Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ವಿಪರೀತ ಮಳೆ: ನಿಮ್ಮ ಕೈತೋಟದ ಆರೈಕೆ ಹೀಗಿರಲಿ
ಇದು ಚಳಿಗಾಲ, ನೋಡಿದರೆ ಮಳೆಗಾಲದಲ್ಲಿ ಸುರಿಯುವುದಕ್ಕಿಂತ ಹೆಚ್ಚಾಗಿ ಮಳೆ ಸುರಿಯುತ್ತಿದೆ. ಜೋರಾಗಿ ಮಳೆ ಬಂದರೆ ಹೊಲದಲ್ಲಿ ಬೆಳೆದ ಬೆಳೆ ನಾಶವಾಗುವುದು, ಆದರೆ ಜೋರು ಮಳೆಯಿಂದ ಟೆರೇಸ್ನಲ್ಲಿ ಬೆಳೆದ ಗಿಡಗಳನ್ನು ರಕ್ಷಣೆ ಮಾಡಬಹುದು.

ನಿಮ್ಮ ಗಾರ್ಡನ್ ಅನ್ನು ರಕ್ಷಣೆ ಮಾಡಲು ನೀವು ಮಾಡಬೇಕಾಗಿರುವುದು ಏನು ಎಂದು ನೋಡೋಣ ಬನ್ನಿ:

1. ಹಾಳಾದ ಗಿಡವನ್ನು ತೆಗೆಯಿರಿ
ಜೋರಾದ ಮಳೆಗೆ ಗಿಡ ಸ್ವಲ್ಪ ಹಾಳಾಗಿದ್ದರೆ ಸಂಪೂರ್ಣ ಕೊಳೆಯುವುದು, ಜೊತೆಗೆ ಈ ಗಿಡದಿಂದಾಗಿ ಮತ್ತೊಂದು ಗಿಡ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಹಾಳಾದ ಗಿಡ, ಮುರಿದ ಕೊಂಬೆಗಳು, ಜೋರಾಗಿ ಗಾಳಿ ಬೀಸಿದಾಗ ಮುರಿದು ಬೀಳುವಂತಿರುವ ಕೊಂಬೆಗಳು ಇವುಗಳನ್ನು ತೆಗೆಯಿರಿ.

2. ಎತ್ತರದ ಗಿಡಗಳಿಗೆ ಸಪೋರ್ಟ್ ನೀಡಿ
ಎತ್ತರದ ಗಿಡಗಳಿದ್ದರೆ ಜೋರಾದ ಮಳೆ-ಗಾಳಿಗೆ ಮುರಿದು ಬೀಳುವುದು, ಅದನ್ನು ತಡೆಯಲು ಸಪೋರ್ಟ್ಗೆ ದೊಡ್ಡ ಕೋಲು ಅಥವಾ ಮರದ ಹಲಗೆ ನೀಡಿ, ಅಥವಾ ಬೀಳದಂತೆ ಹಗ್ಗದಿಂದ ಕಟ್ಟಿ.
3. ನೀರು ನಿಲ್ಲದಂತ ವ್ಯವಸ್ಥೆ ಮಾಡಿ
ಮನೆ ಮುಂದೆ ಚಿಕ್ಕ ಗಾರ್ಡನ್ ಮಾಡಿದ್ದರೆ ನೀರು ನಿಲ್ಲದಂತೆ ಎಚ್ಚರವಹಿಸಿ, ಅದೇ ಟೆರೇಸ್ ಗಾರ್ಡನ್ ಆದರೆ ನೀರು ನಿಲ್ಲದಂತೆ ವ್ಯವಸ್ಥೆ ಇರುತ್ತದೆ. ಒಂದು ವೇಳೆ ನಿಂತರೆ ನೀರು ಹೋಗಲು ವ್ಯವಸ್ಥೆ ಮಾಡಿ.

4. ಗಿಡಗಳನ್ನು ತೆಳುವಾದ ಪ್ಲಾಸ್ಟಿಕ್ನಿಂದ ಕವರ್ ಮಾಡಿ
ಈಗಷ್ಟ ಮೊಳಕ ಬರುತ್ತಿರುವ ಅಥವಾ ಚಿಕ್ಕ ಗಿಡಗಳಿಗೆ ತುಂಬಾ ನೀರು ಬಿದ್ದರೆ ಹಾಳಾಗುತ್ತದೆ, ಅದನ್ನು ತಡೆಗಟ್ಟಲು ತೆಳುವಾದ ಪ್ಲಾಸ್ಟಿಕ್ ಬಳಸಿ.
5. ಗೊಬ್ಬರ ಹಾಕಬೇಡಿ
ತುಂಬಾ ಮಳೆ ಸುರಿಯುತ್ತಿರುವ ಸಮಯದಲ್ಲಿ ಗೊಬ್ಬರ ಹಾಕಬೇಡಿ, ಅದು ನೀರಿನಲ್ಲಿ ಕೊಚ್ಚಿ ಹೋಗುತ್ತದೆ, ಅದರ ಬದಲಿಗೆ ಮಳೆ ನಿಂತ ಬಳಿಕ ಅಥವಾ ಸ್ವಲ್ಪ ಮಳೆ ಬರುವಾಗ ಗೊಬ್ಬರ ಹಾಕಿದರೆ ಚೆನ್ನಾಗಿ ಹೀರಿಕೊಳ್ಳುವುದು.

6. ಮಳೆ ನಿಂತ ಮೇಲೆ
ಪ್ಲಾಸ್ಟಿಕ್ ಹಾಕಿರದಿದ್ದರೆ ಮಳೆ ನಿಂತ ಮೇಲೆ ಗಿಡದ ಬುಡಕ್ಕೆ ಹಾನಿಯಾಗಿದೆಯೇ ಎಂದು ಪರೀಕ್ಷಿಸಿ. ಅಲ್ಲದೆ ಮಳೆ ನಂತರ ಹುಳ-ಹುಪ್ಪಟೆಗಳು ಬಂದಿದ್ದರೆ ಅವುಗಳನ್ನು ತೆಗೆಯಿರಿ.



Click it and Unblock the Notifications
