Just In
- 11 min ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 55 min ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 1 hr ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 1 hr ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆಯ ಮರದ ಪರಿಕರಗಳ ಸ್ವಚ್ಛತೆಗೆ ಸರಳ ಸೂತ್ರ
ಅಡುಗೆ ಮನೆಯಲ್ಲಿನ ಪರಿಕರಗಳಲ್ಲಿ ಹೆಚ್ಚಿನವುಗಳನ್ನು ಲೋಹ ಮತ್ತು ಪ್ಲಾಸ್ಟಿಕ್ಕಿನ ವಸ್ತುಗಳು ಆವರಿಸಿಕೊಂಡು ದಶಕಗಳೇ ಕಳೆದಿವೆ. ಆದರೆ ಕೆಲವು ಪರಿಕರಗಳು ಮಾತ್ರ ಈಗಲೂ ಮರದ್ದೇ ಆಗಿರುವುದು ಇವುಗಳ ಜನಪ್ರಿಯತೆಯನ್ನು ಸಾರುತ್ತವೆ. ಉದಾಹರಣೆಗೆ ಲಟ್ಟಣಿಗೆ, ಚಪಾತಿ ಲಟ್ಟಿಸುವ ಮಣೆ, ಸೌಟು, ದೋಸೆ ಮಗುಚಿ ಹಾಕಲು ಉಪಯೋಗಿಸುವ ಸಟ್ಟುಗ, ನಾನ್ ಸ್ಟಿಕ್ ಪಾತ್ರೆಗಳಿಗೆ ಬಳಸುವ ಚಮಚ ಇತ್ಯಾದಿಗಳು. ಅಡುಗೆ ಮನೆಯ ಸಿಂಕ್ನ ಸ್ವಚ್ಛತೆಗೆ ಇಲ್ಲಿದೆ ಸರಳ ಟಿಪ್ಸ್
ವರ್ಷಗಟ್ಟಲೆ ಉಪಯೋಗಿಸಲು ಸಂಗ್ರಹಿಸಿರುವ ಉಪ್ಪಿನಕಾಯಿ ಜಾಡಿಯಲ್ಲಿಯೂ ಮರದ ಚಮಚವನ್ನೇ ಬಳಸುವಂತೆ ಕೆಲವರು ಸಲಹೆ ನೀಡುತ್ತಾರೆ. ಏಕೆಂದರೆ ಲೋಹದ ಚಮಚವನ್ನು ಬಳಸುವುದರಿಂದ ಆ ಉಪ್ಪಿನಕಾಯಿಯಲ್ಲಿ ಹುಳ ಬೀಳುತ್ತದೆ. ಇದಕ್ಕೆ ವೈಜ್ಞಾನಿಕಾದ ಆಧಾರ ಇಲ್ಲವಾದರೂ ಹಿರಿಯರ ಅನುಭವದ ಪ್ರಕಾರ ಈ ಮಾತು ಸತ್ಯವಾಗಿದೆ.
ಆದರೆ ಸತತ ಬಳಕೆಯಿಂದ ಇವುಗಳು ಬಣ್ಣಗೆಟ್ಟು ಎಷ್ಟು ತೊಳೆದರೂ ಹಳೆಯ ಸಾರಿನ ವಾಸನೆಯನ್ನು ಹೊರಡಿಸುತ್ತಿರುತ್ತವೆ. ನಿಮ್ಮ ನೆಚ್ಚಿನ ಈ ಪರಿಕರಗಳನ್ನು ಎಸೆಯಲೂ ಮನಸುಬಾರದೇ ಕಮಟು ವಾಸನೆಯ ಪರಿಣಾಮವಾಗಿ ಬಳಸಲೂ ಆಗದೆ ಇರುವ ಇಬ್ಬಂದಿಯನ್ನು ಇಂದು ನೀಡಿರುವ ಕೆಲವು ಸಲಹೆಗಳು ದೂರ ಮಾಡುತ್ತವೆ. ಪಾತ್ರೆ ತೊಳೆಯುವುದೇ ಸಮಸ್ಯೆ ಆಗಿ ಬಿಟ್ಟಿದೆ! ಏನು ಮಾಡ್ಲಿ?
