Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ವಿಪರೀತ ಮಳೆ: ನಿಮ್ಮ ಕೈತೋಟದ ಆರೈಕೆ ಹೀಗಿರಲಿ
ಇದು ಚಳಿಗಾಲ, ನೋಡಿದರೆ ಮಳೆಗಾಲದಲ್ಲಿ ಸುರಿಯುವುದಕ್ಕಿಂತ ಹೆಚ್ಚಾಗಿ ಮಳೆ ಸುರಿಯುತ್ತಿದೆ. ಜೋರಾಗಿ ಮಳೆ ಬಂದರೆ ಹೊಲದಲ್ಲಿ ಬೆಳೆದ ಬೆಳೆ ನಾಶವಾಗುವುದು, ಆದರೆ ಜೋರು ಮಳೆಯಿಂದ ಟೆರೇಸ್ನಲ್ಲಿ ಬೆಳೆದ ಗಿಡಗಳನ್ನು ರಕ್ಷಣೆ ಮಾಡಬಹುದು.

ನಿಮ್ಮ ಗಾರ್ಡನ್ ಅನ್ನು ರಕ್ಷಣೆ ಮಾಡಲು ನೀವು ಮಾಡಬೇಕಾಗಿರುವುದು ಏನು ಎಂದು ನೋಡೋಣ ಬನ್ನಿ:

1. ಹಾಳಾದ ಗಿಡವನ್ನು ತೆಗೆಯಿರಿ
ಜೋರಾದ ಮಳೆಗೆ ಗಿಡ ಸ್ವಲ್ಪ ಹಾಳಾಗಿದ್ದರೆ ಸಂಪೂರ್ಣ ಕೊಳೆಯುವುದು, ಜೊತೆಗೆ ಈ ಗಿಡದಿಂದಾಗಿ ಮತ್ತೊಂದು ಗಿಡ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಹಾಳಾದ ಗಿಡ, ಮುರಿದ ಕೊಂಬೆಗಳು, ಜೋರಾಗಿ ಗಾಳಿ ಬೀಸಿದಾಗ ಮುರಿದು ಬೀಳುವಂತಿರುವ ಕೊಂಬೆಗಳು ಇವುಗಳನ್ನು ತೆಗೆಯಿರಿ.

2. ಎತ್ತರದ ಗಿಡಗಳಿಗೆ ಸಪೋರ್ಟ್ ನೀಡಿ
ಎತ್ತರದ ಗಿಡಗಳಿದ್ದರೆ ಜೋರಾದ ಮಳೆ-ಗಾಳಿಗೆ ಮುರಿದು ಬೀಳುವುದು, ಅದನ್ನು ತಡೆಯಲು ಸಪೋರ್ಟ್ಗೆ ದೊಡ್ಡ ಕೋಲು ಅಥವಾ ಮರದ ಹಲಗೆ ನೀಡಿ, ಅಥವಾ ಬೀಳದಂತೆ ಹಗ್ಗದಿಂದ ಕಟ್ಟಿ.
3. ನೀರು ನಿಲ್ಲದಂತ ವ್ಯವಸ್ಥೆ ಮಾಡಿ
ಮನೆ ಮುಂದೆ ಚಿಕ್ಕ ಗಾರ್ಡನ್ ಮಾಡಿದ್ದರೆ ನೀರು ನಿಲ್ಲದಂತೆ ಎಚ್ಚರವಹಿಸಿ, ಅದೇ ಟೆರೇಸ್ ಗಾರ್ಡನ್ ಆದರೆ ನೀರು ನಿಲ್ಲದಂತೆ ವ್ಯವಸ್ಥೆ ಇರುತ್ತದೆ. ಒಂದು ವೇಳೆ ನಿಂತರೆ ನೀರು ಹೋಗಲು ವ್ಯವಸ್ಥೆ ಮಾಡಿ.

4. ಗಿಡಗಳನ್ನು ತೆಳುವಾದ ಪ್ಲಾಸ್ಟಿಕ್ನಿಂದ ಕವರ್ ಮಾಡಿ
ಈಗಷ್ಟ ಮೊಳಕ ಬರುತ್ತಿರುವ ಅಥವಾ ಚಿಕ್ಕ ಗಿಡಗಳಿಗೆ ತುಂಬಾ ನೀರು ಬಿದ್ದರೆ ಹಾಳಾಗುತ್ತದೆ, ಅದನ್ನು ತಡೆಗಟ್ಟಲು ತೆಳುವಾದ ಪ್ಲಾಸ್ಟಿಕ್ ಬಳಸಿ.
5. ಗೊಬ್ಬರ ಹಾಕಬೇಡಿ
ತುಂಬಾ ಮಳೆ ಸುರಿಯುತ್ತಿರುವ ಸಮಯದಲ್ಲಿ ಗೊಬ್ಬರ ಹಾಕಬೇಡಿ, ಅದು ನೀರಿನಲ್ಲಿ ಕೊಚ್ಚಿ ಹೋಗುತ್ತದೆ, ಅದರ ಬದಲಿಗೆ ಮಳೆ ನಿಂತ ಬಳಿಕ ಅಥವಾ ಸ್ವಲ್ಪ ಮಳೆ ಬರುವಾಗ ಗೊಬ್ಬರ ಹಾಕಿದರೆ ಚೆನ್ನಾಗಿ ಹೀರಿಕೊಳ್ಳುವುದು.

6. ಮಳೆ ನಿಂತ ಮೇಲೆ
ಪ್ಲಾಸ್ಟಿಕ್ ಹಾಕಿರದಿದ್ದರೆ ಮಳೆ ನಿಂತ ಮೇಲೆ ಗಿಡದ ಬುಡಕ್ಕೆ ಹಾನಿಯಾಗಿದೆಯೇ ಎಂದು ಪರೀಕ್ಷಿಸಿ. ಅಲ್ಲದೆ ಮಳೆ ನಂತರ ಹುಳ-ಹುಪ್ಪಟೆಗಳು ಬಂದಿದ್ದರೆ ಅವುಗಳನ್ನು ತೆಗೆಯಿರಿ.



Click it and Unblock the Notifications