Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ಆಷಾಢ ಶುಕ್ರವಾರ: ಯಾವ ಶುಕ್ರವಾರ ಯಾವ ದೇವಿಯ ಆರಾಧನೆ ಮಾಡಬೇಕು?
ಆಷಾಢ ಮಾಸ ಕರ್ನಾಟಕದಲ್ಲಿ ಜುಲೈ 11-ಆಗಸ್ಟ್ 8ರವರೆಗೆ ಇದೆ. ಆದರೆ ಕರ್ನಾಟಕದ ಕೆಲವು ಕಡೆ ಅಂದ್ರೆ ಕೊಡಗು, ಮಂಗಳೂರು ಕಡೆ ಆಷಾಢ ಜುಲೈ 17ರಿಂದ ಪ್ರಾರಂಭವಾಗಿ ಆಗಸ್ಟ್ 16ರವರೆಗೆ ಇರುತ್ತದೆ. ಆಗಸ್ಟ್ 17ರಿಂದ ಶ್ರಾವಣ ಪ್ರಾರಂಭ.
ನಿಮಗೆ ಆಷಾಢ ಜುಲೈ 11ರಿಂದ ಪ್ರಾರಂಭವಾಗಲಿ ಅಥವಾ ಜುಲೈ 17ರಿಂದ ಪ್ರಾರಂಭವಾಗಲಿ ಈ ವರ್ಷ 4 ಆಷಾಢ ಶುಕ್ರವಾರ ಸಿಗುವುದು. ಈ ನಾಲ್ಕು ಆಷಾಢ ಶುಕ್ರವಾರ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠ ಎಂದು ಹೇಳಲಾಗುವುದು.
ಆಷಾಢ ಮಾಸದಲ್ಲಿ ದೇವಿ ಶಕ್ತಿಗಳನ್ನು ಆರಾಧಿಸಲಾಗುವುದು. ಈ ತಿಂಗಳಿನಲ್ಲಿ ದೇವಿಯ ಶಕ್ತಿ ಭೂಮಿಯ ಮೇಲೆ ಅಧಿಕವಿರುತ್ತದೆ, ಇದರಿಂದಾಗಿ ದೇವಿಯನ್ನು ಆರಾಧಿಸುವುದರಿಂದ ಅನೇಕ ಪ್ರಯೋಜನಗಳು ಸಿಗುವುದು.
ಆಷಾಢ ಮಾಸದ ನಾಲ್ಕು ವಾರಗಳಲ್ಲಿ ದೇವಿಯ ಯಾವ ಸ್ವರೂಪ ಆರಾಧಿಸಲಾಗುವುದು ಎಂಬ ಮಾಹಿತಿ ಇಲ್ಲಿದೆ.

ಆಷಾಢ ಮೊದಲನೇ ಶುಕ್ರವಾರ: ಸ್ವರ್ಣಾಂಬಿಕ ದೇವಿಯ ಆರಾಧನೆ
ಆಷಾಢ ಮಾಸದ ಮೊದಲನೇ ಶುಕ್ರವಾರ ಸ್ವರ್ಣಾಂಬಿಕ ದೇವಿಯನ್ನು ಆರಾಧಿಸಲಾಗುವುದು. ಇದು ಪಾರ್ವತಿಯ ಒಂದು ರೂಪವಾಗಿದೆ. ಸ್ವರ್ಣಾಂಬಿಕ ದೇವಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಐಶ್ವರ್ಯ ವೃದ್ಧಿಸುವುದು.

ಆಷಾಢ 2ನೇ ಶುಕ್ರವಾರ: ಕಾಳಿ ದೇವಿಯ ಆರಾಧನೆ
ಕಾಳಿ ಸ್ವರೂಪವನ್ನು ಆರಾಧಿಸುವುದರಿಂದ ಜ್ಞಾನ ಹೆಚ್ಚುವುದು, ಬುದ್ಧಿ ಶಕ್ತಿ ಹೆಚ್ಚುವುದು. ವಿದ್ಯಾರ್ಥಿಗಳು, ಅಧ್ಯಯನ ಮಾಡುವವರು ಒಳ್ಳೆಯ ಫಲ ಕಾಣಬಹುದು.

ಆಷಾಢ 3ನೇ ಶುಕ್ರವಾರ: ಕಾಳಿಂಕಾಂಬ ದೇವಿಯ ಆರಾಧನೆ
ಪಾರ್ವತಿ ದೇವಿಯ ಈ ಅವತಾರವನ್ನು ಆರಾಧಿಸುವುದರಿಂದ ದೇವಿಯು ಧೈರ್ಯ ಹಾಗೂ ಆರೋಗ್ಯ ನೀಡಿ ಕರುಣಿಸುತ್ತಾಳೆ.

ಆಷಾಢ 4ನೇ ಶುಕ್ರವಾರ: ಕಾಮಾಕ್ಷಿ ದೇವಿ ಆರಾಧನೆ ಹಾಗೂ ಲಕ್ಷ್ಮಿ ಪೂಜೆ
ಶಿವ ಶಕ್ತಿಯ ಸ್ವರೂಪವಾದ ಕಾಮಾಕ್ಷಿ ದೇವಿಯನ್ನು ಆರಾಧಿಸಲಾಗುವುದು. ಇನ್ನು ಕೊನೆಯ ಆಷಾಢ ಶುಕ್ರವಾರದಂದು ಲಕ್ಷ್ಮಿಯನ್ನು ಕೂಡ ಆರಾಧನೆ ಮಾಡಲಾಗುವುದು. ಈ ದಿನ ಲಕ್ಷ್ಮಿಯು ನಮ್ಮ ಬೇಡಿಕೆಗಳನ್ನು ಆಲಿಸುತ್ತಾಳೆ, ಮಹಿಳೆಯರು ಭಕ್ತಿಯಿಂದ ಪೂಜೆ ಮಾಡಿ ಬೇಡಿಕೊಂಡರೆ ಅವರ ಇಷ್ಟಾರ್ಥಗಳು ನೆರವೇರುವುದು, ಕುಟುಂಬ ನೆಮ್ಮದಿ, ಸಂತೋಷ, ಐಶ್ಚರ್ಯ ಕರುಣಿಸುವಳು.
ಹೀಗೆ ಆಷಾಢ ಶುಕ್ರವಾರ ತುಂಬಾ ಪ್ರಮುಖವಾಗಿದ್ದು ಈ ದಿನ ವ್ರತ ಮಾಡುವವರು ದೇವಿ ಮೂರ್ತಿಯನ್ನು ಅಲಂಕರಿಸಿ, ಮಂತ್ರಗಳನ್ನು ಪಠಿಸಿ ಪೂಜೆ ಮಾಡುತ್ತಾರೆ, ನಂತರ ದೇವಿಗೆ ನೈವೇದ್ಯ ಅರ್ಪಿಸಿ, ಮುತ್ತೈದೆಯರನ್ನು ಕರೆದು ಅವರಿಗೆ ತಾಂಬೂಲ ನೀಡಲಾಗುವುದು.



Click it and Unblock the Notifications