Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತ್ವಚೆಯನ್ನು ತಂಪಾಗಿಸುವ 'ಕಲ್ಲಂಗಡಿ ಹಣ್ಣಿನ' ಫೇಸ್ ಪ್ಯಾಕ್
ಕಲ್ಲಂಗಡಿ ಕೇವಲ ರಸಭರಿತ ಹಣ್ಣು ಮಾತ್ರವಲ್ಲ, ಇದರ ವಿಟಮಿನ್ನುಗಳು ಮತ್ತು ಇತ ಪೋಷಕಾಂಶಗಳಲ್ಲಿರುವ ಔಷಧೀಯ ಗುಣಗಳು, ವಿಶೇಷವಾಗಿ ತ್ವಚೆಗೆ ಉತ್ತಮವಾಗಿರುವ ಗುಣಗಳು ಇರುವುದನ್ನು ಕಂಡರೆ ಬೆರಗಾಗುವುದು ಖಚಿತ....
ಬೇಸಿಗೆಯಲ್ಲಿ ತಿನ್ನಲು ಇಷ್ಟಪಡುವ ಹಣ್ಣುಗಳಲ್ಲಿ ಕಲ್ಲಂಗಡಿಗೆ ಪ್ರಥಮ ಸ್ಥಾನ. ಏಕೆಂದರೆ ಇದರಲ್ಲಿರುವ ನೀರು ಗರಿಷ್ಠ ಮಟ್ಟದಲ್ಲಿದ್ದು (ಶೇ 93) ಇತರ ಹಣ್ಣುಗಳಿಗಿಂತಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ನೀರನ್ನು ಒದಗಿಸುತ್ತದೆ. ಇದು ಕೇವಲ ರಸಭರಿತ ಹಣ್ಣು ಮಾತ್ರವಲ್ಲ, ಇದರ ವಿಟಮಿನ್ನುಗಳು ಮತ್ತು ಇತ ಪೋಷಕಾಂಶಗಳಲ್ಲಿರುವ ಔಷಧೀಯ ಗುಣಗಳು, ವಿಶೇಷವಾಗಿ ತ್ವಚೆಗೆ ಉತ್ತಮವಾಗಿರುವ ಗುಣಗಳು ಇರುವುದನ್ನು ಕಂಡರೆ ಬೆರಗಾಗುವುದು ಖಚಿತ.
ಕಲ್ಲಂಗಡಿ ಎಂದರೆ ತಿನ್ನಲು ಮಾತ್ರವೇ ಇರುವ ಹಣ್ಣು ಎಂದುಕೊಂಡಿದ್ದವರಿಗೆ ಇದೊಂದು ಉತ್ತಮ ಸೌಂದರ್ಯವರ್ಧಕವೂ ಆಗಬಹುದು ಎಂಬ ಕಲ್ಪನೆಯೇ ಇರಲಿಕ್ಕಿಲ್ಲ. ಕಲ್ಲಂಗಡಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ತ್ವಚೆಯ ಸೆಳೆತವನ್ನು ಹೆಚ್ಚಿಸಲು ಸಮರ್ಥವಾಗಿದ್ದು ತನ್ಮೂಲಕ ತ್ವಚೆ ವೃದ್ಧಾಪ್ಯದ ಸೂಚನೆಗಳನ್ನು ಸೂಚಿಸುವ ಸಮಯವನ್ನು ತಡವಾಗಿಸುತ್ತದೆ. ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣು
ಅಲ್ಲದೇ ಇವು ನೈಸರ್ಗಿಕ ಬಿಳಿಚುಕಾರಕವಾಗಿದ್ದು ಕಲೆಗಳನ್ನು ನಿವಾರಿಸುವಲ್ಲಿ ನೆರವಾಗುತ್ತವೆ ಹಾಗೂ ಸತ್ತ ಜೀವಕೋಶಗಳನ್ನು ಸಡಿಲಿಸಿ ದೂರಾಗಿಸಲೂ ನೆರವಾಗುತ್ತವೆ. ಇದರೊಂದಿಗೆ ಚರ್ಮಕ್ಕೆ ಅಗತ್ಯವಾದ ಆರ್ದ್ರತೆಯನ್ನು ನೀಡಿ ತಾರುಣ್ಯವನ್ನು ಪ್ರಕಟಿಸುತ್ತದೆ. ಬನ್ನಿ, ಕಲ್ಲಂಗಡಿಯನ್ನು ಸೌಂದರ್ಯವರ್ಧಕವಾಗಿ ಹೇಗೆ ಬಳಸಬಹುದು ಎಂಬುದನ್ನು ನೋಡೋಣ....

