Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಇಂದು ಭೂಮಿ ಹುಣ್ಣಿಮೆ: ಆ ಆಚರಣೆಯ ವೈಶಿಷ್ಟ್ಯತೆ ಏನು?
ನಾವು ಆಚರಿಸುವ ಅನೇಕ ಹಬ್ಬಗಳಿಗೆ ಭೂಮಿ ತಾಯಿ ಜೊತೆ ಸಂಬಂಧವಿರುತ್ತದೆ. ಬಹುತೇಕ ಹಬ್ಬಗಳಲ್ಲಿ ಒಂದಲ್ಲಾ ಒಂದು ವಿಧಾನದಲ್ಲಿ ಭೂಮಿಗೆ ಪೂಜೆ ಸಲ್ಲಿಸುತ್ತೇವೆ. ಅದೇ ರೀತಿ ಇಂದು ಅಂದ್ರೆ ಅಕ್ಟೋಬರ್ 20ರಂದು ಮಲ್ನಾಡ್ ಕಡೆ ಭೂಮಿ ಹುಣ್ಣಿಮೆಯನ್ನು ಆಚರಿಸಲಾಗುತ್ತಿದೆ.
ಈ ಹಬ್ಬವನ್ನು ರಾಜರ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಮಲ್ನಾಡ್ನ ಗ್ರಾಮಗಳಲ್ಲಿ ಈ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಲಾಗುವುದು. ಈ ದಿನ ಗರ್ಭಿಣಿ ಮಹಿಳೆಗೆ ಸೀಮಂತ ಶಾಸ್ತ್ರ ಮಾಡುವಂತೆಯೇ ಭೂಮಿ ತಾಯಿಗೆ ಪೂಜೆಯನ್ನು ಸಲ್ಲಿಸಲಾಗುವುದು. ಈ ಹಬ್ಬದ ವೈಶಿಷ್ಟ್ಯವೇನು, ಆಚರಣೆ ಹೇಗೆ ಎಂದು ನೋಡೋಣ ಬನ್ನಿ:

ಭೂ ತಾಯಿಗೆ ಪೂಜೆ
ಗರ್ಭಿಣಿಯರಿಗೆ ಸೀಮಂತ ಮಾಡುವಂತೆಯೇ ಭೂಮಿ ತಾಯಿಗೆ ಪೂಜೆ ಸಲ್ಲಿಸಲಾಗುವುದು. ಈ ಹಬ್ಬದಲ್ಲಿ ಭೂಮಿ ತಾಯಿಗೆ ಪೂಜೆ ಮಾಡಲು ತಿನಿಸುಗಳು ಹಾಗೂ ಹೊಲದಲ್ಲಿ ಬೆಳೆದ ಬುಟ್ಟಿಯನ್ನು ತುಂಬಿ ತೆಗೆದುಕೊಂಡು ಹೋಗಲಾಗುವುದು. ಈ ಬುಟ್ಟಿಗಳನ್ನು ಮಹಿಳೆಯರು ಕೆಲವು ವಾರಗಳಿಗೆ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿರುತ್ತಾರೆ.
ಬುಟ್ಟಿಗೆ ಸೆಗಣಿ, ಕೆಮ್ಮಣ್ಣು ಹಚ್ಚಿ ಒಣಗಿಸಲಾಗುವುದು. ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುವುದು.
ನಂತರ ಹಬ್ಬದ ಹಿಂದಿನ ದಿನವೇ ಬುಟ್ಟಿಗೆ ಹೊಲದಲ್ಲಿ ಬೆಳೆದ ತರಕಾರಿಗಳನ್ನು ತುಂಬಲಾಗುವುದು. ಕೆಲವೊಂದು ಬಗೆಯ ಸಿಹಿ ತಿನಿಸುಗಳನ್ನು ಕೂಡ ತಯಾರಿಸಲಾಗುವುದು.

