Latest Updates
-
ಮಳೆಗಾಲದ WFH: ದಂಪತಿಗಳ ನಡುವಿನ ಕಿರಿಕಿರಿ ತಪ್ಪಿಸಿ, ಮನೆಯಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಈ ಸರಳ ಸೂತ್ರಗಳು! -
ದೆಹಲಿ ಐಕಿಯಾ ಸ್ಟೋರ್: ಸಾಕೇತ್ನಲ್ಲಿ ಹೊಸ ಶಾಖೆ ಆರಂಭ, ಸಣ್ಣ ಮನೆಗಳಿಗೆ ಬೆಸ್ಟ್ ಐಡಿಯಾಸ್! -
IMD ರೆಡ್ ಅಲರ್ಟ್: ಮಳೆಗಾಲದಲ್ಲಿ ಹೊಟ್ಟೆಯ ಆರೋಗ್ಯ ಹಾಳಾಗದಂತೆ ತಡೆಯುವುದು ಹೇಗೆ? -
ನೈನಿತಾಲ್ನಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ, ಪ್ರವಾಸಿಗರಿಗೆ ಹೈ ಅಲರ್ಟ್! -
ರಾಷ್ಟ್ರಧ್ವಜ ಅಂಗೀಕಾರ ದಿನ: ಧ್ವಜಾರೋಹಣದ ವೇಳೆ ಲವಲವಿಕೆಯಿಂದ ಇರಲು ಈ 'ತ್ರಿವರ್ಣ' ವ್ಯಾಯಾಮಗಳನ್ನು ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ಕೊನೆ ಕ್ಷಣದ ಗಡಿಬಿಡಿ ತಪ್ಪಿಸಲು ಈ ಸ್ಮಾರ್ಟ್ ಟಿಪ್ಸ್ ಪಾಲಿಸಿ -
ಮಳೆಗಾಲದ ತೇವಾಂಶದಿಂದ ಬಟ್ಟೆ ಹಾಳಾಗುತ್ತಿದೆಯೇ? ನಿಮ್ಮ ಕಬೋರ್ಡ್ ಮತ್ತು ಬಟ್ಟೆಗಳನ್ನು ರಕ್ಷಿಸಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಇನ್ಮುಂದೆ ಸ್ನ್ಯಾಕ್ಸ್ ಪ್ಯಾಕೆಟ್ ಮೇಲೆ ಎಚ್ಚರಿಕೆ! FSSAI ತರುತ್ತಿದೆ ಹೊಸ ನಿಯಮ, ಗ್ರಾಹಕರಿಗೆ ಲಾಭವೇನು? -
ಮುಂಬೈನಲ್ಲಿ ವರುಣನ ಅಬ್ಬರ: IMDಯಿಂದ ಆರೆಂಜ್ ಅಲರ್ಟ್ ಘೋಷಣೆ, ಕನ್ನಡಿಗರು ಎಚ್ಚರ! -
ವಿಶ್ವ ಮೆದುಳು ದಿನ: ದಿನವಿಡೀ ಚುರುಕಾಗಿರಲು ಬೆಳಿಗ್ಗೆ ಈ 10 ನಿಮಿಷದ 'ನ್ಯೂರೋ-ವಾರ್ಮಪ್' ಮಾಡಿ!
ಮೇ 8ಕ್ಕೆ ಗಂಗಾ ಸಪ್ತಮಿ: ಮನೆಯಲ್ಲಿ ಈ ದಿನ ಗಂಗಾ ಜಲದಿಂದ ಈ ರೀತಿ ಮಾಡಿದರೆ ಮೋಕ್ಷ ಪ್ರಾಪ್ತಿ, ಗ್ರಹ ದೋಷವಿದ್ದರೆ ನಿವಾರಣೆಯಾಗುವುದ
ಭಾರತದಲ್ಲಿ ಗಂಗಾ ನದಿಯನ್ನು ಪವಿತ್ರವಾದ ನದಿಯೆಂದು ಪರಿಗಣಿಸಲಾಗಿದೆ. ಗಂಗೆಯಲ್ಲಿ ಮಿಂದರೆ ಪಾಪವೆಲ್ಲಾ ಹೋಗಿ ಮೋಕ್ಷ ಪ್ರಾಪ್ತಿಯಾಗುವುದು ಎಂಬುವುದು ಬಲವಾದ ನಂಬಿಕೆ. ಅದರಲ್ಲೂ ಗಂಗಾ ಸಪ್ತಮಿಯಂದು ತುಂಬಾ ಜನ ಗಂಗಾ ನದಿಗೆ ಹೋಗಿ ಗಂಗಾ ಆರತಿ ಬೆಳಗುತ್ತಾರೆ. ಗಂಗೆಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲೂ ಗಂಗೆಗೆ ಪೂಜೆ ಸಲ್ಲಿಸಬಹುದು. ಗಂಗಾ ಸಪ್ತಮಿ ಯಾವಾಗ? ಈ ದಿನ ಪೂಜಾ ವಿಧಿಗಳೇನು? ಇದರ ಮಹತ್ವವೇನು ಎಂದು ನೋಡೋಣ ಬನ್ನಿ.

