Latest Updates
-
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್!
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಜಗತ್ತಿಗೆ ಜ್ಞಾನದ ಬೆಳಕನ್ನು ಪಸರಿಸಿದ ಗುರುವನ್ನು ಸ್ಮರಿಸುವ ದಿನವಾಗಿ ಗುರು ಪೂರ್ಣಿಮೆ ಮಹತ್ವವನ್ನು ಪಡೆದಿದೆ. ಹಿಂದೂ ಧರ್ಮದಲ್ಲಿ ಗುರುವು ಉದಯಿಸುವ ಸೂರ್ಯನಿದ್ದಂತೆ. ಹೇಗೆ ಸಾಮಾನ್ಯ ಜನರು, ನಕ್ಷತ್ರ ಮತ್ತು ಚಂದ್ರನು ಸೂರ್ಯನಿಂದ ಬೆಳಕನ್ನು ಹೀರಿ ಅದರಿಂದ ಬರುವ ಉತ್ತಮತೆಯನ್ನು ದೈನಂದಿನ ಜೀವನದಲ್ಲಿ ಬಳಸಿಕೊಂಡು ಮುಂದುರವರಿಯುತ್ತಾರೋ ಅಂತೆಯೇ ಗುರುವಿನ ಮಾರ್ಗದರ್ಶನ ಅವರು ಪಡೆದುಕೊಂಡ ಜ್ಞಾನ ಭಂಡಾರವನ್ನು ನಮ್ಮ ಜೀವನದಲ್ಲಿ ಬಳಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದಾಗಿದೆ. ಈ ದಿನಂದು ಮಹಾನ್ ಗುರು ವೇದವ್ಯಾಸರನ್ನು ಪೂಜಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ ಹೆಸರನ್ನು ಗಳಸಿಕೊಂಡಿರುವ ವೇದವ್ಯಾಸರು ವೇದಗಳ ಜನಕ ಎಂದೆನಿಕೊಂಡಿದ್ದಾರೆ. 18 ಪುರಾಣಗಳ ಕರ್ತೃ ಇವರಾಗಿದ್ದು, ಮಹಾಭಾರತದಂತಹ ಪುರಾಣ ಗ್ರಂಥದ ನಿರ್ಮಾತೃ ಎಂದೆನಿಸಿಕೊಂಡಿದ್ದಾರೆ. ಗುರುಗಳಿಗೆ ಗುರು, ಮಹಾನ್ ಗುರು ಎಂಬುದಾಗಿ ಬಿರುದಾಂಕಿತರಾದ ವೇದವ್ಯಾಸರು ದತ್ತಾತ್ರೇಯನ ಗುರುಗಳು ಎಂದೆನಿಸಿಕೊಂಡಿದ್ದಾರೆ.
ಗುರುಪೂರ್ಣಿಮೆಯ ಮಹತ್ವವವು ಗುರುಗಳನ್ನು ಆಧರಿಸಿದ್ದು ನಮ್ಮ ಜೀವನದಲ್ಲಿ ಗುರುಗಳ ಪಾತ್ರವೇನು ಎಂಬುದನ್ನು ಅರಿಯುವುದರ ಮೂಲಕ ಗುರುಪೂರ್ಣಿಮಯ ಸಾರವನ್ನು ತಿಳಿದುಕೊಳ್ಳಬೇಕಾಗುತ್ತದೆ. ಗುರುವನ್ನು ದೇವರಿಗೆ ಸಮಾನ ಎಂಬುದಾಗಿ ಪರಿಗಣಿಸಲಾಗಿದ್ದು ತಂದೆ ತಾಯಿಯ ನಂತರದ ಸ್ಥಾನವೇ ಗುರುವಿಗಿದೆ. ತ್ರಿಮೂರ್ತಿಗಳ ಅಪರಾವತಾರ ಎಂಬದಾಗಿ ಕೂಡ ಗುರುವನ್ನು ಬಣ್ಣಿಸಲಾಗಿದೆ. ಇಂದಿನ ಲೇಖನದಲ್ಲಿ ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸುತ್ತಿದ್ದು ವಿಶೇಷತೆಯನ್ನು ಅರಿತುಕೊಳ್ಳಿ. ಗುರುಪೂರ್ಣಿಮೆ ವಿಶೇಷ- ಜ್ಞಾನ ನೀಡಿದ ಗುರುವನ್ನು ಗೌರವಿಸೋಣ
ಗುರುಪೂರ್ಣಿಯಮೆಯ ಸಮಯ
ಗುರು ಪೂರ್ಣಿಮೆಯ ಮಹತ್ವವನ್ನು ಅರಿತುಕೊಳ್ಳಲು, ನೀವು ಸಮಯದ ಮೇಲೆ ಏಕಾಗ್ರತೆಯನ್ನು ಹೊಂದಿರಬೇಕು. ಆಷಾಢ ಮಾಸದ ಪೂರ್ಣ ಚಂದ್ರ ದಿನ (ಜುಲೈ-ಆಗಸ್ಟ್) ದಂದು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಮಹರ್ಷಿ ವೇದವ್ಯಾಸರಿಗೆ ಈ ದಿನವನ್ನು ಅರ್ಪಿಸಲಾಗುತ್ತದೆ.
