Latest Updates
-
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ!
ಹನುಮಂತನ ಮೂಲಕ ಶ್ರೀರಾಮ ದೇವರ ಭೇಟಿಯಾದ ತುಳಸಿದಾಸರು!
ರಾಮಾಯಣವನ್ನು ಹಲವರು ಬರೆದಿರುವುದಾಗಿ ಪ್ರಚಲಿತದಲ್ಲಿದೆ. ಇದರಲ್ಲಿ ಮೊದಲನೇಯದಾಗಿ ವಾಲ್ಮೀಕಿ ಅವರು ಬರೆದಿರುವಂತಹ ರಾಮಾಯಣವು ಹೆಚ್ಚು ಜನಪ್ರಿಯ. ಅದೇ ರೀತಿ ತುಳಸಿ ದಾಸರು ಕೂಡ ರಾಮಾಯಣ ಬರೆದಿರುವರು. ತುಳಸಿ ದಾಸರ ಬಗ್ಗೆ ಹೇಳುವುದಾದರೆ ಅವರು ಹಿಂದೂ ಧರ್ಮದ ಬಹುದೊಡ್ಡ ಸನ್ಯಾಸಿ ಲೇಖಕ. ಅವರು ಸಂಸ್ಕೃತದಲ್ಲೂ ತನ್ನ ಛಾಪನ್ನು ಮೂಡಿಸಿದವರು. ಭಕ್ತಿ ಆಂದೋಲನದ ಮೂಲಕವಾಗಿ ಅವರು ಅಖಂಡ ಭಾರತದಲ್ಲಿ ತನ್ನದೇ ಆದ ಬೆಂಬಲಿಗರನ್ನು ಪಡೆದಿದ್ದರು. ರಾಮನ ಭಕ್ತನಾಗಿದ್ದ ಸಂತ ತುಳಸಿದಾಸರು ರಾಮನ ಗುಣಗಾನಗೈದು ಕವಿತೆಗಳನ್ನು ಬರೆಯುತ್ತಿದ್ದರು. ತುಳಸಿದಾಸರು ರಾಮನ ಬಗ್ಗೆ ಬರೆದಿರುವಂತಹ ದೋಹದಿಂದಲೇ ಹೆಚ್ಚು ಜನಪ್ರಿಯರಾಗಿದ್ದರು. ಇಂದಿಗೂ ತುಳಸಿದಾಸರ ದೋಹಗಳು ಪ್ರಸ್ತುತ ಎನಿಸುವುದು.
ರಾಮ ದೇವರು ಯಾವತ್ತಿಗೂ ತನ್ನ ಭಕ್ತರಿಗೆ ದರ್ಶನ ನೀಡದೇ ಇರುತ್ತಿರಲಿಲ್ಲ. ಶಬರಿಗೆ ಕೂಡ ಹಲವಾರು ವರ್ಷಗಳ ಬಳಿಕ ಆತ ದರ್ಶನ ನೀಡುತ್ತಾನೆ. ತುಳಸಿದಾಸರ ವಿಚಾರದಲ್ಲೂ ಇದೇ ಆಯಿತು. ಅವರ ಪ್ರಾರ್ಥನೆಯನ್ನು ಹನುಮಂತನ ಮೂಲಕವಾಗಿ ರಾಮನಿಗೆ ತಿಳಿಯಿತು. ಆದರೆ ಸಾಮಾನ್ಯರಂತೆ ಇದ್ದ ತುಳಸಿದಾಸರು ಶ್ರೀರಾಮ ದೇವರ ದರ್ಶನ ಹೇಗೆ ಪಡೆದರು ಎನ್ನುವುದನ್ನು ತಿಳಿಯಿರಿ.

