Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಭಾದ್ರಪದ ಮಾಸ 2021: ಈ ತಿಂಗಳಿನಲ್ಲಿವೆ ವಿಶೇಷ ಹಬ್ಬಗಳು ಹಾಗೂ ವ್ರತಗಳು
ಹಿಂದೂ ಕನ್ನಡ ಪಂಚಾಂಗದ ಪ್ರಕಾರ ಭಾದ್ರಪದ ಮಾಸ 6ನೇ ತಿಂಗಳಾಗಿದೆ. ನಮ್ಮಲ್ಲಿ ಬಾದ್ರಪದ ಮಾಸ ಸೆಪ್ಟೆಂಬರ್ 7ಕ್ಕೆ ಪ್ರಾರಂಭವಾಗಿದೆ. ಅಕ್ಟೋಬರ್ 6ಕ್ಕೆ ಮುಕ್ತಾಯವಾಗುವುದು. ಮಹಾಲಯ ಶ್ರಾದ್ಧ ಸೆಪ್ಟೆಂಬರ್ 14ರಿಂದ ಪ್ರಾರಂಭವಾಗಿ ಸೆಪ್ಟೆಬರ್ 28ರವರೆಗೆ ಇರಲಿದೆ.

ಈ ತಿಂಗಳಿನಲ್ಲಿ ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ ಸೆಪ್ಟೆಂಬರ್ 9, 10ರಂದು ಅದ್ಧೂರಿಯಾಗಿ ನಡೆಯಿತು. ಇದಾದ ಬಳಿಕ ಭಾದ್ರಪದ ಮಾಸದಲ್ಲಿ ಇನ್ನೂ ಅನೇಕ ವಿಶೇಷ ದಿನಗಳಿವೆ, ಆ ವಿಶೇಷ ದಿನಗಳಾವುವು, ಅದರ ಮಹತ್ವವೇನು ಎಂದು ನೋಡೋಣ ಬನ್ನಿ:

ಭಾದ್ರಪದಲ್ಲಿ ಪ್ರದೋಷ ಉಪವಾಸ
ಪ್ರದೋಷ: ಸೆಪ್ಟೆಂಬರ್ 18
ಪ್ರದೋಷ- ಅಕ್ಟೋಬರ್ 4

ಭಾದ್ರಪದದಲ್ಲಿ ಏಕಾದಶಿ
ಪರಿವರ್ತಿನಿ ಏಕಾದಶಿ: ಸೆಪ್ಟೆಂಬರ್ 17
ಇಂದಿರಾ ಏಕಾದಶಿ: ಅಕ್ಟೋಬರ್ 2

ಸಂಕಷ್ಟರ ಚತುರ್ಥಿ ವ್ರತ
ಗಣೇಶನಿಗೆ ಭಾದ್ರಪದಲ್ಲಿ ಮೀಸಲಾಗಿರುವ ಮತ್ತೊಂದು ದಿನವೆಂದರೆ ಸಂಕಷ್ಟರ ಚತುರ್ಥಿ 24, 2021
ಚಂದ್ರೋದಯ: ರಾತ್ರಿ 8:43ಕ್ಕೆ

ಭಾದ್ರಪದ ಮಾಸದ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ
ಶುಕ್ಲ ಪಕ್ಷ 2021: ಸೆಪ್ಟೆಂಬರ್ 7-ಸೆಪ್ಟೆಂಬರ್ 20
ಕೃಷ್ಣ ಪಕ್ಷ 2021: ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6. ಇದೇ ಸಮಯದಲ್ಲಿ ಪಿತೃ ಪಕ್ಷ ಇರುವುದು.

ಭಾದ್ರಮಾಸದ ಪೂರ್ಣಿಮೆ ಹಾಗೂ ಮಹಾಲಯ ಶ್ರಾದ್ಧ
* ಹುಣ್ಣಿಮೆ ಸೆಪ್ಟೆಂಬರ್ 20, 2021
ಮಹಾಲಯ ಶ್ರಾದ್ಧ ಪ್ರಾರಂಭ ಸೆಪ್ಟೆಂಬರ್ 21
ಭಾದ್ರಪದ ಮಾಸದಲ್ಲಿ ಅಮವಾಸ್ಯೆ
ಅಕ್ಟೋಬರ್ 6
ಈ ಮಹಾಲಯ ಅಮವಾಸ್ಯೆಯನ್ನು ಸರ್ವ ಪಿತೃ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು.

ಭಾದ್ರಪದ ಮಾಸದಲ್ಲಿ ಇನ್ನು ಬರಲಿರುವ ವಿಶೇಷ ದಿನಾಂಕಗಳು
ಸೆಪ್ಟೆಂಬರ್ 17: ವಾಮನ ಜಯಂತಿ
ಸೆಪ್ಟೆಂಬರ್ ಚತುರ್ದಶಿ: ಸೆಪ್ಟೆಂಬರ್ 17
ಪಿತೃಪಕ್ಷ : ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6
ಕಲಾಷ್ಟಮಿ: ಸೆಪ್ಟೆಂಬರ್ 29
ಅವಿಧಾವ ನವಮಿ: ಸೆಪ್ಟೆಂಬರ್ 30
ಮಹಾಲಯ ಶ್ರಾದ್ಧ: ಅಕ್ಟೋಬರ್ 6
ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 23ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 20ಕ್ಕೆ ಮುಗಿಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಲ್ಲಿ ಒಂದೇ ಅವಧಿಯಾಗಿದೆ.



Click it and Unblock the Notifications