Just In
Don't Miss
- Movies ಸಂಯುಕ್ತಾ ಹೊರನಾಡು ತೆರೆದಿದ್ದ ಆರ್ಟ್ ರೂಮ್ ಈಗ ಹೇಗಿದೆ?
- News Rain Alert: ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ: ಈ ಜಿಲ್ಲೆಗಳಲ್ಲಿ ಭಾರಿ ಬಿಸಿಲು
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅದೃಷ್ಟ ನಿಮ್ಮ ಕೈಹಿಡಿಯಬೇಕೇ? ಹಾಗಾದರೆ ಈ 5 ವಸ್ತುಗಳು ನಿಮ್ಮ ಬಳಿ ಇರಲಿ
ಒಮ್ಮೊಮ್ಮೆ ನಮಗೆ ಅನ್ನಿಸುತ್ತದೆ ನಮ್ಮ ಜೀವನದಲ್ಲಿ ಏನೋ ಸರಿಯಾಗಿಲ್ಲ, ಏನೋ ತಪ್ಪಾಗುತ್ತಿದೆ, ಜೀವನ ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂಬ ಅನಿಸಿಕೆ ನಮ್ಮನ್ನು ಕಾಡುತ್ತದೆ. ನಾವು ಎಷ್ಟೇ ಕಷ್ಟಪಟ್ಟರೂ ನಾವು ಬಯಸಿದ ಫಲ ನಮಗೆ ದೊರೆಯುವುದಿಲ್ಲ. ಇಡಿಯ ವಿಶ್ವವೇ ನಮ್ಮ ವಿರುದ್ಧ ತಿರುಗಿ ನಿಂತಿದೆ ಎಂಬ ಭಾವನೆ ನಮ್ಮನ್ನು ಕಾಡುತ್ತದೆ. ಜನರು ಇದನ್ನು ದುರದೃಷ್ಟ ಎಂದು ಭಾವಿಸುತ್ತಾರೆ ಮತ್ತು ಅದೃಷ್ಟ ನಮ್ಮಕೈಹಿಡಿಯುತ್ತಿಲ್ಲ ಎಂದು ನಂಬುತ್ತಾರೆ.
ಆದರೆ ಇಂತಹ ಋಣಾತ್ಮಕ ಯೋಚನೆಗಳಿಂದಲೇ ನೀವು ಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳಬಹುದು. ಇಂತಹ ನಕಾರಾತ್ಮಕ ಯೋಚನೆಗಳಿಂದ ನೀವು ಮುಕ್ತರಾಗಬೇಕು ಎಂದಾದಲ್ಲಿ ಕೆಲವೊಂದು ವಸ್ತುಗಳನ್ನು ನಿಮ್ಮೊಂದಿಗೆ ನೀವು ಇರಿಸಿಕೊಳ್ಳಬೇಕಾಗುತ್ತದೆ. ಇದರಿಂದ ಕೆಟ್ಟ ಯೋಚನೆಗಳು ಇಲ್ಲವೇ ಕೆಟ್ಟದ್ದರ ಪ್ರಭಾವ ನಿಮ್ಮ ಮೇಲೆ ಉಂಟಾಗುವುದಿಲ್ಲ. ಒಮ್ಮೊಮ್ಮೆ ನಮ್ಮ ಯೋಚನೆಗಳು ಕೂಡ ನಮ್ಮನ್ನು ದಿಕ್ಕು ದಪ್ಪಿಸಿಬಿಡುತ್ತದೆ.
ಆದ್ದರಿಂದ ಇಂತಹ ಕೆಟ್ಟ ಯೋಚನೆಗಳು ನಮ್ಮನ್ನು ಕಾಡದಂತೆ ನಮ್ಮ ಹಾದಿಗೆ ಅಡ್ಡಿಯಾಗದಂತೆ ನಾವು ಜಾಗರೂಕರಾಗಿರಬೇಕು. ನಮ್ಮ ಇಂದಿನ ಲೇಖನದಲ್ಲಿ ಹೀಗೆ ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕಾಡದಂತೆ ನಿಮ್ಮನ್ನು ನಿಯಂತ್ರಣದಲ್ಲಿಡುವ ವಸ್ತುಗಳ ಬಗ್ಗೆ ನಾವು ತಿಳಿಸುತ್ತಿದ್ದು ಅವುಗಳು ಯಾವುದು ಎಂದು ಅರಿತುಕೊಳ್ಳೋಣ...
