Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ವ್ರತ ಹಿಡಿಯುವ ಮುನ್ನ ಈ ವಸ್ತುಗಳು ಇದೆಯೇ ಎಂದು ಪರಿಶೀಲಿಸಿಕೊಳ್ಳಿ
ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಬಹಳ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಇದನ್ನು ಪ್ರತಿ ಶ್ರಾವಣ ಮಾಸದ ಹುಣ್ಣಿಮೆಯ ನಂತರದ ಮೊದಲ ಶುಕ್ರವಾರ ಆಚರಿಸಲಾಗುತ್ತದೆ. ಈ ಪೂಜಾ ವಿಧಾನದಿಂದ ಮನೆಯಲ್ಲಿ ಐಶ್ವರ್ಯ ಹೆಚ್ಚುವುದು ಎನ್ನುವ ಪ್ರತೀತಿ ಇದೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನಲ್ಲಿ ಪ್ರಮುಖ ಹಬ್ಬಗಳಲ್ಲಿ ಇದು ಒಂದು.
ವರಮಹಾಲಕ್ಷ್ಮಿ ಹಬ್ಬದಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಈ ವ್ರತವನ್ನು ಆಚರಿಸುವವರಿಗೆ ಲಕ್ಷ್ಮಿ ದೇವಿಯುವ ಆಶೀರ್ವದಿಸಿ ವರ ನೀಡುತ್ತಾಳೆ ಎನ್ನುವ ನಂಬಿಕೆಯಿದೆ. ಈ ಹಬ್ಬ/ವ್ರತವನ್ನು ಆಚರಿಸಲು ಯಾವುದೇ ಜಾತಿಯ ತಾರತಮ್ಯವಿಲ್ಲ. ಎಲ್ಲರೂ ಇದನ್ನು ಆಚರಿಸಬಹುದು. ಆಚರಿಸಿದವರೆಲ್ಲಾ ಲಕ್ಷ್ಮಿಯ ಕೃಪೆಗೆ ಪಾತ್ರರಾಗುತ್ತಾರೆ. ನೀವು ಈ ವ್ರತವನ್ನು ಆಚರಿಸಬೇಕು ಎನ್ನುವ ಆಸೆ ಇದ್ದರೆ ಮುಂದೆ ಓದಿ. ಪೂಜೆಗೆ ಬೇಕಾದ ವಸ್ತುಗಳ ಮಾಹಿತಿಯನ್ನು ನೀಡಲಾಗಿದೆ.

ಲಕ್ಷ್ಮಿ ದೇವಿಯ ಮುಖ
ಈ ಮಂಗಳಕರ ವ್ರತ ಆಚರಣೆಗೆ ಲಕ್ಷ್ಮಿ ದೇವಿಯ ಬೆಳ್ಳಿ ಮುಖ ಪ್ರಮುಖವಾದದ್ದು. ಇದನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ ಪಡೆಯಬಹುದು. ಇದಕ್ಕೆ ಅಮ್ಮನ್ ಮೊಘಮ್ ಎಂತಲೂ ಕರೆಯುತ್ತಾರೆ.
ಕುಂಕುಮ
ಕುಂಕುಮ ಅಥವಾ ಸಿಂಧೂರ ವರಮಹಾಲಕ್ಷ್ಮಿ ಪೂಜೆಗೆ ಬೇಕಾದ ಇನ್ನೊಂದು ಪ್ರಮುಖ ವಸ್ತು. ವಿವಾಹಿತ ಮಹಿಳೆಯರಿಂದ ಪೂಜಿಸಲಾಗುವ ಈ ವ್ರತದಲ್ಲಿ ಕುಂಕುಮಾರ್ಚನೆ ಮಾಡಿ, ದೇವಿಗೆ ಕುಂಕುಮ ಅಲಂಕಾರ ಮಾಡುವುದು ಬಹಳ ಶ್ರೇಷ್ಠವಾದದ್ದು.
ಚಂದನ
ಶ್ರೀಗಂಧದ ಪುಡಿ ಮಂಗಳ ಕರ ಕಾರ್ಯದಲ್ಲಿ ಬಹಳ ಪ್ರಮುಖವಾದದ್ದು. ದೇವಿಯನ್ನು ಅಲಂಕರಿಸಲು ಹಾಗೂ ಪೂಜಾ ವಸ್ತುಗಳ ಶುದ್ಧೀಕರಣಕ್ಕೆ ಇದು ಪ್ರಮುಖವಾದದ್ದು.
