Just In
- 4 hrs ago
ಮಾರ್ಚ್ ತಿಂಗಳಲ್ಲಿ ಹುಟ್ಟಿದವರು ಈ ವ್ಯಕ್ತಿತ್ವ ಹೊಂದಿರುತ್ತಾರೆ!!
- 5 hrs ago
ಮಾರ್ಚ್ 2021ರಲ್ಲಿ ಬರುವ ಹಬ್ಬಗಳು ಹಾಗೂ ವ್ರತಗಳು: ಈ ತಿಂಗಳಿನಲ್ಲಿ 11 ದಿನಗಳು ತುಂಬಾನೇ ವಿಶೇಷ
- 6 hrs ago
ಹಿರಿಯರೇ, ಸಣ್ಣ ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಂಡರೆ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?
- 8 hrs ago
ಮಾರ್ಚ್ ೨೦೨೧: ಇಲ್ಲಿದೆ ಶುಭ ಸಮಾರಂಭಕ್ಕೆ ಉತ್ತಮ ದಿನಾಂಕಗಳು
Don't Miss
- Sports
ಐಎಸ್ಎಲ್: ಪ್ಲೇ ಆಫ್ ಕೊನೆಯ ಸ್ಥಾನಕ್ಕಾಗಿ ನೇರ ಶೂಟೌಟ್
- Automobiles
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
- News
ಕಣಿವೆ ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ನಿಲ್ಲಿಸುವುದಿಲ್ಲ: ಭಾರತೀಯ ಸೇನೆ
- Movies
ಕಾಮಾಟಿಪುರದ ನಿಜ ಕತೆಗೆ ಅಜಯ್ ದೇವಗನ್ ಎಂಟ್ರಿ
- Finance
ಮತ್ತಷ್ಟು ಇಳಿಕೆಗೊಂಡ ಚಿನ್ನದ ಬೆಲೆ: ಫೆಬ್ರವರಿ 27ರ ಬೆಲೆ ಹೀಗಿದೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
ಕೋವಿಡ್ 19 ಲಸಿಕೆ ಇದೀಗ ದೇಶದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಈ ಲಸಿಕೆ ಕೊರೊನಾ ತಡೆಗಟ್ಟಲು ಸಹಕಾರಿಯಾದರೂ ಕೆಲವರಲ್ಲಿ ಅಡ್ಡಪರಿಣಾಮಗಳು ಕಂಡು ಬರುತ್ತಿರುವ ಬಗ್ಗೆ ವರದಿಯಾಗಿವೆ.
ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ ಲಸಿಕೆ ನೀಡಿದ 2 ದಿನಗಳಲ್ಲಿ 447 ಜನರಿಗೆ ಅಡ್ಡಪರಿಣಾಮಗಳು ಉಂಟಾಗಿವೆ. ಇದರ ಕುರಿತು ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಅವರು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀಡುವ ಕೊರೊನಾ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗುವುದಾದರೂ ಸಾವು ಸಂಭವಷ್ಟು ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂದಿದ್ದಾರೆ.
ಕೆಲವೊಮ್ಮೆ ವ್ಯಕ್ತಿ ಕ್ರೋಸಿನ್, ಪ್ಯಾರಾಸಿಟಮೋಲ್ ತೆಗೆದುಕೊಂಡಾಗಲೂ ಅಲರ್ಜಿ ಉಂಟಾಗುತ್ತದೆ, ಆದ್ದರಿಂದ ಈ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಭಯ ಪಡುವ ಅಗ್ಯತವಿಲ್ಲ ಎಂದಿದ್ದಾರೆ.

ಡಾ. ಗುಲೇರಿಯಾ ಅವರ ಪ್ರಕಾರ ಲಸಿಕೆಯಿಂದ ಉಂಟಾಗುವ ಅಡ್ಡಪರಿಣಾಮಗಳು
ವೈದ್ಯರು ಹೇಳಿರುವ ಪ್ರಕಾರ ಲಸಿಕೆ ಪಡೆದವರಲ್ಲಿ ಶೇ. 10ಕ್ಕಿಂತ ಕಡಿಮೆ ಜನರಲ್ಲಿ ಮಾತ್ರ ಅಡ್ಡಪರಿಣಾಮಗಳು ಕಂಡು ಬರುತ್ತದೆ. ಪ್ರಮುಖವಾಗಿ ಕಂಡು ಬರುವ ಅಡ್ಡಪರಿಣಾಮಗಳೆಂದರೆ ಮೈಕೈ ನೋವು, ಜ್ವರ, ಲಸಿಕೆ ಹಾಕಿದ ಭಾಗದಲ್ಲಿ ನೋವು, ತ್ವಚೆಯಲ್ಲಿ ಅಲರ್ಜಿ, ವಾಂತಿ, ಉಸಿರಾಟದಲ್ಲಿ ತೊಂದರೆ ಕಾಣಿಸಿಬಹುದು. ಆದರೆ ಇವುಗಳು ಪ್ರಾಣಕ್ಕೆ ಕುತ್ತು ತರುವಂಥ ಅಡ್ಡಪರಿಣಾಮಗಳಲ್ಲ ಎಂದಿದ್ದಾರೆ.
ಆದ್ದರಿಂದ ಜನರು ಈ ಲಸಿಕೆ ಪಡೆಯಲು ಹಿಂದೇಟು ಹಾಕಬಾರದು, ಈ ಲಸಿಕೆ ಪಡೆಯುವುದರಿಂದ ಕೊರೊನಾದಿಂದ ಸಾಯುವವರ ಸಂಖ್ಯೆ ತಗ್ಗಿಸಬಹುದು. ಅಲ್ಲದೆ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಹಾಗೂ ಶಾಲಾ-ಕಾಲೇಜುಗಳು ಎಂದಿನಂತೆ ನಡೆಯಲು ಈ ಲಸಿಕೆ ಪಡೆಯುವುದರಿಂದ ಸಹಾಯಕವಾಗುತ್ತದೆ ಎಂದಿದ್ದಾರೆ.

