Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಫ್ಯಾಷನ್ ಲೋಕಕ್ಕೆ ಅನುಷ್ಕಾ ಶರ್ಮ ಪರಿಚಯಿಸಿದ ವೆಂಡೆಲ್ ಇನ್ನಿಲ್ಲ
ಬಾಲಿವುಡ್ನ ಪ್ರಸಿದ್ಧ ಫ್ಯಾಷನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ 59ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಫೆ. 12ಕ್ಕೆ ವೆಂಡೆಲ್ ರಾಡ್ರಿಕ್ಸ್ ಕೊನೆಯುಸಿರು ಎಳೆದಿದ್ದಾರೆ. ಫ್ಯಾಷನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ವೆಂಡೆಲ್ ಇದೀಗ ನೆನಪು ಮಾತ್ರ.

ಪದ್ಮಶ್ರೀ ಪುರಸ್ಕೃತ ವೆಂಡೆಲಾ IGEDO (The world's largest garment fair)ಗೆ ಆಹ್ವಾನ ಸಿಕ್ಕಂತಹ ಮೊದಲ ಭಾರತೀಯ ಫ್ಯಾಷನ್ ಡಿಸೈನರ್ ಕೂಡ ಹೌದು. ಫ್ಯಾಷನ್ ಲೋಕದಲ್ಲಿ ಹಲವಾರು ಕ್ರಿಯೇಟಿವ್ ಐಡಿಯಾಗಳಿಂದ ಸದ್ದು ಮಾಡುತ್ತಿದ್ದ ವೆಂಡೆಲಾ ಅವರ ಸಾಂಪ್ರದಾಯಿಕ ಗೋನ್ ಕುನ್ಬಿ ಸ್ಯಾರಿ ಎಂದೆಂದಿಗೂ ಫ್ಯಾಷನ್ ಪ್ರಿಯರ ಫೆವರೆಟ್ ಅಗಿದೆ. ಇವರು 2017ರಲ್ಲಿ ದಪ್ಪಗಿನ ಮಹಿಳೆಯರಿಗಾಗಿ ಹಲವಾರು ಡಿಸೈನರ್ ಡ್ರೆಸ್ ಮಾಡಿ ಪ್ರಮೋಟ್ ಮಾಡುವ ಮೂಲಕ ಗಮನ ಸೆಳೆದಿದ್ದರು.
ವೆಂಡೆಲ್ ರಾಡ್ರಿಕ್ಸ್ ಗೆ ಗೋವಾದಲ್ಲಿ ಕಾಸ್ಟ್ಯೂಮ್ ಮ್ಯೂಸಿಯಂ ನಿರ್ಮಿಸಬೇಕೆಂಬ ಕನಸಿತ್ತು. ಗೋವಾ ಕಾಸ್ಟ್ಯೂಮ್ ಮತ್ತು ಗೋವಾ ಫ್ಯಾಶನ್ ಕುರಿತಾದ ಮ್ಯೂಸಿಯಂ ನಿರ್ಮಾಣ ಕೆಲಸ ಭರದಿಂದ ಸಾಗುತ್ತಿತ್ತು. ಅದು ಪೂರ್ಣಗೊಳ್ಳುವ ಮುನ್ನವೇ ವೆಂಡೆಲ್ ರಾಡ್ರಿಕ್ಸ್ ನಿಧನ ಹೊಂದಿದ್ದಾರೆ.
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಮಾಡೆಲಿಂಗ್ ಜಗತ್ತಿಗೆ ಪರಿಚಯಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ. ಬೆಂಗಳೂರಿನ ಶಾಪ್ವೊಂದರಲ್ಲಿ ಅನುಷ್ಕಾರನ್ನು ನೋಡಿದ ವೆಂಡೆಲಾ ಆಕೆಗೆ ಮಾಡೆಲಿಂಗ್ ಜಗತ್ತಿಗೆ ಬರುವಂತೆ ಸಲಹೆ ನೀಡುತ್ತಾರೆ. ಇವರ ಮುಖಾಂತರ ಅನುಷ್ಕಾ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ.
ಲೈಂಗಿಕ ಅಲ್ಪ ಸಂಖ್ಯಾತರ ಹಕ್ಕುಗಳಿಗಾಗಿ ಹಲವಾರು ಹೋರಾಟ ಮಾಡಿದ್ದಾರೆ. ಇವರ ಸಮಾಜ ಸೇವೆಯನ್ನು ಗುರುತಿಸಿ ಪದ್ಮಶ್ರೀ ನೀಡಿ ಗೌರವಿಸಲಾಯಿತು.
ನಟನ ಅಕಾಲಿಕ ಮರಣಕ್ಕೆ ಬಾಲಿವುಡ್ ಮಂದಿ ಕಂಬನಿ ಮಿಡಿದ್ದಾರೆ.



Click it and Unblock the Notifications