Just In
- 8 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 8 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 9 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 9 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Technology AI Camera: ಎಐ ಕ್ಯಾಮೆರಾ ಆಯ್ಕೆ ಇರುವ ಅತ್ಯುತ್ತಮ ಸ್ಮಾರ್ಟ್ಫೋನ್ಗಳಿವು! ಬೆಲೆ ಎಷ್ಟು ?
- Sports IPL 2024: RCB vs KKR ಹೆಡ್-ಟು-ಹೆಡ್ ದಾಖಲೆ, ಪಿಚ್ ವರದಿ; ಚಿನ್ನಸ್ವಾಮಿಯಲ್ಲಿ ಗೆಲುವು ಯಾರಿಗೆ?
- Finance ವಿವಿಧ ರಾಜ್ಯಗಳ ನರೇಗಾ ಕಾರ್ಮಿಕರ ವೇತನ ದರ ಪರಿಷ್ಕರಣೆ, ವಿವರ
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇ 8ಕ್ಕೆ ಗಂಗಾ ಸಪ್ತಮಿ: ಮನೆಯಲ್ಲಿ ಈ ದಿನ ಗಂಗಾ ಜಲದಿಂದ ಈ ರೀತಿ ಮಾಡಿದರೆ ಮೋಕ್ಷ ಪ್ರಾಪ್ತಿ, ಗ್ರಹ ದೋಷವಿದ್ದರೆ ನಿವಾರಣೆಯಾಗುವುದ
ಭಾರತದಲ್ಲಿ ಗಂಗಾ ನದಿಯನ್ನು ಪವಿತ್ರವಾದ ನದಿಯೆಂದು ಪರಿಗಣಿಸಲಾಗಿದೆ. ಗಂಗೆಯಲ್ಲಿ ಮಿಂದರೆ ಪಾಪವೆಲ್ಲಾ ಹೋಗಿ ಮೋಕ್ಷ ಪ್ರಾಪ್ತಿಯಾಗುವುದು ಎಂಬುವುದು ಬಲವಾದ ನಂಬಿಕೆ. ಅದರಲ್ಲೂ ಗಂಗಾ ಸಪ್ತಮಿಯಂದು ತುಂಬಾ ಜನ ಗಂಗಾ ನದಿಗೆ ಹೋಗಿ ಗಂಗಾ ಆರತಿ ಬೆಳಗುತ್ತಾರೆ. ಗಂಗೆಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲೂ ಗಂಗೆಗೆ ಪೂಜೆ ಸಲ್ಲಿಸಬಹುದು. ಗಂಗಾ ಸಪ್ತಮಿ ಯಾವಾಗ? ಈ ದಿನ ಪೂಜಾ ವಿಧಿಗಳೇನು? ಇದರ ಮಹತ್ವವೇನು ಎಂದು ನೋಡೋಣ ಬನ್ನಿ.
ಗಂಗೆ ಭೂಮಿಗೆ ಬಂದ ಕತೆ
ಭಗೀರಥ ಮಹರ್ಷಿ ಕಠಿಣ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ಕರೆತಂದ ಎಂಬ ಪೌರಾಣಿಕ ಕತೆಯಿದೆ. ಭಗೀರಥನು ತನ್ನ ಪೂರ್ವಜರಿಗೆ ಮೋಕ್ಷವನ್ನು ನೀಡಲು ಗಂಗೆಯನ್ನು ಭೂಮಿಗೆ ಕರೆಸುತ್ತಾನೆ. ಗಂಗೆ ಭೂಮಿಗೆ ಬರುವುದಾದರೆ ನಾನು ಹರಿಯುವ ರಭಸ ತಡೆಯುವವರು ಯಾರು ಎಂದು ಕೇಳುತ್ತಾಳೆ. ಏಕೆಂದರೆ ಅವಳು ಹರಿಯುವ ರಭಸಕ್ಕೆ ಇಡೀ ಭೂಮಂಡವೇ ಕೊಚ್ಚಿ ಹೋಗಬಹುದು ಎಂದು ಹೇಳುತ್ತಾನೆ, ಆಗ ಭಗೀರಥ ಶಿವನ ಮೊರೆ ಹೋಗುತ್ತಾನೆ, ಶಿವನ ತನ್ನ ಮುಡಿಯಲ್ಲಿ ಗಂಗೆಯನ್ನು ಬಂಧಿಸಿ ಭೂಮಿಗೆ ಹರಿಯಲು ಬಿಡುತ್ತಾನೆ ಹೀಗೆ ಗಂಗೆ ಭೂಮಿಯನ್ನು ತಲುಪಿದಳು ಎಂಬ ಪೌರಾಣಿಕ ಕತೆಯಿದೆ.
