Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಮಣ್ಣನ್ನು ಫಲವತ್ತವಾಗಿಸುದು ಹೇಗೆ?
ಮನೆಯ ಸುತ್ತ ಒಂದು ಹೂದೋಟ ಇದ್ದರೆ ಎಷ್ಟು ಚೆನ್ನ, ಆದರ ಜೊತೆಗೆ ಒಂದಷ್ಟು ತರಕಾರಿಯನ್ನೂ ಬೆಳೆಸ ಬೇಕೆನ್ನುವುದು ಅನೇಕ ಮಹಿಳೆಯರ ಹೊಂಗನಸುಗಳಲ್ಲೊಂದು.ಮನೆಯ ಕೈ ತೋಟದಲ್ಲೇ ತರಕಾರಿ, ಹೂ ಬೆಳೆಸಿ ಅಕ್ಕಪಕ್ಕದವರಿಗೆ " ರೀ....ನಮ್ಮನೆಲಿ ಬೆಳೆದಿದ್ದು ತರಕಾರಿ ತಗೊಳ್ಳಿ..." ಅಂತಾನೋ " ಪೂಜೆಗೆ ಹೂ ಸಿಗದಿದ್ದರೆ ಬಾರೆಮ್ಮಾ ನಮ್ಮನೆಲೇ ಕಿತ್ಕೋ.." ಎನ್ನುವ ಉದಾರತೆ ತೋರುವಾಗ ಆಕೆಯಲ್ಲಿ ಅದೇನು ವಯ್ಯಾರ.
ತರಕಾರಿ, ಹೂ ಬೆಳೆಯಲು ಉತ್ತಮವಾದ ಬೀಜ ಹಾಗೂ ಸಾಕಷ್ಟು ನೀರಿದ್ದರೆ ಸಾಲದು ಮುಖ್ಯವಾಗಿ ಅದರ ಜೊತೆಗೆ ನಿಮ್ಮ ಮನೆಯ ತೋಟದ ಮಣ್ಣೂ ಫಲವತ್ತಾಗಿರಬೇಕಲ್ವೇ!ಆ ಫಲವತ್ತಾದ ಮಣ್ಣೇ ನಿಮ್ಮ ಇಂಥ ಉದಾದ ಭಾವನೆಗಳಿಗೆ ಸ್ಪಂಧಿಸಲು ಹಾಗೂ ಹೊಂಗನಸು ನನಸಾಗಿಸಲು ಸಹಕಾರಿಯಾಗಿದೆ ಎನ್ನುವುದನ್ನು ಮರೆಯಬೇಡಿ.ಮಣ್ಣು ಜೀವಾಧಾರಕ ಎಂದು ನೀವು ಭಾವಿಸುವಾದರೆ ಅದಕ್ಕೆ ಉತ್ತಮ ಗುಣಮಟ್ಟದ ಪೋಷಣೆ ಅಗತ್ಯ ಎನ್ನುವುದನ್ನೂ ಮರೆಯಬಾರದು.ಒಳ್ಳೇ ಪೌಷ್ಠಿಕಾಂಶ ಹೊಂದಿರುವ ಮಣ್ಣು ಉತ್ತಮ ಫಲ ನೀಡುತ್ತದೆ ಎನ್ನುವುದು ಸತ್ಯ.

ಕೆಲವು ಸಲಹೆಗಳು:-
1. ನಿಮ್ಮ ತೋಟದ ಮಣ್ಣಿಗೆ ಆಗಾಗ ಗೊಬ್ಬರ ಬೆರೆಸಬೇಕು.ಹೆಚ್ಚು ಪೌಷ್ಠಿಕಾಂಶವಿರುವ ಗೊಬ್ಬರವನ್ನು ಮಣ್ಣಿಗೆ ಮಿಶ್ರಣ ಮಾಡಿದರೆ ಒಳ್ಳೆದು.ಕೇವಲ ಮೇಲ್ಭಾಗದ ಮಣ್ಣಿಗೆ ಗೊಬ್ಬರ ಎರಚುವುದರಿಂದ ಏನೂ ಪ್ರಯೋಜನವಿಲ್ಲ. ಮೇಲ್ಭಾಗದ ಮಣ್ಣನ್ನು ಕೆತ್ತಿ ಹದಮಾಡಿ ಗೊಬ್ಬರವನ್ನು ಮಣ್ಣಿಗೆ ಮಿಶ್ರಗೊಳಿಸುವುದರಿಂದ ಒಳ್ಳೆ ಫಲ ನಿರೀಕ್ಷಿಸ ಬಹುದು.ಅದರಲ್ಲೂ ಯಾವುದೇ ರಾಸಾಯನ ಮಿಶ್ರಣವಿಲ್ಲದೆ ಮನೆಯಲ್ಲೇ ಮಾಡಿದ ಗೊಬ್ಬರ ಬಳಕೆ ಮಾಡುವುದಾದರೆ ಇನ್ನೂ ಒಳ್ಳೇಯದೇ.
2.ಪ್ರಾಣಿಗಳ ತ್ಯಾಜ್ಯ, ಸಗಣಿ ಮುಂತಾದವನ್ನು ಬಳಸಿದ ಗೊಬ್ಬರವಾದರೆ ಮಣ್ಣು ಇನ್ನೂ ಹೆಚ್ಚು ಫಲವತ್ತಾಗಿರುತ್ತದೆ. ಗೊಬ್ಬರದಲ್ಲಿ ಪೌಷ್ಠಿಕಾಂಶ ಹೆಚ್ಚಾಗಿ ಇದ್ದರೆ ಗಿಡಗಳು ಹೆಚ್ಚು ಹಸಿರಾಗಿರುತ್ತವೆ.
3. ಇದರ ಜೊತೆಗೆ ಬೇರೆ ಗಿಡ-ಮರಗಳ ಎಲೆಗಳನ್ನು ಕತ್ತರಿಗೆ ಮಣ್ಣಿಗೆ ಮಿಶ್ರ ಮಾಡಿ.ಎಲೆಗಳಿಗೆ ಯಾವುದೇ ರೋಗ ಇಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಿ.ಒಣಗಿದ ಎಲೆಗಳು, ಹುಳುಉಪ್ಪಟೆ ತಿಂದು ಬಿಟ್ಟ ಹಾಗೂ ಪಾಚಿಕಟ್ಟಿದ ಎಲೆಗಳು ನೀವು ಮಾಡುವ ಮಿಶ್ರಣದಲ್ಲಿ ಸೇರದ ಹಾಗೆ ಎಚ್ಚರವಹಿಸಿ.ಇದರಿಂದಾಗಿ ಮಣ್ಣಿನ ತಳಭಾಗದಲ್ಲಿ ರೋಗಾಣುಗಳು ಉತ್ಪತ್ತಿಯಾಗಿ ಗಿಡ-ಮರಗಳಿಗೂ ರೋಗ ತಗುಲುವ ಸಾಧ್ಯತೆಗಳಿರುತ್ತದೆ.



Click it and Unblock the Notifications