Just In
- 1 hr ago ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- 2 hrs ago ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- 4 hrs ago ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- 4 hrs ago ಶನಿಯ ನಕ್ಷತ್ರ ಬದಲಾವಣೆ: ಅಕ್ಟೋಬವರೆಗೆ ಈ 3 ರಾಶಿಯವರು ಇದರ ಉತ್ತಮ ಫಲ ಪಡೆಯುವಿರಿ
Don't Miss
- Movies 'ರಾಬರ್ಟ್' ಚಿತ್ರದಲ್ಲಿ ನನಗಿಷ್ಟವಾದ ಪಾತ್ರ ಕಿತ್ಕೊಂಡ್ರು ಅಂತ ಇವತ್ತಿಗೂ ಬೇಸರವಿದೆ": ದರ್ಶನ್
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಖದ ಕಾಂತಿಗೆ ನಿಂಬೆ ರಸದ ಆರೈಕೆ
ಪುರಾತನ ಕಾಲದಿಂದಲೂ ಸೌಂದರ್ಯದ ಆರೈಕೆಯಲ್ಲಿ ಗಣನೀಯವಾಗಿ ಸಹಾಯ ಮಾಡುತ್ತಿರುವ ನೈಸರ್ಗಿಕ ಘಟಕ ಎಂದರೆ ನಿಂಬೆ ಹಣ್ಣು. ಇದರಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಸಿಡ್ ಸಮೃದ್ಧವಾಗಿರುವುದರಿಂದ ತ್ವಚೆಯನ್ನು ಶುದ್ಧಗೊಳಿಸುವುದು, ಕಲೆಯನ್ನು ನಿವಾರಿಸುವುದು ಹಾಗೂ ತಾಜಾ ತನದಿಂದ ಸದಾ ಕಂಗೊಳಿಸುವಂತೆ ಮಾಡುತ್ತದೆ. ಇದರಲ್ಲಿರುವ ಸಿಟ್ರಿಕ್ ಆಸಿಡ್ ಗುಣವು ಚರ್ಮವನ್ನು ಬ್ಲೀಚ್ ಮಾಡುವ ಸಾಮಥ್ರ್ಯವನ್ನು ಪಡೆದುಕೊಂಡಿದೆ. ಅಲ್ಲದೆ ಸೂರ್ಯನ ಕಿರಣಗಳಿಂದ ಮಂಕಾದ ತ್ವಚೆಗೆ ಪುನಃ ಜೀವ ತುಂಬಿ, ಆಕರ್ಷಿತಗೊಳ್ಳುವಂತೆ ಮಾಡುತ್ತದೆ.
ಸೂರ್ಯನ ಕಿರಣದಿಂದ ಹಾಗೂ ಧೂಳಿನಿಂದ ತ್ವಚೆಯು ಬಹು ಬೇಗ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಚಳಿಗಾಲದ ವಾತಾವರಣದಲ್ಲಿ ಶುಷ್ಕತೆಯೂ ಸೇರಿಕೊಂಡು ಬಹುಬೇಗ ಒಣಗಿದ ಚರ್ಮದಂತೆ ಶೋಭಿತವಾಗುವುದು. ಈ ಸಮಸ್ಯೆಗಳ ನಿವಾರಣೆಗಾಗಿ ಅನೇಕರು ವಿವಿಧ ಬಗೆಯ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಇದು ತಾತ್ಕಾಲಿಕವಾಗಿ ಸುಂದರವಾಗಿರುವಂತೆ ಕಾಣಿಸುತ್ತದೆಯಾದರೂ ಚರ್ಮದ ಆರೋಗ್ಯ ಇನ್ನಷ್ಟು ಹದಗೆಡಬಹುದು.
ಕಾಡುವ ಸನ್ ಟ್ಯಾನ್ ಸಮಸ್ಯೆಗೆ ಮಜ್ಜಿಗೆ-ಓಟ್ಸ್ ಲೇಪನ
ಯಾವುದೇ ಖರ್ಚಿಲ್ಲದೆ ಮನೆಯಲ್ಲಿಯೇ ಇರುವ ನಿಂಬೆ ಹಣ್ಣನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡಬಹುದು. ಇದರೊಂದಿಗೆ ಇನ್ನಿತರ ನೈಸರ್ಗಿಕ ಉತ್ಪನ್ನಗಳನ್ನು ಬೆರೆಸಿದರೆ ಇನ್ನಷ್ಟು ಪರಿಣಾಮಕಾರಿಯಾದ ಆರೈಕೆಯನ್ನು ಮಾಡಬಹುದು. ಹಾಗಾದರೆ ಆ ಆರೈಕೆಯ ವಿಧಾನಗಳು ಯಾವವು? ಎನ್ನುವ ನಿಮ್ಮ ಪ್ರಶ್ನೆಗೆ ಸೂಕ್ತ ವಿವರಣೆಯು ಮುಂದಿನ ಭಾಗದಲ್ಲಿ ನೀಡಲಾಗಿದೆ...