ತಾಳಿಸರವನ್ನೇ ಬಿಚ್ಚಿ ತೋರಣವಾಗಿ ಕಟ್ಟಿ ಪೂಜೆ
ಅಡುಗೆಯನ್ನು ಬುಟ್ಟಿಯಲ್ಲಿ ತುಂಬಾ ಕುಟುಂಬದ ಸದಸ್ಯರೆಲ್ಲರೂ ಜಮೀನಿಗೆ ಹೋಗಿ, ಮುತ್ತೈದೆಯರು ತಮ್ಮ ತಾಳಿಯನ್ನು ಬಿಚ್ಚಿ ಭತ್ತಕ್ಕೆ ಕಟ್ಟಿ ಪೂಜೆಯನ್ನು ಮಾಡುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ತಾಳಿಯನ್ನು ದೇವರ ಸಮಾನವಾಗಿ ಪೂಜಿಸಲಾಗುತ್ತದೆ. ತುಂಬಾ ಸಂಪ್ರದಾಯಸ್ಥ ಹೆಣ್ಮಕ್ಕಳು ಯಾವುದೇ ಕಾರಣಕ್ಕೆ ಕುತ್ತಿಗೆಯಿಂದ ತಾಳಿಯನ್ನು ಬಿಚ್ಚುವುದಿಲ್ಲ, ಆದರೆ ಈ ಸಂದರ್ಭದಲ್ಲಿ ತಮ್ಮ ತಾಳಿಯಿಂದಲೇ ಭೂ ತಾಯಿಗೆ ಅಲಂಕರಿಸಿ ಪೂಜೆ ಮಾಡುವುದೇ ವಿಶೇಷತೆ.
ಈ ದಿನ ಪೂಜೆ ಮಾಡುವ ಸ್ಥಳವನ್ನು ಸ್ವಚ್ಛಗೊಳಿಸಿ, ಬಾಳೆ ಗಿಡದ ಮಂಟಪ ಮಾಡಿ, ಮಾವಿನೆಲೆಯ ತೋರಣ ಕಟ್ಟಿ ದೇವರಿಗೆ ಪೂಜೆ ಮಾಡಲಾಗುವುದು. ಭೂ ತಾಯಿಗೆ ಬಗೆ-ಬಗೆಯ ತಿಂಡಿಗಳನ್ನು ಅರ್ಪಿಸಿ, ಬಾಗಿನ ನೀಡಿ ನಮ್ಮನ್ನು ಹರಿಸುವಂತೆ ಪ್ರಾರ್ಥಿಸಲಾಗುವುದು. ಹೋಳಿಗೆ, ಸಜ್ಜೆರೊಟ್ಟಿ, ಶೇಂಗಾ ಉಂಡೆ ಮುಂತಾದ ವಿಶೇಷ ಖಾದ್ಯಗಳನ್ನು ಈ ಹಬ್ಬದಲ್ಲಿ ತಯಾರಿಸಲಾಗುವುದು.
ಕಾಗೆ, ಇಲಿಗಳಿಗೆ ಆಹಾರ ನೀಡಲಾಗುವುದು
ಪೈರಿಗೆ ಪೂಜೆ ಸಲ್ಲಿಸಿದ ಬಳಿಕ ಆಹಾರದ ಎಡೆಯನ್ನು ಕಾಗೆಗೆ ನೀಡಲಾಗುವುದು. ಸ್ವರ್ಗಸ್ಥರಾದ ಹಿರಿಯರು ಕಾಗೆಯ ರೂಪದಲ್ಲಿ ಬಂದು ತಿಂದು ನಮ್ಮನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆ.
ಇಲಿಗೂ ಆಹಾರವನ್ನು ಇಡಲಾಗುವುದು. ಬೆಳೆದ ಬೆಳೆಗಳನ್ನು ಇಲಿಗಳು ನಾಶ ಮಾಡುವುದು,ಈ ದಿನ ಇಲಿಗೂ ಎಡೆ ಇಟ್ಟು ನಮಗೆ ತೊಂದರೆ ಕೊಡಬೇಡಪ್ಪಾ ಎಂದು ಬೇಡಲಾಗುವುದು.

ಮನೆ ಮಂದಿಯೆಲ್ಲಾ ಕುಳಿತು ಹಬ್ಬದ ಅಡುಗೆ ಸವಿಯಲಾಗುವುದು
ಭೂಮಿ ಹುಣ್ಣಿಮೆಯಂದು ಭೂ ತಾಯಿಗೆ ಪೂಜೆ ಸಲ್ಲಿಸಿ ನಂತರ ತಂದ ಹಬ್ಬದ ಅಡುಗೆಯನ್ನು ಮನೆಮಂದಿಯೆಲ್ಲಾ ಕೂತು ಸಂತೋಷದಿಂದ ಸವಿಯಲಾಗುವುದು. ಈ ಆಚರಣೆ ನಿಸರ್ಗಕ್ಕೆ ಹತ್ತಿರವಾಗಿದ್ದು, ಈ ಹಬ್ಬ ನಿಸರ್ಗದಲ್ಲಿ ದೇವರನ್ನು ಕಾಣುವ ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.



Click it and Unblock the Notifications











