Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಧನ, ವೈಭವ ಪ್ರಾಪ್ತಿಗಾಗಿ ಮನೆಯಲ್ಲಿಯೇ ಚೈತ್ರ ಪೌರ್ಣಿಮೆಯನ್ನು ಆಚರಿಸುವುದು ಹೇಗೆ?
ಹಿಂದೂ ಧರ್ಮದಲ್ಲಿ ಪೂರ್ಣಿಮೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಪೂರ್ಣಿಮೆ ದಿನದಂದು ಶಿವ ಮತ್ತು ವಿಷ್ಣುವನ್ನು ಉಪವಾಸವಿದ್ದು ಆರಾಧನೆ ಮಾಡಲಾಗುವುದು. ಚೈತ್ರ ಪೂರ್ಣಿಮೆಯಂದು ವಿಷ್ಣುವನ್ನು ಪೂಜಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.
ಹಿಂದೂ ವರ್ಷದ ಮೊದಲು ಬರುವ ಹುಣ್ಣಿಮೆಯೇ ಚೈತ್ರ ಪೂರ್ಣಿಮೆ. ಇದೇ ದಿನ ಹನುಮಾನ್ ಜಯಂತಿಯನ್ನು ಆಚರಿಸಲಾಗುವುದು. ಅಲ್ಲದೆ ಈ ದಿನ ಸತ್ಯನಾರಾಯಣನ ಉಪವಾಸ ಮಾಡಲಾಗುವುದು. ಚೈತ್ರ ಪೂರ್ಣಿಮೆ ಹಾಗೂ ಚಿತ್ರ ಪೂರ್ಣಿಮೆ ಬೇರೆಯಾಗಿದ್ದು, ಬೇರೆ-ಬೇರೆ ತಿಂಗಳಿನಲ್ಲಿ ಬರುವುದು. 2021ರಲ್ಲಿ ಏಪ್ರಿಲ್ 27ರಂದು ಇರುವುದು ಚೈತ್ರ ಪೂರ್ಣಿಮೆಯಾಗಿದೆ.
ಈ ದಿನ ಉಪವಾಸ ವ್ರತ ಮಾಡಿ ಸತ್ಯನಾರಾಯಣ ಆರಾಧನೆ ಮಾಡಿದರೆ ಧನ, ವೈಭವ ಪ್ರಾಪ್ತಿಯಾಗುವುದು ಎಂದು ಹೇಳಲಾಗುವುದು. ಮನೆಯಲ್ಲಿ ಪೌರ್ಣಿಮೆ ವ್ರತ ಮಾಡುವುದು ಹೇಗೆ, ಈ ದಿನ ಮಾಡುವ ದಾನದ ಮಹತ್ವವೇನು ಎಂದು ಹೇಳಲಾಗಿದೆ ನೋಡಿ:

ಮನೆಯಲ್ಲಿಯೇ ಚೈತ್ರ ಪೌರ್ಣಿಮೆ ವ್ರತ ಮಾಡುವುದು ಹೇಗೆ?
ಚೈತ್ರ ಪೂರ್ಣಿಮೆಯೆಂದು ಸಾಮಾನ್ಯವಾಗಿ ಪುಣ್ಯ ನದಿಯಲ್ಲಿ ಹೋಗಿ ಸ್ನಾನ ಮಾಡಿ ವ್ರತ ನಿಯಮಗಳನ್ನು ಪಾಲಿಸಲಾಗುವುದು. ಆದರೆ ಈ ಬಾರಿ ಕೊರೊನಾ ಕಾರಣ ನದಿಗೆ ಹೋಗಿ ಸ್ನಾನ ಮಾಡಬೇಡಿ, ಮನೆಯಲ್ಲಿ ನೀವು ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾ ಜಲವನ್ನು ಹಾಕಿ ಸ್ನಾನ ಮಾಡಿ. ನಂತರ ಉಪವಾಸವಿದ್ದು ವಿಷ್ಣುವನ್ನು ಹಾಗೂ ಆಂಜನೇಯನನ್ನು ಆರಾಧಿಸಿ.
ವಿಷ್ಣು ಮಂತ್ರ ಹಾಗೂ ಹನುಮಾನ್ ಚಾಲೀಸಾ ಪಠಿಸಿ

ವಿಷ್ಣು ಮಂತ್ರ
ಓಂ ನಮೋ ಭಗವತೇ ವಾಸುದೇವಾಯ ನಮಃ
ಓಂ ಶ್ರೀಮ್ ಕೃಷ್ಣಾಯ ಶ್ರೀಮ್ ಶ್ರೀಮ್ ಶ್ರೀಮ್ ಗೋವಿಂದಾಯ ಗೋಪಾಲಯ ಗೋಲೋಕಾ ಸುಂದರಾಯ ಸತ್ಯಾಯ ಪರಮಾತ್ಮನೇ, ಪಾರಾಯ ವೈಖನಸಾಯ ವೈರಾಜಮೂರ್ತಯೇ ಮೇಶಾತ್ಮಾನ್ ಶ್ರೀಮ್ ನರಸಿಂಹವಾಸ ನಮಃ

ಹನುಮಾನ್ ಚಾಲೀಸ ಪಠಿಸಿ.
ಹನುಮಾನ್ ಚಾಲೀಸಾ ಪಠಣೆ ಮಾಡುವ ಮುನ್ನ ಹನುಮಂತ್ರನ ಫೋಟದ ಮುಂದೆ ಕಮಂಡಲದಲ್ಲಿ ನೀರನನ್ನು ಇಡಿ, ಪಠಣೆ ಮುಗಿದ ಬಳಿಕ ಆ ನೀರನ್ನು ಪ್ರಸಾದದ ರೂಪದಲ್ಲಿ ಸೇವಿಸಬೇಕು. ಅಲ್ಲದೆ ಮನೆಯಲ್ಲಿ ಈ ಆ ನೀರನ್ನು ಸಿಂಪಡಿಸಿ, ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ಚಂದ್ರನನ್ನು ಪೂಜಿಸಿ
ಚೈತ್ರ ಪೌರ್ಣಿಮೆಯೆಂದು ಚಂದ್ರನನ್ನು ಪೂಜಿಸುವುದರಿಂದ ಚಂದ್ರದೋಷವಿದ್ದರೆ ಅದು ದೂರವಾಗುವುದು. ನಂತರ ಸತ್ಯನಾರಾಯಣ ಕತೆ ಓದಿ.

ಚೈತ್ರ ಪೌರ್ಣಿಮೆಯಂದು ಮಾಡುವ ದಾನ
ಧಾರ್ಮಿಕ ನಂಬಿಕೆಗಳ ಪ್ರಕಾರ ಚೈತ್ರ ಪೌರ್ಣಿಮೆಯಂದು ಮಾಡುವ ದಾನಕ್ಕೆ ದುಪ್ಪಟ್ಟು ಫಲ ಸಿಗುವುದು. ಈ ದಿನ ನಿರ್ಗತಿಕರಿಗೆ ಹಣ ನೀಡಿ. ಈ ದಿನ ಬೆಳಗ್ಗೆ ಗಾಯತ್ರಿ ಮಂತ್ರದೊಂದಿಗೆ ಸೂರ್ಯನಿಗೆ ಆರ್ಘ್ಯ ನೀಡಿ. ಬಟ್ಟೆ, ಅಕ್ಕಿ, ತರಕಾರಿಗಳನ್ನು ದಾನ ಮಾಡಿ.



Click it and Unblock the Notifications