Just In
- just now ಗುರು ಸಂಚಾರ: ಮೇ 1ರಿಂದ 3ನೇ ಸ್ಥಾನದಲ್ಲಿರುವ ಗುರು ಮೀನ ರಾಶಿಯವರಿಗೆ ಅದೃಷ್ಟವೇ?
- 12 hrs ago ಗುರು ಸಂಚಾರದಿಂದ ಕುಂಭ ರಾಶಿಯವರ ಆರ್ಥಿಕ ಬದುಕು ಸುಧಾರಿಸಲಿದೆಯೇ?
- 12 hrs ago ಮೇ 1ರಿಂದ ಗುರು ಮಕರ ರಾಶಿಯಲ್ಲಿ ಪಂಚಮ ಸ್ಥಾನದಲ್ಲಿ ಇರುವುದರಿಂದ ಈ ರೀತಿಯೆಲ್ಲಾ ಪ್ರಯೋಜನಗಳಿವೆ
- 13 hrs ago ದಿನ ಭವಿಷ್ಯ: ಈ ದಿನ 12 ರಾಶಿಗಳಲ್ಲಿ ಈ ರಾಶಿಗಳಿಗೆ ಅದ್ಭುತ ದಿನ
Don't Miss
- Movies "ರಾಘವೇಂದ್ರ ಸ್ವಾಮಿಗಳು ನನ್ನ ತಾತ"; ರಾಯರ ನೆನೆದು ಭಾವುಕರಾಗಿದ್ದೇಕೆ ಬೇಬಿ ಇಂದಿರಾ?
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶೂನ್ಯ ಮಾಸವಾದ ಧನುರ್ಮಾಸ ಶುಭ ಕಾರ್ಯಕ್ಕೆ ಶ್ರೇಷ್ಠವಲ್ಲ, ಪೂಜೆಗೆ ಶ್ರೇಷ್ಠ ಏಕೆ?
ಹಿಂದೂ ಪಂಚಾಂಗದ ಪ್ರಕಾರ ಇದೀಗ ಮಾರ್ಗಶಿರ ಮಾಸ. ಇದನ್ನು, ಸೌರಮಾನದ ಪ್ರಕಾರ ಧನುರ್ಮಾಸ (ಧನುರ್ ಮಾಸ) ಎಂದು ಕೂಡ ಕರೆಯಲಾಗುವುದು . ಮರಗಟ್ಟುವ ಕೊರೆಯುವ ಚಳಿಯಲ್ಲಿ ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ ಪೂಜೆಯನ್ನು ಮಾಡುತ್ತಾ ಈ ಮಾಸದ ಆಚರಣೆ ಮಾಡಲಾಗುವುದು. 9ನೇ ಮಾಸವಾದ ಇದನ್ನು ಶೂನ್ಯ ಮಾಸವೆಂದು ಕೆಲವರು ಹೇಳಿದರೆ ಇನ್ನು ಇದನ್ನು ಶ್ರೇಷ್ಠ ಮಾಸವೆಂದು ಮತ್ತೆ ಕೆಲವರು ಹೇಳುತ್ತಾರೆ. ಆದ್ದರಿಂದ ಈ ಮಾಸದ ಕುರಿತು ಹಲವರಿಗೆ ಗೊಂದಲಗಳಿವೆ.
ನಾವಿಲ್ಲಿ ಧನುರ್ಮಾಸವನ್ನು ಏಕೆ ಶೂನ್ಯ ಮಾಸವೆಂದು ಹೇಳಲಾಗುವುದು, ಯಾವ ಕಾರ್ಯಕ್ಕೆ ಈ ಮಾಸ ಶ್ರೇಷ್ಠ ಎಂಬುವುದರ ಬಗ್ಗೆ ಹೇಳಲಾಗಿದೆ ನೋಡಿ.
ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆ
ಸೂರ್ಯ ಧನು ರಾಶಿಗೆ ಪ್ರವೇಶಿಸುವ ದಿನದಿಂದ ಧನುರ್ಮಾಸ ಪ್ರಾರಂಭವಾಗುತ್ತದೆ. ಈ ತಿಂಗಳು ಡಿಸೆಂಬರ್ 15ಕ್ಕೆ ಸೂರ್ಯನು ಧನು ರಾಶಿಗೆ ಸಂಚರಿಸುತ್ತಿದ್ದಾನೆ. ವೇದ, ಪುರಾಣಗಳಲ್ಲಿ ಈ ಮಾಸವನ್ನು ದೈವೀ ಕಾರ್ಯಗಳಿಗೆ ಶ್ರೇಷ್ಠ ಎಂದು ಹೇಳಲಾಗಿದೆ. ಈ ಮಾಸದಲ್ಲಿ ದೇವಾಲಯಗಳಲ್ಲಿ ಪೂಜೆಗಷ್ಟೇ ಮೀಸಲಿರಿಸಲಾಗಿದೆ. ಈ ಮಾಸದಲ್ಲಿ ವಿಷ್ಣುವಿನ ಆರಾಧನೆ ಮಾಡಲಾಗುವುದು. ಕೃಷ್ಣನಿಗೂ ಇದು ಪ್ರಿಯವಾದ ಮಾಸವಾಗಿದೆ.