ಉದಾಹರಣೆಗೆ
ಲಿಂಬೆಹಣ್ಣಿನಿಂದ
ಉಜ್ಜಿದ
ಮರದ
ಸೌಟು
ಕೆಲವೇ
ಕ್ಷಣಗಳಲ್ಲಿ
ತನ್ನ
ಹಳೆಯ
ವಾಸನೆಯನ್ನು
ಕಳೆದುಕೊಂಡು
ಹೊಚ್ಚ
ಹೊಸತರಂತಾಗುತ್ತದೆ.
ಅಂತೆಯೇ
ಶಿರ್ಕಾ
ಸಹಾ
ಮರದ
ವಾಸನೆಯನ್ನು
ತೆಗೆಯುವ
ಇನ್ನೊಂದು
ಉತ್ತಮ
ಉಪಾಯವಾಗಿದೆ.
ಇದರ
ಬಳಕೆಯ
ಬಗ್ಗೆ
ಕೆಳಗಿನ
ಸ್ಲೈಡ್
ಶೋ
ನಿಮಗೆ
ನೆರವು
ನೀಡಲಿದೆ.
ಲಿಂಬೆ
ಮರದ ಪರಿಕರಗಳ ಹೊರತಾಗಿ ಸ್ಟ್ರೀಲ್, ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನೂ ಲಿಂಬೆಯ ರಸ ಸ್ವಚ್ಛಗೊಳಿಸಬಲ್ಲುದು. ಇದಕ್ಕಾಗಿ ಲಿಂಬೆಹಣ್ಣನ್ನು ಕತ್ತರಿಸಿ ರಸ ಹಿಂಡಿ ಒಂದು ದೊಡ್ಡ ಪಾತ್ರೆಯಲ್ಲಿರುವ ಕುದಿಯುವ ನೀರಿಗೆ ಸೇರಿಸಿ. ಈ ನೀರಿಗೆ ನಿಮ್ಮ ಮರದ ಪರಿಕರಗಳನ್ನು ಮುಳುಗಿಸಿ. ಮರದ ಪರಿಕರಗಳು ನೀರಿನಲ್ಲಿ ತೇಲುವ ಕಾರಣ ಭಾರದ ಬೇರಾವುದೋ ವಸ್ತುವೊಂದನ್ನು ಇಟ್ಟು ಪೂರ್ತಿಯಾಗಿ ಮುಳುಗುವಂತೆ ಮಾಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಲಿಂಬೆ
ಹದಿನೈದು ನಿಮಿಷ ಈ ಪಾತ್ರೆಗಳು ಹೀಗೇ ಮುಳುಗಿರಲಿ. ನಂತರ ತಣ್ಣೀರಿಗೆ ಒಡ್ಡದೇ ಕೇವಲ ಸ್ವಚ್ಛವಾದ ಹತ್ತಿಯ ಬಟ್ಟೆಯಿಂದ ಒರೆಸಿ ಬಿಸಿಲಿನಲ್ಲಿಡಿ. ಅರ್ಧ ಗಂಟೆಯ ಬಳಿಕ ಪಾತ್ರೆಯನ್ನು ಉಲ್ಟಾ ಮಾಡಿ ಇನ್ನೊಂದು ಬದಿಯೂ ಒಣಗುವಂತೆ ಮಾಡಿ. ಈಗ ನಿಮ್ಮ ಮರದ ಪಾತ್ರೆಗಳು ಹೊಚ್ಚ ಹೊಸತರಂತೆ ಮೆರುಗು ಪಡೆದಿರುತ್ತವೆ.