ರೈತರ ಮಹತ್ವ
ಗುರುಪೂರ್ಣಿಮೆಯ ಮಹತ್ವ ಸಂಪೂರ್ಣವಾಗಿ ಆಧಾತ್ಮಿಕವಾಗಿರದೇ ಇದರ ಹಿಂದೆ ಕೆಲವೊಂದು ವೈಜ್ಞಾನಿಕ ಕಾರಣಗಳೂ ಅಡಗಿದೆ. ರೈತರು ಹೆಚ್ಚು ನಿರೀಕ್ಷೆಯಿಂದ ಕಾಯುತ್ತಿರುವ ಮಳೆಯ ಆಗಮನವನ್ನು ಇದು ಸೂಚಿಸುತ್ತಿದ್ದು ತಂಗಾಳಿಯು ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂಬ ನಂಬಿಕೆ ಇದೆ. ಕೃಷಿ ಭೂಮಿ ಫಲವತ್ತಾಗಿರುತ್ತದೆ ಎಂಬ ನಂಬಿಕೆಯೂ ಇದೆ.
ಆಧ್ಯಾತ್ಮಿಕ ಸಾಧನೆ
ಗುರು ಪೂರ್ಣಿಮೆಯ ಮಹತ್ವ ಇದರಲ್ಲಿ ಅಡಗಿದೆ. ನಿಮ್ಮ ಆಧ್ಯಾತ್ಮಿಕ ಪಾಠಗಳನ್ನು ಆರಂಭಿಸಲು ಇದು ಸೂಕ್ತ ಸಮಯವಾಗಿದೆ. ಆಧ್ಯಾತ್ಮಿಕ ಗುರುಗಳ ಪ್ರಕಾರ, ಸಾಧನೆಯ ಮೂಲಕ ನಿಮ್ಮ ಕಲಿಕೆಯನ್ನು ಪ್ರಾರ್ಥನೆಯ ಮೂಲಕ ವರ್ಗಾಯಿಸಬಹುದಾಗಿದೆ ಮತ್ತು ಎಲ್ಲಾ ಜೀವಿಗಳಿಗೂ ಪ್ರೀತಿಯನ್ನು ನೀಡುವ ಮಹತ್ವವನ್ನು ಇದು ಹೊಂದಿದೆ.
ಚಾತುರ್ಮಾಸದ ಮಹತ್ವ
ಗುರುಪೂರ್ಣಿಮೆಯ ಇನ್ನೊಂದು ಅರ್ಥ ಮತ್ತು ಮಹತ್ವ ಇಲ್ಲಿದೆ. ಈ ದಿನದಂದೇ ನಾಲ್ಕು ತಿಂಗಳುಗಳ ಪವಿತ್ರ ಸಮಯ ಆರಂಭವಾಗುತ್ತದೆ. ಬ್ರಹ್ಮ ಸೂತ್ರವನ್ನು ಅಭ್ಯಸಿಸಲು ವೇದ ವ್ಯಾಸರು ತಿಳಿಸಿರುವ ವೇದ ಸೂತ್ರಗಳನ್ನು ಅರಿತುಕೊಳ್ಳಲು, ವೇದ ಅಧ್ಯಯನಗಳಲ್ಲಿ ತೊಡಗಲು ಈ ಮಾಸ ಸೂಕ್ತವಾದುದು ಎಂಬ ನಂಬಿಕೆ ಇದೆ.
ಪ್ರಕಾಶಿಸುವ ದೀಪಗಳು
ಈ ಮಂಗಳಕರ ದಿನವನ್ನು ಆಚರಿಸುವುದಕ್ಕಾಗಿ, ದಿನದಂದು ಹಿಂದೂಗಳು ತಮ್ಮ ಮನೆಯಲ್ಲಿ ದೀಪಗಳನ್ನು ಉರಿಸುತ್ತಾರೆ. ಈ ಪ್ರಕಾಶಮಾನವಾದ ದೀಪಗಳು ತಮ್ಮ ಗುರುಗಳಿಂದ ಪಡೆದುಕೊಂಡ ಜ್ಞಾನದ ಸಂಕೇತವಾಗಿದೆ. ಅವರಿಗೆ ಗೌರವವನ್ನು ಸಲ್ಲಿಸುವುದಕ್ಕಾಗಿ ಮನೆಗಳಲ್ಲಿ ದೀಪವನ್ನು ಹಚ್ಚಿಡುತ್ತಾರೆ.
ಗುರು ಗ್ರಹದ ಆರಾಧನೆ



Click it and Unblock the Notifications














