Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅತಿಯಾದ ಒತ್ತಡದಲ್ಲಿ ಇದ್ದೀರಾ? ಹಾಗಾದರೆ ಅಸಿಡಿಟಿ ಖಚಿತ
ಹುಟ್ಟು ಮತ್ತು ಸಾವಿನ ನಡುವಿನ ಜೀವನದಲ್ಲಿ ಪ್ರಕೃತಿ ಮೇಲಿರುವ ಪ್ರತಿಯೊಂದು ಜೀವವು ಹಲವಾರು ರೀತಿಯ ಸಮಸ್ಯೆ ಎದುರಿಸಲೇಬೇಕಾಗುತ್ತದೆ. ಅನಾರೋಗ್ಯದಿಂದ ಹಿಡಿದು ಆರ್ಥಿಕ ಸಂಕಷ್ಟ ಸಹಿತ ಪ್ರತಿಯೊಂದು ಮನುಷ್ಯನನ್ನು ಕಾಡುವುದು. ಅದರಲ್ಲೂ ಅನಾರೋಗ್ಯ ದೇಹವನ್ನು ಕಾಡಲು ಆರಂಭಿಸಿದರೆ ಅದರಿಂದ ಮುಕ್ತಿ ಪಡೆಯುವುದು ಕೆಲವು ಸಂದರ್ಭಗಳಲ್ಲಿ ತುಂಬಾ ಕಷ್ಟವಾಗುವುದು. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ' ಎನ್ನುವ ಗಾದೆಯಿದೆ. ಇದು ಅಕ್ಷರಶಃ ನಿಜ.
ನಮ್ಮ ದೇಹವು ಕಾರ್ಯನಿರ್ವಹಿಸಲು ಪ್ರಮುಖವಾಗಿ ಬೇಕಾಗಿರುವುದು ಆಹಾರ. ಇದು ಸರಿಯಾಗಿ ದೇಹಕ್ಕೆ ಸಿಗದೆ ಇದ್ದರೆ ಆಗ ಒಂದೋದೇ ರೋಗಗಳು ಬರುವುದು. ಅದರಲ್ಲೂ ಹೊಟ್ಟೆಗೆ ಸಂಬಂಧಿಸಿದ ಹಲವಾರು ರೋಗಗಳನ್ನು ನಾವು ಕೇವಲ ಅಸಿಡಿಟಿ ಎಂದು ಕಡೆಗಣಿಸಿ ಬಿಡುತ್ತೇವೆ. ಆದರೆ ಇದು ತುಂಬಾ ಅಪಾಯಕಾರಿ.

ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಎಚ್ಚೆತ್ತುಕೊಂಡು ಅದಕ್ಕೆ ಚಿಕಿತ್ಸೆ ಪಡೆಯಬೇಕು. ವಿಳಂಬವಾದರೆ ರೋಗ ಶಮನ ಮಾಡುವುದು ಕಷ್ಟವಾಗಬಹುದು. ವೈದ್ಯಕೀಯ ಕ್ಷೇತ್ರವು ಹೆಚ್ಚು ಮುಂದುವರಿದಿರುವ ಕಾರಣ ದೇಹಕ್ಕೆ ಭಾದಿಸುವ ಹೆಚ್ಚಿನ ರೋಗಗಳು ನಿವಾರಣೆಯಾಗುವುದು.
ಆದರೆ ಕೆಲವು ಮಾತ್ರ ಸಂಪೂರ್ಣವಾಗಿ ಗುಣಮುಖವಾಗದೆ ಜೀವಮಾನವಿಡಿ ಔಷಧಿ ಮೇಲೆ ಅವಲಂಬಿತವಾಗಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಜೀರ್ಣಕ್ರಿಯೆಯು ಸರಾಗವಾಗಿದ್ದರೆ ದೇಹಕ್ಕೂ ಯಾವುದೇ ಸಮಸ್ಯೆಯಾಗದು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರನ್ನು ಕಾಡುವ ಸಮಸ್ಯೆಯೆಂದರೆ ಆಸಿಡಿಟಿ. ಜೀರ್ಣಕ್ರಿಯೆಯ ವೇಳೆ ಅತಿಯಾಗಿ ಜೀರ್ಣಕ್ರಿಯೆ ಆಮ್ಲ ಹೀರಿಕೊಳ್ಳುವುದೇ ಅಸಿಡಿಟಿ. ಗ್ಯಾಸ್, ಅಜೀರ್ಣ, ಎದೆಯುರಿ, ಹೊಟ್ಟೆನೋವು, ವಾಕರಿಕೆ, ಮಲಬದ್ಧತೆ ಇತ್ಯಾದಿಗಳು ಅಸಿಡಿಟಿಯ ಲಕ್ಷಣಗಳಾಗಿವೆ. ಅಸಿಡಿಟಿಗೆ ಮುಖ್ಯ ಕಾರಣ ಆಹಾರ ಕ್ರಮ. ಆದರೆ ಇತ್ತೀಚಿನ ವರದಿಯೊಂದರ ಪ್ರಕಾರ ಒತ್ತಡದಿಂದಲೂ ಅಸಿಡಿಟಿ ಉಂಟಾಗುವುದು. ಅಸಿಡಿಟಿಗೆ ಕಾರಣವಾಗುವ ಅಂಶಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ.