ವಿನೇಗರ್ ಅಥವಾ ಶಿರ್ಕಾ
ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ಶಿರ್ಕಾ ಸೇರಿಸಿ. ಇದಕ್ಕೆ ಒಂದು ದೊಡ್ಡ ಚಮಚ ಜೇನು ಸೇರಿಸಿ ಮಿಶ್ರಣ ಮಾಡಿ. ಈಗ ಹತ್ತಿಯುಂಡೆಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಹಿಂಡಿ. ಈ ಹತ್ತಿಯುಂಡೆಯಿಂದ ನಿಮ್ಮ ಮರದ ಪಾತ್ರೆಗಳನ್ನು ಉಜ್ಜುತ್ತಾ ಸ್ವಚ್ಛಗೊಳಿಸಿ.
ವಿನೇಗರ್ ಅಥವಾ ಶಿರ್ಕಾ
ಪಾತ್ರೆಗಳ ಒಳಭಾಗಕ್ಕೆ ಎರಡು ಮೂರು ಬಾರಿ ಉಪಯೋಗಿಸಿ. ಬಳಿಕ ನೆರಳಿನಲ್ಲಿ ಒಣಗಿಸಿ. ಒಂದೇ ಪ್ರಯತ್ನದಲ್ಲಿ ವಾಸನೆ ಹೋಗದಿದ್ದರೆ ಇನ್ನೊಂದೆರಡು ಬಾರಿ ಪುನರಾವರ್ತಿಸಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಮೊದಲ ಪ್ರಯತ್ನದಲ್ಲಿಯೇ ವಾಸನೆ ದೂರವಾಗುತ್ತದೆ.
ಉಪ್ಪು
ಉಪ್ಪು ಸಹಾ ಮರದ ವಾಸನೆಯನ್ನು ಹೋಗಲಾಡಿಸಲು ಮತ್ತು ದೃಢತೆ ನೀಡಲು ಉತ್ತಮವಾದ ಮಾಧ್ಯಮವಾಗಿದೆ. ಇಂದಿಗೂ ಕರಾವಳಿಯ ಜನರು ಸಾಂಪ್ರಾದಾಯಿಕ ದೋಣಿಗಳನ್ನು ತಯಾರಿಸಲು ಉಪಯೋಗಿಸುವ ಮರವನ್ನು ಕಡಲತೀರದ ಉಪ್ಪುನೀರಿನಲ್ಲಿ ಕೆಲ ತಿಂಗಳವರೆಗೆ ಮುಳುಗಿಸಿಡುತ್ತಾರೆ. ಇದು ಮರವನ್ನು ಸೀಳದಂತೆ ದೃಢವಾಗಿಸುವ ಜೊತೆಗೇ ನೀರನ್ನು ಹೀರದಂತೆಯೂ ಮಾಡುತ್ತದೆ. ಮನೆಯ ಮರದ ವಸ್ತುಗಳಿಗಾಗಿ ಒಂದು ದೊಡ್ಡ ಪಾತ್ರೆಯಲ್ಲಿ ಮರದ ಪಾತ್ರೆಗಳನ್ನು ಮುಳುಗುವಷ್ಟು ನೀರು ಹಾಕಿ ಕುದಿಸಿ. ಈ ನೀರಿಗೆ ಹತ್ತು ಲೀಟರಿಗೆ ಕಾಲು ಕೇಜಿಯಷ್ಟು ಉಪ್ಪನ್ನು ಅಗತ್ಯ ಪ್ರಮಾಣದಲ್ಲಿ ಸೇರಿಸಿ.
