ಟ್ರೀಯ ಸ್ವಯಂ ಆರೈಕೆ ದಿನ: ಕೆಲಸದ ಒತ್ತಡ ಕಡಿಮೆ ಮಾಡಲು 12 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ!
ಜ.25ಕ್ಕೆ ಕಾಲಾಷ್ಟಮಿ, ಈ ದಿನ ಮಹತ್ವವೇನು? ಪೂಜಾ ವಿಧಿಗಳೇನು?
ಜನವರಿ 25ಕ್ಕೆ ಕಾಲಾಷ್ಟಮಿ. ಪ್ರತೀ ತಿಂಗಳು ಕೃಷ್ಣ ಪಕ್ಷದ ಅಷ್ಟಮಿಯಂದು ಕಾಲಾಷ್ಟಮಿ ವ್ರತವನ್ನು ಆಚರಿಸಲಾಗುವುದು. ಈ ದಿನ ಕಾಲ ಭೈರವನನ್ನು ಅಂದ್ರೆ ಶಿವನನ್ನು ಪೂಜಿಸಲಾಗುವುದು. ಈ ದಿನ ಉಪವಾಸವಿದ್ದು ಅವನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದೆ ಶಿವನ ಸಂತುಷ್ಟನಾಗಿ ನಮ್ಮ ಸಂಕಲ್ಪವನ್ನು ನೆರವೇರಿಸುತ್ತಾನೆ. ಅದರಲ್ಲೂ ಮಾರ್ಗಶಿರ ಮಾಸದಲ್ಲಿ ಬರುವ ಕಾಲಾಷ್ಟಮಿ ತುಂಬಾನೇ ಮಹತ್ವವನ್ನು ಪಡೆದಿದೆ.
ಕಾಲ ಭೈರವನನ್ನು ಬಟುಕ ಭೈರವ ಎಂದು ಕೂಡ ಹೇಳಲಾಗುವುದು. ಬಟುಕ ಬೈರವ ನಾಯಿಯ ಮೇಲೆ ಸವಾರಿ ಮಾಡುತ್ತಾನೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಆದ್ದರಿಂದ ಈ ದಿನದಂದು ನಾಯಿಗೆ ಆಹಾರ ನೀಡಿದರೆ ಕಾಲ ಭೈರವನಿಗೆ ಸಂತೋಷವಾಗುವುದು.
ಕಾಲಾಷ್ಟಮಿ ಮಹತ್ವ, ಅಷ್ಟಮಿ ತಿಥಿ ಸಮಯ, ಪೂಜಾ ವಿಧಾನ ತಿಳಿಯಲು ಮುಂದೆ ಓದಿ:

ಅಷ್ಟಮಿ ತಿಥಿ ಸಮಯ
ದಿನಾಂಕ: ಜನವರಿ 25
ತಿಥಿ ಪ್ರಾರಂಭ: ಜನವರಿ 25 ಬೆಳಗ್ಗೆ 7:49ಕ್ಕೆ
ತಿಥಿ ಮುಕ್ತಾಯ: ಜನವರಿ 26 ಬೆಳಗ್ಗೆ 6:25ಕ್ಕೆ

ಕಾಲಾಷ್ಟಮಿ ಮಹತ್ವ:
ಈ ದಿನ ಭಕ್ತರು ಕಾಲ ಭೈರವನ ಜೊತೆಗೆ ಶಿವ ಹಾಗೂ ಪಾರ್ವತಿಯನ್ನು ಪೂಜಿಸಲಾಗುವುದು. ಕಾಲಾಷ್ಟಮಿ ವ್ರತ ಮಾಡುವುದರಿಂದ ಒಳ್ಳೆಯ ಆರೋಗ್ಯ, ಸಂಪತ್ತು, ಸಂತೋಷ, ಯಶಸ್ಸು ಪ್ರಾಪ್ತಿಯಾಗುವುದು. ಈ ದಿನ ಕಾಲ ಭೈರವನನ್ನು ಪೂಜಿಸುವುದರಿಂದ ರಾಹು ಮತ್ತು ಶನಿ ದೋಷ ಇದ್ದರೆ ಅದು ಕೂಡ ನಿವಾರಣೆಯಾಗುವುದು.

ಕಾಲಾಷ್ಟಮಿಯ ಪೂಜೆಯ ಮಹತ್ವ
* ಈ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ, ಶುದ್ಧವಾದ ಬಟ್ಟೆ ತೊಟ್ಟು ಸ್ಪೆಷಲ್ ಪೂಜೆ ಮಾಡಬೇಕು. ಈ ದಿನ ಪಿತೃಗಳಿಗೂ ಪೂಜೆ ಮಾಡಬೇಕು.
* ರಾತ್ರ ಜಾಗರಣೆ ಮಾಡಬೇಕು, ರಾತ್ರಿ ಶಿವನ ಮಂತ್ರಗಳನ್ನು ಹೇಳುತ್ತಾ, ಕಾಲಭೈರವನ ಕತೆಗಳನ್ನು ಓದುತ್ತಾ ಕಾಲ ಕಳೆಯಬೇಕು.
* ಮಧ್ಯರಾತ್ರಿ ಶಂಖ ಊದುವುದು, ಗಂಟೆ ಬಾರಿಸುತ್ತಾ ಮಂತ್ರಗಳನ್ನು ಹೇಳುವುದು ಒಳ್ಳೆಯದು.
* ಕೆಲವರು ಈ ದಿನ ಪೂರ್ತಿ ಉಪವಾಸ ಇರುತ್ತಾರೆ.
* ಈ ದಿನ ನಾಯಿಗೆ ಹಾಲು, ಆಹಾರವನ್ನು ನೀಡಲಾಗುವುದು.

ಕಾಲಾಷ್ಟಮಿ ವ್ರತ ಮಂತ್ರ
"ಓಂ ಭಯಹರಣಂ ಚ ಭೈರವಃ|
ಓಂ ಕಾಲಭೈರವಾಯ ನಮಃ|
ಓಂ ಹ್ರೀಂ ಬಂ ಬಟುಕಾಯ ಆಪದುದ್ಧಾರಣಾಯ ಕುರೂಕುರೂ ಬಟುಕಾಯ ಹ್ರೀಂ|
ಓಂ ಭ್ರಂ ಕಾಲಭೈರವಾಯ ಫಟ್|"



Click it and Unblock the Notifications