Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಇಂತಹ ವಸ್ತುಗಳನ್ನು ಭಗವಾನ್ ಹನುಮಂತನಿಗೆ ಅರ್ಪಿಸಿ- ಆತ ಸಂತುಷ್ಟನಾಗುವನು
ರಾಮನ ಬಂಟ ಹನುಮಂತ ಎಂಬುದು ಪುರಾಣ ಕಾಲದಿಂದಲೂ ಜನಜನಿತವಾಗಿರುವ ಮಾತಾಗಿದೆ. ರಾಮನ ಮೇಲಿನ ಭಕ್ತಿಯನ್ನು ಹನುಮಂತನು ಹಲವಾರು ಪ್ರಕಾರಗಳಲ್ಲಿ ಪ್ರಕಟಪಡಿಸಿದ್ದಾರೆ. ಸೀತಾಮಾತೆಯನ್ನು ರಾಮನ ಕಾರಾಗೃಹದಲ್ಲಿ ನೋಡಿ ಸಂಧಿಸಿದ್ದು, ಲಂಕೆಗೆ ತನ್ನ ಅನುಚರರ ಜತೆಗೂಡಿ ಕಲ್ಲಿನ ಸೇತುವೆಯನ್ನು ನಿರ್ಮಾಣ ಮಾಡಿದ್ದು, ರಾಕ್ಷಸರೊಂದಿಗೆ ಕಲಹ ಮಾಡಿದ್ದು, ಯುದ್ಧ ಮಾಡಿದ್ದು ಹೀಗೆ ರಾಮನನ್ನು ತನ್ನ ಹೃದಯ ಕಮಲದಲ್ಲಿ ಹನುಮಂತನು ಇಟ್ಟಿದ್ದರು. ತಮ್ಮ ಹೃದಯವನ್ನು ಒಮ್ಮೆ ಅವರು ಹರಿದು ತೋರಿಸಿದಾಗ ಅಲ್ಲಿ ಸೀತಾ ರಾಮರು ನೆಲೆಸಿದ್ದರು. ಅಂದರೆ ಹನುಮನ ಭಕ್ತಿಯನ್ನು ನಾವಿಲ್ಲಿ ಕಾಣಬಹುದಾಗಿದೆ.

ಶಿವನ ಅನುಗ್ರಹದಿಂದ ಆಂಜನೇಯನು ಅಂಜನೆಗೆ ಪುತ್ರನಾಗಿ ಜನಿಸುತ್ತಾರೆ, ಶಿವನ ಇನ್ನೊಂದು ರೂಪವೇ ಆಂಜನೇಯ ಎಂಬುದಾಗಿ ಪುರಾಣಗಳು ಬಣ್ಣಿಸುತ್ತವೆ. ಅಪ್ಸರೆಯಾಗಿದ್ದ ಅಂಜನೆಯನ್ನು ಬ್ರಹ್ಮನು ಭೂಮಿಗೆ ಮಾನವ ರೂಪದಲ್ಲಿ ಕಳುಹಿಸುತ್ತಾರೆ. ಕೇಸರಿಯೊಂದಿಗೆ ಪ್ರೇಮಾಂಕುರವಾಗಿ ಆಕೆ ಆತನನ್ನು ವಿವಾಹವಾಗುತ್ತಾಳೆ, ಮತ್ತು ಅವರ ಪುತ್ರನಾಗಿ ಆಂಜನೇನು ಜನಿಸುತ್ತಾರೆ.

ಹನುಮನ ದವಡೆ ವಿರೂಪಗೊಳ್ಳಲು ಕಾರಣಗಳು
ಅನುರೂಪವಲ್ಲದ ದವಡೆಯನ್ನು ಹೊಂದಿರುವವರು ಎಂಬುದು ಹನುಮಾನ್ ಹೆಸರಿನ ಅರ್ಥವಾಗಿದೆ. ಇಂದ್ರನು ತನ್ನ ವಜ್ರಾಯುಧದಿಂದ ಹೊಡೆದಿದ್ದಕ್ಕೆ ಹನುಮನ ದವಡೆ ವಿರೂಪಗೊಂಡಿತು. ತದನಂತರ ಅವರ ಹೆಸರು ಹನುಮಂತ ಎಂದಾಯಿತು.