ಸೌತೆಕಾಯಿಯೊಂದಿಗೆ ನಿಂಬೆ ರಸ
ಒಂದು ಟೇಬಲ್ ಚಮಚ ಸೌತೆಕಾಯಿ ಪೇಸ್ಟ್ನೊಂದಿಗೆ ಒಂದು ಟೀ ಚಮಚ ನಿಂಬೆ ರಸ ಸೇರಿಸಿ.
ಸರಿಯಾಗಿ ತ್ವಚೆಯ ಮೇಲೆ ಅನ್ವಯಿಸಿ.
ಇದನ್ನು ತ್ವಚೆ ಹೀರಿಕೊಳ್ಳಲು 10 ನಿಮಿಷಗಳಕಾಲ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ವಾರದಲ್ಲಿ ಕಡಿಮೆ ಎಂದರೂ 3-4 ಸಲ ಅನ್ವಯಿಸಿದರೆ ಸೂರ್ಯನ ಕಿರಣದಿಂದ ಸುಟ್ಟ ಚರ್ಮವು ಬಹು ಬೇಗ ಹೊಳಪನ್ನು ಪಡೆದುಕೊಳ್ಳುತ್ತದೆ.
ಅರಿಶಿನದ ಜೊತೆ ನಿಂಬೆ ರಸ
ಒಂದು ಟೀ ಚಮಚ ನಿಂಬೆ ರಸಕ್ಕೆ ಚಿಟಕೆ ಅರಿಶಿನ ಹಾಗೂ 1/2 ಟೀ ಚಮಚ ಗುಲಾಬಿ ನೀರನ್ನು ಸೇರಿಸಿ.
ಮಿಶ್ರಣವನ್ನು ತ್ವಚೆಯ ಮೇಲೆ ಅನ್ವಯಿಸಿ.
5-10 ನಿಮಿಷದ ಬಳಿಕ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಬಾರಿ ಈ ವಿಧಾನವನ್ನು ಅನ್ವಯಿಸಿ.
ಮಜ್ಜಿಗೆಯೊಂದಿಗೆ ನಿಂಬೆ ರಸ
ಒಂದು ಟೀ ಚಮಚ ನಿಂಬೆ ರಸಕ್ಕೆ 2 ಟೀ ಚಮಚ ಮಜ್ಜಿಗೆಯನ್ನು ಸೇರಿಸಿ.
ಇದನ್ನು ಮುಖಕ್ಕೆ ಅನ್ವಯಿಸಿ, ಮೃದುವಾಗಿ ಮಸಾಜ್ ಮಾಡಿ.
5 ನಿಮಿಷಗಳ ಬಳಿಕೆ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಸೂರ್ಯನ ಕಲೆಯನ್ನು ನಿವಾರಿಸಲು ವಾರದಲ್ಲಿ 2-3 ಬಾರಿ ಈ ವಿಧಾನವನ್ನು ಅನ್ವಯಿಸಬೇಕು.
ಮೊಸರಿನೊಂದಿಗೆ ನಿಂಬೆ ರಸ
ಒಂದು ಟೀ ಚಮಚ ನಿಂಬೆ ರಸಕ್ಕೆ 2 ಟೀ ಚಮಚ ಮೊಸರನ್ನು ಸೇರಿಸಿ.
ಪೀಡಿತ ಪ್ರದೇಶದಲ್ಲಿ ಮಿಶ್ರಣವನ್ನು ಅನ್ವಯಿಸಿ.
5 ನಿಮಿಷಗಳ ಕಾಲ ತ್ವಚೆಯ ಮೇಲೆ ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ನಂತರ ಚರ್ಮವನ್ನು ತಾಜಾಗೊಳಿಸುವ ಟೋನರ್ಅನ್ನು ಅನ್ವಯಿಸಿ.