ದೈವಿಕ ದೃಷ್ಟಿ ನೆರವಿನಿಂದ ದೇವರನ್ನು ಕಾಣಬಹುದು
ವಿವಿಧ ರೂಪದಲ್ಲಿ ಬರುವಂತಹ ದೇವರನ್ನು ಗುರುತು ಹಿಡಿಯಲು ಸಾಮಾನ್ಯ ಮನುಷ್ಯನಿಗೆ ಸಾಧ್ಯವಾಗದೆ ಇರುವ ಕಾರಣ, ಎಷ್ಟೇ ಭಕ್ತಿ ಇದ್ದರೂ ದೇವರ ನೋಡಲು ದೈವಿಕ ದೃಷ್ಟಿಯು ಬೇಕಾಗುತ್ತದೆ. ಸನ್ಯಾಸಿ, ಅರ್ಚಕ ಅಥವಾ ಬೇರೆ ಯಾರೇ ಆಗಿರಲಿ, ಪ್ರತಿಯೊಬ್ಬರಿಗೂ ಹಾಗೆ ಸುಲಭವಾಗಿ ದೇವರನ್ನು ಕಾಣಲು ಸಾಧ್ಯವಾಗದು. ಪ್ರಹ್ಲಾದನಂತವರಲ್ಲಿ ಅಂತಹ ದೈವಿಕ ದೃಷ್ಟಿಯಿತ್ತು ಮತ್ತು ಆತನನ್ನು ಬೆಂಕಿಗೆ ಹಾಕಿದರೂ ಸುಡದೆ ಅದ್ಭುತವಾದ ಶಕ್ತಿಯಿಂದ ದೇವರ ದರ್ಶನ ಪಡೆದಿದ್ದಾನೆ. ಅದೇ ರೀತಿಯಾಗಿ ಶಬರಿ ಕೂಡ ತನ್ನ ಇಳಿ ವಯಸ್ಸಿನಲ್ಲಿ ಶ್ರೀರಾಮನ ದರ್ಶನ ಪಡೆಯುವಳು. ರಾಮಾಯಣ ಬರೆದಿರುವಂತಹ ವಾಲ್ಮೀಕಿ ಅವರು ಒಬ್ಬ ದರೋಡೆಕೋರನಾಗಿದ್ದರು ಮತ್ತು ಅವರ ಮನಪರಿವರ್ತನೆಯಾಗಿ ಸನ್ಯಾಸ ದೀಕ್ಷೆ ಪಡೆದ ಬಳಿಕ ರಾಮಾಯಣ ಬರೆದಿದ್ದರು.

ತುಳಸಿದಾಸರು ಶ್ರೀರಾಮ ಮತ್ತೊಬ್ಬ ಪರಮಭಕ್ತ
ತುಳಸಿದಾಸರು ಶ್ರೀರಾಮನ ಮತ್ತೊಬ್ಬ ಪರಮಭಕ್ತ. ತುಳಸಿದಾಸರು ಶ್ರೀರಾಮನ ಬಗ್ಗೆ ಕವಿತೆ ಹಾಗೂ ಭಜನೆಗಳನ್ನು ಬರೆದು ಹಾಡುತ್ತಲಿದ್ದರೂ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಹನುಮಂತನ ನೆರವಿನಿಂದಾಗಿ ತುಳಸಿದಾಸರು ಶ್ರೀರಾಮನನ್ನು ಭೇಟಿಯಾದರು. ಇದು ಹೇಗೆ ನಡೆಯಿತು ಎಂದು ತಿಳಿಯಿರಿ.

ಹನುಮಂತನನ್ನು ತುಳಸಿದಾಸರು ಭೇಟಿಯಾದರು
ತುಳಸಿದಾಸರು ತನ್ನ ದೈವಿಕ ಆತ್ಮದಿಂದ ಹನುಮಂತ ದೇವರನ್ನು ಹೇಗೆ ಭೇಟಿಯಾಗುವುದು ಎಂದು ತಿಳಿದುಕೊಂಡರು. ಹನುಮಂತ ದೇವರನ್ನು ಭೇಟಿಯಾದ ವೇಳೆ ಶ್ರೀರಾಮನ ಭೇಟಿಯಾಗಲು ತನಗೆ ನೆರವಾಗಬೇಕು ಎಂದು ತುಳಸಿದಾಸರು ಕೇಳಿಕೊಂಡರು. ಶ್ರೀರಾಮನ ಭೇಟಿಯಾಗಬೇಕಿದ್ದರೆ ಚಿತ್ರಕೂಟವೆಂಬ ಬೆಟ್ಟಕ್ಕೆ ತೆರಳಬೇಕು ಎಂದು ಹನುಂತ ದೇವರು ಸೂಚಿಸುವರು. ಶ್ರೀರಾಮ ದೇವರನ್ನು ನೋಡಬೇಕೆಂಬ ಹಂಬಲದೊಂದಿಗೆ ತುಳಸಿದಾಸರು ಚಿತ್ರಕೂಟದ ಬೆಟ್ಟದತ್ತ ಪ್ರಯಾಣ ಬೆಳೆಸಿದರು. ತುಳಸಿದಾಸರು ಪ್ರಯಾಣಿಸುತ್ತಿರುವ ವೇಳೆ ದಾರಿ ಮಧ್ಯೆ ಇಬ್ಬರು ಸುಂದರ ಯುವಕರು ಕುದುರೆ ಮೇಲೆ ಪ್ರಯಾಣಿಸುತ್ತಿದ್ದರು. ಅದಾಗ್ಯೂ, ಕುದುರೆ ಮೇಲೆ ಪ್ರಯಾಣಿಸುತ್ತಿದ್ದವರು ಸೋದರರಾದ ಶ್ರೀರಾಮ ದೇವರು ಮತ್ತು ಲಕ್ಷಣ ಎಂದು ತುಳಸಿದಾಸರಿಗೆ ತಿಳಿಯದೇ ಹೋಯಿತು. ಹನುಮಂತ ಈ ಬಗ್ಗೆ ತುಳಸಿದಾಸರಿಗೆ ಹೇಳಿದಾಗ ಈ ವಿಚಾರ ತಿಳಿಯಿತು.

