Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಚಿಟಿಕೆ ಹೊಡೆಯುವುದರೊಳಗೆ, ಹಲ್ಲು ನೋವು ಮಂಗಮಾಯ!
ಹಲ್ಲು ನೋವಿನಷ್ಟು ಸಂಕಟ ನೀಡುವ ನೋವು ಮತ್ತೊಂದು ಇಲ್ಲವೆನ್ನಬಹುದು. ಹಲ್ಲು ನೋವಿನ ಸಮಯದಲ್ಲಿ ಯಾವುದೇ ರೀತಿಯ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ... ಚಿಂತಿಸದಿರಿ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್...
ದೇವರೇ ಏನು ಬೇಕಾದರೂ ಕೊಡು ಆದರೆ ಹಲ್ಲು ನೋವು ಮಾತ್ರ ಕೊಡಬೇಡ ಎನ್ನುವ ಪ್ರಾರ್ಥನೆ ಹಲ್ಲು ನೋವು ಅನುಭವಿಸಿರುವ ಪ್ರತಿಯೊಬ್ಬರೂ ಮಾಡಿರುತ್ತಾರೆ. ಯಾಕೆಂದರೆ ಹಲ್ಲು ನೋವಿನಷ್ಟು ಸಂಕಟ ನೀಡುವ ನೋವು ಮತ್ತೊಂದು ಇಲ್ಲವೆನ್ನಬಹುದು. ಹಲ್ಲು ನೋವಿನ ಸಮಯದಲ್ಲಿ ಯಾವುದೇ ರೀತಿಯ ದೈನಂದಿನ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಆಹಾರ ಸೇವಿಸುವುದು ಕಷ್ಟವಾಗುತ್ತದೆ. ಹಲ್ಲು ನೋವು ಹೆಚ್ಚಾದಾಗ ತಲೆನೋವು, ಜ್ವರ ಕೂಡ ಕಾಣಿಸಿಕೊಳ್ಳಬಹುದು. ಇಂತಹ ಹಲ್ಲು ನೋವು ಯಾರಿಗೂ ಬರದಿರಲಿ ಎಂದು ಮನದಲ್ಲೇ ಅಂದುಕೊಳ್ಳುತ್ತೇವೆ. ಹಲ್ಲು ನೋವಿಗೆ ಪ್ರಮುಖವಾಗಿ ಬ್ಯಾಕ್ಟೀರಿಯಾ ಸೋಂಕು, ವಸಡಿನ ರೋಗ, ದುರ್ಬಲ ಹಲ್ಲುಗಳು ಪ್ರಮುಖ ಕಾರಣವಾಗಿದೆ.
ಬಾಲ್ಯದಲ್ಲಿ ಇರುವ ಹಲ್ಲುಗಳು ಕಿತ್ತು ಹೋಗಿ ಹೊಸ ಹಲ್ಲುಗಳು ಮೂಡಿ ಬರುತ್ತದೆ. ಇದರ ಬಳಿಕ ಬೆಳೆಯುತ್ತಾ ಇರುವಂತೆ ಯೌವನದಲ್ಲಿ ಕೊನೆಯ ಹಲ್ಲು ಬರುತ್ತದೆ. ಆದರೆ ಇದಕ್ಕೆ ಹೊರಬರಲು ಜಾಗವಿಲ್ಲದೆ ಇರುವ ಕಾರಣದಿಂದ ತುಂಬಾ ನೋವನ್ನು ಉಂಟು ಮಾಡುತ್ತದೆ.
ಆದರೆ ಈ ನೋವಿನೊಂದಿಗೆ ಸಂಪೂರ್ಣ ಹಲ್ಲುನೋವನ್ನು ನಿವಾರಣೆ ಮಾಡಲು ಮನೆಮದ್ದನ್ನು ಬಳಸಿಕೊಳ್ಳುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ.....

ಬೇಕಾಗುವ ಸಾಮಗ್ರಿಗಳು
*ಬೆಳ್ಳುಳ್ಳಿ ರಸ 2-3 ಚಮಚ

ಬೇಕಾಗುವ ಸಾಮಗ್ರಿಗಳು
ಕಪ್ಪು ಉಪ್ಪು ಒಂದು ಚಿಟಿಕೆ

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವಂತಹ ಉರಿಯೂತ ಶಮನಕಾರಿ ಗುಣವಿದೆ. ಇದು ವಸಡಿನ ಊತವನ್ನು ಕಡಿಮೆ ಮಾಡಿ ಹಲ್ಲಿನ ನೋವನ್ನು ನಿವಾರಿಸುತ್ತದೆ.

ಕಪ್ಪು ಉಪ್ಪು....
ಕಪ್ಪು ಉಪ್ಪಿನಲ್ಲಿ ಇರುವಂತಹ ನೈಸರ್ಗಿಕ ನಂಜುನಿರೋಧಕದೊಂದಿಗೆ ಸೋಡಿಯಂ ಇದೆ. ಇದು ಹಲ್ಲಿನಲ್ಲಿ ಬ್ಯಾಕ್ಟೀರಿಯಾದಿಂದ ಆಗುವಂತಹ ಸೋಂಕನ್ನು ನಾಶ ಮಾಡುವುದು. ಇದರಿಂದ ನೋವು ಕಡಿಮೆಯಾಗುವುದು.

ತಯಾರಿಸುವ ವಿಧಾನ
*ಒಂದು ಪಿಂಗಾಣಿಗೆ ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಹಾಕಿಕೊಳ್ಳಿ.
*ಇದನ್ನು ಸರಿಯಾಗಿ ಪೇಸ್ಟ್ ಮಾಡಿಕೊಳ್ಳಿ.
*ಈ ಪೇಸ್ಟ್ ನ್ನು ಭಾದಿತ ಪ್ರದೇಶಕ್ಕೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆ ಬಿಡಿ.
*ನೋವು ಕಡಿಮೆಯಾಗುವ ತನಕ ಪ್ರತೀ ದಿನ ಹಚ್ಚಿಕೊಳ್ಳಿ.



Click it and Unblock the Notifications
