Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಭಾದ್ರಪದ ಮಾಸ 2021: ಈ ತಿಂಗಳಿನಲ್ಲಿವೆ ವಿಶೇಷ ಹಬ್ಬಗಳು ಹಾಗೂ ವ್ರತಗಳು
ಹಿಂದೂ ಕನ್ನಡ ಪಂಚಾಂಗದ ಪ್ರಕಾರ ಭಾದ್ರಪದ ಮಾಸ 6ನೇ ತಿಂಗಳಾಗಿದೆ. ನಮ್ಮಲ್ಲಿ ಬಾದ್ರಪದ ಮಾಸ ಸೆಪ್ಟೆಂಬರ್ 7ಕ್ಕೆ ಪ್ರಾರಂಭವಾಗಿದೆ. ಅಕ್ಟೋಬರ್ 6ಕ್ಕೆ ಮುಕ್ತಾಯವಾಗುವುದು. ಮಹಾಲಯ ಶ್ರಾದ್ಧ ಸೆಪ್ಟೆಂಬರ್ 14ರಿಂದ ಪ್ರಾರಂಭವಾಗಿ ಸೆಪ್ಟೆಬರ್ 28ರವರೆಗೆ ಇರಲಿದೆ.

ಈ ತಿಂಗಳಿನಲ್ಲಿ ಸ್ವರ್ಣಗೌರಿ ವ್ರತ, ಗಣೇಶ ಚತುರ್ಥಿ ಸೆಪ್ಟೆಂಬರ್ 9, 10ರಂದು ಅದ್ಧೂರಿಯಾಗಿ ನಡೆಯಿತು. ಇದಾದ ಬಳಿಕ ಭಾದ್ರಪದ ಮಾಸದಲ್ಲಿ ಇನ್ನೂ ಅನೇಕ ವಿಶೇಷ ದಿನಗಳಿವೆ, ಆ ವಿಶೇಷ ದಿನಗಳಾವುವು, ಅದರ ಮಹತ್ವವೇನು ಎಂದು ನೋಡೋಣ ಬನ್ನಿ:

ಭಾದ್ರಪದಲ್ಲಿ ಪ್ರದೋಷ ಉಪವಾಸ
ಪ್ರದೋಷ: ಸೆಪ್ಟೆಂಬರ್ 18
ಪ್ರದೋಷ- ಅಕ್ಟೋಬರ್ 4

ಭಾದ್ರಪದದಲ್ಲಿ ಏಕಾದಶಿ
ಪರಿವರ್ತಿನಿ ಏಕಾದಶಿ: ಸೆಪ್ಟೆಂಬರ್ 17
ಇಂದಿರಾ ಏಕಾದಶಿ: ಅಕ್ಟೋಬರ್ 2

ಸಂಕಷ್ಟರ ಚತುರ್ಥಿ ವ್ರತ
ಗಣೇಶನಿಗೆ ಭಾದ್ರಪದಲ್ಲಿ ಮೀಸಲಾಗಿರುವ ಮತ್ತೊಂದು ದಿನವೆಂದರೆ ಸಂಕಷ್ಟರ ಚತುರ್ಥಿ 24, 2021
ಚಂದ್ರೋದಯ: ರಾತ್ರಿ 8:43ಕ್ಕೆ

ಭಾದ್ರಪದ ಮಾಸದ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷ
ಶುಕ್ಲ ಪಕ್ಷ 2021: ಸೆಪ್ಟೆಂಬರ್ 7-ಸೆಪ್ಟೆಂಬರ್ 20
ಕೃಷ್ಣ ಪಕ್ಷ 2021: ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6. ಇದೇ ಸಮಯದಲ್ಲಿ ಪಿತೃ ಪಕ್ಷ ಇರುವುದು.

ಭಾದ್ರಮಾಸದ ಪೂರ್ಣಿಮೆ ಹಾಗೂ ಮಹಾಲಯ ಶ್ರಾದ್ಧ
* ಹುಣ್ಣಿಮೆ ಸೆಪ್ಟೆಂಬರ್ 20, 2021
ಮಹಾಲಯ ಶ್ರಾದ್ಧ ಪ್ರಾರಂಭ ಸೆಪ್ಟೆಂಬರ್ 21
ಭಾದ್ರಪದ ಮಾಸದಲ್ಲಿ ಅಮವಾಸ್ಯೆ
ಅಕ್ಟೋಬರ್ 6
ಈ ಮಹಾಲಯ ಅಮವಾಸ್ಯೆಯನ್ನು ಸರ್ವ ಪಿತೃ ಅಮವಾಸ್ಯೆ ಎಂದು ಕೂಡ ಕರೆಯಲಾಗುವುದು.

ಭಾದ್ರಪದ ಮಾಸದಲ್ಲಿ ಇನ್ನು ಬರಲಿರುವ ವಿಶೇಷ ದಿನಾಂಕಗಳು
ಸೆಪ್ಟೆಂಬರ್ 17: ವಾಮನ ಜಯಂತಿ
ಸೆಪ್ಟೆಂಬರ್ ಚತುರ್ದಶಿ: ಸೆಪ್ಟೆಂಬರ್ 17
ಪಿತೃಪಕ್ಷ : ಸೆಪ್ಟೆಂಬರ್ 21ರಿಂದ ಅಕ್ಟೋಬರ್ 6
ಕಲಾಷ್ಟಮಿ: ಸೆಪ್ಟೆಂಬರ್ 29
ಅವಿಧಾವ ನವಮಿ: ಸೆಪ್ಟೆಂಬರ್ 30
ಮಹಾಲಯ ಶ್ರಾದ್ಧ: ಅಕ್ಟೋಬರ್ 6
ಉತ್ತರ ಭಾರತದ ಕಡೆ ಭಾದ್ರಪದ ಮಾಸ ಆಗಸ್ಟ್ 23ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 20ಕ್ಕೆ ಮುಗಿಯಲಿದೆ.
ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶದಲ್ಲಿ ಒಂದೇ ಅವಧಿಯಾಗಿದೆ.



Click it and Unblock the Notifications
