Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಕೂದಲಿನ ಬೆಳವಣಿಗೆಗೆ ಬೆಳ್ಳುಳ್ಳಿಯನ್ನು ಬಳಸುವುದು ಹೇಗೆ?
ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೀವು ಈಗಾಗಲೇ ಅಂಗಡಿಗಳಲ್ಲಿ ಸಿಗುವಂತಹ ಹಲವಾರು ಶಾಂಪೂ, ಕಂಡೀಷನರ್ ಹಾಗೂ ಇನ್ನಿತರ ಉತ್ಪನ್ನಗಳನ್ನು ಬಳಕೆ ಮಾಡಿಕೊಂಡಿರಬಹುದು. ಇದರಿಂದ ಸಿಕ್ಕಿರುವಂತಹ ಫಲಿತಾಂಶವು ತುಂಬಾ ನಿರಾಶೆ ಮೂಡಿಸಿರಬಹುದು. ಯಾಕೆಂದರೆ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳು ಕೂದಲಿಗೆ ಕಾಂತಿ ನೀಡುವ ಬದಲು ಅದರಲ್ಲಿ ಇರುವಂತಹ ರಾಸಾಯನಿಕಗಳು ಹಲವಾರು ಸಮಸ್ಯೆಗಳು ಹುಟ್ಟು ಹಾಕುವುದು. ಹೀಗಾಗಿ ಅಂತಹ ರಾಸಾಯನಿಕಯುಕ್ತ ಉತ್ಪನ್ನಗಳ ಬದಲಿಗೆ ಮನೆ ಮದ್ದುಗಳನ್ನು ಬಳಸಿಕೊಂಡರೆ ಅದರಿಂದ ಹೆಚ್ಚಿನ ಲಾಭ ಆಗುವುದು ಮತ್ತು ಅಡ್ಡ ಪರಿಣಾಮಗಳು ಕೂಡ ಕಡಿಮೆ.
ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಿನವರು ಮನೆ ಮದ್ದುಗಳಿಗೆ ಮೊರೆ ಹೋಗುತ್ತಿರುವರು. ಆದರೆ ಮನೆ ಮದ್ದುಗಳನ್ನು ಬಳಸುವ ವೇಳೆ ಕೂಡ ಸ್ವಲ್ಪ ಎಚ್ಚರಿಕೆ ಅಗತ್ಯ. ಯಾಕೆಂದರೆ ಇದಕ್ಕೆ ತುಂಬಾ ತಾಳ್ಮೆ ಬೇಕಾಗುವುದು ಮತ್ತು ಸರಿಯಾದ ಪ್ರಮಾಣ ಹಾಗೂ ಕ್ರಮದಲ್ಲಿ ಬಳಸಿಕೊಂಡರೆ ಆಗ ಖಂಡಿತವಾಗಿಯೂ ಫಲಿತಾಂಶ ಸಿಗುವುದು. ಈ ಲೇಖನದಲ್ಲಿ ಬೆಳ್ಳುಳ್ಳಿ ಬಳಸಿಕೊಂಡು ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದು ಹೇಳಿಕೊಡಲಿದ್ದೇವೆ. ಬೆಳ್ಳುಳ್ಳಿ ಹೆಚ್ಚಾಗಿ ಪ್ರತಿಯೊಂದು ಮನೆಯ ಅಡುಗೆ ಕೋಣೆಯಲ್ಲಿ ಲಭ್ಯವಿರುವುದು. ಇದು ಯಾವುದೇ ಅಡುಗೆಯ ರುಚಿ ಹೆಚ್ಚು ಮಾಡುವುದು. ಬೆಳ್ಳುಳ್ಳಿಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಕೂಡ ಇರುವ ಕಾರಣದಿಂದಾಗಿ ಇದನ್ನು ಭಾರತೀಯರು ಹೆಚ್ಚಾಗಿ ಬಳಕೆ ಮಾಡುವರು. ಬೆಳ್ಳುಳ್ಳಿಯು ಕೂದಲು ಉದುರುವಿಕೆ ಸಮಸ್ಯೆಯನ್ನು ತುಂಬಾ ಪರಿಣಾಮಕಾರಿ ಆಗಿ ನಿವಾರಣೆ ಮಾಡುವುದು ಎಂದು ಹೇಳಲಾಗುತ್ತದೆ. ಇದರಲ್ಲಿ ಇರುವಂತಹ ಕೆಲವೊಂದು ಅಂಶಗಳು ಕೂದಲು ಉದುರುವಿಕೆ ತಡೆದು, ಅದು ಚೆನ್ನಾಗಿ ಬೆಳೆಯಲು ನೆರವಾಗುವುದು.

