Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನಸ್ಸಿನಲ್ಲಿ ಬರುವ ನಕಾರಾತ್ಮಕ ಚಿಂತನೆಗಳಿಂದ ದೂರವಿರಲು ಹೀಗೆ ಮಾಡಿ
ಬದುಕಿನ ಹಲವು ಸಂದರ್ಭಗಳಲ್ಲಿ ನಕಾರಾತ್ಮಕ ಚಿಂತನೆಗಳು ನಮ್ಮನ್ನು ಹೆಚ್ಚು ಸುತ್ತುವರೆಯುತ್ತದೆ. ಇದು ಖಿನ್ನತೆ, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಅಸ್ವಸ್ಥತೆಗಳನ್ನು ಸಹ ಉಂಟುಮಾಡುತ್ತದೆ.

ಆದರೆ ನಾವು ನಕಾರಾತ್ಮಕ ಅಲೋಚನೆಗಳಿಂದಾಗಿ ನಮ್ಮ ಅರೋಗ್ಯ, ಬದುಕನ್ನು ಹಾಳುಮಾಡಿಕೊಳ್ಳುವ ಬದಲು ಆತ್ಮವಿಸ್ವಾಸದಿಂದ ಇಂಥಾ ನಕಾರಾತ್ಮಕ ಆಲೋಚನೆಗಳಿಂದ ಹೊರಬರುವುದು ಹೇಗೆ ಎಂಬುದನ್ನು ತಿಳಿಯಬೇಕು.
ನಾವಿಂದು ಇಲ್ಲಿ ನಕಾರಾತ್ಮಕ ಆಲೋಚನೆಗಳಿಂದ ಹೊರಬರಲು ಕೆಲವು ಸಿಂಪಲ್ ಸಲಹೆಗಳನ್ನು ನೀಡಲಿದ್ದೇವೆ, ನೀವು ಇಂಥಾ ಪರಿಸ್ಥಿತಿಯಲ್ಲಿದ್ದರೆ ಈ ಸಲಹೆಗಳನ್ನು ಪ್ರಯತ್ನಿಸಿ ಸದಾ ಸಕಾರಾತ್ಮಕವಾಗಿರಿ:
ನಕಾರಾತ್ಮಕತೆಯನ್ನು ಎದುರಿಸಿ
ನಕಾರಾತ್ಮಕ ಚಿಂತನೆಯ ಎದುರಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ನಕಾರಾತ್ಮಕತೆಯನ್ನು ಧನಾತ್ಮಕವಾಗಿ ಎದುರಿಸುವುದು. ನಿಮ್ಮ ಮನಸ್ಸಿನಲ್ಲಿ ಈಗಾಗಲೇ ನಕಾರಾತ್ಮಕ ಆಲೋಚನೆಗಳು ಓಡುತ್ತಿದ್ದರೆ, ನಿಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವಂಥ ಅಥವಾ ಕೆಟ್ಟ ಅಭ್ಯಾಸಗಳನ್ನು ತೊರೆಯುವಂತಹ ವೈಯಕ್ತಿಕ ಅಭಿವೃದ್ಧಿ ವಿಷಯಗಳ ಕುರಿತು ಮಾತುಗಳನ್ನು ಹೆಚ್ಚು ಅಲಿಸಿ, ಈ ಮೂಲಕವೇ ನಿಮ್ಮ ದಿನವನ್ನು ಪ್ರಾರಂಭಿಸಿ ಇದು ಖಂಡಿತ ನಿಮಗೆ ಸಹಾಯ ಮಾಡುತ್ತದೆ. ನೀವು ನಿರ್ದಿಷ್ಟ ವೈಯಕ್ತಿಕ ಸಮಸ್ಯೆಗಳೊಂದಿಗೆ ವ್ಯವಹರಿಸುತ್ತಿದ್ದರೆ, ಆ ಸಮಸ್ಯೆಗೆ ಸಂಬಂಧಪಟ್ಟ ಪ್ರೇರಣಾತ್ಮಕ ಮಾತುಗಳು ಹಾಗೂ ನಿಮಗೆ ಸಕಾರಾತ್ಮಕ ಭಾವನೆ ನೀಡುವ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯಿರಿ.
ಮನಸ್ಸಿನ ಅಲೋಚನೆಗಳನ್ನು ಹೊರಗೆ ತನ್ನಿ
ನಕಾರಾತ್ಮಕ ಆಲೋಚನೆಗಳನ್ನು ಬರೆಯುವುದು ಮತ್ತು ಅವುಗಳನ್ನು ನಂತರ ಎಸೆಯುವುದು ನಕಾರಾತ್ಮಕ ಆಲೋಚನೆಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಈ ಅಭ್ಯಾಸಕ್ಕಾಗಿ ಚಿತ್ರಕಲೆ ಅಥವಾ ಡ್ರಾಯಿಂಗ್ ಕೂಡ ಬಳಸಬಹುದು.
ರಬ್ಬರ್ ಬ್ಯಾಂಡ್
ರಬ್ಬರ್ ಬ್ಯಾಂಡ್ ತಂತ್ರವು ನಿಮ್ಮ ಮನಸ್ಸಿನಲ್ಲಿ ಓಡುತ್ತಿರುವ ನಕಾರಾತ್ಮಕ ಆಲೋಚನೆಗಳು ಮತ್ತು ಕೆಟ್ಟ ನೆನಪುಗಳನ್ನು ತಡೆಯುವ ಸರಳ, ಆದರೆ ನಂಬಲಾಗದಷ್ಟು ಪರಿಣಾಮಕಾರಿ ಸಾಧನವಾಗಿದೆ. ನಿಮ್ಮ ಮಣಿಕಟ್ಟಿನ ಸುತ್ತಲೂ ನೀವು ರಬ್ಬರ್ ಬ್ಯಾಂಡ್ ಅನ್ನು ಧರಿಸಿ, ನಿಮಗೆ ಮನಸ್ಸಿನಲ್ಲಿ ಯಾವಾಗ ನಕಾರಾತ್ಮಕ ಆಲೋಚನೆ ಅಥವಾ ಕೆಟ್ಟ ಸ್ಮರಣೆ ಬರುತ್ತದೆಯೋ ಪ್ರತಿ ಬಾರಿ ನಿಮ್ಮ ಚರ್ಮದ ವಿರುದ್ಧ ಬ್ಯಾಂಡ್ ಅನ್ನು ಎಳೆದು ಬಿಡಿ. ಈ ತಂತ್ರವನ್ನು "ಥಾಟ್ ಸ್ಟಾಪ್ಪಿಂಗ್" ಎಂದು ಕರೆಯಲಾಗುತ್ತದೆ ಮತ್ತು ಮೆದುಳಿಗೆ ಮರುತರಬೇತಿ ನೀಡಲು ಸಹಾಯ ಮಾಡಲು ಬಳಸಬಹುದು.
ಧನಾತ್ಮಕ ಕ್ರಿಯೆ
ನಕಾರಾತ್ಮಕ ಚಿಂತನೆಯು ನಿರಾಸಕ್ತಿ ಮತ್ತು ನಿಷ್ಕ್ರಿಯತೆಗೆ ಕಾರಣವಾಗಬಹುದು, ಇದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ನಮ್ಮ ಸ್ವಾಭಿಮಾನದ ಮೇಲೆ ಪ್ರಭಾವ ಬೀರುತ್ತದೆ. ನಿಮ್ಮ ಪರಿಸ್ಥಿತಿಯನ್ನು ಸುಧಾರಿಸಲು ಸಕಾರಾತ್ಮಕ ಕ್ರಮವನ್ನು ತೆಗೆದುಕೊಳ್ಳುವುದು ನಿಮ್ಮ ನಕಾರಾತ್ಮಕ ಚಿಂತನೆಯ ಮಾದರಿಗಳನ್ನು ಬದಲಾಯಿಸಲು ಮತ್ತು ನಿಮ್ಮ ಜೀವನದ ಮೇಲೆ ನಿಯಂತ್ರಣದ ಅರ್ಥವನ್ನು ನೀಡಲು ಪರಿಣಾಮಕಾರಿ ಮಾರ್ಗವಾಗಿದೆ. ನಿಮ್ಮ ನಕಾರಾತ್ಮಕತೆಯ ವಿರುದ್ಧ ಸಕಾರತ್ಮಕತೆ ಗೆಲ್ಲಬೇಕು ಎನ್ನುವಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
ವರ್ತಮಾನದ ಮೇಲೆ ಕೇಂದ್ರೀಕರಿಸಿ
ನಕಾರಾತ್ಮಕವಾಗಿ ಚಿಂತಿಸುವ ಆಲೋಚನೆ ಬಂದಾಗ, ನಿಮ್ಮ ಗಮನವನ್ನು ನಿಮ್ಮ ಸುತ್ತಲಿರುವ ಕಡೆಗೆ ಸಕ್ರಿಯವಾಗಿ ಬದಲಿಸಿ. ಉಸಿರಾಟದ ಮೇಲೆ ಕೇಂದ್ರೀಕರಿಸಿ. ನಿಮಗೆ ಹೆಚ್ಚು ಸಮಯವಿದ್ದರೆ ಅಥವಾ ಸಮಸ್ಯೆಯು ನಿರಂತರವಾಗಿದ್ದರೆ, ಸಾವಧಾನತೆ ಸಹಾಯ ಮಾಡಬಹುದು. ಲಾವೊ ತ್ಸು ಪ್ರಸಿದ್ಧ ಉಲ್ಲೇಖದ ಪ್ರಕಾರ, "ನೀವು ಖಿನ್ನತೆಗೆ ಒಳಗಾಗಿದ್ದರೆ ನೀವು ಭೂತಕಾಲದಲ್ಲಿ ವಾಸಿಸುತ್ತಿದ್ದೀರಿ. ನೀವು ಆತಂಕದಲ್ಲಿದ್ದರೆ ನೀವು ಭವಿಷ್ಯದಲ್ಲಿ ಬದುಕುತ್ತೀರಿ. ನೀವು ಶಾಂತಿಯಿಂದ ಇದ್ದರೆ ನೀವು ವರ್ತಮಾನದಲ್ಲಿ ವಾಸಿಸುತ್ತಿದ್ದೀರಿ. ಈ ಮಾತು ನಿಮ್ಮ ಬದುಕಿಗೆ ಪ್ರೇರಣೆ ನೀಡಬಹುದು.
ಅದರ ಬಗ್ಗೆ ಚರ್ಚಿಸಿ
ನಿಮ್ಮ ಆಲೋಚನೆಗಳು ಮತ್ತು ಭಾವನೆಗಳ ಬಗ್ಗೆ ಮಾತನಾಡುವುದು ವಿಷಯಗಳನ್ನು ಹೊಸ ಬೆಳಕಿನಲ್ಲಿ ಇರಿಸಲು ಸಹಾಯ ಮಾಡುತ್ತದೆ. ತುಂಬಾ ಅಗತ್ಯವಿದ್ದರೆ ಮನಶ್ಶಾಸ್ತ್ರಜ್ಞ ಅಥವಾ ಸಲಹೆಗಾರರಿಂದ ವೃತ್ತಿಪರ ಸಹಾಯವನ್ನು ಪಡೆಯಲು ಬಯಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications





