Latest Updates
-
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ!
ಗಣೇಶ ವಿಸರ್ಜನೆ 2021: ಯಾವ ದಿನ ಮಾಡಬಹುದು? ಶುಭ ಸಮಯ ಯಾವಾಗ?
ಗಣೇಶನ ಕೂರಿಸಿದ ಮೇಲೆ ಗಣೇಶ ವಿಸರ್ಜನೆ ಕುಡ ಅಷ್ಟೇ ಮುಖ್ಯವಾಗಿದೆ. ಗಣೇಶ ವಿಸರ್ಜನೆ ಹುಟ್ಟು, ಬದುಕು, ಸಾವಿನ ನಮ್ಮ ಜೀವನ ಚಕ್ರವನ್ನು ಸೂಚಿಸುತ್ತದೆ. ಗಣೇಶನ ಕೂರಿಸಿದ ಮೇಲೆ ಆ ದಿನ ಅಥವಾ 3, ದಿನವಾದ ಮೇಲೆ, 7 ದಿನವಾದ ಮೇಲೆ ಗಣೇಶ ವಿಸರ್ಜನೆ ಮಾಡಲಾಗುವುದು.
ಗಣೇಶ ವಿಸರ್ಜನೆಯನ್ನು ಗಣೇಶನ ಕೂರಿಸಿದ ಒಂದೂವರೆ ದಿನದ ನಂತರ ವಿಸರ್ಜನೆ ಮಾಡಬಹುದು. ಮೂರನೇ ದಿನ, ಐದನೇ ದಿನ, ಏಳನೇ ದಿನ ಹೀಗೆ ವಿಸರ್ಜನೆ ಮಾಡಲಾಗುವುದು.

ಗಣೇಶ ವಿಸರ್ಜನೆಗೆ ಶುಭ ಮುಹೂರ್ತ
ಬೆಳಗ್ಗೆ ಶುಭ ಮುಹೂರ್ತ (ಶುಭ):06:16ರಿಂದ 07:48ರವರೆಗೆ
ಬೆಳಗ್ಗೆ ಮುಹೂರ್ತ (ಅಮೃತ):10:50ರಿಂದ 03:25ರವರೆಗೆ
ಮಧ್ಯಾಹ್ನದ ಮುಹೂರ್ತ (ಶುಭ): ಸಂಜೆ 04:56ರಿಂದ 06:27ರವರೆಗೆ
ಸಂಜೆ ಮುಹೂರ್ತ(ಅಮೃತ): ಸಂಜೆ 06:27ರಿಂದ 09:27ರವರೆಗೆ
ರಾತ್ರಿ ಮುಹೂರ್ತ: ರಾತ್ರಿ 12:22ರಿಂದ 01:50ರವರೆಗೆ

ಒಂದೂವರೆ ದಿನದ ಬಳಿಕ ಗಣೇಶ ವಿಸರ್ಜನೆ
ಗಣೇಶ ಕೂರಿಸಿ ಮಾರನೇಯ ದಿನ ಮಧ್ಯಾಹ್ನದ ಮೇಲೆ ಕೆಲವು ಕಡೆ ವಿಸರ್ಜನೆ ಮಾಡಲಾಗುವುದು. ಮಧ್ಯಾಹ್ನ ಹೊತ್ತು ಗಣೇಶನಿಗೆ ಪೂಜೆ ಸಲ್ಲಿಸಿ ಮಧ್ಯಾಹ್ನದ ನಂತರ ಗಣೇಶನನ್ನು ತೆಗೆದುಕೊಂಡು ಹೋಗಿ ಗಣೇಶನ ವಿಸರ್ಜನೆ ಮಾಡಲಾಗುವುದು.

3ನೇ, 5ನೇ, 7ನೇ ದಿನ ಗಣೇಶ ವಿಸರ್ಜನೆ
ಅನಂತ ಚತುರ್ಧಶಿಗೆ ಗಣೇಶನ ವಿಸರ್ಜನೆ ಮಾಡುವುದು ತುಂಬಾ ಮಹತ್ವವಾದರೂ 3ನೇ, 5ನೇ, 7ನೇ ದಿನ ಕೂಡ ಗಣೇಶನ ವಿಸರ್ಜನೆ ಮಾಡಬಹುದು. ಗಣೇಶ ವಿಸರ್ಜನೆಯನ್ನು ಬೆಸ ಸಂಖ್ಯೆಯಲ್ಲಿ ಮಾಡಬೇಕು. ಗಣೇಶನ ವಿಸರ್ಜನೆಗೆ ತುಂಬಾ ಸೂಕ್ತವಾದ ದಿನವೆಂದರೆ 11ನೇ ದಿನವಾದ ಗಣೇಶ ಚತುರ್ಧಶಿಯಾಗಿದೆ.

ಅನಂತ ಚತುರ್ಧಶಿಯಂದು ಗಣೇಶನ ವಿಸರ್ಜನೆ
ಗಣೇಶನ ವಿಸರ್ಜನೆಗೆ ಈ ದಿನ ತುಂಬಾನೇ ಮಹತ್ವವಾದ ದಿನವಾಗಿದೆ. ಗಣೇಶನ ವಿಸರ್ಜನೆಗೆ ಮಾತ್ರವಲ್ಲ ವಿಷ್ಣು ಭಕ್ತರಿಗೂ ಈ ದಿನ ತುಂಬಾ ಮಹತ್ವದ್ದಾಗಿದೆ. ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಲಾಗುವುದು ಹಾಗೂ ಕೈಗೆ ಪವಿತ್ರ ದಾರವನ್ನು ಕಟ್ಟಲಾಗುವುದು. ಈ ದಾರ ಎಲ್ಲಾ ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುವುದು ಎಂಬ ನಂಬಿಕೆ ಇದೆ.
11ನೇ ದಿನ ಗಣೇಶನ ವಿಸರ್ಜನೆ ಮಾಡಲಾಗುವುದು. ಸಾಮಾನ್ಯವಾಗಿ ನದಿ, ಕೆರೆ ಅಥವಾ ಕೊಳದಲ್ಲಿ ವಿಸರ್ಜನೆ ಮಾಡಲಾಗುವುದು. ಇದೀಗ ಪರಿಸರ ಉಳಿಸಲು ದೊಡ್ಡ ಡ್ರಮ್ ಅಥವಾ ಬಕೆಟ್ನಲ್ಲಿ ಮುಳುಗಿಸಲಾಗುವುದು. ಅಲ್ಲದೆ ಮಣ್ಣಿನ ಗಣಪನ ಬಳಕೆ ಹೆಚ್ಚಾಗಿದೆ. ಗಣೇಶನನನ್ನು ವಿಸರ್ಜನೆ ಮಾಡುವಾಗ ಜೈ ಗಣೇಶ.. ಎಂದು ಹಾಡಿ ಕುಣಿಯುತ್ತಾ ವಿಸರ್ಜನೆ ಮಾಡಲಾಗುವುದು. ಈ ವರ್ಷ ಅನಂತ ಚತುರ್ಧಶಿ ಸೆಪ್ಟೆಂಬರ್ 19ಕ್ಕೆ ಇದೆ.



Click it and Unblock the Notifications