ನೂತನ ಬ್ಲೌಸ್ ಪೀಸಸ್
ದೇವಿಯನ್ನು ಕಲಶದಲ್ಲಿ ಆಹ್ವಾನಿಸಿ ಪೂಜಿಸುವುದರಿಂದ ಕಲಶಕ್ಕೆ ಹೊಸ ಬಟ್ಟೆಯಿಂದ ಅಲಂಕರಿಸಬೇಕಾಗುವುದು. ಅದಕ್ಕಾಗಿ ಹೊಸದಾದ ಬ್ಲೌಸ್ ಪೀಸ್ ಬಳಸಲಾಗುವುದು. ಇದು ಕೆಂಪು ಅಥವಾ ಹಸಿರು ಬಣ್ಣದಲ್ಲಿರಬೇಕು. ಕಲಶದಲ್ಲಿ ಅಕ್ಕಿ, ನೀರು, ಅರಿಶಿನ ಪುಡಿ, ನಾಣ್ಯ, ಅಡಿಕೆ ಮತ್ತು ಬಿಲ್ವ ಪತ್ರೆಯನ್ನು ಹಾಕಲಾಗುವುದು.
ತೆಂಗಿನ ಕಾಯಿ
ಪೂಜೆಗೆ ಬಳಸುವ ಪವಿತ್ರ ಹಾಗೂ ಅಗತ್ಯ ವಸ್ತು ತೆಂಗಿನಕಾಯಿ. ಮಂಗಳಕರ ವಸ್ತುವಾದ ಇದನ್ನು ಕಲಶವಿಡಲು ಬಳಸುತ್ತಾರೆ. ಇದರ ಅಲಂಕಾರಗೊಳಿಸಿಯೇ ದೇವಿಯನ್ನು ಪೂಜಿಸಲಾಗುವುದು.
ನೈವೇದ್ಯ
ಹಬ್ಬ, ವ್ರತ ಹಾಗೂ ಮಂಗಳ ಕಾರ್ಯದಲ್ಲಿ ದೇವರಿಗೆ ನೈವೇದ್ಯವನ್ನು ಮಾಡಲಾಗುತ್ತದೆ. ನೈವೇದ್ಯಕ್ಕೆ ಹಣ್ಣು, ಒಣ ಹಣ್ಣು, ಮನೆಯಲ್ಲಿ ಮಾಡಿದ ಸಿಹಿ ತಿಂಡಿಗಳನ್ನು ಇಡಬೇಕು. ನೈವೇದ್ಯಕ್ಕೆ ಸೂಕ್ತವಾದ ತಿಂಡಿಗಳೆಂದರೆ ಪಾಯಸ, ಹೋಳಿಗೆ, ಕಡಬು ಸೇರಿದಂತೆ ಇನ್ನಿತರ ಸಿಹಿ ತಿಂಡಿಗಳು.
ಮಾವಿನ ಎಲೆ
ಪೂಜೆಯ ಜಾಗ ಹಾಗೂ ಮನೆಯನ್ನು ಅಲಂಕರಿಸಲು ಮಾವಿನ ಎಲೆ ಬಹಳ ಶ್ರೇಷ್ಠವಾದದ್ದು. ಲಕ್ಷ್ಮಿಯನ್ನು ಸ್ವಾಗತಿಸಲು ಮಾವಿನ ಎಲೆಯ ತೋರಣವನ್ನು ಕಟ್ಟಲಾಗುವುದು.
ನಾನ್ಬು ಸಾರಡು/ಹಳದಿ ದಾರ
ಪೂಜೆಗೆ ಬೇಕಾದ ಪವಿತ್ರ ವಸ್ತುಗಳಲ್ಲಿ ಇದೂ ಒಂದು. ಹೂಗಳ ಜೋಡಣೆಗೆ, ಕಂಕಣ ಕಟ್ಟಿಕೊಳ್ಳಲು ಈ ದಾರವನ್ನು ಬಳಸುತ್ತಾರೆ. ಇದನ್ನು ಲಕ್ಷ್ಮಿ ದೇವಿಯ ಪಾದದ ಮೇಲೂ ಹಾಕಲಾಗುತ್ತದೆ.



Click it and Unblock the Notifications