ಈ ವಿಧಾನವನ್ನು ಗಣನೀಯವಾಗಿ ಅನುಸರಿಸುವುದರಿಂದ ಬಹು ಬೇಗ ಸೂರ್ಯನ ಕಲೆಯಿಂದ ಮುಕ್ತಿ ಹೊಂದಬಹುದು.
ನಿಂಬೆ ರಸದೊಂದಿಗೆ ಅಲೋವೆರಾ ಮತ್ತು ಕಿತ್ತಳೆ ಸಿಪ್ಪೆಯ ಪುಡಿ
ಅರ್ಧ ಟೀ ಚಮಚ ನಿಂಬೆ ರಸಕ್ಕೆ 1 ಟೀ ಚಮಚ ಆಲೋವೆರಾ ಮತ್ತು ಒಂದು ಚಿಟಕೆ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸೇರಿಸಿ.
ಮಿಶ್ರಣವನ್ನು ಪೀಡಿತ ಪ್ರದೇಶಕ್ಕೆ ಅನ್ವಯಿಸಿ. 10 ನಿಮಿಷಗಳ ಕಾಲ ಆರಲು ಬಿಡಿ.
ನಂತರ ಬೆಚ್ಚಗಿನ ನೀರಲ್ಲಿ ಸ್ವಚ್ಛಗೊಳಿಸಿ.
ಈ ಮಿಶ್ರಣವನ್ನು ವಾರಕ್ಕೊಮ್ಮೆ ಅನ್ವಯಿಸುವುದರಿಂದ ಬಹು ಬೇಗ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ನಿಂಬೆ ರಸ, ಕಡ್ಲೆ ಹಿಟ್ಟು ಮತ್ತು ಜೇನುತುಪ್ಪ
ಒಂದು ಟೀ ಚಮಚ ನಿಂಬೆ ರಸಕ್ಕೆ 1/2 ಟೀ ಚಮಚ ಕಡ್ಲೆ ಹಿಟ್ಟು ಮತ್ತು 1 ಟೇಬಲ್ ಚಮಚ ಜೇನುತುಪ್ಪವನ್ನು ಸೇರಿಸಿ.
ಮಿಶ್ರಣವನ್ನು ಮುಖಕ್ಕೆ ಮತ್ತು ಪೀಡಿತ ಪ್ರದೇಶಕ್ಕೆ ಅನ್ವಯಿಸಿ.
10-15 ನಿಮಿಷಗಳ ಕಾಲ ಮುಖದ ಮೇಲೆ ಹಾಗೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸಿ.
ವಾರಕ್ಕೊಮ್ಮೆ ಈ ವಿಧಾನವನ್ನು ನ್ವಯಿಸುವುದರಿಂದ ಮುಖವು ಕಾಂತಿಯಿಂದ ಕಂಗೊಳಿಸುತ್ತದೆ.
ನಿಂಬೆ ರಸ ಮತ್ತು ಓಟ್ ಮೀಲ್
ಒಂದು ಟೇಬಲ್ ಚಮಚ ಓಟ್ ಮೀಲ್ ಜೊತೆ 2 ಟೀ ಚಮಚ ನಿಂಬೆ ರಸವನ್ನು ಸೇರಿಸಿ
ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ, 5-10 ನಿಮಿಷಗಳಕಾಲ ಮೃದುವಾಗಿ ಮಸಾಜ್ ಮಾಡಿ
ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ
ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಸೂರ್ಯನ ಕಿರಣದಿಂದ ಉಂಟಾದ ತೊಂದರೆಯಿಂದ ಮುಕ್ತಿ ಹೊಂದಬಹುದು.
ನಿಂಬೆ ರಸದೊಂದಿಗೆ ಪಪ್ಪಾಯದ ತಿರುಳು
ಎರಡು ಟೀ ಚಮಚ ನಿಂಬೆ ರಸಕ್ಕೆ ಅದೇ ಪ್ರಮಾಣದ ಪಪ್ಪಾಯದ ತಿರುಳನ್ನು ಸೇರಿಸಿ, ಮಿಶ್ರಗೊಳಿಸಿ
ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ
ಒಣಗಿದ ನಂತರ ಬೆಚ್ಚಗಿನ ನೀರಿನಲ್ಲಿ ಶುದ್ಧಗೊಳಿಸಿ
ಉತ್ತಮ ಫಲಿತಾಂಶಕ್ಕೆ ವಾರದಲ್ಲಿ ಮೂರುಬಾರಿ ಈ ವಿಧಾನವನ್ನು ಅನ್ವಯಿಸಿ