ಒತ್ತಡದಿಂದ ಅಸಿಡಿಟಿ ಹೇಗೆ ಉಂಟಾಗುವುದು
ಪ್ರತಿನಿತ್ಯ ಯಾವುದಾದರೊಂದು ರೀತಿಯ ಒತ್ತಡವು ನಮ್ಮನ್ನು ಕಾಡುವುದು. ಒತ್ತಡದ ಕೆಲಸ, ಕಠಿಣ ಪಾಠ, ಆರ್ಥಿಕ ಸಮಸ್ಯೆ, ಸಂಬಂಧದಲ್ಲಿ ಸಮಸ್ಯೆ ಇತ್ಯಾದಿಗಳು ಒತ್ತಡ ಉಂಟು ಮಾಡುವುದು. ಕೆಲವು ಜನರು ದಿನನಿತ್ಯ ಸಾಮಾನ್ಯಕ್ಕಿಂತ ಹೆಚ್ಚಿನ ಒತ್ತಡಕ್ಕೆ ಒಳಗಾಗುವರು. ಒತ್ತಡವು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ನಮಗೆ ಈಗ ತಿಳಿದಿದೆ. ನೀವು ಹಿಂದೆ ಅತಿಯಾದ ಒತ್ತಡಕ್ಕೆ ಸಿಲುಕಿದ್ದಾಗ ನಿಮಗೆ ತಲೆನೋವು, ನಿಶ್ಯಕ್ತಿ, ವಾಕರಿಕೆ ಇತ್ಯಾದಿಯ ಅನುಭವವಾಗಿದೆಯಾ?
ಒತ್ತಡವು ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ ಮತ್ತು ಕ್ಯಾನ್ಸರ್ ನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಒತ್ತಡವು ಕೊರ್ಟಿಸೊಲ್ ಎನ್ನುವ ಹಾರ್ಮೋನ್ ಬಿಡುಗಡೆ ಮಾಡುತ್ತದೆ. ಇದರಿಂದ ಕೆಲವೊಂದು ರೋಗಗಳು ಬರುವುದು. ಅಸಿಡಿಟಿಗೆ ಪ್ರಮುಖ ಕಾರಣವೇ ಒತ್ತಡ.
ಆರೋಗ್ಯವಂತ ಜೀವನಶೈಲಿ ನಡೆಸಿಕೊಂಡು ಹೋಗುತ್ತಿರುವ ಜನರಲ್ಲೂ ಒತ್ತಡದಿಂದ ಅಸಿಡಿಟಿ ಉಂಟಾಗುವುದು ಎಂದು ಇಂಟರ್ನಲ್ ಮೆಡಿಸಿನ್ ಮ್ಯಾಗಜಿನ್ ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಅಧ್ಯಯನ ವರದಿಯು ಹೇಳಿದೆ. ದೀರ್ಘಕಾಲದ ಒತ್ತಡದಿಂದ ಬಳಲುತ್ತಿರುವ ವ್ಯಕ್ತಿಯ ದೇಹದಲ್ಲಿ ಕೊರ್ಟಿಸಾಲ್ ಹಾರ್ಮೋನು ಮಟ್ಟವು ಅತಿಯಾಗಿ ಒತ್ತಡದ ಆಮ್ಲ ಉಂಟು ಮಾಡಲಿದೆ. ಇದರಿಂದ ಅಸಿಡಿಟಿ ಉಂಟಾಗುವುದು. ಒತ್ತಡವು ಅಸಿಡಿಟಿ ಮೇಲೆ ಪರಿಣಾಮ ಬೀರುವುದು ಎಂದು ತಿಳಿದುಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