ರಾಮನ ಭಕ್ತ
ಹನುಮಂತನು ರಾಮನ ಭಕ್ತನಾಗಿದ್ದಾರೆ, ವಿಷ್ಣುವಿನ ಅವತಾರವಾಗಿರುವ ರಾಮನು ದಶರಥನ ಮಗನಾಗಿ ಭೂಮಿಯಲ್ಲಿ ಜನಿಸುತ್ತಾರೆ. ಭಕ್ತರ ಕಷ್ಟಕಾರ್ಪಣ್ಯವನ್ನು ತೊಡೆದು ಹಾಕಲು ಅವರು ಜನ್ಮತಾಳಿದ್ದಾರೆ ಎನ್ನಲಾಗಿದೆ. ಅದರಲ್ಲೂ ಹನುಮನು ದುಷ್ಟಶಕ್ತಿಗಳ ಹುಟ್ಟಡಗಿಸಲು ಸಮರ್ಥರು. ಹನುಮನ ಸ್ರೋತ್ರ ಜಪಿಸಿ ಮಲಗಿದರೆ ಯಾವುದೇ ರೀತಿಯ ಕೆಟ್ಟ ಕನಸುಗಳು, ಕೆಟ್ಟ ಶಕ್ತಿಗಳು ನಮ್ಮ ಮೇಲೆ ದಾಳಿ ಮಾಡಲಾರವು. ಹನುಮಂತನನ್ನು ಪೂಜಿಸುವುದರಿಂದ ಶಿವ ಮತ್ತು ಶನಿ ದೇವರ ಕೃಪಾಕಟಾಕ್ಷಕವನ್ನು ಪಡೆದುಕೊಳ್ಳಬಹುದಾಗಿದೆ. ಈ ಕೆಳಗಿನ ವಸ್ತುಗಳನ್ನು ಅವರಿಗೆ ಅರ್ಪಿಸಿ ಅವರ ಅನುಗ್ರಹವನ್ನು ಪಡೆದು ಕೊಳ್ಳಬಹುದಾಗಿದೆ.

ಮಲ್ಲಿಗೆ ಎಣ್ಣೆ
ಶಿವನನ್ನು ಪೂಜಿಸಿ ಅವರ ಅನುಗ್ರಹವನ್ನು ಪಡೆದಂತೆಯೇ ನಾವು ಹನುಮನನ್ನು ಪೂಜಿಸಿ ಅವರನ್ನು ಒಲಿಸಿಕೊಳ್ಳಬಹುದಾಗಿದೆ. ಮಲ್ಲಿಗೆ ಎಣ್ಣೆಯನ್ನು ಹನುಮನಿಗೆ ನೀಡಿ ಅವರ ಅನುಗ್ರಹವನ್ನು ಪಡೆದುಕೊಳ್ಳಬಹುದಾಗಿದೆ. ಕುಂಕುಮವನ್ನು ಕೂಡ ದೇವರಿಗೆ ನೀಡಬಹುದು.

ಕುಂಕುಮ
ಒಮ್ಮೆ ಸೀತಾಮಾತೆಯು ತನ್ನ ಹಣೆಗೆ ಸಿಂಧೂರವನ್ನಿಟ್ಟುಕೊಳ್ಳುವುದನ್ನು ಹನುಮಂತನು ನೋಡುತ್ತಾರೆ. ಇದು ಏಕೆ ಎಂಬುದಾಗಿ ಸೀತೆಯನ್ನು ಹನುಮಂತನು ಕೇಳಿದಾಗ ಸೀತೆಯ ಇದು ತನ್ನ ಸೌಭಾಗ್ಯದ ಸಂಕೇತವಾಗಿದ್ದು, ರಾಮನ ಮೇಲಿನ ನನ್ನ ಪ್ರೀತಿ ಕಾಳಜಿಯನ್ನು ಈ ಸಿಂಧೂರವನ್ನಿಟ್ಟುಕೊಂಡು ತಾನು ಪ್ರದರ್ಶಿಸುತ್ತಿರುವುದಾಗಿ ಸೀತೆಯು ಹೇಳುತ್ತಾರೆ. ಇದನ್ನು ಕೇಳಿದ ಹನುಮಂತನು ತನ್ನ ಮೈಗೆಲ್ಲಾ ಕುಂಕುಮನ್ನು ಹಚ್ಚಿಕೊಂಡು ರಾಮನ ಮೇಲಿದ್ದ ತನ್ನ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ತದನಂತರ ಕುಂಕುವನ್ನು ಹನುಮನಿಗೆ ಅರ್ಪಿಸಲಾಗುತ್ತದೆ.