1.ಕೀಗಳು
ಕೀಗಳನ್ನು ಸರದಂತೆ ನಿಮ್ಮ ಕುತ್ತಿಗೆಯಲ್ಲಿ ಧರಿಸುವುದರಿಂದ ಅದೃಷ್ಟ ನಿಮ್ಮ ಕೈಹಿಡಿಯಲಿದೆ. ಮೂರು ಕೀಗಳನ್ನು ಜೊತೆಯಾಗಿ ಧರಿಸುವುದರಿಂದ ಕೂಡ ಅದೃಷ್ಟ ನಿಮ್ಮದಾಗಲಿದೆ. ಮೂರು ಕೀಗಳು ಆರೋಗ್ಯ, ಧನ ಮತ್ತು ಪ್ರೀತಿಯ ಸಂಕೇತವಾಗಿದೆ. ಈ ಕೀಗಳು ನಿಮ್ಮ ಕಪ್ಬಾರ್ಡ್ ಅಥವಾ ಲಾಕರ್ಗಳದ್ದೇ ಆಗಿರಬೇಕೆಂದೇನಿಲ್ಲ. ಸಣ್ಣ ಫ್ಯಾನ್ಸಿ ಕೀಗಳು ಲಭ್ಯವಿದ್ದು ನಿಮ್ಮ ಸರಕ್ಕೆ ಅನುಗುಣವಾಗಿ ಇದನ್ನು ವಿನ್ಯಾಸಪಡಿಸಿಕೊಳ್ಳಬಹುದಾಗಿದೆ.
2. ದೂಪದ್ರವ್ಯ
ಮನೆಯಿಂದ ಋಣಾತ್ಮಕ ಶಕ್ತಿಯನ್ನು ನಿವಾರಿಸಲು ದೂಪದ್ರವ್ಯವನ್ನು ನೀವು ಹಚ್ಚಿಡಬಹುದು. ಪ್ರತಿಯೊಂದು ಮನೆಯಲ್ಲೂ ದೂಪದ್ರವ್ಯವನ್ನು ಹಚ್ಚಿಡುತ್ತಾರೆ ಆದರೆ ಇದನ್ನು ಹಚ್ಚಿಡುವುದರ ಮೂಲ ಕಾರಣ ಯಾರಿಗೂ ತಿಳಿದಿಲ್ಲ. ತುಪ್ಪ ಮತ್ತು ಹೂವುಗಳಿಂದ ಮಾಡಿದ ದೂಪದ್ರವ್ಯಗಳು ಋಣಾತ್ಮಕ ಶಕ್ತಿಯನ್ನು ನಿವಾರಿಸುತ್ತವೆ.ದೂಪ ಕಡ್ಡಿಗಳನ್ನು ಬಳಸದೆಯೇ ನಿಜವಾದ ದೂಪವನ್ನು ಬಳಸಬೇಕು. ಈ ಕಡ್ಡಿಗಳನ್ನು ಬಿದಿರಿನಿಂದ ತಯಾರಿಸಲಾಗುತ್ತದೆ ಮತ್ತು ಇದನ್ನು ಪೂಜೆಯಲ್ಲಿ ಬಳಸುವುದು ಅಶುಭವಾಗಿದೆ.
Most Read:ನಿಮ್ಮ ಜೀವನದ ಎಲ್ಲಾ ಸೀಕ್ರೆಟ್ಸ್ ಬಿಚ್ಚಿಡುವ ಅಂಗೈಯಲ್ಲಿರುವ ಅದೃಷ್ಟದ ಚಿಹ್ನೆಗಳು!
3. ಪ್ರಾರ್ಥನೆ
ನಿಮ್ಮ ಸುತ್ತಲೂ ದೇವರ ಶಕ್ತಿ ಮತ್ತು ಅವರ ಆಶೀರ್ವಾದ ಇರುವುದರಿಂದ ನಿಮ್ಮನ್ನು ಕೆಟ್ಟ ಶಕ್ತಿಗಳಿಂದ ಸಂರಕ್ಷಿಸಿಕೊಳ್ಳಬಹುದಾಗಿದೆ. ಪ್ರಾರ್ಥನೆ ಮಾಡುವಾಗ ಯಾವುದೇ ಬೇಡಿಕೆ ಈಡೇರುವಂತೆ ಬೇಡಿಕೊಳ್ಳಬೇಡಿ. ದೇವರ ಮುಂದೆ ಕುಳಿತುಕೊಳ್ಳಿ ಮತ್ತು ಅವರ ಸಾನಿಧ್ಯವನ್ನು ಅನುಭವಿಸಿ ಮತ್ತು ನಿಮ್ಮ ಜೀವನದಲ್ಲಿ ಏನೇನು ನಡೆಯುತ್ತಿದೆ ಎಂಬುದು ದೇವರಿಗೆ ತಿಳಿದಿದೆ ಎಂದು ನಿಮ್ಮಷ್ಟಕ್ಕೆ ಹೇಳಿಕೊಳ್ಳಿ ಮತ್ತು ಎಲ್ಲವನ್ನೂ ಆ ಪರಮಾತ್ಮ ನೋಡುತ್ತಿದ್ದಾರೆ ಎಂದು ನಿಮ್ಮಷ್ಟಕ್ಕೆ ಹೇಳಿ. ಇದರಿಂ ಧನಾತ್ಮಕ ಶಕ್ತಿ ನಿಮ್ಮಲ್ಲಿ ಉಂಟಾಗುತ್ತದೆ ಮತ್ತು ಇದು ನಿಜವಾಗಿಯೂ ದುರದೃಷ್ಟ ಅಥವಾ ದೇವರು ಮಾಡುತ್ತಿದ್ದಾರೆ ಎಂಬ ತಪ್ಪು ಕಲ್ಪನೆಯೇ ಎಂಬುದು ನಿಮಗೆ ಅರಿವಾಗುತ್ತದೆ.
4. ದಾನಗಳು
ನಮ್ಮ ಧರ್ಮಗ್ರಂಥಗಳಲ್ಲಿ ದಾನಕ್ಕೆ ಬಹಳಷ್ಟು ಮಹತ್ವ ನೀಡಲಾಗಿದೆ. ವಾಸ್ತವವಾಗಿ, ಇದು ಪ್ರತಿ ಧರ್ಮದಲ್ಲಿಯೂ ಮಹತ್ವದ್ದಾಗಿದೆ. ಕೆಲವು ದೇಣಿಗೆಗಳನ್ನು ಮಾಡದೆ ಸಂಪೂರ್ಣ ವೇಗವನ್ನು ಪರಿಗಣಿಸಲಾಗುವುದಿಲ್ಲ. ನಾವು ದೇಣಿಗೆಯಾಗಿ ಹಣವನ್ನು ಕೊಡುವ ಹಣವು ಅವರಿಂದ ಆಶೀರ್ವಾದ ರೂಪದಲ್ಲಿ ಮತ್ತೆ ಬರುತ್ತದೆ ಎಂದು ಹೇಳಲಾಗಿದೆ. ಕಳಪೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು ದೇವರೊಂದಿಗೆ ಸಂಪರ್ಕ ಹೊಂದಲು ಮತ್ತು ಕೆಟ್ಟ ಅದೃಷ್ಟವನ್ನು ತೆಗೆದುಹಾಕಲು ಅತ್ಯುತ್ತಮ ಮಾರ್ಗವಾಗಿದೆ.
Most Read:ಸೆಪ್ಟೆಂಬರ್ 19 ರಿಂದ 25ರ ವರೆಗಿನ ವಾರ ಭವಿಷ್ಯ
5. ನಾಣ್ಯಗಳು
ನೆಲದಲ್ಲಿ ನಾಣ್ಯ ಬಿದ್ದಿದ್ದರೆ ಅದನ್ನು ಕೈಗೆತ್ತಿಕೊಂಡು ನಿಮ್ಮ ಪಾಕೆಟ್ನಲ್ಲಿ ಇರಿಸಿಕೊಳ್ಳಬೇಕು. ಕೆಳಮುಖವಾಗಿ ಬಿದ್ದಿರುವ ನಾಣ್ಯವನ್ನು ಎತ್ತಿಕೊಳ್ಳಬಾರದು. ಖರೀದಿಯ ನಂತರ ಚೇಂಜ್ ರೂಪದಲ್ಲಿ ಹಾಳಾದ ನಾಣ್ಯ ಬಂದಲ್ಲಿ ನೀವು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇಂತಹ ನಾಣ್ಯಗಳನ್ನು ಬಳಸಬಾರದು ಮತ್ತು ಕುತ್ತಿಗೆಯ ಸುತ್ತ ಇದನ್ನು ಧರಿಸಿಕೊಳ್ಳಬೇಕು ಅಥವಾ ಎಡ ಪಾಕೆಟ್ನಲ್ಲಿ ಇದನ್ನು ಇರಿಸಿಕೊಳ್ಳಿ.