Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಆಷಾಢ ಶುಕ್ರವಾರ: ಯಾವ ಶುಕ್ರವಾರ ಯಾವ ದೇವಿಯ ಆರಾಧನೆ ಮಾಡಬೇಕು?
ಆಷಾಢ ಮಾಸ ಕರ್ನಾಟಕದಲ್ಲಿ ಜುಲೈ 11-ಆಗಸ್ಟ್ 8ರವರೆಗೆ ಇದೆ. ಆದರೆ ಕರ್ನಾಟಕದ ಕೆಲವು ಕಡೆ ಅಂದ್ರೆ ಕೊಡಗು, ಮಂಗಳೂರು ಕಡೆ ಆಷಾಢ ಜುಲೈ 17ರಿಂದ ಪ್ರಾರಂಭವಾಗಿ ಆಗಸ್ಟ್ 16ರವರೆಗೆ ಇರುತ್ತದೆ. ಆಗಸ್ಟ್ 17ರಿಂದ ಶ್ರಾವಣ ಪ್ರಾರಂಭ.
ನಿಮಗೆ ಆಷಾಢ ಜುಲೈ 11ರಿಂದ ಪ್ರಾರಂಭವಾಗಲಿ ಅಥವಾ ಜುಲೈ 17ರಿಂದ ಪ್ರಾರಂಭವಾಗಲಿ ಈ ವರ್ಷ 4 ಆಷಾಢ ಶುಕ್ರವಾರ ಸಿಗುವುದು. ಈ ನಾಲ್ಕು ಆಷಾಢ ಶುಕ್ರವಾರ ಲಕ್ಷ್ಮಿ ಪೂಜೆಗೆ ತುಂಬಾ ಶ್ರೇಷ್ಠ ಎಂದು ಹೇಳಲಾಗುವುದು.
ಆಷಾಢ ಮಾಸದಲ್ಲಿ ದೇವಿ ಶಕ್ತಿಗಳನ್ನು ಆರಾಧಿಸಲಾಗುವುದು. ಈ ತಿಂಗಳಿನಲ್ಲಿ ದೇವಿಯ ಶಕ್ತಿ ಭೂಮಿಯ ಮೇಲೆ ಅಧಿಕವಿರುತ್ತದೆ, ಇದರಿಂದಾಗಿ ದೇವಿಯನ್ನು ಆರಾಧಿಸುವುದರಿಂದ ಅನೇಕ ಪ್ರಯೋಜನಗಳು ಸಿಗುವುದು.
ಆಷಾಢ ಮಾಸದ ನಾಲ್ಕು ವಾರಗಳಲ್ಲಿ ದೇವಿಯ ಯಾವ ಸ್ವರೂಪ ಆರಾಧಿಸಲಾಗುವುದು ಎಂಬ ಮಾಹಿತಿ ಇಲ್ಲಿದೆ.

ಆಷಾಢ ಮೊದಲನೇ ಶುಕ್ರವಾರ: ಸ್ವರ್ಣಾಂಬಿಕ ದೇವಿಯ ಆರಾಧನೆ
ಆಷಾಢ ಮಾಸದ ಮೊದಲನೇ ಶುಕ್ರವಾರ ಸ್ವರ್ಣಾಂಬಿಕ ದೇವಿಯನ್ನು ಆರಾಧಿಸಲಾಗುವುದು. ಇದು ಪಾರ್ವತಿಯ ಒಂದು ರೂಪವಾಗಿದೆ. ಸ್ವರ್ಣಾಂಬಿಕ ದೇವಿಯನ್ನು ಭಕ್ತಿಯಿಂದ ಆರಾಧಿಸುವುದರಿಂದ ಐಶ್ವರ್ಯ ವೃದ್ಧಿಸುವುದು.

ಆಷಾಢ 2ನೇ ಶುಕ್ರವಾರ: ಕಾಳಿ ದೇವಿಯ ಆರಾಧನೆ
ಕಾಳಿ ಸ್ವರೂಪವನ್ನು ಆರಾಧಿಸುವುದರಿಂದ ಜ್ಞಾನ ಹೆಚ್ಚುವುದು, ಬುದ್ಧಿ ಶಕ್ತಿ ಹೆಚ್ಚುವುದು. ವಿದ್ಯಾರ್ಥಿಗಳು, ಅಧ್ಯಯನ ಮಾಡುವವರು ಒಳ್ಳೆಯ ಫಲ ಕಾಣಬಹುದು.

ಆಷಾಢ 3ನೇ ಶುಕ್ರವಾರ: ಕಾಳಿಂಕಾಂಬ ದೇವಿಯ ಆರಾಧನೆ
ಪಾರ್ವತಿ ದೇವಿಯ ಈ ಅವತಾರವನ್ನು ಆರಾಧಿಸುವುದರಿಂದ ದೇವಿಯು ಧೈರ್ಯ ಹಾಗೂ ಆರೋಗ್ಯ ನೀಡಿ ಕರುಣಿಸುತ್ತಾಳೆ.

ಆಷಾಢ 4ನೇ ಶುಕ್ರವಾರ: ಕಾಮಾಕ್ಷಿ ದೇವಿ ಆರಾಧನೆ ಹಾಗೂ ಲಕ್ಷ್ಮಿ ಪೂಜೆ
ಶಿವ ಶಕ್ತಿಯ ಸ್ವರೂಪವಾದ ಕಾಮಾಕ್ಷಿ ದೇವಿಯನ್ನು ಆರಾಧಿಸಲಾಗುವುದು. ಇನ್ನು ಕೊನೆಯ ಆಷಾಢ ಶುಕ್ರವಾರದಂದು ಲಕ್ಷ್ಮಿಯನ್ನು ಕೂಡ ಆರಾಧನೆ ಮಾಡಲಾಗುವುದು. ಈ ದಿನ ಲಕ್ಷ್ಮಿಯು ನಮ್ಮ ಬೇಡಿಕೆಗಳನ್ನು ಆಲಿಸುತ್ತಾಳೆ, ಮಹಿಳೆಯರು ಭಕ್ತಿಯಿಂದ ಪೂಜೆ ಮಾಡಿ ಬೇಡಿಕೊಂಡರೆ ಅವರ ಇಷ್ಟಾರ್ಥಗಳು ನೆರವೇರುವುದು, ಕುಟುಂಬ ನೆಮ್ಮದಿ, ಸಂತೋಷ, ಐಶ್ಚರ್ಯ ಕರುಣಿಸುವಳು.
ಹೀಗೆ ಆಷಾಢ ಶುಕ್ರವಾರ ತುಂಬಾ ಪ್ರಮುಖವಾಗಿದ್ದು ಈ ದಿನ ವ್ರತ ಮಾಡುವವರು ದೇವಿ ಮೂರ್ತಿಯನ್ನು ಅಲಂಕರಿಸಿ, ಮಂತ್ರಗಳನ್ನು ಪಠಿಸಿ ಪೂಜೆ ಮಾಡುತ್ತಾರೆ, ನಂತರ ದೇವಿಗೆ ನೈವೇದ್ಯ ಅರ್ಪಿಸಿ, ಮುತ್ತೈದೆಯರನ್ನು ಕರೆದು ಅವರಿಗೆ ತಾಂಬೂಲ ನೀಡಲಾಗುವುದು.



Click it and Unblock the Notifications