Just In
- 10 min ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 29 min ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- 1 hr ago ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- 1 hr ago ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
Don't Miss
- Movies ಸಮಂತಾಗೆ ತೆಲುಗಿನಲ್ಲಿ ಆಫರ್ ಕಮ್ಮಿ ಆಯ್ತಾ? ಮುಂಬೈನಲ್ಲಿ ಹೊಸ ಮನೆ ಹುಡುಕುತ್ತಿರೋದ್ಯಾಕೆ?
- News ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದ ಡಾ. ಕೆ. ಸುಧಾಕರ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವ್ರತ ಹಿಡಿಯುವ ಮುನ್ನ ಈ ವಸ್ತುಗಳು ಇದೆಯೇ ಎಂದು ಪರಿಶೀಲಿಸಿಕೊಳ್ಳಿ
ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಬಹಳ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಇದನ್ನು ಪ್ರತಿ ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಮೊದಲ ಶುಕ್ರವಾರ ಆಚರಿಸಲಾಗುತ್ತದೆ. ಈ ಪೂಜಾ ವಿಧಾನದಿಂದ ಮನೆಯಲ್ಲಿ ಐಶ್ವರ್ಯ ಹೆಚ್ಚುವುದು ಎನ್ನುವ ಪ್ರತೀತಿ ಇದೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನಲ್ಲಿ ಪ್ರಮುಖ ಹಬ್ಬಗಳಲ್ಲಿ ಇದು ಒಂದು.
ವರಮಹಾಲಕ್ಷ್ಮಿ
ಹಬ್ಬದಲ್ಲಿ
ಸಂಪತ್ತಿನ
ದೇವತೆ
ಲಕ್ಷ್ಮಿಯನ್ನು
ಪೂಜಿಸಲಾಗುತ್ತದೆ.
ಈ
ವ್ರತವನ್ನು
ಆಚರಿಸುವವರಿಗೆ
ಲಕ್ಷ್ಮಿ
ದೇವಿಯುವ
ಆಶೀರ್ವದಿಸಿ
ವರ
ನೀಡುತ್ತಾಳೆ
ಎನ್ನುವ
ನಂಬಿಕೆಯಿದೆ.
ಈ
ಹಬ್ಬ/ವ್ರತವನ್ನು
ಆಚರಿಸಲು
ಯಾವುದೇ
ಜಾತಿಯ
ತಾರತಮ್ಯವಿಲ್ಲ.
ಎಲ್ಲರೂ
ಇದನ್ನು
ಆಚರಿಸಬಹುದು.
ಆಚರಿಸಿದವರೆಲ್ಲಾ
ಲಕ್ಷ್ಮಿಯ
ಕೃಪೆಗೆ
ಪಾತ್ರರಾಗುತ್ತಾರೆ.
ನೀವು
ಈ
ವ್ರತವನ್ನು
ಆಚರಿಸಬೇಕು
ಎನ್ನುವ
ಆಸೆ
ಇದ್ದರೆ
ಮುಂದೆ
ಓದಿ.
ಪೂಜೆಗೆ
ಬೇಕಾದ
ವಸ್ತುಗಳ
ಮಾಹಿತಿಯನ್ನು
ನೀಡಲಾಗಿದೆ.
ಲಕ್ಷ್ಮಿ
ದೇವಿಯ
ಮುಖ
ಈ
ಮಂಗಳಕರ
ವ್ರತ
ಆಚರಣೆಗೆ
ಲಕ್ಷ್ಮಿ
ದೇವಿಯ
ಬೆಳ್ಳಿ
ಮುಖ
ಪ್ರಮುಖವಾದದ್ದು.
ಇದನ್ನು
ಮಾರುಕಟ್ಟೆಯಲ್ಲಿ
ಸುಲಭವಾಗಿ
ಪಡೆಯಬಹುದು.
ಇದಕ್ಕೆ
ಅಮ್ಮನ್
ಮೊಘಮ್
ಎಂತಲೂ
ಕರೆಯುತ್ತಾರೆ.
ಕುಂಕುಮ
ಕುಂಕುಮ
ಅಥವಾ
ಸಿಂಧೂರ
ವರಮಹಾಲಕ್ಷ್ಮಿ
ಪೂಜೆಗೆ
ಬೇಕಾದ
ಇನ್ನೊಂದು
ಪ್ರಮುಖ
ವಸ್ತು.
ವಿವಾಹಿತ
ಮಹಿಳೆಯರಿಂದ
ಪೂಜಿಸಲಾಗುವ
ಈ
ವ್ರತದಲ್ಲಿ
ಕುಂಕುಮಾರ್ಚನೆ
ಮಾಡಿ,
ದೇವಿಗೆ
ಕುಂಕುಮ
ಅಲಂಕಾರ
ಮಾಡುವುದು
ಬಹಳ
ಶ್ರೇಷ್ಠವಾದದ್ದು.
ವರಮಹಾಲಕ್ಷ್ಮಿ ಪೂಜೆಯ ಹಿನ್ನೆಲೆ, ಪೂಜಾ ವಿಧಿ ವಿಧಾನ
ಚಂದನ
ಶ್ರೀಗಂಧದ
ಪುಡಿ
ಮಂಗಳ
ಕರ
ಕಾರ್ಯದಲ್ಲಿ
ಬಹಳ
ಪ್ರಮುಖವಾದದ್ದು.
