Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮಣ್ಣನ್ನು ಫಲವತ್ತವಾಗಿಸುದು ಹೇಗೆ?
ಮನೆಯ ಸುತ್ತ ಒಂದು ಹೂದೋಟ ಇದ್ದರೆ ಎಷ್ಟು ಚೆನ್ನ, ಆದರ ಜೊತೆಗೆ ಒಂದಷ್ಟು ತರಕಾರಿಯನ್ನೂ ಬೆಳೆಸ ಬೇಕೆನ್ನುವುದು ಅನೇಕ ಮಹಿಳೆಯರ ಹೊಂಗನಸುಗಳಲ್ಲೊಂದು.ಮನೆಯ ಕೈ ತೋಟದಲ್ಲೇ ತರಕಾರಿ, ಹೂ ಬೆಳೆಸಿ ಅಕ್ಕಪಕ್ಕದವರಿಗೆ " ರೀ....ನಮ್ಮನೆಲಿ ಬೆಳೆದಿದ್ದು ತರಕಾರಿ ತಗೊಳ್ಳಿ..." ಅಂತಾನೋ " ಪೂಜೆಗೆ ಹೂ ಸಿಗದಿದ್ದರೆ ಬಾರೆಮ್ಮಾ ನಮ್ಮನೆಲೇ ಕಿತ್ಕೋ.." ಎನ್ನುವ ಉದಾರತೆ ತೋರುವಾಗ ಆಕೆಯಲ್ಲಿ ಅದೇನು ವಯ್ಯಾರ.
ತರಕಾರಿ, ಹೂ ಬೆಳೆಯಲು ಉತ್ತಮವಾದ ಬೀಜ ಹಾಗೂ ಸಾಕಷ್ಟು ನೀರಿದ್ದರೆ ಸಾಲದು ಮುಖ್ಯವಾಗಿ ಅದರ ಜೊತೆಗೆ ನಿಮ್ಮ ಮನೆಯ ತೋಟದ ಮಣ್ಣೂ ಫಲವತ್ತಾಗಿರಬೇಕಲ್ವೇ!ಆ ಫಲವತ್ತಾದ ಮಣ್ಣೇ ನಿಮ್ಮ ಇಂಥ ಉದಾದ ಭಾವನೆಗಳಿಗೆ ಸ್ಪಂಧಿಸಲು ಹಾಗೂ ಹೊಂಗನಸು ನನಸಾಗಿಸಲು ಸಹಕಾರಿಯಾಗಿದೆ ಎನ್ನುವುದನ್ನು ಮರೆಯಬೇಡಿ.ಮಣ್ಣು ಜೀವಾಧಾರಕ ಎಂದು ನೀವು ಭಾವಿಸುವಾದರೆ ಅದಕ್ಕೆ ಉತ್ತಮ ಗುಣಮಟ್ಟದ ಪೋಷಣೆ ಅಗತ್ಯ ಎನ್ನುವುದನ್ನೂ ಮರೆಯಬಾರದು.ಒಳ್ಳೇ ಪೌಷ್ಠಿಕಾಂಶ ಹೊಂದಿರುವ ಮಣ್ಣು ಉತ್ತಮ ಫಲ ನೀಡುತ್ತದೆ ಎನ್ನುವುದು ಸತ್ಯ.

ಕೆಲವು ಸಲಹೆಗಳು:-
1. ನಿಮ್ಮ ತೋಟದ ಮಣ್ಣಿಗೆ ಆಗಾಗ ಗೊಬ್ಬರ ಬೆರೆಸಬೇಕು.ಹೆಚ್ಚು ಪೌಷ್ಠಿಕಾಂಶವಿರುವ ಗೊಬ್ಬರವನ್ನು ಮಣ್ಣಿಗೆ ಮಿಶ್ರಣ ಮಾಡಿದರೆ ಒಳ್ಳೆದು.ಕೇವಲ ಮೇಲ್ಭಾಗದ ಮಣ್ಣಿಗೆ ಗೊಬ್ಬರ ಎರಚುವುದರಿಂದ ಏನೂ ಪ್ರಯೋಜನವಿಲ್ಲ. ಮೇಲ್ಭಾಗದ ಮಣ್ಣನ್ನು ಕೆತ್ತಿ ಹದಮಾಡಿ ಗೊಬ್ಬರವನ್ನು ಮಣ್ಣಿಗೆ ಮಿಶ್ರಗೊಳಿಸುವುದರಿಂದ ಒಳ್ಳೆ ಫಲ ನಿರೀಕ್ಷಿಸ ಬಹುದು.ಅದರಲ್ಲೂ ಯಾವುದೇ ರಾಸಾಯನ ಮಿಶ್ರಣವಿಲ್ಲದೆ ಮನೆಯಲ್ಲೇ ಮಾಡಿದ ಗೊಬ್ಬರ ಬಳಕೆ ಮಾಡುವುದಾದರೆ ಇನ್ನೂ ಒಳ್ಳೇಯದೇ.
2.ಪ್ರಾಣಿಗಳ ತ್ಯಾಜ್ಯ, ಸಗಣಿ ಮುಂತಾದವನ್ನು ಬಳಸಿದ ಗೊಬ್ಬರವಾದರೆ ಮಣ್ಣು ಇನ್ನೂ ಹೆಚ್ಚು ಫಲವತ್ತಾಗಿರುತ್ತದೆ. ಗೊಬ್ಬರದಲ್ಲಿ ಪೌಷ್ಠಿಕಾಂಶ ಹೆಚ್ಚಾಗಿ ಇದ್ದರೆ ಗಿಡಗಳು ಹೆಚ್ಚು ಹಸಿರಾಗಿರುತ್ತವೆ.
3. ಇದರ ಜೊತೆಗೆ ಬೇರೆ ಗಿಡ-ಮರಗಳ ಎಲೆಗಳನ್ನು ಕತ್ತರಿಗೆ ಮಣ್ಣಿಗೆ ಮಿಶ್ರ ಮಾಡಿ.ಎಲೆಗಳಿಗೆ ಯಾವುದೇ ರೋಗ ಇಲ್ಲ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಿ.ಒಣಗಿದ ಎಲೆಗಳು, ಹುಳುಉಪ್ಪಟೆ ತಿಂದು ಬಿಟ್ಟ ಹಾಗೂ ಪಾಚಿಕಟ್ಟಿದ ಎಲೆಗಳು ನೀವು ಮಾಡುವ ಮಿಶ್ರಣದಲ್ಲಿ ಸೇರದ ಹಾಗೆ ಎಚ್ಚರವಹಿಸಿ.ಇದರಿಂದಾಗಿ ಮಣ್ಣಿನ ತಳಭಾಗದಲ್ಲಿ ರೋಗಾಣುಗಳು ಉತ್ಪತ್ತಿಯಾಗಿ ಗಿಡ-ಮರಗಳಿಗೂ ರೋಗ ತಗುಲುವ ಸಾಧ್ಯತೆಗಳಿರುತ್ತದೆ.



Click it and Unblock the Notifications