ಗಂಗೆ ಭೂಮಿಗೆ ಬಂದ ಕತೆ
ಭಗೀರಥ ಮಹರ್ಷಿ ಕಠಿಣ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ಕರೆತಂದ ಎಂಬ ಪೌರಾಣಿಕ ಕತೆಯಿದೆ. ಭಗೀರಥನು ತನ್ನ ಪೂರ್ವಜರಿಗೆ ಮೋಕ್ಷವನ್ನು ನೀಡಲು ಗಂಗೆಯನ್ನು ಭೂಮಿಗೆ ಕರೆಸುತ್ತಾನೆ. ಗಂಗೆ ಭೂಮಿಗೆ ಬರುವುದಾದರೆ ನಾನು ಹರಿಯುವ ರಭಸ ತಡೆಯುವವರು ಯಾರು ಎಂದು ಕೇಳುತ್ತಾಳೆ. ಏಕೆಂದರೆ ಅವಳು ಹರಿಯುವ ರಭಸಕ್ಕೆ ಇಡೀ ಭೂಮಂಡವೇ ಕೊಚ್ಚಿ ಹೋಗಬಹುದು ಎಂದು ಹೇಳುತ್ತಾನೆ, ಆಗ ಭಗೀರಥ ಶಿವನ ಮೊರೆ ಹೋಗುತ್ತಾನೆ, ಶಿವನ ತನ್ನ ಮುಡಿಯಲ್ಲಿ ಗಂಗೆಯನ್ನು ಬಂಧಿಸಿ ಭೂಮಿಗೆ ಹರಿಯಲು ಬಿಡುತ್ತಾನೆ ಹೀಗೆ ಗಂಗೆ ಭೂಮಿಯನ್ನು ತಲುಪಿದಳು ಎಂಬ ಪೌರಾಣಿಕ ಕತೆಯಿದೆ.

2022ರಲ್ಲಿ ಗಂಗಾ ಸಪ್ತಮಿ ಯಾವಾಗ?
ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನಾಂಕದಂದು ಗಂಗಾ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 8ರಂದು ಆಚರಿಸಲಾಗುವುದು.
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯು ಮೇ 07 ರ ಶನಿವಾರದಂದು ಮಧ್ಯಾಹ್ನ 02:56 ರಿಂದ ಪ್ರಾರಂಭವಾಗುತ್ತದೆ. ಈ ದಿನಾಂಕವು 08 ಮೇ, ಭಾನುವಾರ ಸಂಜೆ 05 ಗಂಟೆಗೆ ಕೊನೆಗೊಳ್ಳುತ್ತದೆ. ವೈಶಾಖ ಶುಕ್ಲ ಪಕ್ಷದ ಸಪ್ತಮಿಯ ಉದಯ ದಿನಾಂಕವನ್ನು ಮೇ 08 ರಂದು ಸ್ವೀಕರಿಸಲಾಗುತ್ತಿದೆ. ಆದ್ದರಿಂದ ಗಂಗಾ ಸಪ್ತಮಿಯನ್ನು ಮೇ 08 ರಂದು ಆಚರಿಸಲಾಗುವುದು.

ಗಂಗಾ ಸಪ್ತಮಿ 2022 ಶುಭ ಮುಹೂರ್ತ
ಗಂಗಾ ಸಪ್ತಮಿಯ ಪೂಜೆಯ ಶುಭ ಸಮಯ: ಮೇ 08 ರಂದು ಬೆಳಗ್ಗೆ 10:57 ರಿಂದ ಮಧ್ಯಾಹ್ನ 02:38 ರವರೆಗೆ ಇರುತ್ತದೆ. ಪೂಜೆಯ ಶುಭ ಮುಹೂರ್ತವು 02 ಗಂಟೆ 41 ನಿಮಿಷಗಳ ಕಾಲ ಇರಲಿದೆ.

ಗಂಗಾ ಸಪ್ತಮಿ ಪೂಜೆ - ವಿಧಾನ
* ಗಂಗಾ ಸಪ್ತಮಿಯ ಪವಿತ್ರ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಆದರೆ ಗಂಗೆಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸೂರ್ಯೋದಯಕ್ಕೆ ಮುನ್ನಸ್ನಾನ ಮಾಡಿ.
*ಸ್ನಾನ ಮಾಡುವಾಗ, ಗಂಗೆಯನ್ನು ಧ್ಯಾನಿಸಿ.
ಸ್ನಾನದ ನಂತರ ದೇವರ ಮನೆ ಸ್ವಚ್ಛ ಮಾಡಿ ದೀಪ ಬೆಳಗಿ.
* ಗಂಗಾಜಲವನ್ನು ದೇವರ ಕೋಣೆ ಸೇರಿ ಎಲ್ಲಾ ಕಡೆ ಸಿಂಪಡಿಸಿ.
* ಗಂಗಾ ಮಾತೆಯನ್ನು ಧ್ಯಾನಿಸುತ್ತಾ ಹೂವುಗಳನ್ನು ಅರ್ಪಿಸಿ.
* ಈ ಪವಿತ್ರ ದಿನದಂದು ಗಂಗೆಗೆ ನೈವೇದ್ಯವಾಗಿ ಅರ್ಪಿಸಿ.
* ಗಂಗೆಗೆ ಆರತಿ ಮಾಡಿ.
* ಈ ದಿನ ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಿ.

ಗಂಗಾ ಸಪ್ತಮಿಯ ಮಹತ್ವ
ಗಂಗೆಮಾಪ ತೊಳೆದು ಮೋಕ್ಷ ನೀಡುತ್ತಾಳೆ. ಈ ದಿನ ಗಂಗಾ ಮಾತೆಯನ್ನು ಪೂಜಿಸುವುದರಿಂದ ಮರಣಾನಂತರ ಮೋಕ್ಷ ಸಿಗುತ್ತದೆ. ಗಂಗಾ ಮಾತೆಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಸಿಗುತ್ತದೆ. ಗಂಗಾ ಮಾತೆಯ ಕೃಪೆಯಿಂದ ಜಾತಕದಲ್ಲಿ ಅಶುಭ ಗ್ರಹಗಳ ಪ್ರಭಾವವೂ ಕಡಿಮೆಯಾಗುತ್ತದೆ.



Click it and Unblock the Notifications