Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಚಿಕನ್ಗುನ್ಯಾ, ಡೆಂಗ್ಯೂ, ಮಲೇರಿಯಾ ಜ್ವರದಿಂದ ಚೇತರಿಸಲು ಟಿಪ್ಸ್
ಇತ್ತೀಚೆಗೆ ಡೆಂಗ್ಯೂ ಕೇಸ್ಗಳು ಹೆಚ್ಚಾಗಿ ಕಂಡು ಬರುತ್ತಿವೆ. ಡೆಂಗ್ಯೂ, ಚಿಕನ್ಗುನ್ಯಾ, ಮಲೇರಿಯಾ ಇವೆಲ್ಲಾ ಸೊಳ್ಳೆಗಳಿಂದ ಬರುವ ಕಾಯಿಲೆಗಳಾಗಿದ್ದು ಬಂದರೆ ಚೇತರಿಸಿಕೊಳ್ಳಲು ವಾರಗಳೇ ಬೇಕಾಗುವುದು. ಚಿಕನ್ಗುನ್ಯಾ, ಡೆಂಗ್ಯೂನಿಂದ ಚೇತರಿಸಿಕೊಂಡರೂ ಸಂಧಿ ನೋವು, ಮೈ ಕೈ ನೋವು ಇವೆಲ್ಲಾ ಕೆಲವರಿಗೆ ವರ್ಷಗಳವರೆಗೆ ಕಾಡಬಹುದು.
ಇಂಥ ಕಾಯಿಲೆಗಳು ಬಂದಾಗ ಚಿಕಿತ್ಸೆ ಪಡೆಯುವುದರ ಜೊತೆಗೆ ಆಹಾರಕ್ರಮದ ಕಡೆಗೂ ತುಂಬಾನೇ ಗಮನ ನೀಡಬೇಕು, ಆಗ ಮಾತ್ರ ಬೇಗನೆ ಚೇತರಿಸಿಕೊಳ್ಳಲು ಸಾಧ್ಯ. ಚಿಕನ್ಗುನ್ಯಾ, ಡೆಂಗ್ಯೂ, ಮಲೇರಿಯಾ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕೆಂಬ ಟಿಪ್ಸ್ ನೀಡಲಾಗಿದೆ ನೋಡಿ:

ಬೆಳಗ್ಗೆ ಗುಲ್ಕಂದ ತಿನ್ನಿ
ಬೆಳಗ್ಗೆ ಒಂದು ಚಮಚ ಗುಲ್ಕಂದ ತಿನ್ನಿ ಅಥವಾ ಊಟಕ್ಕಿಂತ ಮುಂಚೆ ಸೇವಿಸಿ. ಇದನ್ನು ತಿನ್ನುವುದರಿಂದ ಅಸಿಡಿಟಿ, ವಾಂತಿ ಇವುಗಳನ್ನು ತಡೆಗಟ್ಟುತ್ತದೆ. ಇದು ಹೊಟ್ಟೆಯ ಉಷ್ಣತೆ ಕಡಿಮೆ ಮಾಡುವುದು. ಅಲ್ಲದೆ ಕಾಯಿಲೆ ಬಿದ್ದಾಗ ಜೀರ್ಣಕ್ರಿಯೆ ತುಂಬಾ ನಿಧಾನವಾಗುವುದು. ಗುಲ್ಕಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುವಂತೆ ಮಾಡಲು ಸಹಕಾರಿಯಾಗಿದೆ.

ಔಷಧೀಯ ಗುಣವಿರುವ ಪಾನೀಯ
ನೀವು ಕಾಯಿಲೆ ಬಿದ್ದಾಗ ಔಷಧೀಯ ಗುಣವಿರುವ ಪಾನೀಯ ಮಾಡಿ ಕುಡಿಯುವುದರಿಂದ ಚೇತರಿಸಲು ಸಹಕಾರಿ. ಆ್ಯಂಟಿ ಇನ್ಫ್ಲೇಮಟರಿ ಡ್ರಿಂಜ್ ಎಂದು ಇದನ್ನು ಕರೆಯಲಾಗುವುದು. ಈ ಪಾನೀಯ ಮಾಡುವುದು ಸುಲಭ. ಒಂದು ಲೋಟ ಹಾಲಿಗೆ ಸ್ವಲ್ಪ ಅರಿಶಿಣ ಪುಡಿ, 2-3 ಎಸಳು ಕೇಸರಿ, ಸ್ವಲ್ಪ ನಟ್ಮಗ್ ಹಾಕಿ ಕುದಿಸಿ. ಒಂದು ಲೋಟ ಹಾಲು ಅರ್ಧ ಲೋಟ ಆಗುವಷ್ಟು ಹೊತ್ತು ಕುದಿಸಿ. ನಂತರ ಇದನ್ನು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುವುದು. ಇದು ಉರಿಯೂತ ಕಡಿಮೆ ಮಾಡುವಲ್ಲಿಯೂ ಸಹಕಾರಿ.

