Just In
Don't Miss
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಮಬಾಣವಾದ ಆಹಾರಗಳು
ಕೆಲವೊಂದು ಆಹಾರಗಳು ನಮ್ಮಲ್ಲಿ ಕಂಡು ಬರುವ ಚಿಕ್ಕ ಪುಟ್ಟ ಕಾಯಿಲೆಗಳನ್ನು ದೂರ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಉದಾಹರಣೆಗೆ ಪ್ರಯಾಣ ಮಾಡುವಾಗ ವಾಂತಿ ಬರುವ ಅನುಭವ ಉಂಟಾದರೆ ನಿಂಬೆ ಹಣ್ಣನ್ನು ಮೂಸಿದರೆ ಸಾಕು. ಅದರ ವಾಸನೆಗೆ ವಾಂತಿ ಬರುವುದಿಲ್ಲ.
ಹೀಗೆ ನಾವು ದಿನ ನಿತ್ಯ ಬಳಸುವ ಅನೇಕ ಆಹಾರಗಳು ಔಷಧೀಯ ಗುಣವನ್ನು ಹೊಂದಿರುತ್ತವೆ. ಇಲ್ಲಿ ನಾವು ಕೆಲವು ಆಹಾರಗಳ ಬಗ್ಗೆ ಹೇಳಲಾಗಿದೆ. ಸಣ್ಣ ಪುಟ್ಟ ಕಾಯಿಲೆಗಳನ್ನು ನಿವಾರಿಸುವಲ್ಲಿ ಅವು ನಿಮ್ಮ ಸಹಕಾರಿಯಾಗುತ್ತವೆ.
ಶುಂಠಿ
ಅಜೀರ್ಣ ಸಮಸ್ಯೆಯಿದ್ದರೆ, ಕೆಮ್ಮು ಕಾಣಿಸಿಕೊಂಡರೆ ಒಂದು ಚಮಚ ಶುಂಠಿ ರಸ ಕುಡಿದರೆ ಸಾಕು ಗುಣಮುಖವಾಗುವುದು. ತುಂಬಾ ಕೆಮ್ಮುತ್ತಿದ್ದರೆ ಒಂದು ತುಂಡು ಶುಂಠಿಯನ್ನು ಕತ್ತರಿಸಿ ಬಾಯಿಯಲ್ಲಿ ಇಟ್ಟುಕೊಂಡರೆ ಕೆಮ್ಮು ಸ್ವಲ್ಪ ಕಮ್ಮಿಯಾಗುತ್ತದೆ.
ಜೇನು
ಗಾಯವಾದರೆ ಆ ಭಾಗಕ್ಕೆ ಜೇನು ಹಚ್ಚಿದರೆ ಸಾಕು ತಕ್ಷಣ ಗುಣಮುಖವಾಗುವುದು. ಜೇನಿನಲ್ಲಿ antiseptic ಗುಣವಿದೆ.
ಮೆಣಸು
ಮೆಣಸಿನಲ್ಲಿರುವ capciasin ಅಂಶ ಸಂಧಿನೋವು ಗುಣಪಡಿಸುತ್ತದೆ. ದೇಹದ ತೂಕ ಕಡಿಮೆ ಮಾಡುತ್ತೆ. ಹಾಗಂತ ತುಂಬಾ ಖಾರ ತಿಂದರೆ ಹೊಟ್ಟೆ ಉರಿ ಕಾಣಿಸಿಕೊಳ್ಳಬಹುದು.
ಹಾಗಾಲಕಾಯಿ
ಹಾಗಾಲಕಾಯಿ ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಮಧುಮೇಹಿಗಳು ಇದನ್ನು ತಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆಲೀವ್ ಎಣ್ಣೆ
ಆಲೀವ್ ಎಣ್ಣೆಯನ್ನು ತಲೆ ಬುಡಕ್ಕೆ ಹಚ್ಚಿ ಮಸಾಜ್ ಮಾಡಿದರೆ ತಲೆ ತುರಿಕೆ ಸಮಸ್ಯೆಯನ್ನು ಹೋಗಲಾಡಿಸಬಹುದು.
ಬಾಳೆ ಹಣ್ಣು
ಚರ್ಮದ ಮೇಲೆ ಚಿಕ್ಕ-ಚಿಕ್ಕ ಗಂಟು (ನರೂಲಿ) ಕಂಡು ಬಂದರೆ ತ್ವಚೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದು. ಬಾಳೆ ಹಣ್ಣನ್ನು ದಿನಾ ಆ ಭಾಗಕ್ಕೆ ಹಚ್ಚುತ್ತಾ ಬಂದರೆ ಸಂಪೂರ್ಣವಾಗಿ ಗುಣ ಪಡಿಸಬಹುದು.
ಟೀ
ಕೆಲವರ ಪಾದ ವಿಪರೀತ ಬೆವರಿ ದುರ್ಗಂಧ ಬೀರುತ್ತದೆ. ಇದು ಹಾರ್ಮೋನಲ್ ವ್ಯತ್ಯಾಸದಿಂದ ಕೂಡ ಉಂಟಾಗುತ್ತದೆ. ಅಂತಹವರು ಬ್ಲ್ಯಾಕ್ ಟೀ ಮಾಡಿ ಅದರಲ್ಲಿ ಸ್ವಲ್ಪ ಹೊತ್ತು ಇಟ್ಟರೆ ಆ ರೀತಿ ಪಾದ ದುರ್ನಾತ ಬೀರುವುದನ್ನು ತಡೆಗಟ್ಟಬಹುದು.
ನಿಂಬೆ ಹಣ್ಣು
ವಾಂತಿ ಬರುವಂತೆ ಅನಿಸಿದರೆ ನಿಂಬೆ ಹಣ್ಣಿನ ವಾಸನೆ ಗ್ರಹಿಸಿದರೆ ಸಾಕು ವಾಂತಿ ಬರುವುದಿಲ್ಲ. ಸುಸ್ತಾದಾಗ ಒಂದು ಲೋಟ ನಿಂಬೆ ಪಾನಕ ಕುಡಿದರೆ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.
ಹಾಲು
ಸನ್ ಟ್ಯಾನ್ ಉಂಟಾದರೆ ಹಾಲನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಮುಖ ತೊಳೆದರೆ ಸಾಕು ಬೇಗನೆ ಸನ್ ಟ್ಯಾನ್ ಕಡಿಮೆಯಾಗುವುದು.
ಕಲ್ಲಂಗಡಿ
ನಿರ್ಜಲೀಕರಣ ಉಂಟಾದರೆ ಕಲ್ಲಂಗಡಿ ಹಣ್ಣನ್ನು ತಿಂದರೆ ಸಾಕು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಬಹುದು.
ಬೆಂಡೆ ಕಾಯಿ
ಮಧುಮೇಹಿಗಳಿಗೆ ಬೆಂಡೆ ಕಾಯಿ ಬೆಸ್ಟ್ ಔಷಧಿ. ಬೆಂಡೆಕಾಯಿಯನ್ನು ಕತ್ತರಿಸಿ ಅದರಿಂದ ಬರುವ ಬಿಳಿ ಹಾಲನ್ನು ಒಂದು ಲೋಟ ನೀರಿಗೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು.