Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಣ್ಣಿನ ಗಣಪ ಮನೆಯಲ್ಲಿಯೇ ಮಾಡುವುದು ಹೇಗೆ?
ಆಗಸ್ಟ್ 31ಕ್ಕೆ ವಿನಾಯಕ ಚತುರ್ಥಿ. ಗಣೇಶ ಹಬ್ಬವೆಂದರೆ ಸಂಭ್ರಮವೋ-ಸಂಭ್ರಮ. ಈ ದಿನ ಶುಭ ಮಹೂರ್ತದಲ್ಲಿ ಮನೆಯಲ್ಲಿ ಗಣೇಶನನ್ನು ಕೂರಿಸಿ, ಅವನಿಗೆ ಸಿಹಿ ಕಡುಬು, ಕರ್ಜಿಕಾಯಿ, ಮೋದಕ, ಲಡ್ಡುಗಳನ್ನುಅರ್ಪಿಸಿ ತುಂಬಾ ಸಡಗರದಿಂದ ಈ ಹಬ್ಬವನ್ನು ಆಚರಿಸಲಾಗುವುದು.

ಗಣೇನನ್ನು ಕೂರಿಸಿದ ದಿನದಿಂದ ಗಣೇಶನನ್ನು ವಿಸರ್ಜನೆ ಮಾಡುವವರಿಗೆ ಮನೆಯಲ್ಲಿ ಹಬ್ಬದ ಕಳೆ. ಕೆಲವರು ಗಣೇಶನನ್ನು ಅದೇ ದಿನ ವಿಸರ್ಜನೆ ಮಾಡಿದರೆ ಇನ್ನು ಕೆಲವರು ಅನಂತ ಚತುರ್ದಶಿಯಂದು ವಿಸರ್ಜನೆ ಮಾಡುತ್ತಾರೆ. ಗಣೇಶನನ್ನು ಕೂರಿಸಿದ ಮೇಲೆ, ಒಂದೂವರೆ ದಿನಕ್ಕೆ , 3 , 5, 7 ಹಾಗೂ 11ನೇ ದಿನ ವಿಸರ್ಜನೆ ಮಾಡಲಾಗುವುದು. ಗಣೇಶನನ್ನು ಬೆಸ ಸಂಖ್ಯೆಯ ದಿನ ವಿಸರ್ಜನೆ ಮಾಡಬೇಕು. ಗಣೇಶನ ವಿಸರ್ಜನೆ ಮಾಡುವಷ್ಟೂ ದಿನ ಪೂಜೆ ಮಾಡಿ ಮಂಗಳಾರಾತಿ ಮಾಡಬೇಕು.
ಗಣೇಶ ಹಬ್ಬ ಸಂಸಂಸ್ಕೃತಿಯ ಪ್ರತಿರೂಪ. ಈ ಹಬ್ಬವನ್ನು ಪರಿಸರ ಪೂರಕವಾಗಿ ಆಚರಿಸಿದರೆ ಹಬ್ಬದ ಸಡಗರದ ಜೊತೆಗೆ ನಮ್ಮಿಂದ ಪ್ರಕೃತಿಗೆ ಹಾನಿಯುಂಟಾಗುವುದನನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಗಣಪತಿ ಮೂರ್ತಿಯನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ಆಚರಿಸಲಾಗುವುದು, ಆದರೆ ಈ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೆ ಕರಗುವುದಿಲ್ಲ, ಅಲ್ಲದೆ ಅದರಲ್ಲಿ ಬಳಸಿರುವ ಬಣ್ಣ ಕೂಡ ನೀರಿನಲ್ಲಿ ಬಿಟ್ಟು ಜಲಚರಗಳಿಗೆ ಹಾನಿಯುಂಟಾಗುವುದು. ಅದರ ಬದಲಿಗೆ ಮಣ್ಣಿನಿಂದಲೇ ಗಣೇಶನ ಮೂರ್ತಿ ಮಾಡಿ ಹಬ್ಬವನ್ನು ಆಚರಿಸಿ. ಮಣ್ಣಿನ ಗಣಪವನ್ನು ಮನೆಯಲ್ಲಿ ಡ್ರಮ್ನಲ್ಲಿ ಹಾಕಬಹುದು ಅಥವಾ ಹೂ ಕುಂಡದಲ್ಲಿ ನೀರು ತುಂಬಿ ಹಾಕಬಹುದು. ಆದ್ದರಿಂದ ಪರಿಸರ ಸ್ನೇಹಿ ಗಣಪನ ಹಬ್ಬ ಆಚರಿಸಿ.
ನೀವು ಮಣ್ಣಿನ ಗಣಪತಿಯನ್ನು ಮನೆಯಲ್ಲಿಯೇ ಮಾಡಬಹುದು, ಮಾಡುವುದು ಹೇಗೆ ಎಂದು ವೀಡಿಯೋದಲ್ಲಿ ನೀಡಲಾಗಿದೆ ನೋಡಿ:



Click it and Unblock the Notifications