ತುಳಸಿದಾಸರ ಮುಂದೆ ಶ್ರೀರಾಮ ದೇವರು ಪ್ರತ್ಯಕ್ಷರಾದರು
ತಾನು ತುಂಬಾ ಭಕ್ತಿಯಿಂದ ಪೂಜಿಸುತ್ತಿದ್ದ ಶ್ರೀರಾಮನನ್ನು ಗುರುತಿಸಲು ತನಗೆ ಸಾಧ್ಯವಾಗಲಿಲ್ಲ ಎನ್ನುವ ನೋವು ತುಳಸಿದಾಸರನ್ನು ಬಹುವಾಗಿ ಕಾಡಿತು. ಅದಾಗ್ಯೂ, ತುಳಸಿದಾಸರನ್ನು ಸಮಾಧಾನಪಡಿಸಿದ ಹನುಮಂತ, ಶ್ರೀರಾಮ ದರ್ಶನಕ್ಕೆ ಮತ್ತೊಂದು ಅವಕಾಶ ಸಿಗುವುದು ಎಂದು ಭರವಸೆ ನೀಡುವನು. ಶ್ರೀರಾಮ ಮರುದಿನ ಬೆಳಗ್ಗೆ ಮತ್ತೆ ಇಲ್ಲಿಗೆ ಬರುವನು ಎಂದು ಹನುಮಂತ ಹೇಳುತ್ತಾನೆ. ಇದನ್ನು ಕೇಳಿದ ತುಳಿಸದಾಸರು ಸಂಪೂರ್ಣ ರಾತ್ರಿ ಮರುದಿನ ಬೆಳಗ್ಗಿನ ಬಗ್ಗೆ ಯೋಚಿಸುತ್ತಾ ಕಳೆದರು. ಬೆಳಗ್ಗೆ ಎದ್ದು ನಿತ್ಯಾಧಿಕರ್ಮಗಳನ್ನು ಪೂರೈಸಿದ ಬಳಿಕ ತಿಲಕವನ್ನು ಇಡಲು ಶ್ರೀಗಂಧ ತಯಾರಿಸುತ್ತಿದ್ದ ವೇಳೆ ಅವರ ಮುಂದೆ ಒಬ್ಬ ಪುಟ್ಟ ಬಾಲಕ ಕಾಣಿಸಿಕೊಳ್ಳುತ್ತಾನೆ.

ಹನುಮಂತ ದೇವರು ದೋಹ ಪಠಿಸುವರು
ಶ್ರೀರಾಮ ದೇವರನ್ನು ಗುರುತಿಸಲು ಮತ್ತೆ ತುಳಸಿದಾಸರಿಗೆ ಸಾಧ್ಯವಾಗುವುದಿಲ್ಲವೆಂದು ಅರಿತುಕೊಂಡ ಹನುಮಂತ ದೇವರು ಒಂದು ದೋಹವನ್ನು ಪಠಿಸುವರು. ಚಿತ್ರಕೂಟ್ ಘಾಟ್ ಪೇ ಭಾಯಿ ಸನತಾನ್ ಕೆ ಭೀರ್, ತುಳಸಿದಾಸ್ ಚಂದನ್ ಭೀಸನ್, ತಿಲಕ್ ದೇ ರಘುಬಿರ್. ಈ ದೋಹದ ಅರ್ಥ ಈ ರೀತಿಯಾಗಿದೆ: ಚಿತ್ರಕೂಟವೆಂಬ ಪರ್ವತದಲ್ಲಿ ಹಲವಾರು ಮಂದಿ ಸನ್ಯಾಸಿಗಳು ಸೇರಿದ್ದಾರೆ. ತುಳಸಿದಾಸರು ಶ್ರೀಗಂಧವನ್ನು ತೇಯುತ್ತಿರುವರು, ಶ್ರೀರಾಮ ದೇವರು ತಿಲಕ ಹಾಕುವರು.
ಹನುಮಂತ ದೇವರು ದೋಹ ಪಠಿಸುತ್ತಾ ಇದ್ದಂತೆ ತುಳಸಿದಾಸರಿಗೆ ತನ್ನ ಮುಂದೆ ನಿಂತಿರುವ ಮಗು ಶ್ರೀರಾಮ ದೇವರು ಎಂದು ತಕ್ಷಣವೇ ತಿಳಿದುಬರುತ್ತದೆ. ತುಳಸಿದಾಸರು ತದೇಕಚಿತ್ತದಿಂದ ಪ್ರೀತಿ ಹಾಗೂ ಭಕ್ತಿಯಿಂದ ಶ್ರೀರಾಮ ದೇವರನ್ನು ನೋಡುವರು.



Click it and Unblock the Notifications