Just In
- 2 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 11 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 12 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 13 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
Don't Miss
- News Soumya Reddy in Tirupati:ಸೌಮ್ಯ ರೆಡ್ಡಿ ಫೋಟೋ ಹಿಡಿದು ತಿರುಪತಿ ದೇವಸ್ಥಾನದ ಮುಂದೆ ಫೋಸ್ ಕೊಟ್ಟ ಭಕ್ತ!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Automobiles ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಿಮಿಯಾ: ಅಲಕ್ಷಿಸಿದರೆ ತಪ್ಪದು ಅಪಾಯ
ಯಾವ ಆಹಾರಸೇವನೆ ಅನಿಮಿಯಾ ತೊಂದರೆಯನ್ನು ದೂರ ಮಾಡುತ್ತೆ ಅನ್ನೋದನ್ನ ಇಲ್ಲಿ ತಿಳಿದುಕೊಳ್ಳಿ.
* ವಿಟಮಿನ್ -ಬಿ12: ರಕ್ತ ಹೀನತೆ ದೂರ ಮಾಡಲು ವಿಟಮಿನ್ ಬಿ-12 ತುಂಬಾ ಅವಶ್ಯಕ. ಇದು ಹೆಚ್ಚಾಗಿ ಮಾಂಸಾಹಾರ, ಅದರಲ್ಲೂ ಪ್ರಾಣಿಯ ಕಿಡ್ನಿ ಮತ್ತು ಲಿವರ್ ಗಳಲ್ಲಿ ಹೆಚ್ಚು ಇರುತ್ತದೆ. ಅಷ್ಟೇ ಅಲ್ಲದೆ ಹಾಲು ಮತ್ತು ಮೊಸರಿನ ಸೇವನೆಯೂ ಇದಕ್ಕೆ ಫಲಕಾರಿ.
* ಬೀಟ್ ರೂಟ್: ಬೀಟ್ ರೂಟ್ ನಲ್ಲಿ ಪೊಟಾಶಿಯಂ, ಕ್ಯಾಲ್ಸಿಯಂ, ಸಲ್ಫರ್, ಅಯೋಡಿನ್, ಕಬ್ಬಿಣಾಂಶ, ಕಾಪರ್, ಕಾರ್ಬೋಹೈಡ್ರೇಡ್, ಪ್ರೊಟೀನ್, ಕೊಬ್ಬು, ವಿಟಮಿನ್ ಬಿ 1,2,6 ಮತ್ತು ವಿಟಮಿನ್ ಪಿ ಹೇರಳವಾಗಿದೆ. ಇದರಲ್ಲಿನ ಕಬ್ಬಿಣಾಂಶ ಕೆಂಪು ರಕ್ತಕಣಗಳ ಉತ್ಪತ್ತಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅದರಲ್ಲೂ ಮಕ್ಕಳು ಮತ್ತು ಹದಿವಯಸ್ಸಿನವರಿಗೆ ಇದು ಅತಿ ಅವಶ್ಯಕ.
* ಮೆಂತ್ಯೆ: ರಕ್ತದ ಉತ್ಪತ್ತಿಗೆ ಮೆಂತ್ಯೆ ಸೊಪ್ಪು ಹೆಚ್ಚು ಸಹಕಾರಿ. ಮೆಂತ್ಯೆ ಯನ್ನು ಬೇಯಿಸಿ ಅದರ ರಸವನ್ನು ಯುವತಿಯರು ಸೇವಿಸಿದರೆ ಮುಟ್ಟಿನಿಂದ ಉಂಟಾಗುವ ರಕ್ತಹೀನತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಕಬ್ಬಿಣಾಂಶ ಹೆಚ್ಚಿರುವ ಮೆಂತ್ಯೆ ಕಾಳುಗಳು ಕೂಡ ಅನೀಮಿಯಾ ನಿವಾರಣೆಗೆ ಉಪಯುಕ್ತ.
* ಬಸಳೆ ಸೊಪ್ಪು: ಅಂಗಳದಲ್ಲಿ ಬೆಳೆಯುವ ಬಸಳೆ ಸೊಪ್ಪು ಕಬ್ಬಿಣಾಂಶಗಳ ಆಕರ. ಇದರ ಸೇವನೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಹೆಚ್ಚಾಗುವುದಲ್ಲದೆ ಕೆಂಪು ರಕ್ತಕಣಗಳು ವೃದ್ಧಿಯಾಗುತ್ತವೆ.
* ಸೊಯಾಬೀನ್: ಸಾಮಾನ್ಯವಾಗಿ ಅನಿಮಿಯಾ ತೊಂದರೆಗೆ ಒಳಪಟ್ಟವರಿಗೆ ಜೀರ್ಣಕ್ರಿಯೆ ಸರಿಯಿರುವುದಿಲ್ಲ. ಅಂತಹವರು ಪ್ರೊಟೀನ್ ಹೇರಳವಾಗಿರುವ ಸೊಯಾಬೀನ್ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಸುಲಭವಾಗಿ ಜೀರ್ಣಕ್ರಿಯೆ ನಡೆದು ರಕ್ತ ಹೆಚ್ಚುತ್ತದೆ.
* ಬಾದಾಮಿ: ಬಾದಾಮಿಯಲ್ಲಿ ತಾಮ್ರದ ಅಂಶ, ಐರನ್, ವಿಟಮಿನ್ ಹೆಚ್ಚಿರುವ ಕಾರಣ ಏಳು ಬಾದಾಮಿಯನ್ನು 2 ಗಂಟೆ ನೀರಿನಲ್ಲಿ ನೆನೆಸಿ ಸಿಪ್ಪೆ ತೆಗೆದು ರುಬ್ಬಿ ಸುಮಾರು ಮೂರು ತಿಂಗಳ ಕಾಲ ಬೆಳಗ್ಗಿನ ಸಮಯ ಸೇವಿಸಿದರೆ ಖಂಡಿತ ರಕ್ತಹೀನತೆಗೆ ಪರಿಹಾರ ಕಂಡುಕೊಳ್ಳಬಹುದು.
* ಎಳ್ಳು: ಕರಿಎಳ್ಳಿನಲ್ಲಿರುವ ಸಾಕಷ್ಟು ಕಬ್ಬಿಣಾಂಶ ಅನಿಮಿಯಾಗೆ ಪರಿಣಾಮಕಾರಿ. ಒಂದು ಚಮಚ ಎಳ್ಳನ್ನು ಬೆಚ್ಚಗಿನ ನೀರಿಗೆ ಹಾಕಿ 2 ಗಂಟೆ ನೆನೆಸಿ, ನಂತರ ಸೋಸಿ ರುಬ್ಬಿಕೊಳ್ಳಬೇಕು. ಇದನ್ನು ಹಾಲಿಗೆ ಸಕ್ಕರೆಯೊಂದಿಗೆ ಬೆರೆಸಿ ಕುಡಿದರೆ ಉತ್ತಮ.
* ಜೇನು: ಜೇನಿನಲ್ಲಿ ಅನೇಕ ಸತ್ವಗಳು ಇರುವುದರಿಂದ ಇದರ ಸೇವನೆ ಬಹುಪಯೋಗಿ. ಆದರೆ ಕಚ್ಚಾ ಜೇನಿನಲ್ಲಿ ಕೆಲವು ಬ್ಯಾಕ್ಟೀರಿಯಾ ಇರುವ ಸಾಧ್ಯತೆ ಇರುವುದರಿಂ ಮಕ್ಕಳಿಗೆ ಕೊಡಬಾರದು. ಯಾವುದಾದರೂ ಆಹಾರದಲ್ಲಿ ಇದನ್ನು ಬೆರೆಸಿ ಸೇವನೆ ಮಾಡಬಹುದು.
* ಬಾಳೆಹಣ್ಣು, ಕಪ್ಪು ದ್ರಾಕ್ಷಿ, ಸ್ಟ್ರಾಬೆರಿ, ಈರುಳ್ಳಿ, ಕ್ಯಾರೆಟ್, ಮೂಲಂಗಿ, ಟೊಮೊಟೊ, ಕೊತ್ತಂಬರಿ, ಒಣಹಣ್ಣುಗಳಲ್ಲೂ ರಕ್ತಹೀನತೆಯನ್ನು ದೂರ ಮಾಡುವ ಅನೇಕ ಸತ್ವಗಳಿವೆ.
ಆದ್ದರಿಂದ ಇವುಗಳನ್ನು ಆದಷ್ಟು ನಮ್ಮ ದಿನ ನಿತ್ಯದ ಆಹಾರದ ಭಾಗವಾಗಿಸಿಕೊಂಡರೆ ಮುಂಬರುವ ಅನೇಕ ಕಾಯಿಲೆಗಳನ್ನು ತಡೆಯಬಹುದು.