ಗೋಧಿ ಮತ್ತು ಬೆಲ್ಲ
ಉತ್ತರ ಭಾರತದಲ್ಲಿರುವ ಹೆಚ್ಚಿನ ಜನರು ಬೇರೆ ಬೇರೆ ವಸ್ತುಗಳನ್ನು ಹನುಮನಿಗೆ ಅರ್ಪಿಸುತ್ತಾರೆ. ಇದರಲ್ಲಿ ಬೆಲ್ಲ ಮತ್ತು ಗೋಧಿ ಕೂಡ ಸೇರಿದೆ. ಪೂರ್ಣಿಮೆಯ ದಿನ ಹನುಮಂತನಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ ಮತ್ತು ಅವರಿಗೆ ಆಹಾರವನ್ನು ನೀಡಲಾಗುತ್ತದೆ. ಕುಲದೇವರಾಗಿ ಹನುಮಂತನನ್ನು ಪೂಜಿಸುವವರು ಇದನ್ನು ಮಾಡುತ್ತಾರೆ . ಗೋಧಿ ಮತ್ತು ಬೆಲ್ಲದಿಂದ ಮಾಡಿದ ಆಹಾರ ಪದಾರ್ಥಗಳನ್ನು ಹನುಮನಿಗೆ ನೀಡುತ್ತಾರೆ.

ಅಕ್ಕಿ
ತಿಥಿಗಳಲ್ಲಿ ಪೂರ್ಣಿಮೆಯನ್ನು ಹನುಮಂತನಿಗೆ ಅರ್ಪಿಸಲಾಗುತ್ತದೆ. ವಾರಗಳಲ್ಲಿ ಗುರುವಾದರಂದು ಹನುಮಂತನಿಗೆ ವಿಶೇಷ ಪೂಜೆಯನ್ನು ಅರ್ಪಿಸಲಾಗುತ್ತದೆ. ಬ್ರಹ್ಮ ಸ್ನಾನವನ್ನು ಮಾಡಿ (ಬೆಳಗ್ಗೆ 4 ರಿಂದ 6 ಒಳಗೆ ಮಾಡುವ ಸ್ನಾನ) ಅವರನ್ನು ಪೂಜಿಸಲಾಗುತ್ತದೆ. ನಂತರ ಅಕ್ಕಿ ಮತ್ತು ತೆಂಗಿನ ಕಾಯಿಯನ್ನು ನೀಡಿ ಪಂಚೋಪಚಾರವನ್ನು ಮಾಡಲಾಗುತ್ತದೆ ಇದನ್ನು ಹನುಮನ ದೇವಸ್ಥಾನದಲ್ಲಿ ಮಾಡುತ್ತಾರೆ.

ಕೇಸರಿ ಬಣ್ಣದ ಬಾವುಟ
ಅಂಜನೀ ಪುತ್ರ ಹನುಮನ ಆಶೀರ್ವಾದವನ್ನು ಪಡೆದುಕೊಳ್ಳಲು ಹನುಮಾನ್ ಚಾಲೀಸವನ್ನು ಪಠಿಸಬೇಕು. ಇದು ನಿಮ್ಮ ಜ್ಞಾನವನ್ನು ಉತ್ತಮಗೊಳಿಸುತ್ತದೆ ಮತ್ತು ಆರನೆಯ ಇಂದ್ರಿಯನ್ನು ಎಚ್ಚರ ಸ್ಥಿತಿಯಲ್ಲಿರಿಸುತ್ತದೆ. ಪ್ರತೀ ದಿನ ಹನುಮಾನ್ ಚಾಲೀಸವನ್ನು ಪಠಿಸಬೇಕು ಇಲ್ಲಿದ್ದರೆ ಮಂಗಳವಾರದಂದು ಕೇಸರಿ ಬಣ್ಣದ ಬಾವುಟವನ್ನು ದೇವಸ್ಥಾನದಲ್ಲಿ ಪೂರ್ಣಿಮೆಯಂದು ನೀಡಬೇಕು.



Click it and Unblock the Notifications