ಲೈವ್ನಲ್ಲಿ ಲಸಿಕೆ ಪಡೆದಿದ್ದರು ಡಾ. ಗುಲೇರಿಯಾ
ಪ್ರಧಾನಿ ನರೇಂದ್ರ ಜನವರಿ 16ಕ್ಕೆ ಕೊರೊನಾ ಲಸಿಕೆಗೆ ಚಾಲನೆ ನೀಡಿದ ಬಳಿಕ ಡಾ. ಗುಲೇರಿಯಾ ಲಸಿಕೆ ಪಡೆಯುವ ವೀಡಿಯೋ ಟಿವಿಯಲ್ಲಿ ಲೈವ್ ಹೋಗಿತ್ತು, ನಂತರ ಸೋಮವಾರ ಮಾದ್ಯಮದ ಮುಂದೆ ಬಂದ ವೈದ್ಯರು ನನಗೆ ಯಾವುದೇ ಅಡ್ಡಪರಿಣಾಮವಾಗಿಲ್ಲ, ನಾನು ಚೆನ್ನಾಗಿದ್ದೇನೆ ಎಂದು ಹೇಳಿದರು.

ಕೋವಿಡ್ 19 ಲಸಿಕೆ ಪಡೆದ ಬಳಿಕ ಸಾವನ್ನಪ್ಪಿದರೇ ಆರೋಗ್ಯ ಕಾರ್ಯಕರ್ತ?
ಮೊರಾಡಾಬಾದ್ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರೊಬ್ಬರು ಕೋವಿಡ್ 19 ಲಸಿಕೆ ಪಡೆದ ಬಳಿಕ ಸಾವನ್ನಪ್ಪಿದರು ಎಂಬುವುದಾಗಿ ವರದಿಯಾಗಿತ್ತು. ಆದರೆ ಅದರ ಪೋಸ್ಟ್ಮಾರ್ಟಂ ವರದಿಯು ಅವರು ಹೃದಯಾಘಾಟತದಿಂದ ಸಾವನ್ನಪ್ಪಿದಾಗಿ ಹೇಳಿದೆ.
ದೆಹಲಿಯಲ್ಲಿ ಲಸಿಕೆಯಿಂದಾಗಿ ಅಡ್ಡಪರಿಣಾಮ ಉಂಟಾಗಿರುವ 51 ಕೇಸ್ ವರದಿಯಾಗಿತ್ತು. ಏಮ್ಸ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿರುವ 22 ವರ್ಷದ ವ್ಯಕ್ತಿಗೆ ಲಸಿಕೆ ಬಳಿಕ ತುಂಬಾ ಅಡ್ಡಪರಿಣಾಮಗಳು ಕಂಡು ಬಂದ ಕಾರಣ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಈಗ ಅವರು ಕೂಡ ಚೇತರಿಸಿಕೊಂಡಿದ್ದಾರೆ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪಡೆಯುವುದು ಅವಶ್ಯಕ
ಕೋವಿಡ್ 19 ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳು ಉಂಟಾಗಿರುವ ಕೆಲವೊಂದು ಕೇಸ್ಗಳು ಬಂದಿರುವುದರಿಂದ ಜನರಿಗೆ ಈ ಲಸಿಕೆ ಪಡೆಯಲು ಭಯವಿದೆ, ಆದರೆ ಈ ಲಸಿಕೆ ಬಗ್ಗೆ ಯಾವುದೇ ಭಯ ಬೇಡ ಸ್ವತಃ ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ ಹೇಳಿದ್ದಾರೆ. ಇದೀಗ ಆರೋಗ್ಯ ಕಾರ್ಯತರಿಗೆ ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆ ನೀಡುತ್ತಿದ್ದು ಕೆಲವು ತಿಂಗಳುಗಳಲ್ಇ ಎಲ್ಲರಿಗೂ ಸಿಗುವ ನಿರೀಕ್ಷೆ ಇದೆ. ಕೊರೊನಾ ಎಂಬ ಮಹಾಮಾರಿಯನ್ನು ಎದುರಿಸಲು ಇದೊಂದೇ ಇಡೀ ವಿಶ್ವದ ಮುಂದಿರುವ ದಾರಿಯಾಗಿದೆ, ಆದ್ದರಿಂದ ಲಸಿಕೆ ಬಗ್ಗೆ ಅನವಶ್ಯಕ ಭಯ ಬೇಡ.