Latest Updates
-
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ!
ಪ್ರೆಷರ್ ಕುಕ್ಕರ್ನಲ್ಲಿ ಅಡುಗೆ ವೇಳೆ ಕಡೆಗಣಿಸಬೇಕಾದ ತಪ್ಪುಗಳು
ಅಡುಗೆ ಸಾಮಗ್ರಿಗಳು ಹಾಗೂ ಅಡುಗೆ ಮನೆಯ ಬಗ್ಗೆ ಸರಿಯಾದ ಮಾಹಿತಿ ನಿಮ್ಮಲ್ಲಿ ಇದ್ದರೆ ಆಗ ಅಡುಗೆ ಮಾಡುವುದು ತುಂಬಾ ಸುಲಭವಾಗುವುದು. ಅದರಲ್ಲೂ ಮುಖ್ಯವಾಗಿ ಅಡುಗೆ ಮನೆಯಲ್ಲಿ ಇರುವಂತಹ ಪ್ರೆಷರ್ ಕುಕ್ಕರ್ ನ್ನು ತುಂಬಾ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಇದು ಅಪಾಯವನ್ನು ಉಂಟು ಮಾಡುವುದು. ಇದನ್ನು ಬಳಸಲು ಗೊತ್ತಿಲ್ಲದೆ ಇದ್ದರೆ ಆಗ ನೀವು ತಯಾರಿಸಲು ಹೊರಟಿರುವಂತಹ ಆಹಾರವು ಬೇರೆಯೇ ಸ್ವರೂಪ ಪಡೆಯಬಹುದು. ನಿಮಗೆ ಕೆಲವೊಂದು ಸಲ ಪ್ರೆಷರ್ ಕುಕ್ಕರ್ ನಲ್ಲಿ ಆಹಾರವು ತಳ ಹಿಡಿದಿದ್ದರೆ ಆಗ ನೀವು ಪ್ರೆಷರ್ ಕುಕ್ಕರ್ ನ್ನು ದೂಷಿಸಬಾರದು. ಯಾಕೆಂದರೆ ಇದು ನೀವು ಮಾಡುವಂತಹ ತಪ್ಪಾಗಿದೆ. ಪ್ರೆಷರ್ ಕುಕ್ಕರ್ ನಲ್ಲಿ ಮಾಡುವಂತಹ ಕೆಲವೊಂದು ಸಾಮಾನ್ಯ ತಪ್ಪುಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.
ಸರಿಯಾಗಿ ನೀರು ಹಾಕಿ.
ಪ್ರೆಷರ್ ಕುಕ್ಕರ್ ನಲ್ಲಿ ನೀವು ಏನೇ ಬೇಯಿಸುವುದಿದ್ದರೂ ಅದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಹಾಕಿಕೊಳ್ಳಿ. ಅದಾಗ್ಯೂ, ಜನರು ತುಂಬಾ ನೀರು ಹಾಕುತ್ತಾರೆ. ಇದರಿಂದ ಆಹಾರವು ರುಚಿ ಕಳೆದುಕೊಳ್ಳಬಹುದು. ಪ್ರೆಷರ್ ಕುಕ್ಕರ್ ಒಂದು ಚಮಚಕ್ಕಿಂತಲೂ ಕಡಿಮೆ ನೀರನ್ನು ಬೇಯಿಸುವ ವೇಳೆ ಹೀರಿಕೊಳ್ಳುವುದು. ಬೇಕಾದಷ್ಟು ನೀರು ಮಾತ್ರ ಹಾಕಿ.

ಬೇಯಿಸುವ ಸಮಯ
ಪ್ರೆಷರ್ ಕುಕ್ಕರ್ ನಲ್ಲಿ ಆಹಾರ ಬೇಯಿಸುವುದು ಕೆಲವೊಂದು ರೀತಿಯ ಖಾದ್ಯಗಳಿಗೆ ಮಾತ್ರ ಒಳ್ಳೆಯದು. ಸ್ಟೀವ್ ಮತ್ತು ಸ್ಟಾಕ್ಸ್ ಗಳಿಗೆ ಇದು ಒಳ್ಳೆಯದು. ಪ್ರತಿಯೊಂದನ್ನು ಇದರಲ್ಲಿ ಬೇಯಿಸಲು ಹೋಗಬೇಡಿ. ನೀವು ತವಾ ಬಳಸಿಕೊಂಡು ಅಡುಗೆ ಮಾಡಬಹುದು.
ಸಾಂಬಾರ ಪದಾರ್ಥ ಬಳಸಿದಿರುವುದು
ಕೆಲವು ಸಂದರ್ಭದಲ್ಲಿ ಪ್ರೆಷರ್ ಕುಕ್ಕರ್ ನಲ್ಲಿ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಜನರು ಸರಿಯಾಗಿ ಸಾಂಬಾರ ಪದಾರ್ಥಗಳನ್ನು ಹಾಕುವುದಿಲ್ಲ. ಆಹಾರವನ್ನು ತುಂಬಾ ಅದ್ಭುತವಾಗಿ ಮಾಡಲು ನೀವು ಗಿಡಮೂಲಿಕೆ ಮತ್ತು ತಾಜಾ ಪದಾರ್ಥಗಳನ್ನು ಬಳಸಿಕೊಳ್ಳಿ. ಸಾಧ್ಯವಾಗದಷ್ಟು ಜಜ್ಜಿಕೊಂಡು ಸಾಂಬಾರ ಪದಾರ್ಥಗಳನ್ನು ಬಳಸಿಕೊಂಡರೆ ಆಗ ತುಂಬಾ ಒಳ್ಳೆಯದು.
ಹೀಗೆ ಮಾಡಬೇಡಿ
ಹೆಚ್ಚಾಗಿ ಅಡುಗೆ ಮಾಡುವ ಸಂದರ್ಭದಲ್ಲಿ ಜನರು ಈರುಳ್ಳಿ, ಬೆಳ್ಳುಳ್ಳಿ, ಲವಂಗವನ್ನು ಪ್ರೆಷರ್ ಕುಕ್ಕರ್ ಗೆ ಹಾಕುವರು. ಇದು ಖಾದ್ಯದ ರುಚಿ ಹಾಗೂ ಸುವಾಸನೆ ಕೆಡಿಸುವುದು. ಪ್ರೆಷರ್ ಕುಕ್ಕರ್ ರುಚಿ ಹೀರಿಕೊಳ್ಳುವ ಕಾರಣದಿಂದಾಗಿ ಅದು ನಿಮ್ಮ ನಾಲಗೆಗೆ ರುಚಿ ಹಿಡಿಸದೆ ಇರಬಹುದು. ಮೊದಲು ತವಾಗೆ ಹಾಕಿಕೊಂಡು ಈರುಳ್ಳಿ ಮತ್ತು ಬೆಳ್ಳುಳ್ಳಿ ಹುರಿಯಿರಿ ಮತ್ತು ಇದರ ಬಳಿಕ ಕುಕ್ಕರ್ ಗೆ ಹಾಕಿ. ಪ್ರೆಷರ್ ಕುಕ್ಕರ್ ಗೆ ಎಷ್ಟು ಪ್ರಮಾಣದಲ್ಲಿ ನೀರು ಹಾಕುತ್ತೀರಿ ಎನ್ನುವುದು ಅತೀ ಅಗತ್ಯವಾಗಿರುವುದು ಮತ್ತು ಇದನ್ನು ತಿಳಿದುಕೊಂಡು ಅಡುಗೆ ಮಾಡಬೇಕು. ಅಗತ್ಯ ಬಿದ್ದಾಗ ನೀವು ತವಾವನ್ನು ಬಳಸಿಕೊಂಡು ಹೋಗಿ. ಈ ಎಲ್ಲಾ ತಪ್ಪುಗಳನ್ನು ಮಾಡದೆ ಇದ್ದರೆ ಆಗ ನಿಮ್ಮಅಡುಗೆಯು ರುಚಿಕರವಾಗಿರುವುದು.



Click it and Unblock the Notifications