2022ರಲ್ಲಿ ಗಂಗಾ ಸಪ್ತಮಿ ಯಾವಾಗ?
ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನಾಂಕದಂದು ಗಂಗಾ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 8ರಂದು ಆಚರಿಸಲಾಗುವುದು.
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯು ಮೇ 07 ರ ಶನಿವಾರದಂದು ಮಧ್ಯಾಹ್ನ 02:56 ರಿಂದ ಪ್ರಾರಂಭವಾಗುತ್ತದೆ. ಈ ದಿನಾಂಕವು 08 ಮೇ, ಭಾನುವಾರ ಸಂಜೆ 05 ಗಂಟೆಗೆ ಕೊನೆಗೊಳ್ಳುತ್ತದೆ. ವೈಶಾಖ ಶುಕ್ಲ ಪಕ್ಷದ ಸಪ್ತಮಿಯ ಉದಯ ದಿನಾಂಕವನ್ನು ಮೇ 08 ರಂದು ಸ್ವೀಕರಿಸಲಾಗುತ್ತಿದೆ. ಆದ್ದರಿಂದ ಗಂಗಾ ಸಪ್ತಮಿಯನ್ನು ಮೇ 08 ರಂದು ಆಚರಿಸಲಾಗುವುದು.
ಗಂಗಾ ಸಪ್ತಮಿ 2022 ಶುಭ ಮುಹೂರ್ತ
ಗಂಗಾ ಸಪ್ತಮಿಯ ಪೂಜೆಯ ಶುಭ ಸಮಯ: ಮೇ 08 ರಂದು ಬೆಳಗ್ಗೆ 10:57 ರಿಂದ ಮಧ್ಯಾಹ್ನ 02:38 ರವರೆಗೆ ಇರುತ್ತದೆ. ಪೂಜೆಯ ಶುಭ ಮುಹೂರ್ತವು 02 ಗಂಟೆ 41 ನಿಮಿಷಗಳ ಕಾಲ ಇರಲಿದೆ.
ಗಂಗಾ ಸಪ್ತಮಿ ಪೂಜೆ - ವಿಧಾನ
* ಗಂಗಾ ಸಪ್ತಮಿಯ ಪವಿತ್ರ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡಬೇಕು. ಆದರೆ ಗಂಗೆಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಸ್ನಾನದ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸೂರ್ಯೋದಯಕ್ಕೆ ಮುನ್ನಸ್ನಾನ ಮಾಡಿ.
*ಸ್ನಾನ ಮಾಡುವಾಗ, ಗಂಗೆಯನ್ನು ಧ್ಯಾನಿಸಿ.
ಸ್ನಾನದ ನಂತರ ದೇವರ ಮನೆ ಸ್ವಚ್ಛ ಮಾಡಿ ದೀಪ ಬೆಳಗಿ.
* ಗಂಗಾಜಲವನ್ನು ದೇವರ ಕೋಣೆ ಸೇರಿ ಎಲ್ಲಾ ಕಡೆ ಸಿಂಪಡಿಸಿ.
* ಗಂಗಾ ಮಾತೆಯನ್ನು ಧ್ಯಾನಿಸುತ್ತಾ ಹೂವುಗಳನ್ನು ಅರ್ಪಿಸಿ.
* ಈ ಪವಿತ್ರ ದಿನದಂದು ಗಂಗೆಗೆ ನೈವೇದ್ಯವಾಗಿ ಅರ್ಪಿಸಿ.
* ಗಂಗೆಗೆ ಆರತಿ ಮಾಡಿ.
* ಈ ದಿನ ಸಾತ್ವಿಕ ಆಹಾರಗಳನ್ನಷ್ಟೇ ಸೇವಿಸಿ.
ಗಂಗಾ ಸಪ್ತಮಿಯ ಮಹತ್ವ
ಗಂಗೆಮಾಪ ತೊಳೆದು ಮೋಕ್ಷ ನೀಡುತ್ತಾಳೆ. ಈ ದಿನ ಗಂಗಾ ಮಾತೆಯನ್ನು ಪೂಜಿಸುವುದರಿಂದ ಮರಣಾನಂತರ ಮೋಕ್ಷ ಸಿಗುತ್ತದೆ. ಗಂಗಾ ಮಾತೆಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಪಾಪಗಳಿಂದ ಮುಕ್ತಿ ಸಿಗುತ್ತದೆ. ಗಂಗಾ ಮಾತೆಯ ಕೃಪೆಯಿಂದ ಜಾತಕದಲ್ಲಿ ಅಶುಭ ಗ್ರಹಗಳ ಪ್ರಭಾವವೂ ಕಡಿಮೆಯಾಗುತ್ತದೆ.