Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಮೈಗ್ರೇನ್ ತಲೆನೋವೇ? ಚಿಂತೆ ಬಿಡಿ, ಈ ಜ್ಯೂಸ್ ಕುಡಿಯಿರಿ
ಸಾಮಾನ್ಯವಾದ ತಲೆನೋವೇ ಎಂತೆಂಥವರನ್ನೂ ಹಿಂಡಿ ಹಿಪ್ಪೆ ಮಾಡಿ ಹಾಕುತ್ತದೆ. ಅದರಲ್ಲೂ ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಆವರಿಸಿದರಂತೂ ಜೀವನವೇ ಬೇಸರವಾಗುತ್ತದೆ. ಇದು ಯಾವುದೇ ಹೊತ್ತಿನಲ್ಲಿ ಆವರಿಸಬಹುದು. ಇದು ಸಾಮಾನ್ಯಮಟ್ಟದಿಂದ ಹಿಡಿದು ಯೋಚಿಸಲೂ ಅಸಾಧ್ಯವಾಗುವಷ್ಟು ಉಗ್ರರೂಪದಲ್ಲಿರಬಹುದು. ಈ ನೋವಿದ್ದಾಗ ವಾಂತಿ ಬರುವಂತಾಗುವುದು, ವಾಂತಿಯಾಗುವುದು, ಬೆಳಕು ಮತ್ತು ಶಬ್ದಗಳಿಗೆ ತೀರಾ ಸಂವೇದಿಯಾಗುವುದು, ದೃಷ್ಟಿಯ ಕೇಂದ್ರಭಾಗ ಮಾಯವಾಗುವುದು ಮೊದಲಾದವು ಇದರ ಪ್ರಮುಖ ಲಕ್ಷಣಗಳು.

ಎಂತೆಂತಹ ಕಾಯಿಲೆಗಳಿಗೆ ಔಷಧ ಕಂಡುಹಿಡಿದಿರುವ ವೈದ್ಯವಿಜ್ಞಾನದ ಬಳಿ ಈ ತಲೆನೋವಿಗೆ ಇದುವರೆಗೆ ಯಾವುದೇ ಸಮರ್ಥವಾದ ಔಷಧವಿಲ್ಲ. ವೈದ್ಯರು ನೀಡುತ್ತಿರುವ ಔಷಧಗಳೇನಿದ್ದರೂ ಈ ನೋವನ್ನು ಕಡಿಮೆ ಮಾಡದೇ ನೋವಿನ ಪ್ರಭಾವದ ಅರಿವಾಗದಂತೆ ಅರವಳಿಕೆ ನೀಡುವುದೇ ಆಗಿದೆ. ಬೆನ್ನುಬಿಡದೇ ಕಾಡುವ ಮೈಗ್ರೇನ್ನ 10 ಲಕ್ಷಣಗಳು ಯಾವುದು?
ಆದರೆ ಈ ನೋವನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳು ಲಭ್ಯವಿದ್ದು ಮೈಗ್ರೇನ್ ಕಡಿಮೆಗೊಳಿಸಲು ನೆರವಾಗುತ್ತವೆ. ಇದಕ್ಕಾಗಿ ಹೆಚ್ಚು ಕಷ್ಟಪಡಬೇಕಾಗಿಲ್ಲ, ನಿಮ್ಮ ಅಡುಗೆಮನೆಯಲ್ಲಿರುವ ಸರಳ ಸಾಮಾಗ್ರಿಗಳೇ ಸಾಕು. ಅನಾನಾಸು, ಕೇಲ್ ಎಲೆಗಳು, ಹಸಿಶುಂಠಿ, ಸೌತೆ, ಸೆಲೆರಿ ಎಲೆಗಳು ಮತ್ತು ಲಿಂಬೆಹಣ್ಣು ಇಷ್ಟೇ ಸಾಕು. ಇದರ ಪ್ರಮುಖ ಸಾಮಾಗ್ರಿಯಾದ ಅನಾನಸ್ ಹಣ್ಣಿನಲ್ಲಿ ಬ್ರೋಮಿಲೈನ್ ಎಂಬ ಕಿಣ್ವವಿದ್ದು ನೋವನ್ನು ಕಡಿಮೆಗೊಳಿಸುವ ನೈಸರ್ಗಿಕ ಔಷಧಿಯಾಗಿದೆ. ಇನ್ನುಳಿದಂತೆ ಕೇಲ್ ಎಲೆಗಳು, ಸೌತೆ ಮತ್ತು ಸೆಲೆರಿ ಎಲೆಗಳಲ್ಲಿಯೂ ಉರಿಯೂತ ನಿವಾರಕಗಳಿದ್ದು ನೋವು ಕಡಿಮೆಗೊಳಿಸಲು ನೆರವಾಗುತ್ತದೆ.
