Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಿಪರೀತ ಮಳೆ: ನಿಮ್ಮ ಕೈತೋಟದ ಆರೈಕೆ ಹೀಗಿರಲಿ
ಇದು ಚಳಿಗಾಲ, ನೋಡಿದರೆ ಮಳೆಗಾಲದಲ್ಲಿ ಸುರಿಯುವುದಕ್ಕಿಂತ ಹೆಚ್ಚಾಗಿ ಮಳೆ ಸುರಿಯುತ್ತಿದೆ. ಜೋರಾಗಿ ಮಳೆ ಬಂದರೆ ಹೊಲದಲ್ಲಿ ಬೆಳೆದ ಬೆಳೆ ನಾಶವಾಗುವುದು, ಆದರೆ ಜೋರು ಮಳೆಯಿಂದ ಟೆರೇಸ್ನಲ್ಲಿ ಬೆಳೆದ ಗಿಡಗಳನ್ನು ರಕ್ಷಣೆ ಮಾಡಬಹುದು.

ನಿಮ್ಮ ಗಾರ್ಡನ್ ಅನ್ನು ರಕ್ಷಣೆ ಮಾಡಲು ನೀವು ಮಾಡಬೇಕಾಗಿರುವುದು ಏನು ಎಂದು ನೋಡೋಣ ಬನ್ನಿ:

1. ಹಾಳಾದ ಗಿಡವನ್ನು ತೆಗೆಯಿರಿ
ಜೋರಾದ ಮಳೆಗೆ ಗಿಡ ಸ್ವಲ್ಪ ಹಾಳಾಗಿದ್ದರೆ ಸಂಪೂರ್ಣ ಕೊಳೆಯುವುದು, ಜೊತೆಗೆ ಈ ಗಿಡದಿಂದಾಗಿ ಮತ್ತೊಂದು ಗಿಡ ಹಾಳಾಗುವ ಸಾಧ್ಯತೆ ಇದೆ. ಆದ್ದರಿಂದ ಹಾಳಾದ ಗಿಡ, ಮುರಿದ ಕೊಂಬೆಗಳು, ಜೋರಾಗಿ ಗಾಳಿ ಬೀಸಿದಾಗ ಮುರಿದು ಬೀಳುವಂತಿರುವ ಕೊಂಬೆಗಳು ಇವುಗಳನ್ನು ತೆಗೆಯಿರಿ.

2. ಎತ್ತರದ ಗಿಡಗಳಿಗೆ ಸಪೋರ್ಟ್ ನೀಡಿ
ಎತ್ತರದ ಗಿಡಗಳಿದ್ದರೆ ಜೋರಾದ ಮಳೆ-ಗಾಳಿಗೆ ಮುರಿದು ಬೀಳುವುದು, ಅದನ್ನು ತಡೆಯಲು ಸಪೋರ್ಟ್ಗೆ ದೊಡ್ಡ ಕೋಲು ಅಥವಾ ಮರದ ಹಲಗೆ ನೀಡಿ, ಅಥವಾ ಬೀಳದಂತೆ ಹಗ್ಗದಿಂದ ಕಟ್ಟಿ.
3. ನೀರು ನಿಲ್ಲದಂತ ವ್ಯವಸ್ಥೆ ಮಾಡಿ
ಮನೆ ಮುಂದೆ ಚಿಕ್ಕ ಗಾರ್ಡನ್ ಮಾಡಿದ್ದರೆ ನೀರು ನಿಲ್ಲದಂತೆ ಎಚ್ಚರವಹಿಸಿ, ಅದೇ ಟೆರೇಸ್ ಗಾರ್ಡನ್ ಆದರೆ ನೀರು ನಿಲ್ಲದಂತೆ ವ್ಯವಸ್ಥೆ ಇರುತ್ತದೆ. ಒಂದು ವೇಳೆ ನಿಂತರೆ ನೀರು ಹೋಗಲು ವ್ಯವಸ್ಥೆ ಮಾಡಿ.

4. ಗಿಡಗಳನ್ನು ತೆಳುವಾದ ಪ್ಲಾಸ್ಟಿಕ್ನಿಂದ ಕವರ್ ಮಾಡಿ
ಈಗಷ್ಟ ಮೊಳಕ ಬರುತ್ತಿರುವ ಅಥವಾ ಚಿಕ್ಕ ಗಿಡಗಳಿಗೆ ತುಂಬಾ ನೀರು ಬಿದ್ದರೆ ಹಾಳಾಗುತ್ತದೆ, ಅದನ್ನು ತಡೆಗಟ್ಟಲು ತೆಳುವಾದ ಪ್ಲಾಸ್ಟಿಕ್ ಬಳಸಿ.
5. ಗೊಬ್ಬರ ಹಾಕಬೇಡಿ
ತುಂಬಾ ಮಳೆ ಸುರಿಯುತ್ತಿರುವ ಸಮಯದಲ್ಲಿ ಗೊಬ್ಬರ ಹಾಕಬೇಡಿ, ಅದು ನೀರಿನಲ್ಲಿ ಕೊಚ್ಚಿ ಹೋಗುತ್ತದೆ, ಅದರ ಬದಲಿಗೆ ಮಳೆ ನಿಂತ ಬಳಿಕ ಅಥವಾ ಸ್ವಲ್ಪ ಮಳೆ ಬರುವಾಗ ಗೊಬ್ಬರ ಹಾಕಿದರೆ ಚೆನ್ನಾಗಿ ಹೀರಿಕೊಳ್ಳುವುದು.

6. ಮಳೆ ನಿಂತ ಮೇಲೆ
ಪ್ಲಾಸ್ಟಿಕ್ ಹಾಕಿರದಿದ್ದರೆ ಮಳೆ ನಿಂತ ಮೇಲೆ ಗಿಡದ ಬುಡಕ್ಕೆ ಹಾನಿಯಾಗಿದೆಯೇ ಎಂದು ಪರೀಕ್ಷಿಸಿ. ಅಲ್ಲದೆ ಮಳೆ ನಂತರ ಹುಳ-ಹುಪ್ಪಟೆಗಳು ಬಂದಿದ್ದರೆ ಅವುಗಳನ್ನು ತೆಗೆಯಿರಿ.



Click it and Unblock the Notifications