ದೇವಿಯನ್ನು
ಅಲಂಕರಿಸಲು
ಹಾಗೂ
ಪೂಜಾ
ವಸ್ತುಗಳ
ಶುದ್ಧೀಕರಣಕ್ಕೆ
ಇದು
ಪ್ರಮುಖವಾದದ್ದು.
ನೂತನ
ಬ್ಲೌಸ್
ಪೀಸಸ್
ದೇವಿಯನ್ನು
ಕಲಶದಲ್ಲಿ
ಆಹ್ವಾನಿಸಿ
ಪೂಜಿಸುವುದರಿಂದ
ಕಲಶಕ್ಕೆ
ಹೊಸ
ಬಟ್ಟೆಯಿಂದ
ಅಲಂಕರಿಸಬೇಕಾಗುವುದು.
ಅದಕ್ಕಾಗಿ
ಹೊಸದಾದ
ಬ್ಲೌಸ್
ಪೀಸ್
ಬಳಸಲಾಗುವುದು.
ಇದು
ಕೆಂಪು
ಅಥವಾ
ಹಸಿರು
ಬಣ್ಣದಲ್ಲಿರಬೇಕು.
ಕಲಶದಲ್ಲಿ
ಅಕ್ಕಿ,
ನೀರು,
ಅರಿಶಿನ
ಪುಡಿ,
ನಾಣ್ಯ,
ಅಡಿಕೆ
ಮತ್ತು
ಬಿಲ್ವ
ಪತ್ರೆಯನ್ನು
ಹಾಕಲಾಗುವುದು.
ತೆಂಗಿನ
ಕಾಯಿ
ಪೂಜೆಗೆ
ಬಳಸುವ
ಪವಿತ್ರ
ಹಾಗೂ
ಅಗತ್ಯ
ವಸ್ತು
ತೆಂಗಿನಕಾಯಿ.
ಮಂಗಳಕರ
ವಸ್ತುವಾದ
ಇದನ್ನು
ಕಲಶವಿಡಲು
ಬಳಸುತ್ತಾರೆ.
ಇದರ
ಅಲಂಕಾರಗೊಳಿಸಿಯೇ
ದೇವಿಯನ್ನು
ಪೂಜಿಸಲಾಗುವುದು.
ವರಮಹಾಲಕ್ಷ್ಮಿ ಹಬ್ಬದ ವಿಶೇಷ- ಭಕ್ತೆ ಚಾರುಮತಿಯ ಕಥೆ
ನೈವೇದ್ಯ
ಹಬ್ಬ,
ವ್ರತ
ಹಾಗೂ
ಮಂಗಳ
ಕಾರ್ಯದಲ್ಲಿ
ದೇವರಿಗೆ
ನೈವೇದ್ಯವನ್ನು
ಮಾಡಲಾಗುತ್ತದೆ.
ನೈವೇದ್ಯಕ್ಕೆ
ಹಣ್ಣು,
ಒಣ
ಹಣ್ಣು,
ಮನೆಯಲ್ಲಿ
ಮಾಡಿದ
ಸಿಹಿ
ತಿಂಡಿಗಳನ್ನು
ಇಡಬೇಕು.
ನೈವೇದ್ಯಕ್ಕೆ
ಸೂಕ್ತವಾದ
ತಿಂಡಿಗಳೆಂದರೆ
ಪಾಯಸ,
ಹೋಳಿಗೆ,
ಕಡಬು
ಸೇರಿದಂತೆ
ಇನ್ನಿತರ
ಸಿಹಿ
ತಿಂಡಿಗಳು.
ಮಾವಿನ
ಎಲೆ
ಪೂಜೆಯ
ಜಾಗ
ಹಾಗೂ
ಮನೆಯನ್ನು
ಅಲಂಕರಿಸಲು
ಮಾವಿನ
ಎಲೆ
ಬಹಳ
ಶ್ರೇಷ್ಠವಾದದ್ದು.
ಲಕ್ಷ್ಮಿಯನ್ನು
ಸ್ವಾಗತಿಸಲು
ಮಾವಿನ
ಎಲೆಯ
ತೋರಣವನ್ನು
ಕಟ್ಟಲಾಗುವುದು.
ನಾನ್ಬು
ಸಾರಡು/ಹಳದಿ
ದಾರ
ಪೂಜೆಗೆ
ಬೇಕಾದ
ಪವಿತ್ರ
ವಸ್ತುಗಳಲ್ಲಿ
ಇದೂ
ಒಂದು.
ಹೂಗಳ
ಜೋಡಣೆಗೆ,
ಕಂಕಣ
ಕಟ್ಟಿಕೊಳ್ಳಲು
ಈ
ದಾರವನ್ನು
ಬಳಸುತ್ತಾರೆ.
ಇದನ್ನು
ಲಕ್ಷ್ಮಿ
ದೇವಿಯ
ಪಾದದ
ಮೇಲೂ
ಹಾಕಲಾಗುತ್ತದೆ.