ತಾರುಣ್ಯದ ತ್ವಚೆಗಾಗಿ
ಒಂದು ಕಪ್ ಕಲ್ಲಂಗಡಿ ಹಣ್ಣಿನ ತಿರುಳನ್ನು ಸಂಗ್ರಹಿಸಿ, ಬೀಜ ನಿವಾರಿಸಿ. ಈ ತಿರುಳನ್ನು ನಯವಾಗಿ ಅರೆದು ದಪ್ಪನೆಯ ಲೇಪನವಾಗಿಸಿ ಈಗತಾನೇ ತೊಳೆದುಕೊಂಡ ಮುಖ ಮತ್ತು ಕುತ್ತಿಗೆಗೆ ಹಚ್ಚಿ. ಈ ಮುಖಲೇಪದಿಂದ ತ್ವಚೆಗೆ ತಣ್ಣನೆಯ ಆರಾಮ ದೊರಕುವುದರ ಜೊತೆಗೇ ಸೂಕ್ಷ್ಮ ರಂಧ್ರಗಳಲ್ಲಿ ಸಿಲುಕಿದ್ದ ಧೂಳು ಮತ್ತು ಇತರ ಪ್ರದೂಷಣಾ ಕಣಗಳನ್ನು ನಿವಾರಿಸಬಹುದು. ಈ ಮೂಲಕ ತ್ವಚೆಯ ಆಳಕ್ಕೆ ಆರ್ದ್ರತೆ ದೊರೆತು ಚರ್ಮದ ಸೆಳೆತ ಹೆಚ್ಚುತ್ತದೆ ಹಾಗೂ ತಾರುಣ್ಯದ ತ್ವಚೆ ನಿಮ್ಮದಾಗುತ್ತದೆ. ಒಂದು ವೇಳೆ ಬಿಸಿಲಿನಲ್ಲಿ ಚರ್ಮ ತೀರಾ ಒಣಗಿದ್ದರೆ ಕೆಲವು ಕಲ್ಲಂಗಡಿ ತುಂಡುಗಳನ್ನು ಫ್ರಿಜ್ಜಿನಲ್ಲಿಟ್ಟು ಘನೀಕರಿಸಿ. ಈ ತುಂಡಿನಿಂದ ಮುಖವನ್ನು ಹೆಚ್ಚಿನ ಒತ್ತಡವಿಲ್ಲದೇ ಉಜ್ಜಿಕೊಳ್ಳುತ್ತಾ ಬಂದರೆ ಸೂಕ್ಷ್ಮರಂಧ್ರಗಳನ್ನು ತಕ್ಷಣಎ ತೆರೆದು ತಾಜಾತನವನ್ನು ಪಡೆಯಬಹುದು.

ಮೃದು ಮತ್ತು ಕಾಂತಿಯುಕ್ತ ತ್ವಚೆಗಾಗಿ
ಒಂದು ಕಪ್ ನಲ್ಲಿ ಕೊಂಚ ಬೀಜರಹಿತ ಕಲ್ಲಂಗಡಿ ತಿರುಳನ್ನು ಸಮಪ್ರಮಾಣದ ಮೊಸರಿನೊಂದಿಗೆ ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಮುಖ, ಕುತ್ತಿಗೆಗೆಗಳಿಕೆ ಕನಿಷ್ಟ ಹತ್ತು ನಿಮಿಷ ಹಚ್ಚಿ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪನದಿಂದ ಚರ್ಮ ಕಳೆದುಕೊಂಡಿದ್ದ ಆರ್ದತೆಯನ್ನು ಪಡೆಯಲು ಸಾಧ್ಯ. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಮತ್ತು ಇತರ ಕಿಣ್ವಗಳು ಚರ್ಮಕ್ಕೆ ಅಂಟಿಕೊಂಡಿದ್ದ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲು ನೆರವಾಗುತ್ತದೆ. ವಿಶೇಷವಾಗಿ ಚರ್ಮದ ಸ್ವಚ್ಛತೆಗೆ ಈ ಲೇಪನ ಹೆಚ್ಚು ಪರಿಣಾಮಕಾರಿಯಾಗಿದೆ. ಕಲ್ಲಂಗಡಿ: ಗರ್ಭಿಣಿಯರ ಆರೋಗ್ಯಕ್ಕೆ ಪರ್ಫೆಕ್ಟ್ ಹಣ್ಣು

ಚರ್ಮದ ನೆರಿಗೆ ನಿವಾರಿಸಲು
ಕಲ್ಲಂಗಡಿಯಲ್ಲಿರುವ ಆಂಟಿ ಆಕ್ಸಿಡೆಂಡುಗಳು ನೆರಿಗೆಗೆ ಕಾರಣವಾಗುವ ಫ್ರೀ ರ್ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ಚರ್ಮದಲ್ಲಿ ವೃದ್ದಾಪ್ಯದ ಚಿಹ್ನೆಗಳನ್ನು ದೂರಾಗಿಸಲು ನೆರವಾಗುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣಿನ ರಸ ಮತ್ತು ಬೆಣ್ಣೆಹಣ್ಣಿನ (avocado) ತಿರುಳನ್ನು ಬೆರೆಸಿ ನಯವಾದ ಲೇಪನ ತಯಾರಿಸಿ. ಈ ಲೇಪನವನ್ನು ಮುಖಕ್ಕೆ ತೆಳುವಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನ ನೆರಿಗೆಗಳನ್ನು ನಿವಾರಿಸಲು ಅತ್ಯಂತ ಪ್ರಬಲ ವಿಧಾನವಾಗಿದ್ದು ಬೇಸಿಗೆಯಲ್ಲಿ ಅನುಸರಿಸಬಹುದಾದ ಆಯ್ಕೆಯಾಗಿದೆ. ಬಿರು ಬೇಸಿಗೆಗೆ ತಂಪಾದ ಮಸಾಲಾ ಕಲ್ಲಂಗಡಿ ಜ್ಯೂಸ್!

ಸತ್ತ ಜೀವಕೋಶಗಳನ್ನು ನಿವಾರಿಸಲು
ಬೀಜರಹಿತ ಕಲ್ಲಂಗಡಿ ಹಣ್ಣಿನ ತಿರುಳನ್ನು ತುರಿದು ಒಂದು ಚಿಟಿಕೆಯಷ್ಟು ಕಡ್ಲೆಹಿಟ್ಟು ಬೆರೆಸಿ. ಈ ತಿರುಳನ್ನು ದಪ್ಪನಾಗಿ ಅರೆದು ಮುಖದ ಮೇಲೆ ದಪ್ಪನಾಗಿಯೇ ಹಚ್ಚಿ ಸುಮಾರು ಹದಿನೈದು ನಿಮಿಷದ ಬಳಿಕ ನಯವಾಗಿ ಉಜ್ಜಿಕೊಂಡು ತೊಳೆದುಕೊಳ್ಳಿ. ಇದರಿಂದ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ!



Click it and Unblock the Notifications