Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಪಾದಗಳ ಮಸಾಜ್ ಮಾಡಿದರೆ ಆರೋಗ್ಯ ವರ್ಧನೆ ಆಗುವುದು
ಹಿಂದೆ ಆಯುರ್ವೇದ ಔಷಧವೇ ಹೆಚ್ಚು ಪ್ರಚಲಿತದಲ್ಲಿತ್ತು. ನಿಧಾನವಾಗಿ ಅಲೋಪತಿ ಔಷಧವು ಚಾಲನೆಗೆ ಬಂತು. ಇದರ ಪರಿಣಾಮವಾಗಿ ಆಯುರ್ವೇದ ಔಷಧಿಯನ್ನು ಜನರು ಮರೆತೆ ಬಿಟ್ಟಿದ್ದರು. ಅಲೋಪತಿಯ ಔಷಧದಿಂದ ದೇಹದಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುವುದು ಯಾವಾಗ ಅರಿವಿಗೆ ಬಂತೋ, ಅಂದಿನಿಂದ ಜನರು ಪುನಃ ಆಯುರ್ವೇದದ ಮೊರೆ ಹೋಗಲು ಪ್ರಾರಂಭಿಸಿದರು. ಯಾವುದೇ ಅಡ್ಡ ಪರಿಣಾಮ ಬೀರದ ಆಯುರ್ವೇದದ ಔಷಧ ಆರೋಗ್ಯವನ್ನು ಕಾಪಾಡುತ್ತದೆ.
ಬಹುತೇಕ ಜನರು ತಮ್ಮ ಕಾಲು ಹಾಗೂ ಪಾದಗಳ ರಕ್ಷಣೆಯ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಅದು ಹೇಗಿದ್ದರೂ ಸೈ ಎನ್ನುವ ಮನೋಭಾವ ಹೊಂದಿರುತ್ತಾರೆ. ಅದೇ ಕಾಲು ಮತ್ತು ಪಾದಗಳ ಮಸಾಜ್ ಮಾಡಿಕೊಳ್ಳುವುದರಿಂದ ದೇಹಕ್ಕೆ ಹೆಚ್ಚು ಆರಾಮದಾಯಕ ಅನುಭವ ದೊರೆಯುತ್ತದೆ. ಜೊತೆಗೆ ಕಾಲಿಂದ ತಲೆಯವರೆಗೂ ರಕ್ತ ಸಂಚಾರ ಸುಗಮವಾಗಿ ಆಗುವಂತೆ ಮಾಡುತ್ತದೆ ಎನ್ನುತ್ತದೆ ಆಯುರ್ವೇದ. ವಾರದಲ್ಲೊಮ್ಮೆಯಾದರೂ ಪಾದಗಳ ಮಸಾಜ್ ಮಾಡಿಕೊಂಡರೆ ಅಗಾಧ ಶಕ್ತಿ ಮತ್ತು ರಕ್ತದ ಪರಿಚಲನೆಯಾಗುತ್ತದೆ.

ಆಯುರ್ವೇದದಲ್ಲಿ ಪಾದಗಳ ಆರೈಕೆ ಮತ್ತು ಮಸಾಜ್ ಮಾಡುವುದು ಚಿಕಿತ್ಸೆಗಳ ತಾಯಿ ಎಂದು ಕರೆಯುತ್ತಾರೆ. ದಿನದಲ್ಲೊಮ್ಮೆ ಪಾದಗಳ ಮಸಾಜ್ ಮಾಡಿದರೂ ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಗುತ್ತದೆ. ಆಯುರ್ವೇದದ ಪ್ರಕಾರ ಪಾದಗಳ ಮಸಾಜ್ ಯಾವೆಲ್ಲಾ ಅನುಕೂಲವನ್ನು ಸೃಷ್ಟಿಸಿಕೊಡುತ್ತದೆ ಎನ್ನುವುದನ್ನು ಈಕೆಳಗೆ ವಿವರಿಸಲಾಗಿದೆ.
ರಕ್ತ ಪರಿಚಲನೆ
ಪಾದಗಳ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆಯಾಗುತ್ತದೆ. ಕೀಲುಗಳು ಮತ್ತು ಮೃದು ಅಂಗಾಂಶಗಳನ್ನು ಬಲಪಡಿಸುತ್ತದೆ.
ಕಣ್ಣಿನ ಆರೋಗ್ಯವು ಸುಧಾರಣೆಯಾಗುತ್ತದೆ
ಸರಿಯಾದ ರಕ್ತ ಪರಿಚಲನೆ ಉಂಟಾಗಿ ಕಣ್ಣಿನ ಆರೋಗ್ಯವು ಸುಧಾರಣೆಯಾಗುತ್ತದೆ. ದೃಷ್ಟಿಯ ಆರೋಗ್ಯವೂ ಹೆಚ್ಚುತ್ತದೆ. ಮಸಾಜ್ ಮಾಡುವುದರಿಂದ ಕಾಲುಗಳಲ್ಲಿ ಬಿರುಕು, ಅಸ್ಥಿರಜ್ಜುಗಳು, ಸ್ನಾಯು ಮತ್ತು ನರಗಳ ಕಿರಿ ಕಿರಿ ತಡೆಯುತ್ತದೆ. ಒಟ್ಟಾರೆ ರಕ್ತ ಪರಿಚಲನೆ ಸುಧಾರಿಸುತ್ತದೆ.
ರೋಗನಿರೋಧಕ ಶಕ್ತಿ
ಮಸಾಜ್ನಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಆಂತರಿಕ ಒತ್ತಡವೂ ಗುಣಮುಖವಾಗುತ್ತದೆ. ಶ್ರವಣ ಸಾಮಥ್ರ್ಯವೂ ಹೆಚ್ಚುವುದು. ಆತಂಕ, ಖಿನ್ನತೆ, ಆಯಾಸ ಮತ್ತು ಸೆಳೆತಗಳಿಂದ ನಿಮ್ಮನ್ನು ಬಿಡುಗಡೆಮಾಡುತ್ತದೆ.
ತ್ವಚೆಯು ಶುದ್ಧವಾಗಿ ಸದಾ ಕೋಮಲತೆಯಿಂದ ಕೂಡಿರುತ್ತದೆ
ಮಸಾಜ್ ಮಾಡಿಸುವುದರಿಂದ ತ್ವಚೆಯು ಶುದ್ಧವಾಗಿ ಸದಾ ಕೋಮಲತೆಯಿಂದ ಕೂಡಿರುತ್ತದೆ. ಯಾವುದೇ ಅಡೆ ತಡೆ ಉಂಟಾಗದೆ ರಕ್ತಗಳ ಪರಿಚಲನೆಯಿಂದ ಎಲ್ಲಾ ಅಂಗಾಂಶವೂ ಸುಧಾರಣೆಗೊಳ್ಳುತ್ತವೆ.
ಮಸಾಜ್ ಮಾಡುವ ವಿಧಾನ
* ಪಾದಗಳ ಮಸಾಜ್ ಮಾಡಲು ಬೆಚ್ಚಗಿನ ನೀರನ್ನು ಬಳಸಬೇಕು.
* ಒಂದು ಟಬ್ನಲ್ಲಿ ರೋಸ್ಮರಿ ಎಣ್ಣೆ, ಆಲಿವ್ ಎಣ್ಣೆ, ತೆಂಗಿನ ಎಣ್ಣೆ ಸೇರಿದಂತೆ ಇನ್ನಿತರ ಆಯುರ್ವೇದದ ಪದಾರ್ಥಗಳನ್ನು ಮತ್ತು ಗಿಡಮೂಲಿಕೆಗಳನ್ನು ಬಳಸಬೇಕು.
* ಕೆಲವು ನಿಮಿಷಗಳ ಕಾಲ ಎಣ್ಣೆ ಮತ್ತು ನೀರಿನ ಮಿಶ್ರಣದಲ್ಲಿ ಪಾದವನ್ನು ನೆನೆಸಬೇಕು.
* ಸಾಮಾನ್ಯ ಒತ್ತುವಿಕೆಯಿಂದ ಮಸಾಜ್ ಮಾಡಬೇಕು. ವೃತ್ತಾಕಾರದ ಚಲನೆಯಿಂದ ಕೀಲುಗಳ ಸುತ್ತ, ಕಾಲುಗಳ ಮೇಲೆ ಲಂಬವಾಗಿ ಮಸಾಜ್ ಮಾಡಬೇಕು.
* ಟಬ್ಬಿನಿಂದ ಪಾದಗಳನ್ನು ತೆಗೆದು, ಸ್ವಚ್ಛಗೊಳಿಸಬೇಕು. ಇದರಿಂದ ದೇಹವು ಕೊಳೆ ಮುಕ್ತವಾಗಲು ಸಹಾಯವಾಗುತ್ತದೆ. ಭಾವನೆಗಳ ಸಮತೋಲನವನ್ನು ಕಾಯುವುದರ ಜೊತೆಗೆ ರಕ್ತ ಪರಿಚಲನೆಯು ಸರಾಗವಾಗಿ ಆಗುತ್ತದೆ.
ಮಸಾಜ್ನ ಇತರ ಉಪಯೋಗಗಳು
ಪಾದಗಳ ಮಸಾಜ್ ದೇಹಕ್ಕೆ ಉತ್ತಮ ವಿಶ್ರಾಂತಿಯನ್ನು ನೀಡುವುದು. ನಿದ್ರಾಹೀನತೆ ಉಂಟಾದಾಗ ಪಾದಗಳ ಮಸಾಜ್ ಮಾಡಿಸಿಕೊಂಡರೆ ತೊಂದರೆ ದೂರವಾಗುತ್ತದೆ. ಕೈ ಕಾಲುಗಳಲ್ಲಿ ಮರಗಟ್ಟುವಿಕೆ ಕಂಡು ಬಂದರೆ ಪಾದಗಳ ಮಸಾಜ್ ಮಾಡಬೇಕು. ಮರಗಟ್ಟುವಿಕೆ ನಿವಾರಣೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













