Just In
Don't Miss
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಗಾ ದಸರಾ 2021: ಶುಭ ಮುಹೂರ್ತ, ಪೂಜಾ ವಿಧಾನ ಹಾಗೂ ಮಹತ್ವ
ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರನೆಗೂ ಅದರದ್ದೇ ಆದ ಮಹತ್ವಿದೆ. 2021 ರ ಜೂನ್ 20 ರಂದು ಗಂಗಾ ದಸರಾ ಹಬ್ಬ ನಡೆಯಲಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಜ್ಯೇಷ್ಠ ತಿಂಗಳ ಶುಕ್ಲ ಪಕ್ಷದ ಹತ್ತನೇ ದಿನ, ಭಾಗೀರಥಿ ಋಷಿಯ ದಣಿವರಿಯದ ಶ್ರಮದಿಂದಾಗಿ ಗಂಗಾ ಮಾತೆ ಭೂಮಿಗೆ ಬರುತ್ತಾಳೆ. ಗಂಗೆ ಭೂಮಿಗೆ ಬಂದು ಭೂಮಿಯನ್ನು ಪಾವನ ಮಾಡಿದ ದಿನವನ್ನು ಗಂಗಾ ದಸರಾವನ್ನು ಆಚರಿಸಲಾಗುತ್ತದೆ.
ಭಾರತದಲ್ಲಿ ಹರಿಯುವ ಅನೇಕ ಪುಣ್ಯ ನದಿಗಳಲ್ಲಿ ಗಂಗಾ ನದಿಗೆ ವಿಶೇಷ ಸ್ಥಾನವಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ತೊಳೆದು ಹೋಗಿ , ಪುಣ್ಯ ದೊರೆಯುತ್ತದೆ ಎಂಬ ನಂಬಿಕೆಯಿಂದ ಲಕ್ಷಾಂತರ ಭಕ್ತರು ಗಂಗಾ ನದಿಯಲ್ಲಿ ಮಿಂದು ಪೂಜೆ ಸಲ್ಲಿಸುತ್ತಾರೆ.
ಗಂಗಾ ದಸರಾ ಶುಭ ಸಮಯ, ಪೂಜಾ ವಿಧಾನ ಮತ್ತು ಮಹತ್ವದ ಬಗ್ಗೆ ಈ ಲೇಖನದಲ್ಲಿ ಹೇಳಲಾಗಿದೆ ನೋಡಿ:
ಗಂಗಾ ದಸರಾ ಅವರ ಶುಭ ಸಮಯ:
ದಶಮಿ ತಿಥಿ ಪ್ರಾರಂಭ: 19 ಜೂನ್ 2021, ಸಂಜೆ 06:50 ಕ್ಕೆ
ದಶಮಿ ತಿಥಿ ಮುಕ್ತಾಯ: 20 ಜೂನ್ 2021, ಸಂಜೆ 04:25 ಕ್ಕೆ
ಪೂಜಾ ವಿಧಾನ
ಗಂಗಾ ದಸರಾ ದಿನದಂದು ಮುಂಜಾನೆ ಎದ್ದು ಗಂಗೆಯಲ್ಲಿ ಸ್ನಾನ ಮಾಡಬೇಕು, ಗಂಗೆಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಸ್ನಾನದ ನೀರಿಗೆ ಸ್ವಲ್ಪ ಗಂಗಾ ಜಲ ಬೆರೆಸಿ ಸ್ನಾನ ಮಾಢಬೇಕು. ನಂತರ ಒಂದು ತಾಮ್ರದ ಜೊಂಬಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಗಂಗಾ ಜಲ ಬೆರೆಸಿ ಆ ನೀರಿನಿಂದ ಸೂರ್ಯ ದೇವರಿಗೆ ಅರ್ಗ್ಯಾವನ್ನು ಅರ್ಪಿಸಿ. ಅದರ ನಂತರ ದೇವರ ಮನೆಗೆ ಆ ನೀರನ್ನು ಸಿಂಪರಿಸಬೇಕು, ಮನೆಯೊಳಗಡೆ ಆ ಪವಿತ್ರ ನೀರನ್ನು ಸಿಂಪಡಿಸಿ. ನಂತರ ಗಂಗಾ ಪೂಜೆ ಮಾಡಬೇಕು.
ಗಂಗಾ ಪೂಜೆಯಲ್ಲಿ 10 ಸಂಖ್ಯೆಗೆ ವಿಶೇಷ ಸ್ಥಾನವಿದೆ
* ಹತ್ತು ದಿನ ಭಕ್ತರು ಗಂಗೆಗೆ ಪೂಜೆಗೆ ಸಲ್ಲಿಸುತ್ತಾರೆ
* ಗಂಗಾ ಸ್ನಾನ ಮಾಡುವುದರಿಂದ ಹತ್ತು ಪಾಪಗಳಿಂದ ಮುಕ್ತಿ ಪಡೆಯಬಹುದು.
* ಬೆಳಗ್ಗೆ 10 ಬಗೆಯ ಪದ್ಧತಿಯಲ್ಲಿ ಗಂಗೆಯನ್ನು ಪೂಜಿಸಿದರೆ ಮೋಕ್ಷ ದೊರೆಯುವುದು
* ಗಂಗೆಗೆ ಪ್ರಿಯವಾದ ಹತ್ತು ಬಗೆಯ ಹೂ, ಹಣ್ಣುಗಳನ್ನು ಇಟ್ಟು ಪೂಜಿಸಲಾಗುವುದು.
* ಗಂಗೆ ಪೂಜೆಯಲ್ಲಿ ಬಡವರಿಗೆ 10 ಬಗೆಯ ತಿನಿಸುಗಳನ್ನು ನೀಡಲಾಗುವುದು
* ಗಂಟೆಗಳ ಕಾಲ ನೀರು ಸಹ ಸೇವಿಸದೆ ಉಪವಾಸವ್ರತ ಪಾಲಿಸಿದರೆ ಒಳ್ಳೆಯದು.
* ಗಂಗಾ ನದಿ ಹಿಮಾಚಲ ಪ್ರದೇಶ, ಉತ್ತರಖಾಂಡ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಚತ್ತೀಸ್ಗಢ, ಬಿಹಾರ, ಜಾರ್ಖಂಡ್, ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ಹೀಗೆ 10 ರಾಜ್ಯಗಳಲ್ಲಿ ನಡೆಯುತ್ತದೆ.
* 10 ಬಿದಿರಿನ ಕಡ್ಡಿಯಿಂದ ಗಂಗೆ ನದಿ ತೀರದಲ್ಲಿ ಗಂಗೆಗೆ ಚಿಕ್ಕ ಮಂದಿರ ಕಟ್ಟಿ ಪೂಜೆ ಸಲ್ಲಿಸುತ್ತಾರೆ
ಗಂಗಾ ದಸರಾ ಮಹತ್ವ
ಗಂಗಾ ದಸರಾ ದಿನದಂದು, ಯಾರು ಗಂಗಾ ನದಿಯಲ್ಲಿ ಅಥವಾ ಯಾವುದೇ ಪವಿತ್ರ ನದಿ ಅಥವಾ ಕೊಳದಲ್ಲಿ ಸ್ನಾನ ಮಾಡಿ ತನ್ನ ಯೋಗ್ಯತೆಗೆ ಅನುಗುಣವಾಗಿ ದಾನ ಮಾಡಿದರೆ, ಅವನು ತನ್ನ ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ. ತಾಯಿಯ ಗಂಗೆಯ ಆರಾಧನೆಯಿಂದ ಮೋಕ್ಷ ಸಿಗುವುದು.