ಧನುರ್ಮಾಸದಲ್ಲಿ ಮಾಡುವ ಪೂಜೆಗಳಿಗೆ ಸಿಗುವುದು ವಿಶೇಷ ಫಲ
ಹಿಂದೂ ಪಂಚಾಗದಲ್ಲಿ ಕಾಲವನ್ನು ಉತ್ತರಾಯಣ ಪ್ಯುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ಎಂದು ವಿಭಾಗಿಸಲಾಗಿದೆ. ನಮ್ಮ ಕಾಲ ಗಣನೆಗೂ ದೇವತೆಗಳ ಕಾಲಗಣನೆಗೂ ವ್ಯತ್ಯಾಸವಿದೆ. ದೇವತೆಗಳ ಒಂದು ದಿನ ನಮಗೆ ಒಂದು ವರ್ಷದ ಅವಧಿಗೆ ಎಂದು ಹೇಳಲಾಗುವುದು. ಮಾರ್ಗಶಿರ ಮಾಸ/ ಧನುರ್ ಮಾಸದ ಅವಧಿಯು ದೇವತೆಗಳಿಗೆ ಶ್ರೇಷ್ಠ ಮುಹೂರ್ತ ಇರುವ ಸಮಯ. ನಮ್ಮ ಈ ಒಂದು ಮಾಸದ ಅವಧಿ ದೇವತೆಗಳಿಗೆ ಪೂರ್ತಿ ಬ್ರಹ್ಮ ಮುಹೂರ್ತವಿದ್ದಂತೆ. ಈ ಕಾರಣದಿಂದ ದೇವತೆಗಳಿಗೆ ಶ್ರೇಷ್ಠವಾದ ಸಮಯದಲ್ಲಿ ನಾವು ದೈವಾರಾಧನೆ ಮಾಡಿದರೆ ಅದಕ್ಕೆ ವಿಶೇಷ ಫಲ ಸಿಗಲಿದೆ.
ಶುಭ ಕಾರ್ಯಕ್ಕೆ ಶ್ರೇಷ್ಠವಲ್ಲ ಏಕೆ?
ನಾಮಕರಣ, ವಿವಾಹ ಮೊದಲಾದ ಶುಭ ಮುಹೂರ್ತಗಳಿಗೆ ಈ ಮಾಸ ಶ್ರೇಷ್ಠವಲ್ಲ, ಈ ಮಾಸವನ್ನು ದೇವಾಲಯದಲ್ಲಿ ಪೂಜೆಗಷ್ಏ ಮೀಸಲಿರಿಸಲಾಗಿದೆ, ಆದ್ದರಿಂದ ಧನುರ್ ಮಾಸದಲ್ಲಿ ಮದುವೆ ಮುಂತಾದ ಶುಭ ಕಾರ್ಯ ಮಾಡಲಾಗುವುದಿಲ್ಲ, ಆದ್ದರಿಂದ ಇದನ್ನು ಶೂನ್ಯ ಮಾಸವೆಂದು ಕರೆಯಲಾಗುವುದು. ಈ ಮಾಸದಲ್ಲಿ ಬೆಳಗ್ಗೆ ತಣ್ಣೀರು ಸ್ನಾನ ಮಾಡಿ, ಇಷ್ಟ ದೇವರನ್ನು ಪ್ರಾರ್ಥಿಸುವುದರಿಂದ ಒಳ್ಳೆಯ ಫಲ ಸಿಗುವುದು.
ಸಂತಾನ ಭಾಗ್ಯಕ್ಕಾಗಿ ಸುಬ್ರಹ್ಮಣ್ಯನಿಗೆ ಪೂಜೆ
ಈ ಮಾಸದಲ್ಲಿ ಅಮಾವಾಸ್ಯೆಯ 6 ದಿನಗಳ ನಂತರ ಚಂಪ ಷಷ್ಟಿಯನ್ನು ಆಚರಿಸಲಾಗುತ್ತದೆ. ಸಂತಾನವಿಲ್ಲದವರು ಈ ಷಷ್ಠಿಯ ದಿನದಂದು ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿದರೆ ಸಂತಾನ ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ...... ಚಂಪ ಷಷ್ಠಿ ಡಿಸೆಂಬರ್ 20ರಂದು ನಡೆಯಲಿದೆ.