ಕೂದಲು ಉದುರುವಿಕೆಗೆ ತಡೆಯಲು ಬೆಳ್ಳುಳ್ಳಿ ಹೇಗೆ ನೆರವಾಗುವುದು?
1.ಬೆಳ್ಳುಳ್ಳಿಯಲ್ಲಿ ಇರುವಂತಹ ಕೆಲವೊಂದು ಅಂಶಗಳು ಕೂದಲು ಉದುರುವಿಕೆ ತಡೆಯಲು ತುಂಬಾ ನೆರವಾಗುವುದು.
2.ಇದರಲ್ಲಿ ಇರುವಂತಹ ಕೆಲವು ಪ್ರಮುಖ ಅಂಶಗಳಾಗಿರುವಂತಹ ಸತು, ಸಲ್ಫರ್ ಮತ್ತು ಕ್ಯಾಲ್ಸಿಯಂ ಕೂದಲಿಗೆ ನೆರವಾಗುವುದು.
3.ಇದರಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದು ಕೂದಲು ಉದುರುವಿಕೆಗೆ ಕಾರಣವಾಗುವ ಕೀಟಾಣುಗಳು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲುವುದು.
4.ಇದರಲ್ಲಿ ಸೆಲೆನಿಯಂ ಎನ್ನುವ ಅಂಶವಿದೆ ಮತ್ತು ಇದು ರಕ್ತ ಸಂಚಾರ ಉತ್ತಮಪಡಿಸುವುದು. ಇದರಿಂದಾಗಿ ಕೂದಲಿನ ಬೆಳವಣಿಗೆ ಸರಾಗವಾಗಿ ಆಗುವುದು.
5.ಇದು ಕೂದಲಿನ ಕಿರು ಚೀಲಗಳನ್ನು ಶುದ್ಧೀಕರಿಸುವುದು. ಇದರಿಂದ ಕಿರು ಚೀಲ ಮುಚ್ಚುವುದು ತಪ್ಪುವುದು ಮತ್ತು ಕೂದಲು ಬಲಿಷ್ಠವಾಗುವುದು.
6.ತಲೆಹೊಟ್ಟು ನಿವಾರಣೆಗೆ ಇದು ಪರಿಣಾಮಕಾರಿ.
ಬೆಳ್ಳುಳ್ಳಿ ಬಳಸುವ ವಿಧಾನಗಳು
ಕೂದಲಿನ ಬೆಳವಣಿಗೆಗೆ ಬೆಳ್ಳುಳ್ಳಿ ಮತ್ತು ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯು ಕೂದಲಿನ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳನ್ನು ನೀಡುವುದು. ಇದನ್ನು ಬೆಳ್ಳುಳ್ಳಿ ಜತೆಗೆ ಸೇರಿಸಿಕೊಂಡಾಗ ಅದು ಕೂದಲು ಉದುರುವಿಕೆ ತಡೆಗಟ್ಟಲು ನೆರವಾಗುವುದು. ಎರಡು ಎಸಲು ಬೆಳ್ಳುಳ್ಳಿ ತೆಗೆದುಕೊಂಡು, ಅದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಈಗ ತೆಂಗಿನ ಎಣ್ಣೆಯನ್ನು ಸ್ವಲ್ಪ ಮಧ್ಯಮವಾಗಿ ಬಿಸಿ ಮಾಡಿ ಮತ್ತು ಅದಕ್ಕೆ ಬೆಳ್ಳುಳ್ಳಿ ಹಾಕಿಕೊಳ್ಳಿ. ಈ ಮಿಶ್ರಣವನ್ನು ತಲೆಬುರುಡೆಗೆ ಹಚ್ಚಿಕೊಂಡು, ಸರಿಯಾಗಿ ಮಸಾಜ್ ಮಾಡಿ. 30 ನಿಮಿಷ ಕಾಲ ಈ ಮಿಶ್ರಣವು ತಲೆಯಲ್ಲಿ ಹಾಗೆ ಇರಲಿ ಮತ್ತು ಇದರ ಬಳಿಕ ಸಾಮಾನ್ಯದಂತೆ ಕೂದಲು ತೊಳೆಯಿರಿ.
ಬೆಳ್ಳುಳ್ಳಿ ಮತ್ತು ಜೇನುತುಪ್ಪದಿಂದ ಕೂದಲ ಬೆಳವಣಿಗೆ
ಕೂದಲು ಉದುರುವಿಕೆ ತಡೆಯಲು ಬೆಳ್ಳುಳ್ಳಿ ಜತೆಗೆ ಜೇನುತುಪ್ಪ ಕೂಡ ಬೆರೆಸಿಕೊಳ್ಳಬಹುದು. 8 ಎಸಲು ಬೆಳ್ಳುಳ್ಳಿ ತೆಗೆದುಕೊಳ್ಳಿ ಮತ್ತು ಅದನ್ನು ಜಜ್ಜಿಕೊಂಡು ಸುಮಾರು ಎರಡು ಚಮಚ ರಸ ತೆಗೆಯಿರಿ. ಇದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿಕೊಳ್ಳಿ. ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಕೂದಲು ಹಾಗೂ ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. 20 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಲಘು ಶಾಂಪೂ ಹಾಕಿಕೊಂಡು ಕೂದಲು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಈ ವಿಧಾನ ಅನುಸರಿಸಿಕೊಂಡು ಹೋಗಿ.
