Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಶುಂಠಿ, ಅಜೀರ್ಣ ಪರಿಹಾರಕ್ಕೆ ಒಂದು ಒಳ್ಳೆಯ ಮನೆ ಮದ್ದು.
ನಿಮಗೆ ಆಗಾಗ್ಗೆ ಅಜೀರ್ಣದಿಂದ ಸಮಸ್ಯೆಗಳು ಬರುತ್ತಿದ್ದರೆ ಮತ್ತು ನಿಮ್ಮ ಶರೀರದಲ್ಲಿ ವಾಯು ಸೇರಿಕೊಂಡು ಪದೇಪದೇ ಬಳಲುತ್ತಿದ್ದರೆ, ಶುಂಠಿಯನ್ನು ಉಪಯೋಗಿಸಿ ಪರಿಹಾರ ಪಡೆಯಿರಿ. ಶುಂಠಿಯು ನೀವು ತಿನ್ನುವ ಆಹಾರವನ್ನು ಜೀರ್ಣಿಸುವಿಕೆಯಲ್ಲಿ ನೆರವಾಗಿ ಆಹಾರದ ಅಗತ್ಯ ಪೌಷ್ಟಿಕಾಂಶಗಳ ಹೀರುವಿಕೆ ಮತ್ತು ಹೊಂದಾಣಿಕೆ ಯನ್ನು ಉತ್ತಮಗೊಳಿಸುತ್ತದೆ. ಇದು ಆಹಾರದಲ್ಲಿರುವ ಪ್ರೋಟೀನ್ಗಳನ್ನು ವಿಂಡಿಸಲು ಸಹಾಯಕಾರಿಯಾಗಿದೆ.
ಶುಂಠಿ ಚಹಾದ 8 ಆರೋಗ್ಯ ಪ್ರಯೋಜನಗಳು
ಶುಂಠಿಯು ಲೋಳೆಸ್ರವಿಸುವಿಕೆಗೆ ಉತ್ತೇಜನ ಕೊಟ್ಟು, ನಿಮ್ಮ ಜಠರದಲ್ಲಿ ಹುಣ್ಣುಗಳಿದ್ದರೆ ಅವುಗಳ ವಿರುದ್ಧ ರಕ್ಷಣೆ ಕೊಡುತ್ತದೆ. ಅದಲ್ಲದೆ ಅದರಲ್ಲಿರುವ ಅನಿಲ ಉಚ್ಚಾಟನೆ (Carminative Effect) ಗುಣದಿಂದ ಹೊಟ್ಟೆ ಉಬ್ಬುವುದನ್ನು ಮತ್ತು ವಾಯು ಸೇರುವುದನ್ನು ಕಡಿಮೆಮಾಡುತ್ತದೆ. ಇದರ ಆಂಟಿಆಕ್ಸಿಡೆಂಟ್ ಚಟುವಟಿಕೆಯಿಂದ ಜೀವಕೋಶದ ಸಾವು (Apoptosis) ಮತ್ತು ಕೆಲವು ಪ್ರೋಟಿನ್ ಅಂಶವನ್ನು ಮುಚ್ಚಿಹಾಕಿ ಆಂಟಿಕ್ಯಾನ್ಸರ್ ಲಕ್ಷಣಗಳನ್ನು ಉಂಟುಮಾಡುತ್ತದೆ. ಹಾಗೂ ಕೆಲವು ಅಲರ್ಜಿ ಪ್ರತಿಕಿಯೆಗಳನ್ನು ನಿಗ್ರಹಿಸುತ್ತದೆ. ಈ ಎಲ್ಲಾ ಗುಣಗಳನ್ನು ಹೊಂದಿರುವ ಶುಂಠಿಯು ನಿಜಕ್ಕೂ ಒಂದು ಆರೋಗ್ಯದ ಶಕ್ತಿಕೇಂದ್ರವೆನ್ನಬಹುದು.

ನಿಮ್ಮ ಶರೀರದಲ್ಲಿ ಸೇರಿಕೊಳ್ಳುವ ವಾಯುವನ್ನು ನಿವಾರಿಸಿ ದೂರವಿಟ್ಟಿರಲು ಇಲ್ಲಿ ಕೆಲವು ಸಲಹೆಗಳನ್ನು ಕೊಟ್ಟಿದ್ದೇವೆ:
ಸಲಹೆ 1: ತಾಜಾಶುಂಠಿಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ತೆಗೆಯಿರಿ. ಈಗ ಅದನು ಚೆನ್ನಾಗಿ ಬಡಿದು ನಂತರ ಹಿಂಡೀ ರಸವನ್ನು ತೆಗೆಯಿರಿ. ಈ ಗಟ್ಟಿಯಾಗಿರುವ ರಸವನ್ನು ಒಂದು ಕಪ್ಪಿನಲ್ಲಿ ಸಂಗ್ರಹಿಸಿ ಪ್ರತಿದಿನ ಒಂದುಸಲ ಕುಡಿಯಿರಿ. ಹಾಗೆ ಮಾಡುವುದರಿಂದ ನಿಮಗೆ ತಕ್ಷಣವೇ ಪರಿಹಾರ ಕಾಣಬಹುದು.
ಶುಂಠಿ ಸೇವನೆ ಅಳತೆಯಲ್ಲಿ ಮಾಡಬೇಕು!
ಸಲಹೆ 2: ತಾಜಾ ಶುಂಠಿಯಾನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ. ಇದರ ಒಂದು ತುಂಡನ್ನು ನಿಮ್ಮ ಬಾಯಿಯೊಳಗೆ ಇರಿಸಿ ಮತ್ತು ನುಂಗಲು ಪ್ರಯತ್ನಿಸಬೇಡಿ. ಅದರ ರಸವು ಈಗ ನಿಮ್ಮ ಹೊಟ್ಟೆಗೆ ನಿಧಾನವಾಗಿ ಸೇರುತ್ತದೆ. ಹಾಗೆ ಮಾಡುವುದರಿಂದ ನಿಮ್ಮ ಅಜೀರ್ಣತೆಯನ್ನು ನಿವಾರಿಸಬಹುದು.
ಸಲಹೆ 3: ಅಜೀರ್ಣತೆ ಮತ್ತು ವಾಕರಿಕೆಯಿಂದ ಬಳಲುತ್ತಿದ್ದರೆ ಒಂದು ತೆಳುವಾದ ತುಂಡಿನಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ಬಾಯಿಯೊಳಗಿಟ್ಟುಕೊಂಡು ಮೆಲ್ಲಗೆ ಅಗಿಯಿರಿ. ಅದರಿಂದ ಬರುವ ರಸದಿಂದ ನಿಮ್ಮ ವಾಕರಿಕೆ ಮತ್ತು ಅಜೀರ್ಣತೆ ಕಡಿಮೆಮಾಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications