Latest Updates
-
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್!
ತ್ವಚೆಯ ಸಾಮಾನ್ಯ ಸಮಸ್ಯೆಗಳಿಗೆ ಇಲ್ಲಿವೆ ನೈಸರ್ಗಿಕ ಮನೆಮದ್ದುಗಳು
ನಾಗರೀಕತೆ ಬೆಳೆಯುತ್ತಿದ್ದಂತೆಯೇ ಇದರ ಕೊಡುಗೆಗಳಾದ ನಗರೀಕರಣ, ಪ್ರದೂಷಣೆ, ಹೊಗೆ ಮೊದಲಾದವು ಆರೋಗ್ಯದ ಸಹಿತ ಸೌಂದರ್ಯವನ್ನೂ ಬಾಧಿಸುತ್ತಿದೆ. ಈ ಪ್ರದೂಷಿತ ಹವೆಯಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಮುಖ್ಯ ಸವಾಲಾಗಿದೆ. ಜೊತೆಗೇ ಸೂರ್ಯನ ಪ್ರಖರ ಬೆಳಕು ತ್ವಚೆಯ ತೊಂದರೆಯನ್ನು ಇನ್ನಷ್ಟು ಉಲ್ಬಣಿಸುತ್ತಿವೆ.

ತ್ವಚೆಗೆ ಎದುರಾದ ಯಾವುದೇ ತೊಂದರೆಯ ಪರಿಹಾರಕ್ಕಾಗಿ ಚರ್ಮವೈದ್ಯರ ಸಲಹೆ ಪಡೆಯುವುದು ಒಳ್ಳೆಯದೇ ಹೌದು. ಆದರೆ ನಿಸರ್ಗದ ನೆರವು ಪಡೆಯುವುದು ಹೆಚ್ಚು ಪರಿಣಾಮಕಾರಿ. ಬನ್ನಿ, ತ್ವಚೆಗೆ ಎದುರಾಗುವ ಸಾಮಾನ್ಯ ತೊಂದರೆಗಳಿಗೆ ಯಾವ ಬಗೆಯ ನೈಸರ್ಗಿಕ ಆರೈಕೆಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ:

ತ್ವಚೆಯಲ್ಲಿ ಗಾಢವಾದ ಕಲೆಗಳಿದ್ದರೆ
ಇವು ತೊಲಗಿಸಲು ಕಷ್ಟಕರವಾದ ಕಲೆಗಳು ಎಂಬುದು ನಿಮಗೂ ಗೊತ್ತು. ಆದರೆ ಇದಕ್ಕೊಂದು ಸರಳ ಉಪಾಯವಿದೆ ಎಂದು ಅರಿತರೆ ನಿಮಗೆ ಹರ್ಷವಾಗಬಹುದು. ಇದಕ್ಕೆ ಮೊಸರನ್ನು ಉಪಯೋಗಿಸಿ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಒಂದು ದೊಡ್ಡ ಚಮಚ ಗಟ್ಟಿಮೊಸರನ್ನು ಮುಖದ ಮೇಲೆ ದಪ್ಪನಾಗಿ ಹಚ್ಚಿಕೊಳ್ಳಿ ಮತ್ತು ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ಸತತವಾಗಿ ಹದಿನೈದು ದಿನ ಮುಂದುವರೆಸಿ.