ಶುಂಠಿ ಮತ್ತು ಬೆಳ್ಳುಳ್ಳಿಯಿಂದ ಕೂದಲಿನ ಬೆಳವಣಿಗೆ
ಶುಂಠಿಯು ಪ್ರತಿಯೊಂದು ಮನೆಯ ಅಡುಗೆ ಕೋಣೆಯಲ್ಲಿ ಸಿಗುವಂತಹ ವಸ್ತು. ಈಗ ಶುಂಠಿ ಹಾಗೂ ಬೆಳ್ಳುಳ್ಳಿಯನ್ನು ಮಿಶ್ರಣ ಮಾಡಿಕೊಂಡು ಕೂದಲು ಉದುರುವಿಕೆ ತಡೆಯಬಹುದು. ಎರಡು ಮಧ್ಯಮ ಗಾತ್ರದ ಶುಂಠಿ ತುಂಡುಗಳು ಮತ್ತು ಸುಮಾರು 8 ಎಸಲು ಬೆಳ್ಳುಳ್ಳಿ ತೆಗೆದುಕೊಳ್ಳಿ ಮತ್ತು ಇವೆರಡನ್ನು ಜತೆಯಾಗಿ ಜಜ್ಜಿಕೊಳ್ಳಿ. ಎರಡು ಸರಿಯಾಗಿ ಪೇಸ್ಟ್ ಆದ ಬಳಿಕ ಅದನ್ನು ಬದಿಗೆ ಇಡಿ. ಒಂದು ತವಾಗೆ ಸ್ವಲ್ಪ ಎಣ್ಣೆ ಹಾಕಿ. ಇದಕ್ಕೆ ನೀವು ತೆಂಗಿನ ಎಣ್ಣೆ ಅಥವಾ ಆಲಿವ್ ತೈಲ ಬಳಸಬಹುದು. ಈ ಎಣ್ಣೆಗೆ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ. ಈ ಪೇಸ್ಟ್ ನ ಬಣ್ಣವು ಕಂದು ಬಣ್ಣಕ್ಕೆ ತಿರುಗುವ ತನಕ ಎಣ್ಣೆ ಬಿಸಿ ಮಾಡಿ. ಈಗ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಎಣ್ಣೆ ತಣ್ಣಗಾದ ಬಳಿಕ ಎಣ್ಣೆಯನ್ನು ಸೋಸಿಕೊಳ್ಳಿ. ಇದರ ಬಳಿಕ ಎಣ್ಣೆಯನ್ನು ತಲೆಗೆ ಹಾಕಿಕೊಂಡು ಮಸಾಜ್ ಮಾಡಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಲಘು ಶಾಂಪೂ ಬಳಸಿಕೊಂಡು ಕೂದಲು ತೊಳೆಯಿರಿ. ವಾರದಲ್ಲಿ ಎರಡು ಸಲ ನೀವು ಇದನ್ನು ಬಳಸಿಕೊಂಡರೆ ಉತ್ತಮ ಫಲಿತಾಂಶ ಸಿಗುವುದು.
ಆರಂಭದಲ್ಲಿ ನೀವು ತಲೆಬುರುಡೆಗೆ ಬೆಳ್ಳುಳ್ಳಿ ಬಳಸಿಕೊಂಡ ವೇಳೆ ನಿಮಗೆ ಸ್ವಲ್ಪ ಮಟ್ಟಿಗೆ ಕಿರಿಕಿರಿ ಅನಿಸುವುದು. ಆದರೆ ನಿಮಗೆ ಈ ಕಿರಿಕಿರಿ ಅಥವಾ ಸಮಸ್ಯೆಯು ತುಂಬಾ ಹೊತ್ತು ಕಾಡಿದರೆ ಆಗ ನೀವು ಇದನ್ನು ಬಳಸುವುದನ್ನು ನಿಲ್ಲಿಸಿಬಿಡಿ. ಬೆಳ್ಳುಳ್ಳಿ ಸಾರಭೂತ ತೈಲವನ್ನು ತಲೆ ಬುರುಡೆಗೆ ನೇರವಾಗಿ ಬಳಸಿಕೊಳ್ಳಬಾರದು ಎಂದು ನೀವು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.



Click it and Unblock the Notifications


