Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಧನ, ವೈಭವ ಪ್ರಾಪ್ತಿಗಾಗಿ ಮನೆಯಲ್ಲಿಯೇ ಚೈತ್ರ ಪೌರ್ಣಿಮೆಯನ್ನು ಆಚರಿಸುವುದು ಹೇಗೆ?
ಹಿಂದೂ ಧರ್ಮದಲ್ಲಿ ಪೂರ್ಣಿಮೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಪೂರ್ಣಿಮೆ ದಿನದಂದು ಶಿವ ಮತ್ತು ವಿಷ್ಣುವನ್ನು ಉಪವಾಸವಿದ್ದು ಆರಾಧನೆ ಮಾಡಲಾಗುವುದು. ಚೈತ್ರ ಪೂರ್ಣಿಮೆಯಂದು ವಿಷ್ಣುವನ್ನು ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.
ಹಿಂದೂ ವರ್ಷದ ಮೊದಲು ಬರುವ ಹುಣ್ಣಿಮೆಯೇ ಚೈತ್ರ ಪೂರ್ಣಿಮೆ. ಇದೇ ದಿನ ಹನುಮಾನ್ ಜಯಂತಿಯನ್ನು ಆಚರಿಸಲಾಗುವುದು. ಅಲ್ಲದೆ ಈ ದಿನ ಸತ್ಯನಾರಾಯಣನ ಉಪವಾಸ ಮಾಡಲಾಗುವುದು. ಚೈತ್ರ ಪೂರ್ಣಿಮೆ ಹಾಗೂ ಚಿತ್ರ ಪೂರ್ಣಿಮೆ ಬೇರೆಯಾಗಿದ್ದು, ಬೇರೆ-ಬೇರೆ ತಿಂಗಳಿನಲ್ಲಿ ಬರುವುದು. 2021ರಲ್ಲಿ ಏಪ್ರಿಲ್ 27ರಂದು ಇರುವುದು ಚೈತ್ರ ಪೂರ್ಣಿಮೆಯಾಗಿದೆ.
ಈ ದಿನ ಉಪವಾಸ ವ್ರತ ಮಾಡಿ ಸತ್ಯನಾರಾಯಣ ಆರಾಧನೆ ಮಾಡಿದರೆ ಧನ, ವೈಭವ ಪ್ರಾಪ್ತಿಯಾಗುವುದು ಎಂದು ಹೇಳಲಾಗುವುದು. ಮನೆಯಲ್ಲಿ ಪೌರ್ಣಿಮೆ ವ್ರತ ಮಾಡುವುದು ಹೇಗೆ, ಈ ದಿನ ಮಾಡುವ ದಾನದ ಮಹತ್ವವೇನು ಎಂದು ಹೇಳಲಾಗಿದೆ ನೋಡಿ:

ಮನೆಯಲ್ಲಿಯೇ ಚೈತ್ರ ಪೌರ್ಣಿಮೆ ವ್ರತ ಮಾಡುವುದು ಹೇಗೆ?
ಚೈತ್ರ ಪೂರ್ಣಿಮೆಯೆಂದು ಸಾಮಾನ್ಯವಾಗಿ ಪುಣ್ಯ ನದಿಯಲ್ಲಿ ಹೋಗಿ ಸ್ನಾನ ಮಾಡಿ ವ್ರತ ನಿಯಮಗಳನ್ನು ಪಾಲಿಸಲಾಗುವುದು. ಆದರೆ ಈ ಬಾರಿ ಕೊರೊನಾ ಕಾರಣ ನದಿಗೆ ಹೋಗಿ ಸ್ನಾನ ಮಾಡಬೇಡಿ, ಮನೆಯಲ್ಲಿ ನೀವು ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾ ಜಲವನ್ನು ಹಾಕಿ ಸ್ನಾನ ಮಾಡಿ. ನಂತರ ಉಪವಾಸವಿದ್ದು ವಿಷ್ಣುವನ್ನು ಹಾಗೂ ಆಂಜನೇಯನನ್ನು ಆರಾಧಿಸಿ.
ವಿಷ್ಣು ಮಂತ್ರ ಹಾಗೂ ಹನುಮಾನ್ ಚಾಲೀಸಾ ಪಠಿಸಿ

ವಿಷ್ಣು ಮಂತ್ರ
ಓಂ ನಮೋ ಭಗವತೇ ವಾಸುದೇವಾಯ ನಮಃ
ಓಂ ಶ್ರೀಮ್ ಕೃಷ್ಣಾಯ ಶ್ರೀಮ್ ಶ್ರೀಮ್ ಶ್ರೀಮ್ ಗೋವಿಂದಾಯ ಗೋಪಾಲಯ ಗೋಲೋಕಾ ಸುಂದರಾಯ ಸತ್ಯಾಯ ಪರಮಾತ್ಮನೇ, ಪಾರಾಯ ವೈಖನಸಾಯ ವೈರಾಜಮೂರ್ತಯೇ ಮೇಶಾತ್ಮಾನ್ ಶ್ರೀಮ್ ನರಸಿಂಹವಾಸ ನಮಃ

ಹನುಮಾನ್ ಚಾಲೀಸ ಪಠಿಸಿ.
ಹನುಮಾನ್ ಚಾಲೀಸಾ ಪಠಣೆ ಮಾಡುವ ಮುನ್ನ ಹನುಮಂತ್ರನ ಫೋಟದ ಮುಂದೆ ಕಮಂಡಲದಲ್ಲಿ ನೀರನನ್ನು ಇಡಿ, ಪಠಣೆ ಮುಗಿದ ಬಳಿಕ ಆ ನೀರನ್ನು ಪ್ರಸಾದದ ರೂಪದಲ್ಲಿ ಸೇವಿಸಬೇಕು. ಅಲ್ಲದೆ ಮನೆಯಲ್ಲಿ ಈ ಆ ನೀರನ್ನು ಸಿಂಪಡಿಸಿ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ಚಂದ್ರನನ್ನು ಪೂಜಿಸಿ
ಚೈತ್ರ ಪೌರ್ಣಿಮೆಯೆಂದು ಚಂದ್ರನನ್ನು ಪೂಜಿಸುವುದರಿಂದ ಚಂದ್ರದೋಷವಿದ್ದರೆ ಅದು ದೂರವಾಗುವುದು. ನಂತರ ಸತ್ಯನಾರಾಯಣ ಕತೆ ಓದಿ.

ಚೈತ್ರ ಪೌರ್ಣಿಮೆಯಂದು ಮಾಡುವ ದಾನ
ಧಾರ್ಮಿಕ ನಂಬಿಕೆಗಳ ಪ್ರಕಾರ ಚೈತ್ರ ಪೌರ್ಣಿಮೆಯಂದು ಮಾಡುವ ದಾನಕ್ಕೆ ದುಪ್ಪಟ್ಟು ಫಲ ಸಿಗುವುದು. ಈ ದಿನ ನಿರ್ಗತಿಕರಿಗೆ ಹಣ ನೀಡಿ. ಈ ದಿನ ಬೆಳಗ್ಗೆ ಗಾಯತ್ರಿ ಮಂತ್ರದೊಂದಿಗೆ ಸೂರ್ಯನಿಗೆ ಆರ್ಘ್ಯ ನೀಡಿ. ಬಟ್ಟೆ, ಅಕ್ಕಿ, ತರಕಾರಿಗಳನ್ನು ದಾನ ಮಾಡಿ.



Click it and Unblock the Notifications