Latest Updates
-
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು!
ವ್ಯಾಕ್ಸಿನ್ ಪಡೆಯಲು ಶೆಡ್ಯೂಲ್ ಮಾಡಿದ್ದೀರಾ? ಅದಕ್ಕಿಂತ ಮೊದಲು ಇದನ್ನು ಮಾಡಿ
ಭಾರತದಲ್ಲಿ ಒಂದು ಕಡೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಆದರೆ ಈಗೀನ ಪರಿಸ್ಥಿತಿ ನೋಡಿದಾಗ ಲಸಿಕೆ ಪಡೆದವರ ಮೇಲೆ ಕೊರೊನಾ ಅಷ್ಟೇನು ಬೀರುತ್ತಿಲ್ಲ, ಲಸಿಕೆ ಪಡೆದ ಬಳಿಕ ಕೆಲವರಿಗೆ ಕೊರೊನಾ ಪಾಸಿಟಿವ್ ಬರುತ್ತಾ ಇದೆಯಾದರೂ ಪ್ಲಸ್ ಪಾಯಿಂಟ್ ಅಂದ್ರೆ ವ್ಯಾಕ್ಸಿನ್ ಪಡೆದವರು ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ ಜನರು ವ್ಯಾಕ್ಸಿನ್ ಪಡೆಯಲು ತುಂಬಾ ಉತ್ಸಾಹ ತೋರುತ್ತಿದ್ದಾರೆ.
ಲಸಿಕೆ ಹಾಕಿದರೆ ಕೊರೊನಾದಿಂದ ಪಾರಾಗಬಹುದು, ಆದರೆ ಲಸಿಕೆ ಹಾಕುವುದಾದರೆ ನೀವು ಕೆಲವೊಂದು ಕ್ರಮ ಅನುಸರಿಸಿದರೆ ಕೋವಿಡ್ 19 ಲಸಿಕೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ಕೊರೊನಾ ಲಸಿಕೆ ಪಡೆಯುವುದಕ್ಕೆ ಮುನ್ನ ನೂವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹೇಳಲಾಗಿದೆ ನೋಡಿ:

1. ನಿದ್ದೆ
ಲಸಿಕೆ ಪಡೆಯುವ ಮುನ್ನ ಚೆನ್ನಾಗಿ ನಿದ್ದೆ ಮಾಡಿ. ಒಳ್ಳೆಯ ನಿದ್ದೆ ದೇಹದಲ್ಲಿ ಪ್ರತಿಕಾಯ ವ್ಯವಸ್ಥೆ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ, ಇದರಿಂದಾಗಿ ಲಸಿಕೆ ದೇಹದಲ್ಲಿ ಒಳ್ಳೆಯ ಪರಿಣಾಮ ಬೀರುವುದು.

2. ಚೆನ್ನಾಗಿ ನೀರು ಕುಡಿಯಿರಿ.
ಬಿಸಿ ಬಿಸಿ ನೀರನ್ನು ತೆಗೆದುಕೊಳ್ಳಿ. ನೀರು ಜೊತೆಗೆ ಸೂಪ್ ಕೂಡ ಒಳ್ಳೆಯದೇ. ಇವೆಲ್ಲಾ ದೇಹದಲ್ಲಿ ನಿರಿನಂಶ ಕಾಪಾಡುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.

3. ಸತುವಿನ ಸಪ್ಲಿಮೆಂಟ್ ತೆಗೆದುಕೊಳ್ಳಿ ಹಾಗೂ ಸತುವಿನಂಶವಿರುವ ಆಹಾರ ಸೇವಿಸಿ.
* ಅಗಸೆ ಬೀಜ
* ಸಿಹಿ ಕುಂಬಳಕಾಯಿ ಬೀಜ
* ಬಾದಾಮಿ
* ವಾಲ್ನಟ್
* ಎಳ್ಳು
* ಮೊಟ್ಟೆ
* ಧಾನ್ಯಗಳು
* ಹಾಲಿನ ಉತ್ಪನ್ನ
* ಪೌಲ್ಟ್ರಿ
* ಹಣ್ಣುಗಳು
* ತರಕಾರಿಗಳು

ಭಯಬೇಡ
ದೇಹದ ಆರೋಗ್ಯಕ್ಕೆ ಹಾಗೂ ನಮ್ಮ ಮನಸ್ಸಿನ ಚಿಂತನೆಗೆ ತುಂಬಾನೇ ಸಂಬಂಧವಿದೆ. ನಾವು ಕೆಟ್ಟದನ್ನು ಯೋಚಿಸಿ, ಒಳ್ಳೆಯದನ್ನು ಬಯಸಿದರೆ ಆಗಲ್ಲ. ಮೊದಲು ಭಯಬಿಡಿ. ಲಸಿಕೆ ಮೇಲೆ ನಂಬಿಕೆ ಇರಲಿ. ಒಳ್ಳೆಯದನ್ನೇ ಬಯಸಿ, ಒಳ್ಳೆದಾಗುತ್ತದೆ.
ಧನ್ಯವಾದಗಳು



Click it and Unblock the Notifications