ಹಸಿಶುಂಠಿ ಮತ್ತು ಲಿಂಬೆರಸಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳಿದ್ದು ವಿಶೇಷವಾಗಿ ಮೆದುಳಿನ ಜೀವಕೋಶಗಳು ಅನುಭವಿಸುತ್ತಿರುವ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಬನ್ನಿ ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ: ಮೈಗ್ರೇನ್ ಉಪಶಮನಕ್ಕೆ ಮಾರ್ಗಗಳು
ಅಗತ್ಯವಿರುವ ಸಾಮಾಗ್ರಿಗಳು
*ಅರ್ಧ ಚೆನ್ನಾಗಿ ಹಣ್ಣಾದ ಅನಾನಸ್ ಹಣ್ಣು
*ನಾಲ್ಕರಿಂದ ಐದು ಕೇಲ್ ಎಲೆಗಳು
*ಅರ್ಧ ಇಂಚು ಹಸಿಶುಂಠಿ
*ಅರ್ಧ ಸೌತೆ ಕಾಯಿ
*ಅರ್ಧ ತುಂಡು ಸೆಲೆರಿ ಸೊಪ್ಪಿನ ದಂಟು
*2 ಚಿಕ್ಕ ಚಮಚ ಲಿಂಬೆರಸ
ತಯಾರಿಸುವ ವಿಧಾನ
1) ಅನಾನಸ್ ಹಣ್ಣಿನ ಸಿಪ್ಪೆ ಮತ್ತು ನಡುವಿನ ತಿರುಳು ತೆಗೆದು ಚಿಕ್ಕದಾಗಿ ತುಂಡರಿಸಿ.
2) ಸೌತೆಯನ್ನು ಸಿಪ್ಪೆ ಸಹಿತ ಚಿಕ್ಕದಾಗಿ ತುಂಡರಿಸಿ, ಶುಂಠಿಯನ್ನು ಸಹಾ ಚಿಕ್ಕದಾಗಿ ತುಂಡರಿಸಿ
3) ಅನಾನಸ್, ಸೌತೆ ಮತ್ತು ಶುಂಠಿಯನ್ನು ಜ್ಯೂಸರ್ ನ ಚಿಕ್ಕ ಜಾರ್ನಲ್ಲಿ ನುಣ್ಣಗೆ ಕಡೆಯಿರಿ
4) ಬಳಿಕ ಉಳಿದ ಸಾಮಾಗ್ರಿಗಳನ್ನು ಹಾಕಿ ಕೊಂಚ ನುಣ್ಣಗಾಗುವಷ್ಟು ಕಡೆಯಿರಿ. ಅಗತ್ಯ ಕಂಡರೆ ಕೊಂಚ ನೀರು ನೇರಿಸಬಹುದು.
5) ಬಳಿಕ ಇದರಿಂದ ದ್ರವವನ್ನು ಸೋಸಿ ಈ ದ್ರವವನ್ನು ತಕ್ಷಣ ಕುಡಿಯಿರಿ.
ಸೂಚನೆ: ಯಾವುದೇ ತಲೆನೋವಾದರೂ ಪ್ರಾರಂಭದ ಹಂತದಲ್ಲಿದ್ದಾಗ ಔಷಧಿ ತೆಗೆದುಕೊಂಡರೆ ಮಾತ್ರ ಫಲಕಾರಿಯಾಗಿದೆ. ಮೈಗ್ರೇನ್ ಸಹಾ ಅಷ್ಟೇ. ತಲೆನೋವು ಪ್ರಾರಂಭವಾಯಿತು ಎಂದಾಗಲೇ ಕುಡಿದರೆ ಅತ್ಯುತ್ತಮ ಪರಿಣಾಮ ದೊರಕುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