ತ್ವಚೆ ಕಾಂತಿಯುಕ್ತವಾಗಿರಬೇಕೆಂದರೆ, ಹೀಗೆ ಮಾಡಿ
ಸಾಮಾನ್ಯವಾಗಿ ಅಕ್ರೋಟನ್ನು ಒಡೆದು ತಿರುಳನ್ನು ತಿಂದ ಬಳಿಕ ಇದರ ಕವಚವನ್ನು ಎಸೆಯುತ್ತೇವೆ. ಆದರೆ ಇದು ತ್ವಚೆಯ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಒಂದು ತುಂಡು ಕವಚವನ್ನು ಕುಟ್ಟಿ ಪುಡಿಮಾಡಿ ಮಿಕ್ಸಿಯಲ್ಲಿ ಒಣದಾಗಿಯೇ ನುಣ್ಣಗೆ ಪುಡಿಮಾಡಿಕೊಳ್ಳಿ. ಇದಕ್ಕೆ ಸಮಪ್ರಮಾಣದಲ್ಲಿ ಪಪ್ಪಾಯಿ ಹಣ್ಣಿನ ತಿರುಳು ಮತ್ತು ಕೊಂಚ ಲಿಂಬೆರಸ ಸೇರಿಸಿ ಮಿಶ್ರಣ ಮಾಡಿ. ಈ ಲೇಪನದಿಂದ ಮುಖವನ್ನು ನಯವಾಗಿ ತಿಕ್ಕಿಕೊಳ್ಳುತ್ತಾ ಮಸಾಜ್ ಮಾಡಿಕೊಳ್ಳಿ. ಈ ಮೂಲಕ ತ್ವಚೆಗೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳು ನಿವಾರಣೆಯಾಗಿ ಕಳೆಗುಂದಿದ್ದ ತ್ವಚೆ ಕಾಂತಿಯುಕ್ತವಾಗುತ್ತದೆ. ಈ ಕವಚದಲ್ಲಿರುವ ಸತು, ಕಬ್ಬಿಣ ಮತ್ತು ಒಮೆಗಾ 3 ಕೊಬ್ಬಿನ ಆಮ್ಲಗಳು ಚರ್ಮದ ಸೆಳೆತವನ್ನು ಹೆಚ್ಚಿಸಿ ಕಾಂತಿಯನ್ನು ಹೆಚ್ಚಿಸುತ್ತವೆ. ಈ ಕಾರ್ಯಕ್ಕಾಗಿ ನಿತ್ಯವೂ ನಾಲ್ಕರಿಂದ ಆರು ಅಕ್ರೋಟುಗಳ ಅಗತ್ಯವಿದ್ದು ಇದರ ತಿರುಳು ನಿಮ್ಮ ಉಪಾಹಾರದ ಅವಶ್ಯಕತೆಯನ್ನು ಪೂರೈಸಿದರೆ ಕವಚ ನಿಮ್ಮ ಸೌಂದರ್ಯವನ್ನು ಕಾಪಾಡುತ್ತದೆ.

ಬಿಸಿಲಿಗೆ ಒಡ್ಡಿದ್ದ ಭಾಗ ಕಪ್ಪಗಾಗಿದ್ದರೆ
ಸಾಮಾನ್ಯವಾಗಿ ಬೇಸಿಗೆಯ ಪ್ರಖರ ಬಿಸಿಲಿಗೆ ಒಡ್ಡಿದ ತ್ವಚೆಯ ಯಾವುದೇ ಭಾಗ ಗಮನಾರ್ಹವಾಗಿ ಗಾಢವಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಒಂದು ದೊಡ್ಡಚಮಚ ತಾಜಾ ಸೌತೆಕಾಯಿಯ ರಸ, ಒಂದು ದೊಡ್ಡ ಚಮಚ ಲಿಂಬೆರಸ ಮತ್ತು ಒಂದು ದೊಡ್ಡ ಚಮಚ ಗುಲಾಬಿ ನೀರನ್ನು ಬೆರೆಸಿ. ಈ ದ್ರಾವಣವನ್ನು ಹತ್ತಿಯುಂಡೆಯಿಂದ ಅದ್ದಿ ಬಿಸಿಲಿಗೆ ಒಡ್ಡಿದ್ದ ಭಾಗವನ್ನು ನಿಯಮಿತವಾಗಿ ಒರೆಸಿಕೊಳ್ಳುತ್ತಿದ್ದರೆ ಶೀಘ್ರವೇ ಸಹಜವರ್ಣ ಮರಳುತ್ತದೆ.

ಒಂದು ವೇಳೆ ಒಣಚರ್ಮ ನಿಮ್ಮದಾಗಿದ್ದರೆ
ಕೊಬ್ಬರಿ ಎಣ್ಣೆ ಅತ್ಯುತ್ತಮವಾದ ನೈಸರ್ಗಿಕ ತೇವಕಾರಕವಾಗಿದೆ. ಕೊಂಚ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿಮಾಡಿ ಈ ಎಣ್ಣೆಯಿಂದ ಕುತ್ತಿಗೆಯ ಭಾಗದಲ್ಲಿ ಕೆಳಗಿನಿಂದ ಮೇಲೆ ಬರುವಂತೆ ನೇವರಿಸಿಕೊಳ್ಳುತ್ತಾ ಮಸಾಜ್ ಮಾಡಿಕೊಳ್ಳಿ. ಮುಖದ ಮೇಲೆ ವೃತ್ತಾಕಾರದಲ್ಲಿ ಸುಮಾರು ಐದು ನಿಮಿಷ ಮಸಾಜ್ ಮಾಡಿ. ಒಂದು ವೇಳೆ ಮುಖದಲ್ಲಿ ಸತ್ತ ಜೀವಕೋಶಗಳಿದ್ದರೆ ಕೊಬ್ಬರಿ ಎಣ್ಣೆಗೆ ಕೊಂಚ ಸಕ್ಕರೆಯನ್ನು ಬೆರೆಸಿ ಮಸಾಜ್ ಮಾಡಿಕೊಳ್ಳಿ. ಈ ಕಾರ್ಯವನ್ನು ರಾತ್ರಿ ಮಲಗುವ ಮುನ್ನ ನಿರ್ವಹಿಸಿ ಪವಡಿಸಿ. ಬೆಳಿಗ್ಗೆದ್ದ ಬಳಿಕ ತೊಳೆದುಕೊಳ್ಳಿ. ಕೊಬ್ಬರಿ ಎಣ್ಣೆಯಲ್ಲಿರುವ ಫಿನಾಲಿಕ್ ಸಂಯುಕ್ತಗಳು ಚರ್ಮದ ಆಳಕ್ಕೆ ಇಳಿದು ಕೊಬ್ಬಿನಾಮ್ಲಗಳನ್ನು ಒದಗಿಸಿ ಆರೈಕೆ ನೀಡುವ ಮೂಲಕ ತ್ವಚೆ ಅತ್ಯುತ್ತಮ ತೇವವನ್ನು ಪಡೆಯುತ್ತದೆ ಹಾಗೂ ಒಣಚರ್ಮದ ತೊಂದರೆ ಇಲ್ಲವಾಗುತ್ತದೆ.

ಒಂದು ವೇಳೆ ನಿಮ್ಮದು ಎಣ್ಣೆಚರ್ಮವಾಗಿದ್ದರೆ
ಒಂದು ದೊಡ್ಡ ಚಮಚ ಲಿಂಬೆರಸಕ್ಕೆ ಎರಡು ದೊಡ್ಡ ಚಮಚ ನೀರು ಬೆರೆಸಿ ಈ ದ್ರಾವಣವನ್ನು ಹತ್ತಿಯುಂಡೆಯಿಂದ ಮುಖ, ಕುತ್ತಿಗೆಗೆ ಹಚ್ಚಿಕೊಂಡು ಸುಮಾರು ಏಳರಿಂದ ಹತ್ತು ನಿಮಿಷ ಹಾಗೇ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಮೊಡವೆಗಳ ತೊಂದರೆ ಇದ್ದರೆ
ಹದಿಹರೆಯದಲ್ಲಿ ಈ ತೊಂದರೆ ಸಾಮಾನ್ಯವಾಗಿ ಕಾಡುತ್ತದೆ. ಇದಕ್ಕಾಗಿ ಅರಿಶಿನ ಪುಡಿ ಮತ್ತು ಗುಲಾಬಿ ನೀರನ್ನು ಬೆರೆಸಿ ದಪ್ಪನೆಯಲೇಪನ ತಯಾರಿಸಿ. ಈ ಲೇಪನವನ್ನು ದಪ್ಪನಾಗಿ ಮೊಡವೆಯ ಮೇಲೆ ಹಚ್ಚಿಕೊಂಡು ಸುಮಾರು ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಅರಿಶಿನದಲ್ಲಿರುವ ಪ್ರತಿಜೀವಕ ಗುಣ ಬ್ಯಾಕ್ಟೀರಿಯಾಗಳನ್ನು ನಿವಾರಿಸಿದರೆ ಗುಲಾಬಿನೀರಿನಲ್ಲಿರುವ ಶಮನಕಾರಿ ಗುಣ ಇಲ್ಲಿ ಹೆಚ್ಚು ತಂಪಾಗಿಸುತ್ತದೆ. ಆದರೆ ತೊಳೆದುಕೊಂಡ ಕನಿಷ್ಟ ಆರು ಘಂಟೆಗಳವರೆಗಾದರೂ ಈ ಭಾಗದ ಮೇಲೆ ಯಾವುದೇ ಮೇಕಪ್ ಅಥವಾ ಬೇರಾವುದೇ ಪ್ರಸಾದನವನ್ನು ಹಚ್ಚಬಾರದು.



Click it and Unblock the Notifications