Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಗಣೇಶ ವಿಸರ್ಜನೆ 2021: ಯಾವ ದಿನ ಮಾಡಬಹುದು? ಶುಭ ಸಮಯ ಯಾವಾಗ?
ಗಣೇಶನ ಕೂರಿಸಿದ ಮೇಲೆ ಗಣೇಶ ವಿಸರ್ಜನೆ ಕುಡ ಅಷ್ಟೇ ಮುಖ್ಯವಾಗಿದೆ. ಗಣೇಶ ವಿಸರ್ಜನೆ ಹುಟ್ಟು, ಬದುಕು, ಸಾವಿನ ನಮ್ಮ ಜೀವನ ಚಕ್ರವನ್ನು ಸೂಚಿಸುತ್ತದೆ. ಗಣೇಶನ ಕೂರಿಸಿದ ಮೇಲೆ ಆ ದಿನ ಅಥವಾ 3, ದಿನವಾದ ಮೇಲೆ, 7 ದಿನವಾದ ಮೇಲೆ ಗಣೇಶ ವಿಸರ್ಜನೆ ಮಾಡಲಾಗುವುದು.
ಗಣೇಶ ವಿಸರ್ಜನೆಯನ್ನು ಗಣೇಶನ ಕೂರಿಸಿದ ಒಂದೂವರೆ ದಿನದ ನಂತರ ವಿಸರ್ಜನೆ ಮಾಡಬಹುದು. ಮೂರನೇ ದಿನ, ಐದನೇ ದಿನ, ಏಳನೇ ದಿನ ಹೀಗೆ ವಿಸರ್ಜನೆ ಮಾಡಲಾಗುವುದು.

ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
ಬೆಳಗ್ಗೆ ಶುಭ ಮುಹೂರ್ತ (ಶುಭ):06:16ರಿಂದ 07:48ರವರೆಗೆ
ಬೆಳಗ್ಗೆ ಮುಹೂರ್ತ (ಅಮೃತ):10:50ರಿಂದ 03:25ರವರೆಗೆ
ಮಧ್ಯಾಹ್ನದ ಮುಹೂರ್ತ (ಶುಭ): ಸಂಜೆ 04:56ರಿಂದ 06:27ರವರೆಗೆ
ಸಂಜೆ ಮುಹೂರ್ತ(ಅಮೃತ): ಸಂಜೆ 06:27ರಿಂದ 09:27ರವರೆಗೆ
ರಾತ್ರಿ ಮುಹೂರ್ತ: ರಾತ್ರಿ 12:22ರಿಂದ 01:50ರವರೆಗೆ

ಒಂದೂವರೆ ದಿನದ ಬಳಿಕ ಗಣೇಶ ವಿಸರ್ಜನೆ
ಗಣೇಶ ಕೂರಿಸಿ ಮಾರನೇಯ ದಿನ ಮಧ್ಯಾಹ್ನದ ಮೇಲೆ ಕೆಲವು ಕಡೆ ವಿಸರ್ಜನೆ ಮಾಡಲಾಗುವುದು. ಮಧ್ಯಾಹ್ನ ಹೊತ್ತು ಗಣೇಶನಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನದ ನಂತರ ಗಣೇಶನನ್ನು ತೆಗೆದುಕೊಂಡು ಹೋಗಿ ಗಣೇಶನ ವಿಸರ್ಜನೆ ಮಾಡಲಾಗುವುದು.

3ನೇ, 5ನೇ, 7ನೇ ದಿನ ಗಣೇಶ ವಿಸರ್ಜನೆ
ಅನಂತ ಚತುರ್ಧಶಿಗೆ ಗಣೇಶನ ವಿಸರ್ಜನೆ ಮಾಡುವುದು ತುಂಬಾ ಮಹತ್ವವಾದರೂ 3ನೇ, 5ನೇ, 7ನೇ ದಿನ ಕೂಡ ಗಣೇಶನ ವಿಸರ್ಜನೆ ಮಾಡಬಹುದು. ಗಣೇಶ ವಿಸರ್ಜನೆಯನ್ನು ಬೆಸ ಸಂಖ್ಯೆಯಲ್ಲಿ ಮಾಡಬೇಕು. ಗಣೇಶನ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವೆಂದರೆ 11ನೇ ದಿನವಾದ ಗಣೇಶ ಚತುರ್ಧಶಿಯಾಗಿದೆ.

ಅನಂತ ಚತುರ್ಧಶಿಯಂದು ಗಣೇಶನ ವಿಸರ್ಜನೆ
ಗಣೇಶನ ವಿಸರ್ಜನೆಗೆ ಈ ದಿನ ತುಂಬಾನೇ ಮಹತ್ವವಾದ ದಿನವಾಗಿದೆ. ಗಣೇಶನ ವಿಸರ್ಜನೆಗೆ ಮಾತ್ರವಲ್ಲ ವಿಷ್ಣು ಭಕ್ತರಿಗೂ ಈ ದಿನ ತುಂಬಾ ಮಹತ್ವದ್ದಾಗಿದೆ. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು ಹಾಗೂ ಕೈಗೆ ಪವಿತ್ರ ದಾರವನ್ನು ಕಟ್ಟಲಾಗುವುದು. ಈ ದಾರ ಎಲ್ಲಾ ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುವುದು ಎಂಬ ನಂಬಿಕೆ ಇದೆ.
11ನೇ ದಿನ ಗಣೇಶನ ವಿಸರ್ಜನೆ ಮಾಡಲಾಗುವುದು. ಸಾಮಾನ್ಯವಾಗಿ ನದಿ, ಕೆರೆ ಅಥವಾ ಕೊಳದಲ್ಲಿ ವಿಸರ್ಜನೆ ಮಾಡಲಾಗುವುದು. ಇದೀಗ ಪರಿಸರ ಉಳಿಸಲು ದೊಡ್ಡ ಡ್ರಮ್ ಅಥವಾ ಬಕೆಟ್ನಲ್ಲಿ ಮುಳುಗಿಸಲಾಗುವುದು. ಅಲ್ಲದೆ ಮಣ್ಣಿನ ಗಣಪನ ಬಳಕೆ ಹೆಚ್ಚಾಗಿದೆ. ಗಣೇಶನನನ್ನು ವಿಸರ್ಜನೆ ಮಾಡುವಾಗ ಜೈ ಗಣೇಶ.. ಎಂದು ಹಾಡಿ ಕುಣಿಯುತ್ತಾ ವಿಸರ್ಜನೆ ಮಾಡಲಾಗುವುದು. ಈ ವರ್ಷ ಅನಂತ ಚತುರ್ಧಶಿ ಸೆಪ್ಟೆಂಬರ್ 19ಕ್ಕೆ ಇದೆ.



Click it and Unblock the Notifications