ಗಂಜಿ
ಇನ್ನು ಜ್ವರ ಬಂದಾಗ ಅನ್ನ ತಿನ್ನುವ ಬದಲಿಗೆ ಗಂಜಿ ಮಾಡಿ ಕುಡಿಯಬೇಕು, ಕುಚಲಕ್ಕಿ ಅಥವಾ ಬೆಳ್ತಕ್ಕಿ ಗಂಜಿ ಮಾಡಿ ಕುಡಿಯಿರಿ. ಇದರಿಂದ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ಗಂಜಿ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವಲ್ಲಿಯೂ ಸಹಕಾರಿ.

ಸ್ವಲ್ಪ ಹೊತ್ತು ಸುಪ್ತ ಬದ್ಧ ಕೋನಾಸನದಲ್ಲಿ ಮಲಗಿ
ಇದೇನು ತುಂಬಾ ಕಷ್ಟದ ಭಂಗಿಯಲ್ಲ, ಯಾರೂ ಕೂಡ ಅಭ್ಯಾಸ ಮಾಡಬಹುದು. ಬೆನ್ನು ಕೆಳಗೆ ಇರುವಂತೆ ಮಲಗಿ ಕಾಲುಗಳನ್ನು ಪಾದಗಳನ್ನು ಸೇರಿಸಿ ರಿಲ್ಯಾಕ್ಡ್ ಆಗಿ ಮಲಗಿ. ಇದರಿಂದ ಬೆನ್ನುನೀವು ಕಡಿಮೆಯಾಗುವುದು, ಜೊತೆಗೆ ತಲೆಸುತ್ತು ಕೂಡ ಕಡಿಮೆಯಾಗುವುದು.
* ತೆಳು ಮಾಂಸ
* ಮೀನು
* ಲಿವರ್
* ಮೊಟ್ಟೆ
* ಬೀನ್ಸ್, ಕಾಳುಗಳು, ಬಟಾಣಿ
* ಹಣ್ಣುಗಳು, ನೀರು, ಎಳನೀರು
* ಬಾದಾಮಿ, ವಾಲ್ನಟ್ಸ್
* ಶುಂಠಿ, ಬೆಳ್ಳುಳ್ಳಿ, ಕಾಳು ಮೆಣಸು ಅವರ ಆಹಾರದಲ್ಲಿರಲಿ
* ಕಾರ್ಬ್ಸ್ ಅಧಿಕವಿರುವ ಆಹಾರ ನೀಡಿ
* ಗೋಧಿ ಬದಲಿಗೆ ಅಕ್ಕಿಯಿಂದ ತಯಾರಿಸಿದ ಆಹಾರ ನೀಡಿ
* ಪಪ್ಪಾಯಿ, ಕಿತ್ತಳೆ, ಮೂಸಂಬಿ, ಬೆರ್ರಿ, ಕಿವಿ ಹಣ್ಣು ಇವುಗಳನ್ನು ನೀಡಿ
* ಕ್ಯಾರೆಟ್, ಬೀಟ್ರೂಟ್ನಂಥ ಆಹಾರ ಹೆಚ್ಚು ನೀಡಿ.
* ಮೀನು
* ಚಿಕನ್ ಸೂಪ್
* ಮೊಟ್ಟೆ
ಇಂಥ ಆಹಾರಗಳನ್ನು ಅವರ ಆಹಾರದಲ್ಲಿ ಸೇರಿಸಿದರೆ ಬೇಗನೆ ಚೇತರಿಸಲು ಸಹಕಾರಿ.
* ಎಳನೀರು
* ಸೊಪ್ಪು-ತರಕಾರಿಗಳು
* ಬೇಳೆ ಹಾಕಿ ಮಾಡಿದ ಸಾರು, ರಸಂ
* ಕಿಚಡಿ
* ಸೂಪ್
* ವಿಟಮಿನ್ ಸಿ ಅಧಿಕವಿರುವ ಆಹಾರಗಳು
* ನೀರು
* ಅಮೃತ ಬಳ್ಳಿಯ ಜ್ಯೂಸ್



Click it and Unblock the Notifications
