Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಗಣೇಶ ವಿಸರ್ಜನೆ 2021: ಯಾವ ದಿನ ಮಾಡಬಹುದು? ಶುಭ ಸಮಯ ಯಾವಾಗ?
ಗಣೇಶನ ಕೂರಿಸಿದ ಮೇಲೆ ಗಣೇಶ ವಿಸರ್ಜನೆ ಕುಡ ಅಷ್ಟೇ ಮುಖ್ಯವಾಗಿದೆ. ಗಣೇಶ ವಿಸರ್ಜನೆ ಹುಟ್ಟು, ಬದುಕು, ಸಾವಿನ ನಮ್ಮ ಜೀವನ ಚಕ್ರವನ್ನು ಸೂಚಿಸುತ್ತದೆ. ಗಣೇಶನ ಕೂರಿಸಿದ ಮೇಲೆ ಆ ದಿನ ಅಥವಾ 3, ದಿನವಾದ ಮೇಲೆ, 7 ದಿನವಾದ ಮೇಲೆ ಗಣೇಶ ವಿಸರ್ಜನೆ ಮಾಡಲಾಗುವುದು.
ಗಣೇಶ ವಿಸರ್ಜನೆಯನ್ನು ಗಣೇಶನ ಕೂರಿಸಿದ ಒಂದೂವರೆ ದಿನದ ನಂತರ ವಿಸರ್ಜನೆ ಮಾಡಬಹುದು. ಮೂರನೇ ದಿನ, ಐದನೇ ದಿನ, ಏಳನೇ ದಿನ ಹೀಗೆ ವಿಸರ್ಜನೆ ಮಾಡಲಾಗುವುದು.

ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
ಬೆಳಗ್ಗೆ ಶುಭ ಮುಹೂರ್ತ (ಶುಭ):06:16ರಿಂದ 07:48ರವರೆಗೆ
ಬೆಳಗ್ಗೆ ಮುಹೂರ್ತ (ಅಮೃತ):10:50ರಿಂದ 03:25ರವರೆಗೆ
ಮಧ್ಯಾಹ್ನದ ಮುಹೂರ್ತ (ಶುಭ): ಸಂಜೆ 04:56ರಿಂದ 06:27ರವರೆಗೆ
ಸಂಜೆ ಮುಹೂರ್ತ(ಅಮೃತ): ಸಂಜೆ 06:27ರಿಂದ 09:27ರವರೆಗೆ
ರಾತ್ರಿ ಮುಹೂರ್ತ: ರಾತ್ರಿ 12:22ರಿಂದ 01:50ರವರೆಗೆ

ಒಂದೂವರೆ ದಿನದ ಬಳಿಕ ಗಣೇಶ ವಿಸರ್ಜನೆ
ಗಣೇಶ ಕೂರಿಸಿ ಮಾರನೇಯ ದಿನ ಮಧ್ಯಾಹ್ನದ ಮೇಲೆ ಕೆಲವು ಕಡೆ ವಿಸರ್ಜನೆ ಮಾಡಲಾಗುವುದು. ಮಧ್ಯಾಹ್ನ ಹೊತ್ತು ಗಣೇಶನಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನದ ನಂತರ ಗಣೇಶನನ್ನು ತೆಗೆದುಕೊಂಡು ಹೋಗಿ ಗಣೇಶನ ವಿಸರ್ಜನೆ ಮಾಡಲಾಗುವುದು.

3ನೇ, 5ನೇ, 7ನೇ ದಿನ ಗಣೇಶ ವಿಸರ್ಜನೆ
ಅನಂತ ಚತುರ್ಧಶಿಗೆ ಗಣೇಶನ ವಿಸರ್ಜನೆ ಮಾಡುವುದು ತುಂಬಾ ಮಹತ್ವವಾದರೂ 3ನೇ, 5ನೇ, 7ನೇ ದಿನ ಕೂಡ ಗಣೇಶನ ವಿಸರ್ಜನೆ ಮಾಡಬಹುದು. ಗಣೇಶ ವಿಸರ್ಜನೆಯನ್ನು ಬೆಸ ಸಂಖ್ಯೆಯಲ್ಲಿ ಮಾಡಬೇಕು. ಗಣೇಶನ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವೆಂದರೆ 11ನೇ ದಿನವಾದ ಗಣೇಶ ಚತುರ್ಧಶಿಯಾಗಿದೆ.

ಅನಂತ ಚತುರ್ಧಶಿಯಂದು ಗಣೇಶನ ವಿಸರ್ಜನೆ
ಗಣೇಶನ ವಿಸರ್ಜನೆಗೆ ಈ ದಿನ ತುಂಬಾನೇ ಮಹತ್ವವಾದ ದಿನವಾಗಿದೆ. ಗಣೇಶನ ವಿಸರ್ಜನೆಗೆ ಮಾತ್ರವಲ್ಲ ವಿಷ್ಣು ಭಕ್ತರಿಗೂ ಈ ದಿನ ತುಂಬಾ ಮಹತ್ವದ್ದಾಗಿದೆ. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು ಹಾಗೂ ಕೈಗೆ ಪವಿತ್ರ ದಾರವನ್ನು ಕಟ್ಟಲಾಗುವುದು. ಈ ದಾರ ಎಲ್ಲಾ ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುವುದು ಎಂಬ ನಂಬಿಕೆ ಇದೆ.
11ನೇ ದಿನ ಗಣೇಶನ ವಿಸರ್ಜನೆ ಮಾಡಲಾಗುವುದು. ಸಾಮಾನ್ಯವಾಗಿ ನದಿ, ಕೆರೆ ಅಥವಾ ಕೊಳದಲ್ಲಿ ವಿಸರ್ಜನೆ ಮಾಡಲಾಗುವುದು. ಇದೀಗ ಪರಿಸರ ಉಳಿಸಲು ದೊಡ್ಡ ಡ್ರಮ್ ಅಥವಾ ಬಕೆಟ್ನಲ್ಲಿ ಮುಳುಗಿಸಲಾಗುವುದು. ಅಲ್ಲದೆ ಮಣ್ಣಿನ ಗಣಪನ ಬಳಕೆ ಹೆಚ್ಚಾಗಿದೆ. ಗಣೇಶನನನ್ನು ವಿಸರ್ಜನೆ ಮಾಡುವಾಗ ಜೈ ಗಣೇಶ.. ಎಂದು ಹಾಡಿ ಕುಣಿಯುತ್ತಾ ವಿಸರ್ಜನೆ ಮಾಡಲಾಗುವುದು. ಈ ವರ್ಷ ಅನಂತ ಚತುರ್ಧಶಿ ಸೆಪ್ಟೆಂಬರ್ 19ಕ್ಕೆ ಇದೆ.



Click it and Unblock the Notifications
