Latest Updates
-
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ?
ಅನಿಮಿಯಾ: ಅಲಕ್ಷಿಸಿದರೆ ತಪ್ಪದು ಅಪಾಯ

ಯಾವ ಆಹಾರಸೇವನೆ ಅನಿಮಿಯಾ ತೊಂದರೆಯನ್ನು ದೂರ ಮಾಡುತ್ತೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಿ.
* ವಿಟಮಿನ್ -ಬಿ12: ರಕ್ತ ಹೀನತೆ ದೂರ ಮಾಡಲು ವಿಟಮಿನ್ ಬಿ-12 ತುಂಬಾ ಅವಶ್ಯಕ. ಇದು ಹೆಚ್ಚಾಗಿ ಮಾಂಸಾಹಾರ, ಅದರಲ್ಲೂ ಪ್ರಾಣಿಯ ಕಿಡ್ನಿ ಮತ್ತು ಲಿವರ್ ಗಳಲ್ಲಿ ಹೆಚ್ಚು ಇರುತ್ತದೆ. ಅಷ್ಟೇ ಅಲ್ಲದೆ ಹಾಲು ಮತ್ತು ಮೊಸರಿನ ಸೇವನೆಯೂ ಇದಕ್ಕೆ ಫಲಕಾರಿ.
* ಬೀಟ್ ರೂಟ್: ಬೀಟ್ ರೂಟ್ ನಲ್ಲಿ ಪೊಟಾಶಿಯಂ, ಕ್ಯಾಲ್ಸಿಯಂ, ಸಲ್ಫರ್, ಅಯೋಡಿನ್, ಕಬ್ಬಿಣಾಂಶ, ಕಾಪರ್, ಕಾರ್ಬೋಹೈಡ್ರೇಡ್, ಪ್ರೊಟೀನ್, ಕೊಬ್ಬು, ವಿಟಮಿನ್ ಬಿ 1,2,6 ಮತ್ತು ವಿಟಮಿನ್ ಪಿ ಹೇರಳವಾಗಿದೆ. ಇದರಲ್ಲಿನ ಕಬ್ಬಿಣಾಂಶ ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅದರಲ್ಲೂ ಮಕ್ಕಳು ಮತ್ತು ಹದಿವಯಸ್ಸಿನವರಿಗೆ ಇದು ಅತಿ ಅವಶ್ಯಕ.
* ಮೆಂತ್ಯೆ: ರಕ್ತದ ಉತ್ಪತ್ತಿಗೆ ಮೆಂತ್ಯೆ ಸೊಪ್ಪು ಹೆಚ್ಚು ಸಹಕಾರಿ. ಮೆಂತ್ಯೆ ಯನ್ನು ಬೇಯಿಸಿ ಅದರ ರಸವನ್ನು ಯುವತಿಯರು ಸೇವಿಸಿದರೆ ಮುಟ್ಟಿನಿಂದ ಉಂಟಾಗುವ ರಕ್ತಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಕಬ್ಬಿಣಾಂಶ ಹೆಚ್ಚಿರುವ ಮೆಂತ್ಯೆ ಕಾಳುಗಳು ಕೂಡ ಅನೀಮಿಯಾ ನಿವಾರಣೆಗೆ ಉಪಯುಕ್ತ.
* ಬಸಳೆ ಸೊಪ್ಪು: ಅಂಗಳದಲ್ಲಿ ಬೆಳೆಯುವ ಬಸಳೆ ಸೊಪ್ಪು ಕಬ್ಬಿಣಾಂಶಗಳ ಆಕರ. ಇದರ ಸೇವನೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಾಗುವುದಲ್ಲದೆ ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ.
* ಸೊಯಾಬೀನ್: ಸಾಮಾನ್ಯವಾಗಿ ಅನಿಮಿಯಾ ತೊಂದರೆಗೆ ಒಳಪಟ್ಟವರಿಗೆ ಜೀರ್ಣಕ್ರಿಯೆ ಸರಿಯಿರುವುದಿಲ್ಲ. ಅಂತಹವರು ಪ್ರೊಟೀನ್ ಹೇರಳವಾಗಿರುವ ಸೊಯಾಬೀನ್ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಸುಲಭವಾಗಿ ಜೀರ್ಣಕ್ರಿಯೆ ನಡೆದು ರಕ್ತ ಹೆಚ್ಚುತ್ತದೆ.
* ಬಾದಾಮಿ: ಬಾದಾಮಿಯಲ್ಲಿ ತಾಮ್ರದ ಅಂಶ, ಐರನ್, ವಿಟಮಿನ್ ಹೆಚ್ಚಿರುವ ಕಾರಣ ಏಳು ಬಾದಾಮಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ರುಬ್ಬಿ ಸುಮಾರು ಮೂರು ತಿಂಗಳ ಕಾಲ ಬೆಳಗ್ಗಿನ ಸಮಯ ಸೇವಿಸಿದರೆ ಖಂಡಿತ ರಕ್ತಹೀನತೆಗೆ ಪರಿಹಾರ ಕಂಡುಕೊಳ್ಳಬಹುದು.
* ಎಳ್ಳು: ಕರಿಎಳ್ಳಿನಲ್ಲಿರುವ ಸಾಕಷ್ಟು ಕಬ್ಬಿಣಾಂಶ ಅನಿಮಿಯಾಗೆ ಪರಿಣಾಮಕಾರಿ. ಒಂದು ಚಮಚ ಎಳ್ಳನ್ನು ಬೆಚ್ಚಗಿನ ನೀರಿಗೆ ಹಾಕಿ 2 ಗಂಟೆ ನೆನೆಸಿ, ನಂತರ ಸೋಸಿ ರುಬ್ಬಿಕೊಳ್ಳಬೇಕು. ಇದನ್ನು ಹಾಲಿಗೆ ಸಕ್ಕರೆಯೊಂದಿಗೆ ಬೆರೆಸಿ ಕುಡಿದರೆ ಉತ್ತಮ.
* ಜೇನು: ಜೇನಿನಲ್ಲಿ ಅನೇಕ ಸತ್ವಗಳು ಇರುವುದರಿಂದ ಇದರ ಸೇವನೆ ಬಹುಪಯೋಗಿ. ಆದರೆ ಕಚ್ಚಾ ಜೇನಿನಲ್ಲಿ ಕೆಲವು ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಇರುವುದರಿಂ ಮಕ್ಕಳಿಗೆ ಕೊಡಬಾರದು. ಯಾವುದಾದರೂ ಆಹಾರದಲ್ಲಿ ಇದನ್ನು ಬೆರೆಸಿ ಸೇವನೆ ಮಾಡಬಹುದು.
* ಬಾಳೆಹಣ್ಣು, ಕಪ್ಪು ದ್ರಾಕ್ಷಿ, ಸ್ಟ್ರಾಬೆರಿ, ಈರುಳ್ಳಿ, ಕ್ಯಾರೆಟ್, ಮೂಲಂಗಿ, ಟೊಮೊಟೊ, ಕೊತ್ತಂಬರಿ, ಒಣಹಣ್ಣುಗಳಲ್ಲೂ ರಕ್ತಹೀನತೆಯನ್ನು ದೂರ ಮಾಡುವ ಅನೇಕ ಸತ್ವಗಳಿವೆ.
ಆದ್ದರಿಂದ ಇವುಗಳನ್ನು ಆದಷ್ಟು ನಮ್ಮ ದಿನ ನಿತ್ಯದ ಆಹಾರದ ಭಾಗವಾಗಿಸಿಕೊಂಡರೆ ಮುಂಬರುವ ಅನೇಕ ಕಾಯಿಲೆಗಳನ್ನು ತಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications