Latest Updates
-
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ?
ಬಿಪಿಯನ್ನು ನಿಯಂತ್ರಿಸುವ 'ಆಹಾರ ಪಥ್ಯ', ತಪ್ಪದೇ ಅನುಸರಿಸಿ
ಹೃದಯಾಘಾತ ಸಹಿತ ಹಲವು ಪ್ರಾಣಾಂತಿಕ ಕಾಯಿಲೆಗಳಿಗೆ ಅಧಿಕ ರಕ್ತದೊತ್ತಡವೇ ಪ್ರಮುಖ ಕಾರಣ. ಅಷ್ಟೇ ಅಲ್ಲ, ಮಾನಸಿಕ ಆರೋಗ್ಯ ಚಿಂತನೆಯ ಕ್ಷಮತೆ ಉಡುಗುವುದು, ಮೂತ್ರಪಿಂಡಗಳ ವೈಫಲ್ಯ ಮೊದಲಾದವುಗಳಿಗೂ ಅಧಿಕ ರಕ್ತದೊತ್ತಡ ಕಾರಣವಾಗಬಲ್ಲುದು. ಅಧಿಕ ರಕ್ತದೊತ್ತಡ ಇದೆ ಎಂದಾಕ್ಷಣ ಹೆಚ್ಚಿನವರು ಭಯಭೀತರಾಗಿ ವೈದ್ಯರು ನೀಡುವ ಗುಳಿಗೆಗಳ ಮೊರೆ ಹೋಗುತ್ತಾರೆ. ಆದರೆ ಈ ಗುಳಿಗೆಗಳು ರಕ್ತದೊತ್ತಡವನ್ನು ಕಡಿಮೆಗೊಳಿಸಿದರೂ ಕೆಲವು ಅಡ್ಡಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಬಿಪಿಯನ್ನು ನಿಯಂತ್ರಿಸಲು, ಸೌತೆ-ಬೆಳ್ಳುಳ್ಳಿಯ ಸಲಾಡ್!
ಈ ಅಡ್ಡಪರಿಣಾಮಗಳಲ್ಲಿ ಪ್ರಮುಖವಾದವು ಎಂದರೆ ನಿದ್ರಾರಾಹಿತ್ಯ, ನರಗಳ ಮತ್ತು ಸ್ನಾಯುಗಳ ಪೆಡಸು, ದಿನದ ಹೊತ್ತಿನಲ್ಲಿ ತಲೆ ತಿರುಗುವುದು ಇತ್ಯಾದಿ. ಅಧಿಕ ರಕ್ತದೊತ್ತಡವಿದ್ದಾಗ ಸುಮ್ಮನೇ ಅತ್ತಿಂದಿತ್ತ ನಡೆದಾಡಿದರೆ ಇದು ಕೊಂಚ ಮಟ್ಟಿಗೆ ಇಳಿಯಲು ಸಹಕಾರಿಯಾಗಿದೆ. ಇದರಿಂದ ಉಸಿರಾಟವ ಕೊಂಚ ಹೆಚ್ಚುವ ಮೂಲಕ ಹೆಚ್ಚು ಆಮ್ಲಜನಕ ದೊರೆತು ರಕ್ತದ ಒತ್ತಡ ಕಡಿಮೆಯಾಗಲು ಸಾಧ್ಯವಾಗುತ್ತದೆ. ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ
ಇದರೊಂದಿಗೆ ಉಸಿರಾಟವನ್ನು ಸುಗಮಗೊಳಿಸುವ ಯೋಗಾಸನಗಳು, ತಾಯ್ ಛಿ, ಕ್ವಿಗಾಂಗ್ ಮೊದಲಾದ ವ್ಯಾಯಾಮಗಳನ್ನೂ ಅನುಸರಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಸಾಕಷ್ಟು ಮಟ್ಟಿಗೆ ಕಡಿಮೆಗೊಳಿಸಬಹುದು. ಇದರೊಂದಿಗೆ ಪೊಟ್ಯಾಶಿಯಂ, ಮೆಗ್ನೇಶಿಯಂ ಮತ್ತು ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕವೂ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಈ ಆಹಾರಗಳು ಯಾವುವು? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು ಇವುಗಳಲ್ಲಿ ಪ್ರಮುಖವಾದ ಏಳು ಆಹಾರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ.... ಎಚ್ಚರ: ಅಧಿಕ ರಕ್ತದೊತ್ತಡ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!

ಕಿವಿಹಣ್ಣು
ಆಸ್ಟ್ರೇಲಿಯಾ ಮೂಲಕ ಈ ಹುಳಿಮಿಶ್ರಿತ ಸಿಹಿ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಖನಿಜಗಳಿವೆ. ಒಂದು ಹಣ್ಣನ್ನು ತಿನ್ನುವ ಮೂಲಕ ದಿನದ ಅಗತ್ಯದ 9% ರಷ್ಟು ಪೊಟ್ಯಾಷಿಯಂ, 7% ಮೆಗ್ನೇಶಿಯಂ ಹಾಗೂ 2% ಕ್ಯಾಲ್ಸಿಯಂ ಲಭ್ಯವಾಗುತ್ತದೆ.

ಬೆಣ್ಣೆ ಹಣ್ಣು
ಒಂದು ಕಪ್ ಬೆಣ್ಣೆಹಣ್ಣಿನ ತಿರುಳನ್ನು ಸಂಗ್ರಹಿಸಿ ಸೇವಿಸಿದರೆ ಇದರಿಂದ ದಿನದ ಅಗತ್ಯವಿರುವ ಪ್ರಮಾಣದ 20% ಪೊಟ್ಯಾಶಿಯಂ, 10% ಮೆಗ್ನೀಶಿಯಂ ಮತ್ತು 1% ಕ್ಯಾಲ್ಸಿಯಂ ಲಭ್ಯವಾಗುತ್ತದೆ.

ಕೇಲ್ ಎಲೆಗಳು
ಒಂದು ಕಪ್ ಹಸಿ ಎಲೆಗಳನ್ನು ಸೇವಿಸುವ ಮೂಲಕ ದಿನದ ಅಗತ್ಯವಿರುವ ಪ್ರಮಾಣದ 9% ಪೊಟ್ಯಾಶಿಯಂ, 6% ಮೆಗ್ನೀಶಿಯಂ ಮತ್ತು 9% ಕ್ಯಾಲ್ಸಿಯಂ ಲಭ್ಯವಾಗುತ್ತದೆ.

ಪೀಚ್ ಹಣ್ಣುಗಳು
ಮಧ್ಯಮಗಾತ್ರದ ಒಂದು ಪೀಚ್ ಹಣ್ಣನ್ನು ಸೇವಿಸುವ ಮೂಲಕ ದಿನದ ಅಗತ್ಯವಿರುವ ಪ್ರಮಾಣದ 8% ಪೊಟ್ಯಾಶಿಯಂ, 3% ಮೆಗ್ನೀಶಿಯಂ ಮತ್ತು 1% ಕ್ಯಾಲ್ಸಿಯಂ ಲಭ್ಯವಾಗುತ್ತದೆ

ಬಾಳೆಹಣ್ಣು
ಒಂದು ಬಾಳೆಹಣ್ಣನ್ನು ಯನ್ನು ಸೇವಿಸುವ ಮೂಲಕ ದಿನದ ಅಗತ್ಯವಿರುವ ಪ್ರಮಾಣದ 12% ಪೊಟ್ಯಾಶಿಯಂ, 8% ಮೆಗ್ನೀಶಿಯಂ ಮತ್ತು 1% ಕ್ಯಾಲ್ಸಿಯಂ ಲಭ್ಯವಾಗುತ್ತದೆ

ಬ್ರೋಕೋಲಿ
ಒಂದು ಕಪ್ ಬ್ರೋಕೋಲಿಯನ್ನು ಸೇವಿಸುವ ಮೂಲಕ ದಿನದ ಅಗತ್ಯವಿರುವ ಪ್ರಮಾಣದ 14% ಪೊಟ್ಯಾಶಿಯಂ, 8% ಮೆಗ್ನೀಶಿಯಂ ಮತ್ತು 6% ಕ್ಯಾಲ್ಸಿಯಂ ಲಭ್ಯವಾಗುತ್ತದೆ.

ದೊಣ್ಣೆಮೆಣಸು
ಒಂದು ಕಪ್ ದೊಣ್ಣೆಮೆಣಸಿನ ತುಂಡುಗಳಲ್ಲಿ ದಿನಕ್ಕೆ ಅಗತ್ಯವಿರುವ ಪ್ರಮಾಣದ 9% ಪೊಟ್ಯಾಶಿಯಂ 4% ಮೆಗ್ನೇಶಿಯಂ ಹಾಗೂ 1% ರಷ್ಟು ಕ್ಯಾಲ್ಸಿಯಂ ಇದೆ.



Click it and Unblock the Notifications