ಉಪ್ಪು
ನೀರು ಕುದಿಬಂದ ಬಳಿಕ ಉರಿಯನ್ನು ತಗ್ಗಿಸಿ ಐದು ನಿಮಿಷಗಳವರೆಗೆ ಕುದಿಯಲು ಬಿಡಿ. ಮರದ ವಸ್ತುಗಳು ನೀರಿನಿಂದ ಹೊರಗೆ ತೇಲುತ್ತಿದ್ದರೆ ಭಾರವಾದ ಮುಚ್ಚಳ ಅಥವಾ ಬೇರಾವುದಾದರೂ ವಸ್ತುವಿನಿಂದ ಮುಳುಗುವಂತೆ ಮಾಡಿ. ಐದು ನಿಮಿಷದ ಬಳಿಕ ಹೊರತೆಗೆದು ನೀರು ಬಸಿಯುವಂತೆ ಮಾಡಿ. ಉಳಿದ ನೀರನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ ತೆಗೆಯಿರಿ. ಬಳಿಕ ಬಿಸಿಲಿನಲ್ಲಿ ಇಡಿಯ ದಿನ ಒಣಗಿಸಿ. ಅರ್ಧ ದಿನದ ಬಳಿಕ ಉಲ್ಟಾ ಮಾಡಿ ಇನ್ನೊಂದು ಬದಿಯನ್ನು ಒಣಗಿಸಿ.
ಸಿಟ್ರಿಕ್ ಆಮ್ಲವಿರುವ ಹಣ್ಣುಗಳು
ಒಂದು ವೇಳೆ ಲಿಂಬೆಹಣ್ಣು ಲಭ್ಯವಿಲ್ಲದಿದ್ದರೆ ಸಿಟ್ರಿಕ್ ಆಮ್ಲವಿರುವ ಬೇರೆ ಹಣ್ಣುಗಳನ್ನೂ ಉಪಯೋಗಿಸಬಹುದು. ದೊಡ್ಡಲಿಂಬೆ, ಚಕ್ಕೋತ, ಮೂಸಂಬಿ ಮೊದಲಾದ ಯಾವುದೇ ಹಣ್ಣನ್ನು ಮೇಲಿನ ಲಿಂಬೆಹಣ್ಣಿನಲ್ಲಿ ವಿವರಿಸಿರುವ ವಿಧಾನ ಬಳಸಿ ಉಪಯೋಗಿಸಬಹುದು.
ಅಡುಗೆ ಸೋಡಾ
ಸಮಪ್ರಮಾಣದಲ್ಲಿ ಲಿಂಬೆರಸ ಮತ್ತು ಅಡುಗೆ ಸೋಡಾ ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಒಂದು ಬಟ್ಟೆ ಅಥವಾ ಹತ್ತಿಯುಂಡೆಯನ್ನು ಉಪಯೋಗಿಸಿ ಮರದ ಪಾತ್ರೆಗಳ ಎರಡು ಬದಿಗೆ ತೆಳುವಾಗಿ ಹಚ್ಚಿ ಒಳಭಾಗ ಕಾಣುವಂತೆ ಬಿಸಿಲಿನಲ್ಲಿ ಹದಿನೈದು ನಿಮಿಷ ಇಡಿ.
ಅಡುಗೆ ಸೋಡಾ
ಹತ್ತು ನಿಮಿಷವಾದ ಬಳಿಕ ಉಲ್ಟಾ ಮಾಡಿ ಹೊರಬದಿಗೂ ಸೂರ್ಯನ ರಶ್ಮಿ ಬೀಳುವಂತೆ ಮಾಡಿ. ನಂತರ ಬಿಸಿನೀರಿನಲ್ಲಿ ಕೊಂಚ ಹೊತ್ತು ನೆನೆಯಲಿಟ್ಟು ನಂತರ ಬಟ್ಟೆ ಅಥವಾ ಪಾತ್ರೆಯುಜ್ಜುವ ಬ್ರಶ್ ಉಪಯೋಗಿಸಿ ನಯವಾಗಿ ತೊಳೆದು ಒರೆಸಿ ನೆರಳಿನಲ್ಲಿ ಒಣಗಲು ಬಿಡಿ.