Just In
Don't Miss
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Movies ಬಿಸಿಲು, ಮಳೆ, ಧೂಳು ಬರಲಿ.. ಯಶ್ ಇದ್ರೆ ಸಾಕು.. ಏನಂತೀರಾ?
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಣ್ಣಿನ ಗಣಪ ಮನೆಯಲ್ಲಿಯೇ ಮಾಡುವುದು ಹೇಗೆ?
ಆಗಸ್ಟ್ 31ಕ್ಕೆ ವಿನಾಯಕ ಚತುರ್ಥಿ. ಗಣೇಶ ಹಬ್ಬವೆಂದರೆ ಸಂಭ್ರಮವೋ-ಸಂಭ್ರಮ. ಈ ದಿನ ಶುಭ ಮಹೂರ್ತದಲ್ಲಿ ಮನೆಯಲ್ಲಿ ಗಣೇಶನನ್ನು ಕೂರಿಸಿ, ಅವನಿಗೆ ಸಿಹಿ ಕಡುಬು, ಕರ್ಜಿಕಾಯಿ, ಮೋದಕ, ಲಡ್ಡುಗಳನ್ನುಅರ್ಪಿಸಿ ತುಂಬಾ ಸಡಗರದಿಂದ ಈ ಹಬ್ಬವನ್ನು ಆಚರಿಸಲಾಗುವುದು.
ಗಣೇನನ್ನು ಕೂರಿಸಿದ ದಿನದಿಂದ ಗಣೇಶನನ್ನು ವಿಸರ್ಜನೆ ಮಾಡುವವರಿಗೆ ಮನೆಯಲ್ಲಿ ಹಬ್ಬದ ಕಳೆ. ಕೆಲವರು ಗಣೇಶನನ್ನು ಅದೇ ದಿನ ವಿಸರ್ಜನೆ ಮಾಡಿದರೆ ಇನ್ನು ಕೆಲವರು ಅನಂತ ಚತುರ್ದಶಿಯಂದು ವಿಸರ್ಜನೆ ಮಾಡುತ್ತಾರೆ. ಗಣೇಶನನ್ನು ಕೂರಿಸಿದ ಮೇಲೆ, ಒಂದೂವರೆ ದಿನಕ್ಕೆ , 3 , 5, 7 ಹಾಗೂ 11ನೇ ದಿನ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ಬೆಸ ಸಂಖ್ಯೆಯ ದಿನ ವಿಸರ್ಜನೆ ಮಾಡಬೇಕು. ಗಣೇಶನ ವಿಸರ್ಜನೆ ಮಾಡುವಷ್ಟೂ ದಿನ ಪೂಜೆ ಮಾಡಿ ಮಂಗಳಾರಾತಿ ಮಾಡಬೇಕು.
ಗಣೇಶ ಹಬ್ಬ ಸಂಸಂಸ್ಕೃತಿಯ ಪ್ರತಿರೂಪ. ಈ ಹಬ್ಬವನ್ನು ಪರಿಸರ ಪೂರಕವಾಗಿ ಆಚರಿಸಿದರೆ ಹಬ್ಬದ ಸಡಗರದ ಜೊತೆಗೆ ನಮ್ಮಿಂದ ಪ್ರಕೃತಿಗೆ ಹಾನಿಯುಂಟಾಗುವುದನನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಗಣಪತಿ ಮೂರ್ತಿಯನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ಆಚರಿಸಲಾಗುವುದು, ಆದರೆ ಈ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೆ ಕರಗುವುದಿಲ್ಲ, ಅಲ್ಲದೆ ಅದರಲ್ಲಿ ಬಳಸಿರುವ ಬಣ್ಣ ಕೂಡ ನೀರಿನಲ್ಲಿ ಬಿಟ್ಟು ಜಲಚರಗಳಿಗೆ ಹಾನಿಯುಂಟಾಗುವುದು. ಅದರ ಬದಲಿಗೆ ಮಣ್ಣಿನಿಂದಲೇ ಗಣೇಶನ ಮೂರ್ತಿ ಮಾಡಿ ಹಬ್ಬವನ್ನು ಆಚರಿಸಿ. ಮಣ್ಣಿನ ಗಣಪವನ್ನು ಮನೆಯಲ್ಲಿ ಡ್ರಮ್ನಲ್ಲಿ ಹಾಕಬಹುದು ಅಥವಾ ಹೂ ಕುಂಡದಲ್ಲಿ ನೀರು ತುಂಬಿ ಹಾಕಬಹುದು. ಆದ್ದರಿಂದ ಪರಿಸರ ಸ್ನೇಹಿ ಗಣಪನ ಹಬ್ಬ ಆಚರಿಸಿ.
ನೀವು ಮಣ್ಣಿನ ಗಣಪತಿಯನ್ನು ಮನೆಯಲ್ಲಿಯೇ ಮಾಡಬಹುದು, ಮಾಡುವುದು ಹೇಗೆ ಎಂದು ವೀಡಿಯೋದಲ್ಲಿ ನೀಡಲಾಗಿದೆ ನೋಡಿ: