Just In
- 6 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 6 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 7 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 8 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವ್ಯಾಕ್ಸಿನ್ ಪಡೆಯಲು ಶೆಡ್ಯೂಲ್ ಮಾಡಿದ್ದೀರಾ? ಅದಕ್ಕಿಂತ ಮೊದಲು ಇದನ್ನು ಮಾಡಿ
ಭಾರತದಲ್ಲಿ ಒಂದು ಕಡೆ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. ಆದರೆ ಈಗೀನ ಪರಿಸ್ಥಿತಿ ನೋಡಿದಾಗ ಲಸಿಕೆ ಪಡೆದವರ ಮೇಲೆ ಕೊರೊನಾ ಅಷ್ಟೇನು ಬೀರುತ್ತಿಲ್ಲ, ಲಸಿಕೆ ಪಡೆದ ಬಳಿಕ ಕೆಲವರಿಗೆ ಕೊರೊನಾ ಪಾಸಿಟಿವ್ ಬರುತ್ತಾ ಇದೆಯಾದರೂ ಪ್ಲಸ್ ಪಾಯಿಂಟ್ ಅಂದ್ರೆ ವ್ಯಾಕ್ಸಿನ್ ಪಡೆದವರು ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ ಜನರು ವ್ಯಾಕ್ಸಿನ್ ಪಡೆಯಲು ತುಂಬಾ ಉತ್ಸಾಹ ತೋರುತ್ತಿದ್ದಾರೆ.
ಲಸಿಕೆ ಹಾಕಿದರೆ ಕೊರೊನಾದಿಂದ ಪಾರಾಗಬಹುದು, ಆದರೆ ಲಸಿಕೆ ಹಾಕುವುದಾದರೆ ನೀವು ಕೆಲವೊಂದು ಕ್ರಮ ಅನುಸರಿಸಿದರೆ ಕೋವಿಡ್ 19 ಲಸಿಕೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ. ಕೊರೊನಾ ಲಸಿಕೆ ಪಡೆಯುವುದಕ್ಕೆ ಮುನ್ನ ನೂವು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹೇಳಲಾಗಿದೆ ನೋಡಿ:
1. ನಿದ್ದೆ
ಲಸಿಕೆ ಪಡೆಯುವ ಮುನ್ನ ಚೆನ್ನಾಗಿ ನಿದ್ದೆ ಮಾಡಿ. ಒಳ್ಳೆಯ ನಿದ್ದೆ ದೇಹದಲ್ಲಿ ಪ್ರತಿಕಾಯ ವ್ಯವಸ್ಥೆ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ, ಇದರಿಂದಾಗಿ ಲಸಿಕೆ ದೇಹದಲ್ಲಿ ಒಳ್ಳೆಯ ಪರಿಣಾಮ ಬೀರುವುದು.
2. ಚೆನ್ನಾಗಿ ನೀರು ಕುಡಿಯಿರಿ.
ಬಿಸಿ ಬಿಸಿ ನೀರನ್ನು ತೆಗೆದುಕೊಳ್ಳಿ. ನೀರು ಜೊತೆಗೆ ಸೂಪ್ ಕೂಡ ಒಳ್ಳೆಯದೇ. ಇವೆಲ್ಲಾ ದೇಹದಲ್ಲಿ ನಿರಿನಂಶ ಕಾಪಾಡುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ.
3. ಸತುವಿನ ಸಪ್ಲಿಮೆಂಟ್ ತೆಗೆದುಕೊಳ್ಳಿ ಹಾಗೂ ಸತುವಿನಂಶವಿರುವ ಆಹಾರ ಸೇವಿಸಿ.
* ಅಗಸೆ ಬೀಜ
* ಸಿಹಿ ಕುಂಬಳಕಾಯಿ ಬೀಜ
* ಬಾದಾಮಿ
* ವಾಲ್ನಟ್
* ಎಳ್ಳು
* ಮೊಟ್ಟೆ
* ಧಾನ್ಯಗಳು
* ಹಾಲಿನ ಉತ್ಪನ್ನ
* ಪೌಲ್ಟ್ರಿ
* ಹಣ್ಣುಗಳು
* ತರಕಾರಿಗಳು
ಭಯಬೇಡ
ದೇಹದ ಆರೋಗ್ಯಕ್ಕೆ ಹಾಗೂ ನಮ್ಮ ಮನಸ್ಸಿನ ಚಿಂತನೆಗೆ ತುಂಬಾನೇ ಸಂಬಂಧವಿದೆ. ನಾವು ಕೆಟ್ಟದನ್ನು ಯೋಚಿಸಿ, ಒಳ್ಳೆಯದನ್ನು ಬಯಸಿದರೆ ಆಗಲ್ಲ. ಮೊದಲು ಭಯಬಿಡಿ. ಲಸಿಕೆ ಮೇಲೆ ನಂಬಿಕೆ ಇರಲಿ. ಒಳ್ಳೆಯದನ್ನೇ ಬಯಸಿ, ಒಳ್ಳೆದಾಗುತ್ತದೆ.
ಧನ್ಯವಾದಗಳು